AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಗೆ ಉಸಿರುಕೊಟ್ಟ ರಸ್ತೆಗುಂಡಿ

ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಕೈಚೆಲ್ಲಿದ್ದ ವಿನೀತಾ ಶುಕ್ಲಾ, ಅಂತ್ಯಕ್ರಿಯೆಗೆ ತೆರಳುವಾಗ ಆಂಬ್ಯುಲೆನ್ಸ್ ರಸ್ತೆಗುಂಡಿಗೆ ಡಿಕ್ಕಿ ಹೊಡೆದಾಗ ಜೀವ ಮರಳಿ ಪಡೆದರು. ಬರೇಲಿ-ಹರಿದ್ವಾರ ಹೆದ್ದಾರಿಯಲ್ಲಿ ನಡೆದ ಈ ಪವಾಡ ಘಟನೆ ಇಡೀ ಕುಟುಂಬಕ್ಕೆ ಅಚ್ಚರಿ ಮೂಡಿಸಿದೆ. ಆಕೆಯ ಉಸಿರಾಟ ಸಾಮಾನ್ಯ ಸ್ಥಿತಿಗೆ ಮರಳಿ, ನಂತರ ಸಂಪೂರ್ಣ ಚೇತರಿಸಿಕೊಂಡರು. ವೈದ್ಯಕೀಯ ತಂಡದ ಪ್ರಯತ್ನಗಳು ಮತ್ತು ರೋಗನಿರ್ಣಯ ಮೆಚ್ಚುಗೆ ಗಳಿಸಿದೆ. ಇದು ರಸ್ತೆಗುಂಡಿ ಜೀವ ಕೊಟ್ಟ ಅಸಾಮಾನ್ಯ ಸನ್ನಿವೇಶ.

ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಗೆ ಉಸಿರುಕೊಟ್ಟ ರಸ್ತೆಗುಂಡಿ
ಮಹಿಳೆ
ನಯನಾ ರಾಜೀವ್
|

Updated on: Mar 12, 2026 | 1:15 PM

Share

ಲಕ್ನೋ, ಮಾರ್ಚ್​ 12:ರಸ್ತೆಗುಂಡಿ(Pothole)ಗಳು ಜೀವವನ್ನು ತೆಗೆದಿರುವ ನಿದರ್ಶನಗಳೇ ಹೆಚ್ಚು, ಆದರೆ ಇಲ್ಲಾಗಿದ್ದೇ ಬೇರೆ ಹೋದ ಜೀವ ರಸ್ತೆಗುಂಡಿಯಿಂದ ಮತ್ತೆ ಬಂದಿದೆ. ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ ರಸ್ತೆಗುಂಡಿಯಿಂದಾಗಿ ಮತ್ತೆ ಉಸಿರಾಡಿದ್ದಾರೆ. ಈ ಘಟನೆ ಬರೇಲಿ-ಹರಿದ್ವಾರ ರಾಷ್ಟ್ರೀಯ ಹೆದ್ದಾರಿ-74ರಲ್ಲಿ ನಡೆದಿದೆ. ಫೆಬ್ರವರಿ 22ರಂದು ಮನೆಯಲ್ಲಿ ಏನೋ ಕೆಲಸ ಮಾಡುತ್ತಿದ್ದಾಗ ವಿನೀತಾ ಶುಕ್ಲಾ ಎಂಬುವವರು ಹಠಾತ್ತನೆ ಮೂರ್ಛೆ ಹೋಗಿದ್ದರು.

ಅವರ ಮೆದುಳು ನಿಷ್​ಕ್ರಿಯಗೊಂಡಿದೆ ಬದುಕುಳಿಯುವ ಯಾವುದೇ ಭರವಸೆ ಇಲ್ಲ ಎಂದು ಆಸ್ಪತ್ರೆ ವೈದ್ಯರು ಹೇಳಿದ ಬಳಿಕ ಫೆಬ್ರವರಿ 24ರಂದು ಆಕೆಯ ಅಂತ್ಯಕ್ರಿಯೆಗಾಗಿ ಅವರನ್ನು ಮನೆಗೆ ಕರೆತರಲಾಗುತ್ತಿತ್ತು. ಅವರು ಉಸಿರಾಡುತ್ತಿರಲಿಲ್ಲ, ಹೃದಯಬಡಿತವೂ ಕಡಿಮೆಯಾಗುತ್ತಿತ್ತು. ವಿನೀತಾ ಕುಟುಂಬವು ಅವರ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿತ್ತು ಎಂದು ಅವರ ಪತಿ ಹೇಳಿದ್ದಾರೆ.

ಆಘಾತ ಮತ್ತು ಹತಾಶೆಯ ನಡುವೆ, ವಿನೀತಾಳನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಡಿಕ್ಕಿ ಹೊಡೆದಾಗ ಭರವಸೆಯ ಅಲೆಯೊಂದು ಹೊರಹೊಮ್ಮಿತ್ತು. ಏಕೆಂದರೆ ಗುಂಡಿಯಿಂದ ಉಂಟಾದ ದೊಡ್ಡ ಆಘಾತದ ನಂತರ ಅವರು ಉಸಿರಾಟ ಸಾಮಾನ್ಯ ಸ್ಥಿತಿಗೆ ಬಂದಿತ್ತು.

ಮತ್ತಷ್ಟು ಓದಿ: ವೈಜ್ಞಾನಿಕವಾಗಿ ರಸ್ತೆಗುಂಡಿ ಮುಚ್ಚಬೇಕು, ಇಲ್ಲದಿದ್ರೆ ಕಠಿಣ ಕ್ರಮವೆಂದ ಸಿಎಂ ಸಿದ್ದರಾಮಯ್ಯ

ವೈದ್ಯರು ಆರಂಭದಲ್ಲಿ ರೋಗಿಯನ್ನು ದಾಖಲಿಸಲು ಹಿಂಜರಿದರು, ಆದರೆ ಕುಟುಂಬದವರು ಒತ್ತಾಯಿಸಿದ ನಂತರ ಅಂತಿಮವಾಗಿ ಅವರನ್ನು ಪರೀಕ್ಷಿಸಿದ್ದರು. ಆಂಬ್ಯುಲೆನ್ಸ್ ಹಫೀಜ್‌ಗಂಜ್ ತಲುಪುತ್ತಿದ್ದಂತೆ, ಅದು ದೊಡ್ಡ ಗುಂಡಿಗೆ ಡಿಕ್ಕಿ ಹೊಡೆದು ಅಡ್ಡಾದಿಡ್ಡಿಯಾಗಿ ಚಲಿಸಲಾರಂಭಿಸಿತ್ತು. ಮೊದಲು ಹೃದಯ ಬಡಿತ ಕಡಿಮೆಯಾಗುತ್ತಿತ್ತು, ಆದರೆ ಈ ಘಟನೆ ನಂತರ ಅವರು ಸಾಮಾನ್ಯವಾಗಿ ಉಸಿರಾಡಲು ಪ್ರಾರಂಭಿಸಿದರು ಎಂದು ವಿವರಿಸಿದ್ದಾರೆ.

ಅವರು ತಮ್ಮ ಕುಟುಂಬಕ್ಕೆ ಅಂತ್ಯಕ್ರಿಯೆಯ ಎಲ್ಲಾ ಸಿದ್ಧತೆಗಳನ್ನು ನಿಲ್ಲಿಸುವಂತೆ ಕೇಳಿಕೊಂಡರು, ವಿನೀತಾಳನ್ನು ಪಿಲಿಭಿಟ್‌ನ ನ್ಯೂರೋಸಿಟಿ ಆಸ್ಪತ್ರೆಗೆ ಕರೆದೊಯ್ದರು ಮತ್ತು ಒಂದು ದಿನದ ನಂತರ ಅವರು ಮನೆಗೆ ಮರಳಿದ್ದಾರೆ. ಸುಮಾರು 13 ದಿನಗಳ ಚಿಕಿತ್ಸೆಯ ನಂತರ, ವಿನಿತಾ ಸಂಪೂರ್ಣವಾಗಿ ಚೇತರಿಸಿಕೊಂಡರು ಮತ್ತು ಈಗ ಸಾಮಾನ್ಯ ಜೀವನವನ್ನು ನಡೆಸುತ್ತಿದ್ದಾರೆ.

ಕುಟುಂಬವು ಈ ಘಟನೆಯನ್ನು ಒಂದು ಪವಾಡವೆಂದು ಪರಿಗಣಿಸಿದರೂ, ವೈದ್ಯಕೀಯ ತಂಡದ ಪ್ರಯತ್ನಗಳು ಮತ್ತು ರೋಗನಿರ್ಣಯವು ನಗರದಾದ್ಯಂತ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ.

ಆಕೆಗೆ ಚಿಕಿತ್ಸೆ ನೀಡಿದ ನರಶಸ್ತ್ರಚಿಕಿತ್ಸಕ ಡಾ. ರಾಕೇಶ್ ಸಿಂಗ್ ಮಾತನಾಡಿ, ರೋಗಿಗೆ ಹಾವು ಕಡಿದಿರಬಹುದು ಎನ್ನುವ ಅನುಮಾನ ಮೂಡಿತ್ತು ಆ ಸಾಧ್ಯತೆಯ ಆಧಾರದ ಮೇಲೆ, ವೈದ್ಯರು ಇತರ ಅಗತ್ಯ ಚಿಕಿತ್ಸೆಗಳೊಂದಿಗೆ ವಿಷ ನಿರೋಧಕ ಚುಚ್ಚುಮದ್ದನ್ನು ನೀಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗ

Follow Us