25 ರೂ. ಸಬ್ಸಿಡಿ ಈರುಳ್ಳಿಗೆ ಮುಗಿಬಿದ್ದ ಜನ

ಹೈದರಾಬಾದ್: ಆಂಧ್ರಪ್ರದೇಶದ ವಿಜಯವಾಡದಲ್ಲಿ‌ ಸಬ್ಸಿಡಿ ಈರುಳ್ಳಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಈರುಳ್ಳಿ ದರ 100 ದಾಟಿದ ಹಿನ್ನೆಲೆಯಲ್ಲಿ ಕಡಿಮೆ ಬೆಲೆಗೆ ಈರುಳ್ಳಿ ಖರೀದಿಸಲು ಭಾರಿ ಪ್ರಮಾಣದಲ್ಲಿ‌ ಜನ ಸೇರಿದ್ದಾರೆ. ಭವಾನಿಪುರದ‌ ರೈತ ಬಜಾರ್​ನಲ್ಲಿ ಸಬ್ಸಿಡಿ ದರಕ್ಕೆ‌ ಈರುಳ್ಳಿ ಮಾರಾಟ ವಾಗುತ್ತಿದ್ದು, 25 ರೂಪಾಯಿಗೆ ಕೆ.ಜಿ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ. ರೈತ ಬಜಾರ್​ನಲ್ಲಿ ಒಂದೇ ಮಾರಾಟ ಕೇಂದ್ರ ಇರೋ ಕಾರಣ ಭಾರಿ ನೂಕಾಟ, ತಳ್ಳಾಟದಲ್ಲೇ ಜನ ಈರುಳ್ಳಿ ಖರೀದಿಗೆ ಇಳಿದಿದ್ದಾರೆ. ಹೊರಗಡೆ ಮಾರುಕಟ್ಟೆಯಲ್ಲಿ‌ 80 ರೂಪಾಯಿಗೂ ಅಧಿಕ ದರಕ್ಕೆ […]

25 ರೂ. ಸಬ್ಸಿಡಿ ಈರುಳ್ಳಿಗೆ ಮುಗಿಬಿದ್ದ ಜನ
ಸಾಧು ಶ್ರೀನಾಥ್​

Updated on: Dec 01, 2019 | 12:51 PM

ಹೈದರಾಬಾದ್: ಆಂಧ್ರಪ್ರದೇಶದ ವಿಜಯವಾಡದಲ್ಲಿ‌ ಸಬ್ಸಿಡಿ ಈರುಳ್ಳಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಈರುಳ್ಳಿ ದರ 100 ದಾಟಿದ ಹಿನ್ನೆಲೆಯಲ್ಲಿ ಕಡಿಮೆ ಬೆಲೆಗೆ ಈರುಳ್ಳಿ ಖರೀದಿಸಲು ಭಾರಿ ಪ್ರಮಾಣದಲ್ಲಿ‌ ಜನ ಸೇರಿದ್ದಾರೆ. ಭವಾನಿಪುರದ‌ ರೈತ ಬಜಾರ್​ನಲ್ಲಿ ಸಬ್ಸಿಡಿ ದರಕ್ಕೆ‌ ಈರುಳ್ಳಿ ಮಾರಾಟ ವಾಗುತ್ತಿದ್ದು, 25 ರೂಪಾಯಿಗೆ ಕೆ.ಜಿ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ.

ರೈತ ಬಜಾರ್​ನಲ್ಲಿ ಒಂದೇ ಮಾರಾಟ ಕೇಂದ್ರ ಇರೋ ಕಾರಣ ಭಾರಿ ನೂಕಾಟ, ತಳ್ಳಾಟದಲ್ಲೇ ಜನ ಈರುಳ್ಳಿ ಖರೀದಿಗೆ ಇಳಿದಿದ್ದಾರೆ. ಹೊರಗಡೆ ಮಾರುಕಟ್ಟೆಯಲ್ಲಿ‌ 80 ರೂಪಾಯಿಗೂ ಅಧಿಕ ದರಕ್ಕೆ ಈರುಳ್ಳಿ ಸಿಗ್ತಿದೆ. ಹೀಗಾಗಿ 25 ರೂಪಾಯಿಗೆ ಸಬ್ಸಿಡಿ ದರದ ಈರುಳ್ಳಿ ಖರೀದಿಸಲು ಭಾರೀ ಪ್ರಮಾಣದ ಜನ ಸೇರಿದ್ದಾರೆ. ಅಲ್ಲದೆ ಈರುಳ್ಳಿ ಮಾರಾಟ ಕೇಂದ್ರಗಳ‌ನ್ನು ಹೆಚ್ಚಿಸುವಂತೆಯೂ ಇಲ್ಲಿನ ಜನರು ಒತ್ತಾಯಿಸಿದ್ದಾರೆ.

Published On - 12:10 pm, Sun, 1 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us