AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Explainer | ಉತ್ತರಾಖಂಡ್​ನಲ್ಲಿ ಹಠಾತ್ ಪ್ರವಾಹ: ಏನಿದು ಹಿಮಕುಸಿತ? ಹೇಗೆ ಸಂಭವಿಸುತ್ತೆ?

Uttarakhand Glacier Burst ಹಿಮನದಿಗಳು ಅಪಾರ ಪ್ರಮಾಣದ ನೀರನ್ನು ನೀರ್ಗಲ್ಲಿನ (ಗಟ್ಟಿ ಮಂಜುಗಡ್ಡೆ) ರೂಪದಲ್ಲಿ ಹೊಂದಿರುತ್ತದೆ. ಈ ಮಂಜುಗಡ್ಡೆಗಳು ಒಮ್ಮೆಲೆ ಕರಗಿದರೆ ಅಧಿಕ ಪ್ರಮಾಣದ ನೀರು ನದಿಮೂಲಕ ಹರಿಯತೊಡಗಿ ಪ್ರವಾಹ ಸ್ಥಿತಿಯುಂಟಾಗುತ್ತದೆ.

Explainer | ಉತ್ತರಾಖಂಡ್​ನಲ್ಲಿ ಹಠಾತ್ ಪ್ರವಾಹ: ಏನಿದು ಹಿಮಕುಸಿತ? ಹೇಗೆ ಸಂಭವಿಸುತ್ತೆ?
ಋಷಿಗಂಗಾ ವಿದ್ಯುತ್ ಸ್ಥಾವರ ಹಾನಿಗೊಳಗಾಗಿರುವುದು (ಕೃಪೆ: ಪಿಟಿಐ)
Follow us
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 07, 2021 | 5:15 PM

ಡೆಹ್ರಾಡೂನ್ : ಉತ್ತರಾಖಂಡ್​ನ ಚಮೋಲಿ ಜಿಲ್ಲೆಯಲ್ಲಿ ವ್ಯಾಪಕ ಹಿಮಕುಸಿತ (Uttarakhand Glacier Burst) ಸಂಭವಿಸಿದ್ದು ಅಲಕಾನಂದ, ಧೌಲಿಗಂಗಾ ನದಿಗಳಲ್ಲಿ ಭಾನುವಾರ ಹಠಾತ್ತನೆ ಪ್ರವಾಹ ಉಕ್ಕೇರಿದೆ.

ಚಮೋಲಿ ಜಿಲ್ಲೆಯ ಋಷಿಗಂಗಾ ವಿದ್ಯುತ್ ಸ್ಥಾವರ ಬಳಿ ಹಿಮಕುಸಿತವುಂಟಾದ ಬೆನ್ನಲ್ಲೇ ಧೌಲಿಗಂಗಾದಲ್ಲಿ ಪ್ರವಾಹ ಸ್ಥಿತಿಯುಂಟಾಗಿದೆ. ಪ್ರವಾಹದಲ್ಲಿ 150 ಮಂದಿ ಕಣ್ಮರೆಯಾಗಿದ್ದಾರೆ ಎಂದು ಬಲ್ಲಮೂಲಗಳು ವರದಿ ಮಾಡಿದ್ದು, ಹತ್ತಿರದ ಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಗಿದೆ.

ಪ್ರವಾಹದಿಂದಾಗಿ ಅಣೆಕಟ್ಟಿನ ಬದಿಯಲ್ಲಿರುವ ಹಲವಾರು ಮನೆಗಳು ಮುಳುಗಿದ್ದು ಇಂಡೊ ಟಿಬೆಟನ್ ಬಾರ್ಡರ್​ ಪೊಲೀಸ್​ (ಐಟಿಬಿಪಿ) ಸಿಬ್ಬಂದಿಯನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಚಮೋಲಿ ಪೊಲೀಸರ ಪ್ರಕಾರ ತಪೋವನ್ ಪ್ರದೇಶದಲ್ಲಿ ಹಿಮಕುಸಿತವುಂಟಾದ ಕಾರಣ ಋಷಿಗಂಗಾ ವಿದ್ಯುತ್ ಸ್ಥಾವರಕ್ಕೆ ಹಾನಿಯಾಗಿತ್ತು. ಹಿಮಕುಸಿತವುಂಟಾದ ಕೂಡಲೇ ಅಲಕಾನಂದ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ಹತ್ತಿರದ ಪ್ರದೇಶದ ಜನರನ್ನು ಬೇರೆಡೆಗೆ ಸ್ಥಳಾಂತರಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

ಹಿಮನದಿಯಲ್ಲಿ ಹಿಮಕುಸಿತವುಂಟಾಗಲು ಕಾರಣವೇನು? ಹಿಮನದಿಯಲ್ಲಿ ನೀರು ಹೆಪ್ಪುಗಟ್ಟಿ ನೀರ್ಗಲ್ಲಿನ ಸ್ಥಿತಿಯಲ್ಲಿರುವ ಮಂಜುಗಡ್ಡೆ ಒಮ್ಮೆಲೆ ಕರಗಿ ನೀರಾಗಿ ಹರಿಯತೊಡಗುತ್ತದೆ. ಭಾರೀ ಪ್ರಮಾಣದ ಮಂಜುಗಡ್ಡೆ ಒಮ್ಮೆಲೆ ಕರಗಿದಾಗ ಹಿಮಕುಸಿತದ ಸ್ಥಿತಿ ಉಂಟಾಗುತ್ತದೆ. ಇಂಥ ನದಿಗಳು ಅಣೆಕಟ್ಟು ಸಂಧಿಸುವ ಸ್ಥಳದಲ್ಲಿ ಸಮಸ್ಯೆಯಾದರೆ ಹಠಾತ್ ಪ್ರವಾಹ ಉಂಟಾಗುತ್ತದೆ.

ಹಿಮಕುಸಿತದಿಂದ ಪ್ರವಾಹ ಭೂಮಿಯ ಮೇಲ್ಮಣ್ಣಿನ ಸವಕಳಿ, ನೀರಿನ ಒತ್ತಡ, ಹಿಮಪಾತ ಮತ್ತು ನೀರ್ಗಲ್ಲಿನ ಅಡಿಯ ಭೂಮಿ ಕಂಪಿಸಿದಾಗ ಹಿಮಕುಸಿತ ಸಂಭವಿಸುತ್ತದೆ. ಹಿಮನದಿಯಲ್ಲಿಯಲ್ಲಿ ಹೆಚ್ಚಿನ ಭಾಗ ಕುಸಿದಾಗ, ಅಲ್ಲಿನ ನೀರು ಒಮ್ಮೆಲೆ ಸ್ಥಳಾಂತರಗೊಂಡಾಗಲೂ ಈ ರೀತಿ ಸಂಭವಿಸುತ್ತದೆ. ಹಿಮನದಿಗಳು ಅಪಾರ ಪ್ರಮಾಣದ ನೀರನ್ನು ಮಂಜುಗಡ್ಡೆಯ ರೂಪದಲ್ಲಿ ಹೊಂದಿರುತ್ತದೆ. ಈ ಮಂಜುಗಡ್ಡೆಗಳು ಒಮ್ಮೆಲೆ ಕರಗಿದರೆ ಅಧಿಕ ಪ್ರಮಾಣದ ನೀರು ನದಿಮೂಲಕ ಹರಿಯತೊಡಗಿ ಪ್ರವಾಹ ಸ್ಥಿತಿಯುಂಟಾಗುತ್ತದೆ.

ಸಹಾಯವಾಣಿ ಪ್ರವಾಹಕ್ಕೆ ಸಿಲುಕಿರುವ ಜನರು ಸಹಾಯಕ್ಕಾಗಿ ವಿಪತ್ತು ನಿರ್ವಹಣಾ ಕೇಂದ್ರವನ್ನು ಸಂಪರ್ಕಿಸುವಂತೆ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಸೂಚಿಸಿದ್ದಾರೆ. ವಿಪತ್ತು ನಿರ್ವಹಣಾ ಕೇಂದ್ರದ ಸಂಪರ್ಕ ಸಂಖ್ಯೆಗಳು: 1070 ಮತ್ತು 95574 44486.

ಇನ್ನಷ್ಟು ಮಾಹಿತಿಗೆ https://tv9kannada.com/tag/glacier-burst ಲಿಂಕ್ ಕ್ಲಿಕ್ ಮಾಡಿ.

ಉತ್ತರಾಖಂಡ್ ಚಮೋಲಿಯಲ್ಲಿ ವ್ಯಾಪಕ ಹಿಮಕುಸಿತ; ನದಿಪಾತ್ರದ ಜನತೆಗೆ ಆಡಳಿತದಿಂದ ಎಚ್ಚರಿಕೆ

Published On - 5:05 pm, Sun, 7 February 21

ದಂಪತಿಗೆ ಮದುವೆಯಾಗಿ ಕೇವಲ ಎರಡು ವರ್ಷವಾಗಿತ್ತು
ದಂಪತಿಗೆ ಮದುವೆಯಾಗಿ ಕೇವಲ ಎರಡು ವರ್ಷವಾಗಿತ್ತು
ಮೊಹಮ್ಮದ್ ಸಿರಾಜ್​ಗೆ ವಜ್ರದ ಉಂಗುರ ನೀಡಿದ ರೋಹಿತ್ ಶರ್ಮಾ
ಮೊಹಮ್ಮದ್ ಸಿರಾಜ್​ಗೆ ವಜ್ರದ ಉಂಗುರ ನೀಡಿದ ರೋಹಿತ್ ಶರ್ಮಾ
VIDEO: ಔಟ್ ಮಾಡು... ಔಟ್ ಮಾಡು... ಪಂದ್ಯದ ನಡುವೆ ಕಾವ್ಯ ಮಾರನ್ ರಿಯಾಕ್ಷನ್
VIDEO: ಔಟ್ ಮಾಡು... ಔಟ್ ಮಾಡು... ಪಂದ್ಯದ ನಡುವೆ ಕಾವ್ಯ ಮಾರನ್ ರಿಯಾಕ್ಷನ್
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
ದಿಂಬಂ ಘಾಟ್​ನಲ್ಲಿ ರಾಶಿ ರಾಶಿ ಟೊಮೆಟೋ ತಿಂದು ತೇಗಿದ ಕಾಡಾನೆ: ವಿಡಿಯೋ ನೋಡಿ
Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ