ತಿರುಪತಿಯ ಯಾವುದೇ ಸ್ಥಿರಾಸ್ತಿ ಮಾರಾಟ ಮಾಡದಿರಲು TTD ನಿರ್ಧಾರ

ತಿರುಪತಿ​: ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್​ಗೆ (TTD) ಸೇರಿದ ಯಾವುದೇ ಆಸ್ತಿಗಳ ಮಾರಾಟಕ್ಕೆ ನಿಷೇಧ ವಿಧಿಸಿ, ಟಿಟಿಡಿ ಆಡಳಿತ ಮಂಡಳಿ ಸಭೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿರುಮಲದಲ್ಲಿ ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಹೇಳಿದ್ದಾರೆ. ಟಿಟಿಡಿ ಆಸ್ತಿ ರಕ್ಷಣೆಗೆ ಸ್ವಾಮೀಜಿಗಳು, ಸದಸ್ಯರ ಸಮಿತಿ ಬದ್ಧವಾಗಿದೆ. ಭವಿಷ್ಯದಲ್ಲೂ ಸಹ ಟಿಟಿಡಿ ಆಸ್ತಿಗಳನ್ನು ಮಾರುವಂತಿಲ್ಲ. ಟಿಟಿಡಿ ಆಸ್ತಿ ಮಾರಾಟ ಬಗ್ಗೆ ಅಪಪ್ರಚಾರ ಕುರಿತು ತನಿಖೆ ನಡೆಸಲಾಗುವುದು. ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ತಿರುಪತಿಯ ಯಾವುದೇ ಸ್ಥಿರಾಸ್ತಿ ಮಾರಾಟ ಮಾಡದಿರಲು TTD ನಿರ್ಧಾರ
ಸಾಧು ಶ್ರೀನಾಥ್​

Updated on: May 28, 2020 | 6:07 PM

ತಿರುಪತಿ​: ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್​ಗೆ (TTD) ಸೇರಿದ ಯಾವುದೇ ಆಸ್ತಿಗಳ ಮಾರಾಟಕ್ಕೆ ನಿಷೇಧ ವಿಧಿಸಿ, ಟಿಟಿಡಿ ಆಡಳಿತ ಮಂಡಳಿ ಸಭೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿರುಮಲದಲ್ಲಿ ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಹೇಳಿದ್ದಾರೆ.

ಟಿಟಿಡಿ ಆಸ್ತಿ ರಕ್ಷಣೆಗೆ ಸ್ವಾಮೀಜಿಗಳು, ಸದಸ್ಯರ ಸಮಿತಿ ಬದ್ಧವಾಗಿದೆ. ಭವಿಷ್ಯದಲ್ಲೂ ಸಹ ಟಿಟಿಡಿ ಆಸ್ತಿಗಳನ್ನು ಮಾರುವಂತಿಲ್ಲ. ಟಿಟಿಡಿ ಆಸ್ತಿ ಮಾರಾಟ ಬಗ್ಗೆ ಅಪಪ್ರಚಾರ ಕುರಿತು ತನಿಖೆ ನಡೆಸಲಾಗುವುದು. ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us