AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುರಾತನ ಪಾತಕಿ ಮತ್ತೆ ಜೈಲೊಳಕ್ಕೆ ಬತ್ತೀನಿ ಅಂದ್ರೂ, ಪೊಲೀಸ್ರು ಬಿಟ್ಕೊಳ್ಳಲಿಲ್ಲ! ಯಾಕೆ?

ಆ ದಿನಗಳಲ್ಲಿ ಕುಖ್ಯಾತಿಯ ತುದಿಯೇರಿದ್ದ ಗ್ಯಾಂಗ್​ಸ್ಟರ್ ಅವ. ಪೆರೋಲ್ ಮೇಲೆ ಹೊರಕ್ಕೆ ಬಂದಿದ್ದ. ಆದ್ರೆ ಪೆರೋಲ್ ಮುಗಿದಿದೆ. ಶರಣಾಗಿ ಒಳಗೆ ಬರುವೆ, ಬಿಟ್ಕೊಳ್ಳಿ ಅಂತಾ ಸೀದಾ ಜೈಲಿನ ಮುಂದೆ ಬಂದು ನಿಂತ. ಆದ್ರೆ ಜೈಲೊಳಕ್ಕೆ ಬತ್ತೀನಿ ಅಂತಾ ಕೈಮುಗಿದು ನಿಂತಿದ್ದ ಆ ಡಾನ್​ನನ್ನು ಪೊಲೀಸರು ಬಿಲ್ಕುಲ್ ಒಳಕ್ಕೆ ಬಿಟ್ಕೊಳ್ಳಲಿಲ್ಲ! ತಳೋಜಾ ಕಾರಾಗೃಹದ ಮುಂದೆ ದೊಡ್ಡ ಹೈಡ್ರಾಮಾನೇ ನಡೆಯಿತು! ಇದೆಲ್ಲ ನಡೆದಿದ್ದು ಮೊನ್ನೆ.. ನವಿ ಮುಂಬೈನಲ್ಲಿರುವ ತಳೋಜಾ ಮಧ್ಯವರ್ತಿ ಕಾರಾಗೃಹದಲ್ಲಿ. ಪುರಾತನ ಪಾತಕಿ ಅರುಣ್ ಗಾವಳಿ ತನ್ನ ವಕೀಲರ […]

ಪುರಾತನ ಪಾತಕಿ ಮತ್ತೆ ಜೈಲೊಳಕ್ಕೆ ಬತ್ತೀನಿ ಅಂದ್ರೂ, ಪೊಲೀಸ್ರು ಬಿಟ್ಕೊಳ್ಳಲಿಲ್ಲ! ಯಾಕೆ?
ಸಾಧು ಶ್ರೀನಾಥ್​
| Updated By: |

Updated on:May 29, 2020 | 2:53 PM

Share

ಆ ದಿನಗಳಲ್ಲಿ ಕುಖ್ಯಾತಿಯ ತುದಿಯೇರಿದ್ದ ಗ್ಯಾಂಗ್​ಸ್ಟರ್ ಅವ. ಪೆರೋಲ್ ಮೇಲೆ ಹೊರಕ್ಕೆ ಬಂದಿದ್ದ. ಆದ್ರೆ ಪೆರೋಲ್ ಮುಗಿದಿದೆ. ಶರಣಾಗಿ ಒಳಗೆ ಬರುವೆ, ಬಿಟ್ಕೊಳ್ಳಿ ಅಂತಾ ಸೀದಾ ಜೈಲಿನ ಮುಂದೆ ಬಂದು ನಿಂತ. ಆದ್ರೆ ಜೈಲೊಳಕ್ಕೆ ಬತ್ತೀನಿ ಅಂತಾ ಕೈಮುಗಿದು ನಿಂತಿದ್ದ ಆ ಡಾನ್​ನನ್ನು ಪೊಲೀಸರು ಬಿಲ್ಕುಲ್ ಒಳಕ್ಕೆ ಬಿಟ್ಕೊಳ್ಳಲಿಲ್ಲ!

ತಳೋಜಾ ಕಾರಾಗೃಹದ ಮುಂದೆ ದೊಡ್ಡ ಹೈಡ್ರಾಮಾನೇ ನಡೆಯಿತು! ಇದೆಲ್ಲ ನಡೆದಿದ್ದು ಮೊನ್ನೆ.. ನವಿ ಮುಂಬೈನಲ್ಲಿರುವ ತಳೋಜಾ ಮಧ್ಯವರ್ತಿ ಕಾರಾಗೃಹದಲ್ಲಿ. ಪುರಾತನ ಪಾತಕಿ ಅರುಣ್ ಗಾವಳಿ ತನ್ನ ವಕೀಲರ ಜೊತೆ ತಳೋಜಾ ಜೈಲಿಗೆ ಆಗಮಿಸಿದ್ದ. ಆದ್ರೆ ಕೋಟೆ ಕಟ್ಟಿಕೊಂಡ ಜೈಲು ಪೊಲೀಸರು ಆತನನ್ನು ಒಳಕ್ಕೆ ಬರಲೇಬೇಡ ಎಂದು ದುಂಬಾಲುಬಿದ್ದರು. ಬಟ್ ವೈ ಎಂದು ವಕೀಲ ಮೀರ್ ಅಲಿ ಕೇಳಿದ್ದಕ್ಕೆ ಕೊರೊನಾ ರಾಕ್ಷಸನ ಹಾವಳಿ. ಅದಕ್ಕೇ ಗಾವಳಿ ಒಳಕ್ಕೆ ಬರೋದು ಬೇಡ, ವಾಪಸ್​ ಕರಕೊಂಡು ಹೋಗು ಅಂದಿದ್ದಾರೆ.

ಮತ್ತೊಂದು ಮೂಲದ ಪ್ರಕಾರ ಗಾವಳಿಯ ಶತ್ರುಗಳೆನಿಸಿರುವ ಅಬುಸಲೇಂ ಮತ್ತು ಅಶ್ವಿನ್ ನಾಯ್ಕ್ ಎಂಬ ಇನ್ನಿಬ್ಬರು ಡಾನ್​ಗಳು ಈಗಾಗಲೇ ತಳೋಜಾ ಕಾರಾಗೃಹದಲ್ಲಿದ್ದಾರೆ. ಹಾಗಾಗಿ ಗಾವಳಿಗೆ ಜೀವ ಬೆದರಿಕೆ ಎದುರಾಗುತ್ತದೆ ಎಂದು ಎಣಿಸಿದ ಪೊಲೀಸರು ಗಾವಳಿಗೆ ಬರುವುದು ಬೇಡ ಎಂದಿರುವುದಾಗಿ ತಿಳಿದುಬಂದಿದೆ.

ಈ ಮಧ್ಯೆ ಬಾಂಬೆ ಹೈಕೋರ್ಟ್​ನ ನಾಗಪುರ ಪೀಠವು ಗಾವಳಿಗೆ ಪೆರೋಲ್ ಅವಧಿಯನ್ನು ಇನ್ನೂ 5 ಕ್ಕೆ ವಿಸ್ತರಿಸುವ ಮೂಲಕ ಪೊಲೀಸರ ಆತಂಕವನ್ನು ದೂರ ಮಾಡಿದೆ. ಅಂಡರ್​ವರ್ಲ್ಡ್​ ಡಾನ್ ಅರುಣ್ ಗಾವಳಿ ಶಿವಸೇನೆಯ ಕಾರ್ಪೊರೆಟರ್​ನನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ.

Published On - 2:39 pm, Fri, 29 May 20

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್