Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾದಿಂದ ಪಾರಾಗಲು 2 ಮಾಸ್ಕ್ ಧರಿಸುವುದು ಪರಿಣಾಮಕಾರಿ; ಆದರೆ ಧರಿಸುವ ಕ್ರಮ ಯಾವುದು? ಇಲ್ಲಿದೆ ಮಾಹಿತಿ..

ಸಾರ್ಸ್ ಕೊವಿಡ್ 19 ಕಣಗಳು ಬಾಯಿ-ಮೂಗು ಪ್ರವೇಶಿಸದಂತೆ ತಡೆಯುವಲ್ಲಿ ಒಂದು ಮಾಸ್ಕ್​ಗಿಂತ, ಎರಡು ಮಾಸ್ಕ್​​ಗಳು ಪರಿಣಾಮಕಾರಿ ಎಂಬುದು ಅಧ್ಯಯನದಲ್ಲಿ ಸ್ಪಷ್ಟವಾಗಿದೆ.

ಕೊರೊನಾದಿಂದ ಪಾರಾಗಲು 2 ಮಾಸ್ಕ್ ಧರಿಸುವುದು ಪರಿಣಾಮಕಾರಿ; ಆದರೆ ಧರಿಸುವ ಕ್ರಮ ಯಾವುದು? ಇಲ್ಲಿದೆ ಮಾಹಿತಿ..
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on:May 10, 2021 | 5:00 PM

ದೆಹಲಿ: ಭಾರತದಲ್ಲಿ ಕೊವಿಡ್ 19 ಅಲೆ ಜಾಸ್ತಿಯಾಗಿದೆ. ಕೊವಿಡ್ 19 ಸೋಂಕು ಕಾಲಿಟ್ಟಾಗಿನಿಂದಲೂ ಮಾಸ್ಕ್​ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಈಗಂತೂ ಡಬಲ್ ಮಾಸ್ಕ್​ ಧರಿಸಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ಹಲವು ಗೊಂದಲಗಳಿವೆ. ಇನ್ನು ಎರಡು ಮಾಸ್ಕ್ ಹೇಗೆ ಧರಿಸಬೇಕು? ಅದು ಹೇಗಿರಬೇಕು? ಎಂಬ ಬಗ್ಗೆ ಕೇಂದ್ರ ಸರ್ಕಾರ ಭಾನುವಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಎರಡು ಮಾಸ್ಕ್ ಧರಿಸುವ ಕ್ರಮ ಹೇಗಿರಬೇಕು? 1. ಎರಡು ಮಾಸ್ಕ್​ಗಳಲ್ಲಿ ಒಂದು ಸರ್ಜಿಕಲ್ ಮಾಸ್ಕ್ ಆಗಿರಬೇಕು ಹಾಗೂ ಇನ್ನೊಂದು ಎರಡು ಅಥವಾ ಮೂರು ಲೇಯರ್​ಗಳುಳ್ಳ ಬಟ್ಟೆಯ ಮಾಸ್ಕ್​ ಆಗಿರಬೇಕು. 2. ಮೂಗಿನ ಮೇಲ್ಭಾಗವನ್ನು ಗಟ್ಟಿಯಾಗಿ ಬಿಗಿದಿರುವಂತೆ ಮಾಸ್ಕ್ ಧರಿಸಬೇಕು. ಹಾಗೇ, ಉಸಿರಾಟಕ್ಕೆ ಯಾವುದೇ ತೊಂದರೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. 3. ಇದರಲ್ಲಿ ಸರ್ಜಿಕಲ್ ಮಾಸ್ಕ್​ನ್ನು ಬದಲಿಸಬೇಕು. ಬಟ್ಟೆ ಮಾಸ್ಕ್​ನ್ನು ಪ್ರತಿದಿನ ತೊಳೆಯಬೇಕು.

ಏನು ಮಾಡಬಾರದು? 1. ಒಂದೇ ತೆರನಾದ ಎರಡು ಮಾಸ್ಕ್​ಗಳನ್ನು ಧರಿಸಬಾರದು. ಅಂದರೆ ಎರಡೂ ಬಟ್ಟೆಯ ಮಾಸ್ಕ್ ಆಗಬಾರದು ಅಥವಾ ಎರಡೂ ಸರ್ಜಿಕಲ್ ಮಾಸ್ಕ್​ ಆಗಿರಬಾರದು. ಎರಡು ಬೇರೆಬೇರೆ ವಿಧದ ಮಾಸ್ಕ್ ಧರಿಸುವುದು ಕಡ್ಡಾಯ ಹಾಗೂ ಸುರಕ್ಷಿತ. 2. ಪ್ರತಿದಿನವೂ ಮಾಸ್ಕ್ ಚೇಂಜ್ ಮಾಡಲೇಬೇಕು. ಅದರಲ್ಲಿ ಬಟ್ಟೆಯ ಮಾಸ್ಕ್​ನ್ನು ತೊಳೆದು ಬಳಸಬಹುದು.

ಸಾರ್ಸ್ ಕೊವಿಡ್ 19 ಕಣಗಳು ಬಾಯಿ-ಮೂಗು ಪ್ರವೇಶಿಸದಂತೆ ತಡೆಯುವಲ್ಲಿ ಒಂದು ಮಾಸ್ಕ್​ಗಿಂತ, ಎರಡು ಮಾಸ್ಕ್​​ಗಳು ಪರಿಣಾಮಕಾರಿ ಎಂಬುದು ಅಧ್ಯಯನದಲ್ಲಿ ಸ್ಪಷ್ಟವಾಗಿದೆ. ಈ ವಿಚಾರವನ್ನು JAMA ಎಂಬ ಅಂತಾರಾಷ್ಟ್ರೀಯ ಮಟ್ಟದ ವೈದ್ಯಕೀಯ ಜರ್ನಲ್​ ಕೂಡ ಪ್ರಕಟಿಸಿದೆ.

ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಮತ್ತೆ ಮುಂದೂಡಿಕೆ: ಕೊವಿಡ್​ನಿಂದಾಗಿ ಚುನಾವಣೆ ಬೇಡ ಎಂದ ಕಾಂಗ್ರೆಸ್ ನಾಯಕರು

ಕೊಪ್ಪಳ: ರೆಮ್​ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ಪ್ರಕರಣ; ಬೆಳಕಿಗೆ ಬಂದ 3 ಲಕ್ಷ ವ್ಯವಹಾರ

Wearing two masks to prevent the Covid 19 infection study reveals

Published On - 4:56 pm, Mon, 10 May 21

ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು