ಉತ್ತರ ಪ್ರದೇಶ: ದಂಪತಿ, ಮೂವರು ಹೆಣ್ಣು ಮಕ್ಕಳು ಸೇರಿ ಕುಟುಂಬದ ಐವರು ಶವವಾಗಿ ಪತ್ತೆ

ಮೂವರು ಹೆಣ್ಣುಮಕ್ಕಳು, ಪೋಷಕರು ಸೇರಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆಯಾಗಿದ್ದಾರೆ. ಉತ್ತರ ಪ್ರದೇಶದ ಮೀರತ್​ನಲ್ಲಿ ಘಟನೆ ನಡೆದಿದೆ. ಮೊಯಿನ್ ಅವರ ಸಹೋದರ ಎಷ್ಟೇ ಕರೆ ಮಾಡಿದ್ದರೂ ಮೊಯಿನ್ ರಿಸೀವ್ ಮಾಡಿರಲಿಲ್ಲ, ಮನೆ ಬಳಿ ಬಂದಾಗ ಮನೆಗೆ ಬೀಗ ಹಾಕಿತ್ತು. ಬಳಿಕ ಪೊಲೀಸರಿಗೆ ವಿಷಯ ತಿಳಿಸಲಾಯಿತು. ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಮನೆಗೆ ಹೊರಗಿನಿಂದ ಬೀಗ ಹಾಕಿರುವುದು ಕಂಡು ಬಂತು.

ಉತ್ತರ ಪ್ರದೇಶ: ದಂಪತಿ, ಮೂವರು ಹೆಣ್ಣು ಮಕ್ಕಳು ಸೇರಿ ಕುಟುಂಬದ ಐವರು ಶವವಾಗಿ ಪತ್ತೆ
ಪೊಲೀಸ್​

Updated on: Jan 10, 2025 | 8:21 AM

ಉತ್ತರ ಪ್ರದೇಶದ ಮೀರತ್​ನಲ್ಲಿ ದಂಪತಿ, ಮೂವರು ಹೆಣ್ಣುಮಕ್ಕಳು ಸೇರಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆಯಾಗಿದ್ದಾರೆ. ಮೂರು ಮಕ್ಕಳು ಮಂಚದ ಪೆಟ್ಟಿಗೆಯೊಳಗೆ ಶವವಾಗಿ ಮಲಗಿದ್ದರು. ಲಿಸಾಡಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೀರತ್‌ನ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ವಿಪಿನ್ ತಾಡಾ ಅವರು ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಮೊಯಿನ್ ಅವರ ಸಹೋದರ ಎಷ್ಟೇ ಕರೆ ಮಾಡಿದ್ದರೂ ಮೊಯಿನ್ ರಿಸೀವ್ ಮಾಡಿರಲಿಲ್ಲ, ಮನೆ ಬಳಿ ಬಂದಾಗ ಮನೆಗೆ ಬೀಗ ಹಾಕಿತ್ತು.

ಬಳಿಕ ಪೊಲೀಸರಿಗೆ ವಿಷಯ ತಿಳಿಸಲಾಯಿತು. ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಮನೆಗೆ ಹೊರಗಿನಿಂದ ಬೀಗ ಹಾಕಿರುವುದು ಕಂಡು ಬಂತು.ಛಾವಣಿಯ ಮೂಲಕ ಮನೆಯೊಳಗೆ ಪ್ರವೇಶಿಸಿದರು. ಮೊಯಿನ್, ಅವರ ಪತ್ನಿ ಅಸ್ಮಾ ಮತ್ತು ಅವರ ಮೂವರು ಪುತ್ರಿಯರಾದ ಅಫ್ಸಾ (8), ಅಜೀಜಾ (4), ಮತ್ತು ಆದಿಬಾ (1) ಅವರ ಶವಗಳು ಕಂಡುಬಂದಿತ್ತು.

ಮನೆಗೆ ಬೀಗ ಹಾಕಿರುವ ರೀತಿಯು ಅಪರಾಧದಲ್ಲಿ ಭಾಗಿಯಾಗಿರುವ ವ್ಯಕ್ತಿಯು ಆ ಕುಟುಂಬಕ್ಕೆ ತಿಳಿದಿರುವವನೇ ಆಗಿರಬೇಕು ಎಂದು ಅಂದಾಜಿಸಲಾಗಿದೆ. ಹಳೇ ದ್ವೇಷವೇ ಅಪರಾಧದ ಹಿಂದಿನ ಉದ್ದೇಶವಾಗಿರಬಹುದು ಎಂದು ಪ್ರಾಥಮಿಕ ತನಿಖೆಗಳು ಸೂಚಿಸುತ್ತವೆ. ವಿಸ್ತೃತ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಮೃತರಲ್ಲಿ ಒಬ್ಬರ ಕಾಲನ್ನು ಬೆಡ್​ಶೀಟ್​ನಿಂದ ಕಟ್ಟಲಾಗಿದೆ,ಫೋರೆನ್ಸಿಕ್ ತಂಡ ಮತ್ತು ಹಿರಿಯ ಅಧಿಕಾರಿಗಳು ಅಪರಾಧ ನಡೆದ ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸುತ್ತಿದ್ದಾರೆ. ಕುಟುಂಬವು ಇತ್ತೀಚೆಗೆ ಈ ಪ್ರದೇಶಕ್ಕೆ ತೆರಳಿದ್ದು, ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಪೊಲೀಸರು ಈಗ ಅವರ ಹಿನ್ನೆಲೆಯನ್ನು ತನಿಖೆ ಮಾಡುತ್ತಿದ್ದಾರೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.

ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಮೊಯಿನ್ ಮತ್ತು ಅವರ ಪತ್ನಿ ಅಸ್ಮಾ ಬುಧವಾರದಿಂದ ನಾಪತ್ತೆಯಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಮೊಯಿನ್ ಅವರ ಸಹೋದರ ಸಲೀಂ ಅವರು ಈ ಭಯಾನಕ ದೃಶ್ಯವನ್ನು ಮೊದಲು ನೋಡಿದರು.
ಅಣ್ಣನ ದಿಢೀರ್ ನಾಪತ್ತೆಯಿಂದ ಆತಂಕಗೊಂಡ ಸಲೀಂ ಪತ್ನಿಯೊಂದಿಗೆ ಮೊಯಿನ್ ಮನೆಗೆ ಭೇಟಿ ನೀಡಿದ್ದರು.

ಮತ್ತಷ್ಟು ಓದಿ: ಹಾಡಹಗಲೇ ಮಚ್ಚಿನಿಂದ ಯುವತಿಯನ್ನು ಕೊಂದ ಕಾಲ್​ಸೆಂಟರ್ ಉದ್ಯೋಗಿ

ಬಾಗಿಲು ತೆರೆಯಲು ಪದೇ ಪದೇ ಪ್ರಯತ್ನಗಳು ವಿಫಲವಾದಾಗ, ಅವರು ನೆರೆಹೊರೆಯವರ ಸಹಾಯವನ್ನು ಕೇಳಿದರು ಮತ್ತು ಬಲವಂತವಾಗಿ ಒಳಗೆ ಪ್ರವೇಶಿಸಿದರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ದೆಹಲಿಯ ರಂಗಪುರಿ ಗ್ರಾಮದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಒಂದೇ ಕುಟುಂಬದ ಐವರು ಶವವಾಗಿ ಪತ್ತೆಯಾಗಿದ್ದರು.

8 ರಿಂದ 18 ವರ್ಷ ವಯಸ್ಸಿನ ತಂದೆ ಮತ್ತು ಅವರ ನಾಲ್ವರು ದೈಹಿಕವಾಗಿ ಅಂಗವಿಕಲ ಹೆಣ್ಣುಮಕ್ಕಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ತಂದೆ ತನ್ನ ಹೆಣ್ಣು ಮಕ್ಕಳಿಗೆ ವಿಷ ತಿನ್ನಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಕ್ಯಾನ್ಸರ್‌ನಿಂದ ತಾಯಿಯ ಮರಣದ ನಂತರ ಕುಟುಂಬವು ಕಷ್ಟವನ್ನು ಎದುರಿಸಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ