ಭಯಾನಕ ದೃಶ್ಯವನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವೇ ಇಲ್ಲ: ಉತ್ತರಾಖಂಡ ಹಿಮಕುಸಿತದ ತೀವ್ರತೆ ವಿವರಿಸಿದ ಸ್ಥಳೀಯ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 07, 2021 | 6:59 PM

ಉತ್ತರಾಖಂಡದಲ್ಲಿ ವಾಸಿಸುವ ಸಂಜಯ್​ ಸಿಂಗ್​ ರಾಣಾ ಎನ್ನುವ ವ್ಯಕ್ತಿ ಈ ಭಯಾನಕ ದೃಶ್ಯವನ್ನು ಕಣ್ಣಾರೆ ಕಂಡಿದ್ದಾರೆ. ಅವರು ಈ ಬಗ್ಗೆ ವಿವರಣೆ ನೀಡಿದ್ದಾರೆ.

ಭಯಾನಕ ದೃಶ್ಯವನ್ನು ಶಬ್ದಗಳಲ್ಲಿ ಹೇಳಲು ಸಾಧ್ಯವೇ ಇಲ್ಲ: ಉತ್ತರಾಖಂಡ ಹಿಮಕುಸಿತದ ತೀವ್ರತೆ ವಿವರಿಸಿದ ಸ್ಥಳೀಯ
ಹಾನಿಗೊಳಗಾದ ಡ್ಯಾಮ್
Follow us on

ಡೆಹ್ರಾಡೂನ್ : ಉತ್ತರಾಖಂಡದನ ಚಮೋಲಿ ಜಿಲ್ಲೆಯಲ್ಲಿ ವ್ಯಾಪಕ ಹಿಮಕುಸಿತ (Uttarakhand Glacier Burst) ಉಂಟಾಗಿದೆ. ಇದರಿಂದ ಉಂಟಾದ ಪ್ರವಾಹದಿಂದ 150ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ. ಅನೇಕರ ಶವ ಈಗಾಗಲೇ ದೊರೆತಿದ್ದು, ಇನ್ನೂ ಅನೇಕರಿಗಾಗಿ ಹುಡುಕಾಟ ಮುಂದುವರಿದೆ.  ಕೆಲ ಗ್ರಾಮಗಳಿಗೆ ನೀರು ಅಪ್ಪಳಿಸಿದೆ. ಈ ಘಟನೆಯನ್ನು ಕಣ್ಣಾರೆ ಕಂಡ ವ್ಯಕ್ತಿಯೋರ್ವ ಭಯಾನಕ ದೃಶ್ಯದ ಬಗ್ಗೆ ವಿವರಣೆ ನೀಡಿದ್ದಾರೆ.

ಉತ್ತರಾಖಂಡದಲ್ಲಿ ವಾಸಿಸುವ ಸಂಜಯ್​ ಸಿಂಗ್​ ರಾಣಾ ಎನ್ನುವ ವ್ಯಕ್ತಿ ಈ ಭಯಾನಕ ದೃಶ್ಯವನ್ನು ಕಣ್ಣಾರೆ ಕಂಡಿದ್ದಾರೆ. ಅವರು ಈ ಬಗ್ಗೆ ವಿವರಣೆ ನೀಡಿದ್ದಾರೆ. ನಾನು ಪ್ರವಾಹ ಉಂಟಾಗುವ ಪ್ರದೇಶಕ್ಕಿಂತ ಮೇಲಿದ್ದೆ. ನೋಡ ನೋಡುತ್ತಿದ್ದಂತೆ ಭಾರೀ ನೀರು ಬಂದಿತ್ತು. ಯಾರಿಗೂ ಅಲರ್ಟ್​ ಮಾಡಲು ಸಾಧ್ಯವೇ ಆಗಲಿಲ್ಲ. ನೀರು ಬರುವ ವೇಗ ನೋಡಿದರೆ, ನಾವು ಕೊಚ್ಚಿ ಹೋಗುತ್ತೇವೆ ಎಂದು ಭಾವಿಸಿದ್ದೆ ಎಂದು ಸಂಜಯ್ ಸಿಂಗ್​ ವಿವರಿಸಿದ್ದಾರೆ.

ನೀರು ಬರುವುದಕ್ಕೂ ಮೊದಲು ಇಲ್ಲಿ ಅನೇಕು ತಾವು ಸಾಕಿದ ಕುರಿ-ದನಗಳನ್ನು ಮೇಯಿಸುತ್ತಿದ್ದರು. ಇನ್ನೂ ಅನೇಕರು ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಅವರೆಲ್ಲರೂ ಕೊಚ್ಚಿ ಹೋಗಿರುವ ಭಯ ಕಾಡುತ್ತಿದೆ. ಎಷ್ಟು ಜನ ಕಾಣೆ ಆಗಿದ್ದಾರೆ ಎನ್ನುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಈ ಭಯಾನಕ ದೃಶ್ಯವನ್ನು ಶಬ್ದಗಳಲ್ಲಿ ಹೇಳುವದೇ ಕಷ್ಟ ಎಂದಿದ್ದಾರೆ ಸಂಜಯ್ ಸಿಂಗ್.

ಈಗಾಗಲೇ ಉತ್ತರಾಖಂಡದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ನೀರು ಬರುವ ವೇಗ ಎಲ್ಲರನ್ನು ಬೆಚ್ಚಿ ಬೀಳಿಸುವಂತಿದೆ.

Uttarakhand Glacier Burst: ಧೌಲಿಗಂಗಾ ಪ್ರವಾಹ; 9 ಮೃತದೇಹ ಪತ್ತೆ, ಆಪತ್ತಿನಲ್ಲಿ 150ಕ್ಕೂ ಹೆಚ್ಚು ಜನ