![What India Thinks Today WITT](https://images.tv9kannada.com/wp-content/uploads/2024/02/national-lifestyle-health-world-viral-news-in-tv9-kannada-2024-02-24t114723.250.jpg)
What India Thinks Today WITT
ದೇಶದ ಅತಿದೊಡ್ಡ ಸುದ್ದಿಸಂಸ್ಥೆ ಟಿವಿ9 ನೆಟ್ವವರ್ಕ್ ನಡೆಸುತ್ತಿರುವ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಕಾರ್ಯಕ್ರಮ ದೆಹಲಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ಹಿರಿಯ ರಾಜಕೀಯ ನಾಯಕರು, ಕೇಂದ್ರ ಸರ್ಕಾರದ ಸಚಿವರು, ವಿಜ್ಞಾನಿಗಳು, ಕ್ರೀಡಾ ಸಾಧಕರು, ಉದ್ಯಮಿಗಳು, ಸಿನಿಮಾ ನಟ-ನಟಿಯರು, ವಿಶ್ವದ ನಾಯಕರು ಭಾಗವಹಿಸಲಿದ್ದಾರೆ. ಈ ವೇದಿಕೆಯಲ್ಲಿ ಹಲವು ವಿಚಾರಗಳ ಕುರಿತು ಅವರು ಮಾತನಾಡಲಿದ್ದಾರೆ. ಈ ಕಾರ್ಯಕ್ರಮವು ಫೆ.25ರಿಂದ ಫೆ.27ರವರೆಗೆ ದೆಹಲಿಯಲ್ಲಿ ನಡೆಯಲಿದೆ. ಪ್ರಧಾನಿ ಮೋದಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದು, ಅವರು ಕೂಡ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದರ ಜತೆಗೆ ಸಾಂಸ್ಕೃತಿಕ ಹಾಗೂ ಅನೇಕ ಪ್ರದರ್ಶನಗಳು ನಡೆಯಲಿದೆ.
ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ಅನುರಾಗ್ ಠಾಕೂರ್, ಭೂಪೇಂದ್ರ ಯಾದವ್, ಸ್ಮೃತಿ ಇರಾನಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಯುಪಿ ಸಿಎಂ ಯೋಗಿ ಆದಿತ್ಯನಾಥ್, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್, ಛತ್ತೀಸ್ಗಢ ಸಿಎಂ ವಿಷ್ಣು ದೇವ್ ಸಾಯಿ, ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಪಂಜಾಬ್ ಸಿಎಂ ಭಗವಂತ ಮನ್ ಖಟ್ಟರ್ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಕಾಂಗ್ರೆಸ್ ನಾಯಕ ಪವನ್ ಖೇಡಾ, ಯೋಗ ಗುರು ಬಾಬಾ ರಾಮದೇವ್ ಮತ್ತು ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಕೂಡ ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ. ಇದಲ್ಲದೆ, ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಟೋನಿ ಅಬಾಟ್, ಮಾಲ್ಡೀವ್ಸ್ ಮಾಜಿ ರಕ್ಷಣಾ ಸಚಿವೆ ಮರಿಯಾ ಅಹ್ಮದ್ ದೀದಿ, ವೆಲಿನಾ ಟ್ಚಕರೋವಾ, ವಿಶ್ವಸಂಸ್ಥೆಯ ಭಾರತದ ಮಾಜಿ ಖಾಯಂ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ಸೇರಿದಂತೆ ಕಲಾ ಕ್ಷೇತ್ರ ಮತ್ತು ಕ್ರೀಡಾ ಕ್ಷೇತ್ರದ ಪ್ರಮುಖರು ತಮ್ಮ ಅಭಿಪ್ರಾಯಗಳನ್ನು ಮಂಡಿಸಲಿದ್ದಾರೆ.
What India Thinks Today: ಟಿವಿ9 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ದೇಶಕ್ಕೆ ನೀಡಿದ ಸಂದೇಶ ಏನು? ಇಲ್ಲಿದೆ ನೋಡಿ
ದೆಹಲಿಯಲ್ಲಿ ಫೆ. 25, 26, 27 ರಂದು ಆಯೋಜಿಸಲಾಗಿದ್ದ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ ಗ್ಲೋಬಲ್ ಸಮ್ಮಿಟ್’ನಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ಟಿವಿ9ನ ಎಲ್ಲಾ ಸಿಬ್ಬಂದಿ, ವೀಕ್ಷಕರಿಗೆ ಧನ್ಯವಾದ ತಿಳಿಸಿದ್ದು, ಟಿವಿ9 ಜನರ ಕಷ್ಟಗಳಿಗೆ ಸ್ಪಂದಿಸುತ್ತಿದೆ. ಟಿವಿ9ನ ಥೀಮ್ ಅದ್ಭುತ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಇದೇ ವೇಳೆ ಭಾರತದ ಅಭಿವೃದ್ಧಿ ಧ್ಯೇಯ ಮತ್ತು ಕನಸನ್ನು ಬಿಚ್ಚಿಟ್ಟಿದ್ದಾರೆ.
- Web contact
- Updated on: Feb 29, 2024
- 10:16 pm
WITT 2024: ಪಿಎಂ ಟಾರ್ಗೆಟ್ ರಹಸ್ಯ ಬಿಚ್ಚಿಟ್ಟ ಅಮಿತ್ ಶಾ; ವಿಡಿಯೋ ಇಲ್ಲಿದೆ
ಟಿವಿ9 ನೆಟ್ವರ್ಕ್ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT) ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah)ಅವರು ಬಿಜೆಪಿ, ಎನ್ಡಿಎ ಮತ್ತು ಮೋದಿ ಸರ್ಕಾರ ಭಾರತ ರತ್ನ ಗೌರವದಲ್ಲಿ ಯಾವುದೇ ರಾಜಕೀಯ ಮಾಡಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು. ಭಾರತ ರತ್ನ, ಪದ್ಮ ಪ್ರಶಸ್ತಿಗಳನ್ನು ಮನೆಯಲ್ಲಿ ಹಂಚಲಿಲ್ಲ, ಅರ್ಹರಿಗೆ ನೀಡಲಾಗಿದೆ ಎಂದರು.
- Web contact
- Updated on: Feb 27, 2024
- 11:05 pm
WITT 2024: ರಾಮ ಮಂದಿರ ಉದ್ಘಾಟನೆ ಬಿಜೆಪಿಯ ಕಾರ್ಯಕ್ರಮವಲ್ಲ, ಪ್ರಧಾನಿ ಮೋದಿ ದೇಶವನ್ನು ಪ್ರತಿನಿಧಿಸುತ್ತಾರೆ: ಅಮಿತ್ ಶಾ
ಟಿವಿ9 ನೆಟ್ವರ್ಕ್ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT) ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಿಜೆಪಿ ಚಾಣಕ್ಯ ಎಂದೇ ಖ್ಯಾತರಾಗಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಹಾಗೂ ಬಾಲರಾಮನ ಪ್ರಾಣಪ್ರತಿಷ್ಠಾಪನೆ ಬಗ್ಗೆ ಮಾತನಾಡಿದರು. ರಾಮಮಂದಿರದ ಬಹುಕಾಲದ ಕನಸು ನನಸಾಗಿದೆ. ಇದು ಬಿಜೆಪಿ ಕಾರ್ಯಕ್ರಮವಾಗಿರಲಿಲ್ಲ ಎಂದರು.
- Rakesh Nayak Manchi
- Updated on: Feb 27, 2024
- 10:56 pm
WITT 2024: ನುಗ್ಗಿ ಹೊಡಿತೀವಿ, ಪಾಕ್ಗೆ ಅಮಿತ್ ಶಾ ಎಚ್ಚರಿಕೆ; ಇಲ್ಲಿದೆ ವಿಡಿಯೋ
ನವದೆಹಲಿಯಲ್ಲಿ ಟಿವಿ9 ನೆಟ್ವರ್ಕ್ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT) ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಈ ವೇಳೆ ‘ಏಕರೂಪ ನಾಗರಿಕ ಸಂಹಿತೆ (UCC) ಕುರಿತು ಮಾತನಾಡುತ್ತಾ, ‘ ಚುನಾವಣೆಯ ನಂತರ ದೇಶದಲ್ಲಿ ಯುಸಿಸಿಯನ್ನು ಜಾರಿಗೆ ತರಲಾಗುವುದು, ಅದಕ್ಕೂ ಮೊದಲು ಅಗತ್ಯ ವಿಶ್ಲೇಷಣೆ ಮಾಡಲಾಗುವುದು ಎಂದು ಹೇಳಿದರು.
- Web contact
- Updated on: Feb 27, 2024
- 10:58 pm
ಮುಂದಿನ ಹತ್ತು ವರ್ಷಗಳ ಯೋಜನೆ ತಿಳಿಸಿದ ಆಮಿರ್ ಖಾನ್
Aamir Khan: ಟಿವಿ9 ಆಯೋಜಿಸಿದ್ದ ‘ವಾಟ್ ಇಂಡಿಯಾ ಥಿಂಕ್ ಟುಡೆ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಆಮಿರ್ ಖಾನ್, ತಮ್ಮ ವೃತ್ತಿ ಜೀವನದ ಮುಂದಿನ 10 ವರ್ಷಗಳ ಯೋಜನೆ ಬಗ್ಗೆ ಮಾತನಾಡಿದ್ದಾರೆ.
- Manjunatha C
- Updated on: Feb 27, 2024
- 10:36 pm
WITT 2024: ಮತಾಂತರಕ್ಕೆ ವಿದೇಶದಿಂದ ಹಣ ಬಂದರೆ ಖಂಡಿತ ತಡೆಯುತ್ತೇವೆ: ಅಮಿತ್ ಶಾ
ಟಿವಿ9 ನೆಟ್ವರ್ಕ್ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT) ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಿಜೆಪಿ ಚಾಣಕ್ಯ ಎಂದೇ ಖ್ಯಾತರಾಗಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಧಾರ್ಮಿಕ ಮತಾಂತರದ ಕುರಿತು ಮಾತನಾಡಿದರು. ಅಲ್ಲದೆ, ಸಿಎಎ ಬಗ್ಗೆ ಮಾತನಾಡಿದ ಶಾ, ಈ ಕಾನೂನು ಜನರಿಗೆ ರಾಜಕೀಯ ಸಮಸ್ಯೆಯಾಗಿರಬಹುದು, ಆದರೆ ಇದು ದೊಡ್ಡ ಸಾಮಾಜಿಕ ಸುಧಾರಣೆಯಾಗಿದೆ ಎಂದರು.
- Rakesh Nayak Manchi
- Updated on: Feb 27, 2024
- 10:29 pm
WITT 2024: ಮಕ್ಕಳನ್ನು ಪ್ರಧಾನಿ-ಸಿಎಂ ಮಾಡಲು ಹೊರಟಿರುವ ಕುಟುಂಬ ಪಕ್ಷಗಳ ಮೈತ್ರಿಯೇ ಐಎನ್ಡಿಐ: ಅಮಿತ್ ಶಾ
ಟಿವಿ9 ನೆಟ್ವರ್ಕ್ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT) ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಿಜೆಪಿ ಚಾಣಕ್ಯ ಎಂದೇ ಖ್ಯಾತರಾಗಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಐಎನ್ಡಿಐಎ ಕುರಿತು ಮಾತನಾಡಿದರು. ಅಲ್ಲದೆ, ವಿಪಕ್ಷಗಳ ಮೈತ್ರಿಕೂಟದಲ್ಲಿ ಒಡಕು ಉಂಟಾಗಲು ಕಾರಣ ಏನೆಂದು ವಿವರಿಸಿದರು. ಇದರ ಜೊತೆಗೆ ಹಿಮಾಚಲ ಪ್ರದೇಶದಲ್ಲಿನ ರಾಜಕೀಯ ಪ್ರಕ್ಷುಬ್ಧತೆ ಬಗ್ಗೆ ಮಾತನಾಡಿದರು.
- Rakesh Nayak Manchi
- Updated on: Feb 27, 2024
- 10:14 pm
WITT TV9 Global Summit 2024: ರಾಮನ ಹೆಸರಿನಲ್ಲಿ ಮತ ಕೇಳಬಾರದು: ಕೇಜ್ರಿವಾಲ್
ನಾನು ಪಕ್ಷವನ್ನು ಸ್ಥಾಪಿಸಿದ ನಂತರ ದೆಹಲಿಯ ಜನರ ಪ್ರೀತಿಯನ್ನು ಪಡೆದಿದ್ದು, ಸಾರ್ವಜನಿಕ ಸೇವೆಗಾಗಿ ಕೆಲಸ ಮಾಡಿದ್ದು ನನ್ನ ಅದೃಷ್ಟ ಎಂದು ಹೇಳಿದರು. ಮೂರು ಕ್ಷೇತ್ರಗಳ ಪೈಕಿ ದೆಹಲಿಯ ಶಿಕ್ಷಣ ವ್ಯವಸ್ಥೆಗೆ ಮೊದಲು ಗಮನ ಹರಿಸಿದೆ ಎಂದರು. ದೆಹಲಿಯ ಎಲ್ಲಾ ಸರ್ಕಾರಿ ಶಾಲೆಗಳನ್ನು ಸುಧಾರಿಸಲಾಗಿದೆ. ಅವುಗಳಲ್ಲಿ ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
- Rashmi Kallakatta
- Updated on: Feb 27, 2024
- 8:45 pm
WITT TV9 Global Summit 2024: ಕುಟುಂಬದಿಂದ ನಡೆಸುವ ಪಕ್ಷಗಳು ಹೊಸ ಊಳಿಗಮಾನ್ಯ ಪದ್ಧತಿ ಹುಟ್ಟುಹಾಕುತ್ತಿವೆ, ಅವರನ್ನು ಸೋಲಿಸುವುದು ಅಗತ್ಯ: ಭೂಪೇಂದ್ರ ಯಾದವ್
ಕಾಂಗ್ರೆಸ್ ಮತ್ತು ಬಿಜೆಪಿಯ ಸ್ಥಾನಗಳು ಕಡಿಮೆಯಾಗುತ್ತಿರುವ ಬಗ್ಗೆ ಕಾಂಗ್ರೆಸ್ ಮಾಡಿರುವ ಆರೋಪಗಳಿಗೆ ಉತ್ತರಿಸಿದ ಭೂಪೇಂದ್ರ ಯಾದವ್, ದೇಶದಲ್ಲಿ ಒಳ್ಳೆಯ ಸಂಗತಿಗಳು ನಡೆದರೂ ರಾಹುಲ್ ಗಾಂಧಿ ಅದನ್ನು ವಿರೋಧಿಸುತ್ತಾರೆ. ಇದು ಹೊಸ ಸಂಸತ್ತಿನ ನಿರ್ಮಾಣ, ಅದರಲ್ಲಿ ಸೆಂಗೋಲ್ ಅನ್ನು ಇರಿಸುವುದೂ ಅವರಿಗೆ ಸಮಸ್ಯೆ ಆಗಿದೆ ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ.
- Rashmi Kallakatta
- Updated on: Feb 27, 2024
- 7:08 pm
WITT Tv9 Global Summit2024: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಅಮೂಲಾಗ್ರ ಬದಲಾವಣೆಗೆ ಸಾಕ್ಷಿಯಾಗಿದೆ: ಮನೋಜ್ ಸಿನ್ಹಾ, ಉಪ ರಾಜ್ಯಪಾಲ
ಕಳೆದ 34 ವರ್ಷಗಳ ಅವಧಿಯಲ್ಲಿ ಮೊದಲ ಬಾರಿಗೆ ಕಾಶ್ಮೀರದಲ್ಲಿ ಮೊಹರಂ ಮೆರವಣಿಗೆ ನಡೆದಿದೆ ಮತ್ತು ಜನ್ಮಾಷ್ಟಮಿಯ ಶೋಭಾಯಾತ್ರೆ ಕೂಡ ನಡೆದಿದೆ. ಎರಡೂ ಮೆರವಣಿಗೆ ಶಾಂತಿಯುತವಾಗಿ ನಡೆಯುವುದರ ಜೊತೆಗೆ ಮುಸಲ್ಮಾನರು ಶೋಭಾಯಾತ್ರೆಯಲ್ಲಿ ಮತ್ತು ಹಿಂದೂಗಳು ಮೊಹರಂ ಜುಲುಸ್ ನಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಿನ್ಹಾ ಹೇಳಿದರು.
- Arun Belly
- Updated on: Feb 28, 2024
- 6:19 pm