AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

West Bengal Assembly Elections 2021: ಕೊನೆಯ ಹಂತದ ಚುನಾವಣೆಗೆ ಮತದಾನ; ಉತ್ತರ ಕೊಲ್ಕತ್ತಾದಲ್ಲಿ ಬಾಂಬ್ ದಾಳಿ

West Bengal Voting: ಮಾಲ್ಡಾ, ಮುರ್ಷಿದಾಬಾದ್, ಬಿರ್​ಭೂಂ ಮತ್ತು ಉತ್ತರ ಕೊಲ್ಕತ್ತಾ ಸೇರಿದಂತೆ 35 ವಿಧಾನಸಭಾ ಕ್ಷೇತ್ರಗಳಿಗೆ 8ನೇ ಹಂತದ ಚುನಾವಣೆಗೆ ಮತದಾನ ನಡೆಯುತ್ತಿದೆ. 285 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

West Bengal Assembly Elections 2021: ಕೊನೆಯ ಹಂತದ ಚುನಾವಣೆಗೆ ಮತದಾನ; ಉತ್ತರ ಕೊಲ್ಕತ್ತಾದಲ್ಲಿ ಬಾಂಬ್ ದಾಳಿ
ಪಶ್ಚಿಮ ಬಂಗಾಳದ ಮತಗಟ್ಟೆಯೊಂದರಲ್ಲಿನ ದೃಶ್ಯ ( ಕೃಪೆ: ಪಶ್ಚಿಮ ಬಂಗಾಳ ಚುನಾವಣಾ ಆಯೋಗ)
ರಶ್ಮಿ ಕಲ್ಲಕಟ್ಟ
|

Updated on:Apr 29, 2021 | 11:58 AM

Share

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಗೆ ಕೊನೆಯ ಹಂತದ ಚುನಾವಣೆಗೆ ಮತದಾನ ಇಂದು ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ. ಬೆಳಗ್ಗೆ 9.30ರ ಹೊತ್ತಿಗೆ ಶೇ 16.04 ಮತದಾನ ದಾಖಲಾಗಿದೆ. ಕೊವಿಡ್ ಎರಡನೇ ಅಲೆಯಿಂದಾಗಿ ಪ್ರಕರಣಗಳು ಏರಿಕೆಯಾಗುತ್ತಿರುವ ಹೊತ್ತಿನಲ್ಲಿಯೇ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ನಡೆದಿದೆ. ಬುಧವಾರ ಪಶ್ಚಿಮ ಬಂಗಾಳದಲ್ಲಿ 17,207 ಹಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು ದಾಖಲೆಯಾಗಿದೆ. ರಾಜ್ಯದಲ್ಲಿ ಒಟ್ಟು 7,93,552 ಕೊವಿಡ್ ಸೋಂಕಿತರಿದ್ದಾರೆ. ಬುಧವಾರ 77 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 11,159ಕ್ಕೇರಿದೆ. ಮಾಲ್ಡಾ, ಮುರ್ಷಿದಾಬಾದ್ ,ಬಿರ್​ಭೂಂ ಮತ್ತು ಉತ್ತರ ಕೊಲ್ಕತ್ತಾ ಸೇರಿದಂತೆ 35 ವಿಧಾನಸಭಾ ಕ್ಷೇತ್ರಗಳಿಗೆ 8ನೇ ಹಂತದ ಚುನಾವಣೆಗೆ ಮತದಾನ ನಡೆಯುತ್ತಿದೆ. 285 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಉತ್ತರ ಕೊಲ್ಕತ್ತಾದಲ್ಲಿ ಬಾಂಬ್ ದಾಳಿ ಮತದಾನ ನಡೆಯುತ್ತಿದ್ದಂತೆ ಮಹಾಜತಿ ಸದನ್ ಹೊರಗಡೆ ಬಾಂಬ್ ದಾಳಿ ನಡೆದಿದೆ. ನನ್ನನ್ನು ಹತ್ಯೆ ಮಾಡಲು ಬಾಂಬ್ ಎಸೆದಿದ್ದಾರೆ. ನನ್ನ ಕಾರಿನ ಮೇಲೆ ಗುರಿಯಿಟ್ಟಿದ್ದರು. ಮತದಾರರನ್ನು ಭಯಪಡಿಸುವ ತಂತ್ರ ಇದು ಎಂದು ಜಜೊರ್​ಸಂಕೊ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೀನಾ ದೇವಿ ಪುರೋಹಿತ್ ಆರೋಪಿಸಿದ್ದಾರೆ .ಈ ಬಾಂಬ್ ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ.

8ನೇ ಹಂತದ ಚುನಾವಣೆಯಲ್ಲಿ 11,860 ಮತಗಟ್ಟೆಗಳಿದ್ದು 84 ಲಕ್ಷಕ್ಕಿಂತಲೂ ಹೆಚ್ಚು ಮತದಾರರು ಇದ್ದಾರೆ. ಉತ್ತರ ಕೊಲ್ಕತ್ತಾದ ಬೆಲೆಘಾಟಾ, ಜೊರ್​ಸಂಕೊ,ಶ್ಯಾಮ್​ಪುಕುರ್, ಮಣಿಕ್​ತಲ, ಕಾಶೀಪುರ್ ಬೆಲ್ಗಾಚಿಯಾ ವಿಧಾನಸಭಾ ಕ್ಷೇತ್ರದಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ.

ಚುನಾವಣೆ ಜನತಂತ್ರದ  ಹಬ್ಬ , ನಾವಿಬ್ಬರೂ  ಮತದಾನ ಮಾಡಿದ್ದೇವೆ.  ಕೊವಿಡ್ ನಿಯಮಾವಳಿಗಳನ್ನು  ಸಂಪೂರ್ಣ ಪಾಲಿಸಲಾಗಿದೆ.  ಇಲ್ಲಿರುವ ವ್ಯವಸ್ಥೆ ನೋಡಿ ಖುಷಿಯಾಯ್ತು. ಚುನಾವಣಾ ಆಯೋಗ ಮತ್ತು ಸಿಎಪಿಎಫ್ ಉತ್ತಮ ಕೆಲಸ ಮಾಡಿದೆ.  ನಿಮ್ಮ ಮತದಿಂದಲೇ ಪ್ರಜಾತಂತ್ರಕ್ಕೆ ಶಕ್ತಿ ಬರುವುದು. ಮತದಾನ ಮಾಡದವರಿಗೆ  ದೂರುವ ಹಕ್ಕು ಇರುವುದಿಲ್ಲ ಎಂದು  ಪಶ್ಚಿಮ  ಬಂಗಾಳದ ರಾಜ್ಯಪಾಲ ಜಗದೀಪ್ ಧನ್​ಕರ್ ಹೇಳಿದ್ದಾರೆ.

ಇಲ್ಲಿರುವುದು ಜಂಗಲ್ ರಾಜ್:  ಬಿಜೆಪಿ  ಅಭ್ಯರ್ಥಿ ಗೋಪಾಲ್ ಚಂದ್ರ ಸಾಹಾ

ಏಪ್ರಿಲ್ 18ರಂದು ಸಾಹಾಪುರ್ ನಲ್ಲಿ  ಸಾರ್ವಜನಿಕ ಪ್ರಚಾರ ಕಾರ್ಯಕ್ರಮ ನಡೆಸುತ್ತಿದ್ದಾಗ ನನ್ನ ಮೇಲೆ ಗುಂಡು ಹಾರಿಸಲಾಗಿತ್ತು. ತಕ್ಷಣವೇ ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು. ನನ್ನ ಮೇಲೆ ದಾಳಿ ನಡೆಸಿದವರು ಟಿಎಂಸಿ ಅಥವಾ ಕಾಂಗ್ರೆಸ್ ನ ಗೂಂಡಾಗಳಾಗಿರುತ್ತಾರೆ. ಇಲ್ಲಿರುವುದು ಜಂಗಲ್ ರಾಜ್ (ಕಾಡಿನ ಆಡಳಿತ)  ಎಂದು ಮಾಲ್ಡಾದ  ಬಿಜೆಪಿ ಅಭ್ಯರ್ಥಿ ಗೋಪಾಲ್ ಚಂದ್ರ ಸಾಹಾ ಹೇಳಿದ್ದಾರೆ.

(West Bengal votes in the last phase of the Assembly elections 2021)

ಇದನ್ನೂ ಓದಿ: West Bengal Assembly Elections 2021: 7ನೇ ಹಂತದ ಚುನಾವಣೆ; ರಾಶ್‌ಬೆಹರಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದ ಬಿಜೆಪಿಯ ಮತಗಟ್ಟೆ ಏಜೆಂಟ್ ಬಂಧನ

Published On - 11:41 am, Thu, 29 April 21

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!