WITT Global Summit : ವಾಟ್ ಇಂಡಿಯಾ ಥಿಂಕ್ಸ್ ಟುಡೇ ಮೂರನೇ ದಿನ; ರಾಜಕೀಯದ ಸುತ್ತ, ರಾಜಕಾರಣಿಗಳ ಮಾತು

ವಾಟ್ ಇಂಡಿಯಾ ಥಿಂಕ್ಸ್ ಟುಡೇ ಮೂರನೇ ದಿನ ನಡೆಯಲಿರುವ ಟಿವಿ9 ಭಾರತ್​ವರ್ಷ್​ ಸತ್ತಾ ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಪಂಜಾಬ್ ಸಿಎಂ ಭಗವಂತ್ ಮಾನ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.

WITT Global Summit : ವಾಟ್ ಇಂಡಿಯಾ ಥಿಂಕ್ಸ್ ಟುಡೇ ಮೂರನೇ ದಿನ; ರಾಜಕೀಯದ ಸುತ್ತ, ರಾಜಕಾರಣಿಗಳ ಮಾತು
ವಾಟ್ ಇಂಡಿಯಾ ಥಿಂಕ್ಸ್ ಟುಡೇ
ರಶ್ಮಿ ಕಲ್ಲಕಟ್ಟ

Updated on: Feb 27, 2024 | 7:00 AM

ದೆಹಲಿ ಫೆಬ್ರವರಿ 16: ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಅಧ್ಯಕ್ಷ ಮತ್ತು ಹೈದರಾಬಾದ್ ಲೋಕಸಭಾ ಸಂಸದ ಅಸಾದುದ್ದೀನ್ ಓವೈಸಿ (TV9 Satta Sammelan) ಫೆಬ್ರವರಿ 26 ರಂದು ನವದೆಹಲಿಯಲ್ಲಿ ವಾಟ್ ಇಂಡಿಯಾ ಥಿಂಕ್ಸ್ ಟುಡೇ 3 ನೇ ದಿನದಂದು ಟಿವಿ9 ಸತ್ತಾ ಸಮ್ಮೇಳನದಲ್ಲಿ ಪ್ರಮುಖ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ. ಆಲ್ ಇಂಡಿಯಾ ಭಾಯಿಜಾನ್ ಕಾರ್ಯಕ್ರಮದಲ್ಲಿ ಓವೈಸಿ ಮಾತನಾಡಲಿದ್ದಾರೆ.  ಟಿವಿ9 ಸತ್ತಾ ಸಮ್ಮೇಳನವು TV9 ನ ‘ವಾಟ್ ಇಂಡಿಯಾ  ಥಿಂಕ್ಸ್ ಟುಡೇ'(WITT Global Summit) ಜಾಗತಿಕ ಶೃಂಗಸಭೆಯ ಭಾಗವಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಪಂಜಾಬ್ ಸಿಎಂ ಭಗವಂತ್ ಮಾನ್, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಇತರ ಗಣ್ಯರು ಕೂಡ ಬೃಹತ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮೂರನೇ ದಿನದ ಕಾರ್ಯಕ್ರಮ ಹೀಗಿದೆ

ಬೆಳಗ್ಗೆ9:55: ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುನ್ ದಾಸ್ ಅವರಿಂದ ಸ್ವಾಗತ ಭಾಷಣ

ಬೆಳಗ್ಗೆ 10:00: ನವ ಭಾರತದ ಶೌರ್ಯ ಕಥೆ – ರಕ್ಷಣಾ ಸಚಿವ ರಾಜನಾಥ್ ಸಿಂಗ್

ಬೆಳಗ್ಗೆ 10:45: 2024 ರಲ್ಲಿ ಯಾರ ಶಕ್ತಿ? ಪವನ್ ಖೇಡಾ

ಬೆಳಗ್ಗೆ 11:25: ಗ್ಲೋಬಲ್ ಸ್ವಾಮಿ – ಯೋಗ ಗುರು ಬಾಬಾ ರಾಮದೇವ್

ಮಧ್ಯಾಹ್ನ 12:00: ಕಾಶ್ಮೀರದ ಹೊಸ ಕಥೆ ಜಮ್ಮು ಮತ್ತು ಕಾಶ್ಮೀರ LG ಮನೋಜ್ ಸಿನ್ಹಾ

ಮಧ್ಯಾಹ್ನ 12:25: ಒಂದು ದೇಶ, ಒಂದು ಶಾಸನ, ಹೊಸ ಹಿಂದೂಸ್ಥಾನ – ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ

ಮಧ್ಯಾಹ್ನ 12:50: ನವ ಭಾರತದ ಗ್ಯಾರಂಟಿ ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಮತ್ತು ಛತ್ತೀಸ್‌ಗಢ ಸಿಎಂ ವಿಷ್ಣು ದೇವ್ ಮಾತು.

ಮಧ್ಯಾಹ್ನ 01:20 ನವ ಭಾರತದ ಗ್ಯಾರಂಟಿ – ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್

ಮಧ್ಯಾಹ್ನ 01:40 ಜೈ ಕಿಸಾನ್, ಪರಿಹಾರವೇನು? ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ

ಇದನ್ನೂ ಓದಿ: ‘ರಾಜಕೀಯಕ್ಕೆ ಬರಲು ನನಗೆ ಇದು ಸರಿಯಾದ ಕಾಲ’: ಕಂಗನಾ ರಣಾವತ್​

1.55 : ಮಧ್ಯಾಹ್ನದೂಟ

3.00 : ಆಪ್ ಕಾ ಮಾನ್ ( ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮಾತಾಡಲಿದ್ದಾರೆ)

3.45 : ದಿ ಮೋದಿ ಗ್ಯಾರಂಟಿ( ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮುಖ್ಯ ಅತಿಥಿ)

4.15 : ಆಲ್ ಇಂಡಿಯಾ ಭಾಯಿಜಾನ್ ( ಅಸಾದುದ್ದೀನ್ ಓವೈಸಿ ಮುಖ್ಯ ಅತಿಥಿ)

5.05: ಟಾರ್ಗೆಟ್ 400+ (ಕೇಂದ್ರ ಸಚಿವ ಭೂಪೇಂದ್ರ ಯಾದವ್ ಮುಖ್ಯ ಅತಿಥಿ)

5.30: ಹಿಂದೂಗಳ ಹಿಂದೂಸ್ತಾನವೇ? ( ಮುಖ್ಯ ಅತಿಥಿ ಹಿಮಂತ ಬಿಸ್ವ ಶರ್ಮಾ , ಅಸ್ಸಾಂ ಸಿಂ)

6.20: ದಿ ಮೋದಿ ಹ್ಯಾಟ್ರಿಕ್ (ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮಾತು)

7.00: ಇಂಡಿಯಾ- ಎ ಡಿವೈಡೆಡ್ ಹೌಸ್ (ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮಾತು)

7.55: ಮಿಸ್ಟರ್ ಇಂಡಿಯಾ (ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ)

9.00 :ದಿ ಮಾಸ್ಟರ್ ಸ್ಟ್ರಾಟಜಿಸ್ಟ್ (ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತು)

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Rashmi Kallakatta

ಊರು ಕಾಸರಗೋಡು. ಓದಿದ್ದು ಇಂಜಿನಿಯರಿಂಗ್, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಮತ್ತು ಇಂಗ್ಲಿಷ್ ಸ್ನಾತಕೋತ್ತರ ಪದವಿ. ಕನ್ನಡಪ್ರಭ, ಪ್ರಜಾವಾಣಿ ಡಿಜಿಟಲ್ ಮತ್ತು ಪ್ರಿಂಟ್ ವಿಭಾಗದಲ್ಲಿ ಕೆಲಸದ ಅನುಭವ. ಬ್ಲಾಗರ್, ಸಾಹಿತ್ಯ ಪ್ರೇಮಿ. ಇಲ್ಲಿವರೆಗೆ 2 ಪುಸ್ತಕಗಳು ಪ್ರಕಟವಾಗಿವೆ. ಕಲೆ,ಸಾಹಿತ್ಯ,ತಂತ್ರಜ್ಞಾನ,ಸಂದರ್ಶನ, ಫ್ಯಾಕ್ಟ್ ಚೆಕಿಂಗ್ ಆಸಕ್ತಿಕರ ವಿಷಯಗಳು. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷ ಅನುಭವ

Follow Us