ಆಸ್ಪತ್ರೆಯಲ್ಲಿ ಮೃತ ವ್ಯಕ್ತಿಯ ಕಣ್ಣುಗಳು ನಾಪತ್ತೆ, ಮಮತಾ ಬೆಂಗಾವಲು ವಾಹನ ತಡೆದ ಕುಟುಂಬಸ್ಥರು

Updated on: Nov 26, 2025 | 7:24 AM

ಆಸ್ಪತ್ರೆಯಲ್ಲಿ ಮೃತ ವ್ಯಕ್ತಿಯ ಕಣ್ಣುಗಳು ನಾಪತ್ತೆಯಾಗಿದ್ದು, ಕುಟುಂಬದವರಲ್ಲಿ ಆತಂಕ ಮನೆ ಮಾಡಿತ್ತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬೆಂಗಾವಲು ಪಡೆಯನ್ನು ಉತ್ತರ 24 ಪರಗಣದ ಬರಾಸತ್‌ನಲ್ಲಿ ಕುಟುಂಬಸ್ಥರು ತಡೆದು ನ್ಯಾಯಕ್ಕಾಗಿ ಒತ್ತಾಯಿಸಿದರು. ಬಂಗಾಳದ ಬೊಂಗಾನ್ ಎಸ್‌ಐಆರ್ ವಿರುದ್ಧದ ರ್ಯಾಲಿಯನ್ನು ಉದ್ದೇಶಿಸಿ ಹಿಂತಿರುಗುತ್ತಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೆಂಗಾವಲು ವಾಹನವನ್ನು ಪ್ರತಿಭಟನಾಕಾರರು ತಡೆದಿದ್ದಾರೆ. ನಂತರ ಬ್ಯಾನರ್ಜಿ ತಮ್ಮ ಕಾರಿನಿಂದ ಇಳಿದು ಮೃತರ ಕುಟುಂಬವನ್ನು ಭೇಟಿಯಾದರು. ಬರಾಸತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಮೃತ ವ್ಯಕ್ತಿಯ ಕಣ್ಣನ್ನು ಕಿತ್ತುಹಾಕಿದೆ ಎಂದು ಕುಟುಂಬ ಆರೋಪಿಸಿದೆ.

ಬರಾಸತ್, ನವೆಂಬರ್ 26: ಆಸ್ಪತ್ರೆಯಲ್ಲಿ ಮೃತ ವ್ಯಕ್ತಿಯ ಕಣ್ಣುಗಳು ನಾಪತ್ತೆಯಾಗಿದ್ದು, ಕುಟುಂಬದವರಲ್ಲಿ ಆತಂಕ ಮನೆ ಮಾಡಿತ್ತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಬೆಂಗಾವಲು ಪಡೆಯನ್ನು ಉತ್ತರ 24 ಪರಗಣದ ಬರಾಸತ್‌ನಲ್ಲಿ ಕುಟುಂಬಸ್ಥರು ತಡೆದು ನ್ಯಾಯಕ್ಕಾಗಿ ಒತ್ತಾಯಿಸಿದರು. ಬಂಗಾಳದ ಬೊಂಗಾನ್ ಎಸ್‌ಐಆರ್ ವಿರುದ್ಧದ ರ್ಯಾಲಿಯನ್ನು ಉದ್ದೇಶಿಸಿ ಹಿಂತಿರುಗುತ್ತಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೆಂಗಾವಲು ವಾಹನವನ್ನು ಪ್ರತಿಭಟನಾಕಾರರು ತಡೆದಿದ್ದಾರೆ. ನಂತರ ಬ್ಯಾನರ್ಜಿ ತಮ್ಮ ಕಾರಿನಿಂದ ಇಳಿದು ಮೃತರ ಕುಟುಂಬವನ್ನು ಭೇಟಿಯಾದರು. ಬರಾಸತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಮೃತ ವ್ಯಕ್ತಿಯ ಕಣ್ಣನ್ನು ಕಿತ್ತುಹಾಕಿದೆ ಎಂದು ಕುಟುಂಬ ಆರೋಪಿಸಿದೆ.

ಪ್ರತಿಭಟನಾಕಾರರು 34 ವರ್ಷದ ಪ್ರೀತಂ ಘೋಷ್ ಸಂಬಂಧಿಕರಾಗಿದ್ದು, ಬರಾಸತ್ ಆಸ್ಪತ್ರೆಯಲ್ಲಿ ಮೃತರ ಕಣ್ಣುಗಳನ್ನು ತೆಗೆದುಹಾಕಲಾಗಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿ ನ್ಯಾಯ ಒದಗಿಸುವ ಭರವಸೆ ನೀಡಿದರು. ಮುಖ್ಯಮಂತ್ರಿ ಕೋಟಾದಿಂದ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ಮತ್ತು ಕುಟುಂಬಕ್ಕೆ ಪರಿಹಾರವನ್ನು ಘೋಷಿಸಿದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us