ಉತ್ತರ ಪ್ರದೇಶ: ಮದುವೆಯಾದ ಮರುದಿನವೇ ಗಂಡನ ಮನೆಯ ಲೂಟಿ ಮಾಡಿ ಆಭರಣಗಳ ಜತೆ ವಧು ಪರಾರಿ

ಮದುವೆಯಾದ ಮರು ದಿನವೇ ವಧು ಗಂಡನ ಮನೆಯನ್ನು ಲೂಟಿ ಮಾಡಿ, ಆಭರಣಗಳ ಜತೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಗೊಂಡಾದಲ್ಲಿ ಮದುವೆಯಾದ ಐದು ದಿನಗಳ ನಂತರ ನವವಿವಾಹಿತ ಮಹಿಳೆಯೊಬ್ಬರು ತನ್ನ ಗಂಡನ ಮನೆಯಿಂದ ನಗದು ಮತ್ತು ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ. ಬಸೋಲಿ ಗ್ರಾಮದಲ್ಲಿ ವರದಿಯಾದ ಘಟನೆಯಲ್ಲಿ, ದರೋಡೆ ನಡೆದ ರಾತ್ರಿ ಮಹಿಳೆ ತನ್ನ ಅತ್ತೆ-ಮಾವನಿಗೆ ಚಹಾ ಕುಡಿಸಿದ್ದಾಳೆ.

ಉತ್ತರ ಪ್ರದೇಶ: ಮದುವೆಯಾದ ಮರುದಿನವೇ ಗಂಡನ ಮನೆಯ ಲೂಟಿ ಮಾಡಿ ಆಭರಣಗಳ ಜತೆ ವಧು ಪರಾರಿ
ಮದುವೆ
Image Credit source: IndiaFilings

Updated on: Mar 05, 2025 | 9:07 AM

ಉತ್ತರಪ್ರದೇಶ, ಮಾರ್ಚ್​ 05: ಮದುವೆಯಾದ ಮರು ದಿನವೇ ವಧು ಗಂಡನ ಮನೆಯನ್ನು ಲೂಟಿ ಮಾಡಿ, ಆಭರಣಗಳ ಜತೆ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಗೊಂಡಾದಲ್ಲಿ ಮದುವೆಯಾದ ಐದು ದಿನಗಳ ನಂತರ ನವವಿವಾಹಿತ ಮಹಿಳೆಯೊಬ್ಬರು ತನ್ನ ಗಂಡನ ಮನೆಯಿಂದ ನಗದು ಮತ್ತು ಆಭರಣಗಳೊಂದಿಗೆ ಪರಾರಿಯಾಗಿದ್ದಾರೆ.

ಬಸೋಲಿ ಗ್ರಾಮದಲ್ಲಿ ವರದಿಯಾದ ಘಟನೆಯಲ್ಲಿ, ದರೋಡೆ ನಡೆದ ರಾತ್ರಿ ಮಹಿಳೆ ತನ್ನ ಅತ್ತೆ-ಮಾವನಿಗೆ ಚಹಾ ಕುಡಿಸಿದ್ದಾಳೆ. ಮರುದಿನ, 3.15 ಲಕ್ಷ ರೂ. ಮತ್ತು ಆಭರಣಗಳು ಕಾಣೆಯಾಗಿರುವುದು ಕಂಡುಬಂದಿದೆ. ಈ ಪ್ರಕರಣದ ಕುರಿತು ಸಂತ್ರಸ್ತೆಯ ಕುಟುಂಬವು ಲಿಖಿತ ಪೊಲೀಸ್ ದೂರು ಸಲ್ಲಿಸಿದೆ.

ಮತ್ತೊಂದು ಘಟನೆ
ಉತ್ತರ ಪ್ರದೇಶದ ಜಲೌನ್‌ನಲ್ಲಿ, ನವವಿವಾಹಿತ ವಧು ಮದುವೆಯ ನಂತರ ವರನೊಂದಿಗೆ ವಾಸಿಸಲು ನಿರಾಕರಿಸಿರುವ ಘಟನೆ ನಡೆದಿದೆ. ವಧು ತನ್ನ ಪ್ರಿಯಕರನೊಂದಿಗೆ ವಾಸಿಸಲು ಬಯಸಿದ್ದಳು ರಾತ್ರಿಯಿಡೀ ಇಬ್ಬರ ನಡುವೆ ಜಗಳ ನಡೆಯಿತು. ಬೆಳಗ್ಗೆ ಪಂಚಾಯತ್ ಕರೆಯಲಾಯಿತು. ವಧುವಿನ ತಾಯಿಯನ್ನೂ ಕರೆಸಲಾಯಿತು.

ಜಗಳ ಬಿಡಿಸಲು ಪೊಲೀಸರೂ ಬಂದರು. ಈ ಘಟನೆ ಜಿಲ್ಲೆಯ ಕುಥೌಂಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಸ್ಥಳದ ನಿವಾಸಿ ಲಕ್ಷ್ಮಿಕಾಂತ್, ಫೆಬ್ರವರಿ 13 ರಂದು ಕುಥೌಂಡ್ ಪ್ರದೇಶದ ಛೋಟಿ ಸುರೌಲಿ ಗ್ರಾಮದ ನಿವಾಸಿ ನಿಕಿತಾ ಎಂಬ ಹುಡುಗಿಯನ್ನು ವಿವಾಹವಾದರು. ಮದುವೆಯ ಎಲ್ಲಾ ವಿಧಿವಿಧಾನಗಳು ಸಂಪ್ರದಾಯದಂತೆ ನಡೆದವು. ನಂತರ ನವವಿವಾಹಿತ ವಧು ನಿಕಿತಾ ಲಕ್ಷ್ಮಿಕಾಂತ್ ಜೊತೆ ತನ್ನ ಅತ್ತೆಯ ಮನೆಗೆ ತಲುಪಿದಳು.

ಮತ್ತಷ್ಟು ಓದಿ: Viral: 40 ವರ್ಷಗಳಲ್ಲಿ ಬರೋಬ್ಬರಿ 12 ಬಾರಿ ಮದುವೆಯಾದ ದಂಪತಿ; ಕಾರಣ ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ

ಇಲ್ಲಿ ಅವಳು ರಾತ್ರಿಯಲ್ಲಿ ತನ್ನ ಗಂಡನೊಂದಿಗೆ ಜಗಳವಾಡಲು ಪ್ರಾರಂಭಿಸಿದಳು. ಅವಳು ಅವನೊಂದಿಗೆ ವಾಸಿಸುವ ಬದಲು, ತನ್ನ ಪ್ರೇಮಿಯೊಂದಿಗೆ ವಾಸಿಸಲು ಇಷ್ಟಪಡುತ್ತೇನೆ ಎಂದು ಹೇಳಿದಳು. ಇಬ್ಬರ ನಡುವಿನ ವಿವಾದ ರಾತ್ರಿಯಿಡೀ ಮುಂದುವರೆಯಿತು, ನಂತರ ಮರುದಿನ ವಧು ನಿಕಿತಾಳ ತಾಯಿಗೆ ಕರೆ ಮಾಡಲಾಯಿತು.

ಕುಟುಂಬ ಮತ್ತು ಸಂಬಂಧಿಕರೊಂದಿಗೆ ಪಂಚಾಯತ್ ನಡೆಸಲಾಯಿತು, ಇದರಲ್ಲಿ ಎರಡೂ ಕಡೆಯ ಸಂಬಂಧಿಕರು ಮತ್ತು ಕುಟುಂಬ ಸದಸ್ಯರು ಒಟ್ಟಿಗೆ ಕುಳಿತು ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು. ನಂತರ ಇದ್ದಕ್ಕಿದ್ದಂತೆ ನವವಿವಾಹಿತ ವಧು ಮತ್ತು ಅವಳ ತಾಯಿ ಕಣ್ಮರೆಯಾದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us