Sign In

By signing in or creating an account, you agree with Associated Broadcasting Company's Terms & Conditions and Privacy Policy.

What India Thinks Today WITT

What India Thinks Today WITT

ದೇಶದ ಅತಿದೊಡ್ಡ ಸುದ್ದಿಸಂಸ್ಥೆ ಟಿವಿ9 ನೆಟ್​​ವವರ್ಕ್​​​ ನಡೆಸುತ್ತಿರುವ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಕಾರ್ಯಕ್ರಮ ದೆಹಲಿಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ಹಿರಿಯ ರಾಜಕೀಯ ನಾಯಕರು, ಕೇಂದ್ರ ಸರ್ಕಾರದ ಸಚಿವರು, ವಿಜ್ಞಾನಿಗಳು, ಕ್ರೀಡಾ ಸಾಧಕರು, ಉದ್ಯಮಿಗಳು, ಸಿನಿಮಾ ನಟ-ನಟಿಯರು, ವಿಶ್ವದ ನಾಯಕರು ಭಾಗವಹಿಸಲಿದ್ದಾರೆ. ಈ ವೇದಿಕೆಯಲ್ಲಿ ಹಲವು ವಿಚಾರಗಳ ಕುರಿತು ಅವರು ಮಾತನಾಡಲಿದ್ದಾರೆ. ಈ ಕಾರ್ಯಕ್ರಮವು ಮಾ.28ರಿಂದ ಮಾ. 29 ರವರೆಗೆ ದೆಹಲಿಯಲ್ಲಿ ನಡೆಯಲಿದೆ. ಪ್ರಧಾನಿ ಮೋದಿ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದು, ಅವರು ಕೂಡ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದರ ಜತೆಗೆ ಸಾಂಸ್ಕೃತಿಕ ಹಾಗೂ ಅನೇಕ ಪ್ರದರ್ಶನಗಳು ನಡೆಯಲಿದೆ.

ಇನ್ನೂ ಹೆಚ್ಚು ಓದಿ

ಟಿವಿ9 ನೆಟ್‌ವರ್ಕ್ ಆಯೋಜಿಸಿದ್ದ ಇಂಡಿಯನ್ ಟೈಗರ್ಸ್ ಆ್ಯಂಡ್ ಟೈಗ್ರೆಸ್ ಅಭಿಯಾನಕ್ಕೆ ಕ್ರೀಡಾ ಸಚಿವ ಮಾಂಡವಿಯಾ ಶ್ಲಾಘನೆ

ಟಿವಿ9 ನೆಟ್‌ವರ್ಕ್ ಆಯೋಜಿಸಿದ್ದ ಇಂಡಿಯನ್ ಟೈಗರ್ಸ್ ಮತ್ತು ಟೈಗ್ರೆಸ್ ಅಭಿಯಾನವನ್ನು ಇಂದು ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಶ್ಲಾಘಿಸಿದ್ದಾರೆ. ಈ ಅಭಿಯಾನದ ಬಗ್ಗೆ ಅವರು ಹೃದಯಸ್ಪರ್ಶಿ ಮಾತುಗಳನ್ನಾಡಿದ್ದಾರೆ. ಏಪ್ರಿಲ್ 2024 ರಲ್ಲಿ ಪ್ರಾರಂಭವಾದ ಈ ಅಭಿಯಾನವು ವಿಶ್ವದ ಅತಿದೊಡ್ಡ ಫುಟ್ಬಾಲ್ ಪ್ರತಿಭಾನ್ವೇಷಣಾ ಕಾರ್ಯಕ್ರಮವಾಗಿತ್ತು.

ಟಿವಿ9 WITTಯಲ್ಲಿ ಪ್ರಧಾನಿ ಮೋದಿ ಭಾಷಣ; ಅಬುಧಾಬಿಯಿಂದ ವೀಕ್ಷಿಸಿದ ಲುಲು ಗ್ರೂಪ್ ಮಾಲೀಕ

Lulu Group chairman Yusuff Ali listens PM Modi's speech at TV9 WITT: ಮಾರ್ಚ್ 28 ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಟಿವಿ9ನ WITT ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಟಿವಿ9 ನಲ್ಲಿ ಅವರ ಭಾಷಣ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಕೇಳಿಬಂತು. ಅಬುಧಾಬಿಯ ಉದ್ಯಮಿ ಯೂಸುಫ್ ಅಲಿ ಮತ್ತು ಅವರ ತಂಡದವರು ಪ್ರಧಾನ ಮಂತ್ರಿಯವರ ಭಾಷಣವನ್ನು ಅಲ್ಲಿಂದಲೇ ಆಲಿಸಿದರು.

ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ; WITT ಶೃಂಗಸಭೆಯಲ್ಲಿ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ

ತಮ್ಮ ಭಾಷಣದ ಸಮಯದಲ್ಲಿ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ತಾಯಿಯ ಅಜ್ಜನ ಹೋರಾಟಗಳನ್ನು ನೆನಪಿಸಿಕೊಂಡಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಲ್ಲಿ ಗೆದ್ದಾಗ, ನನ್ನ ಗೆಲುವನ್ನು ಅವರಿಗೆ ಅರ್ಪಿಸಿದ್ದೆ ಎಂದು ಅವರು ಹೇಳಿದರು. ತಮ್ಮ ರಾಜಕೀಯ ಪ್ರಯಾಣದ ಬಗ್ಗೆ ಮಾತನಾಡುತ್ತಾ, ಸ್ಮೃತಿ ಇರಾನಿ ತಮ್ಮನ್ನು ತಾವು ತನ್ನನ್ನು ಎಂದಿಗೂ ರಾಜಕಾರಣಿ ಎಂದು ಪರಿಗಣಿಸಲಿಲ್ಲ ಎಂದು ಒತ್ತಿ ಹೇಳಿದರು. "ನಾಯಿಯ ಬಾಲ ಎಂದಿಗೂ ನೇರವಾಗುವುದಿಲ್ಲ. ನನ್ನ ಗುರಿ ಯಾವಾಗಲೂ ರಾಜಕೀಯಕ್ಕಿಂತ ಹೆಚ್ಚಾಗಿ ಸಮಾಜ ಸೇವೆ ಮಾಡುವುದಾಗಿದೆ" ಎಂದು ಹೇಳಿದರು.

WITT Summit: 2025ರ ಅಂತ್ಯದೊಳಗೆ ಸ್ವದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ; WITT ಶೃಂಗಸಭೆಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಭಾರತದ ಮೊದಲ LLM ಮತ್ತು ಚಿಪ್ ಅನ್ನು 2025ರ ಅಂತ್ಯದ ವೇಳೆಗೆ ಬಿಡುಗಡೆ ಮಾಡಲಾಗುವುದು ಎಂದು WITT 2025 ಜಾಗತಿಕ ಶೃಂಗಸಭೆಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಭಾರತವು ತನ್ನ ಮೊದಲ ಸ್ವದೇಶಿ AI ಮಾದರಿ ಮತ್ತು ಸೆಮಿಕಂಡಕ್ಟರ್ ಚಿಪ್ ಅನ್ನು ಈ ವರ್ಷದ ಅಂತ್ಯದ ವೇಳೆಗೆ ಪ್ರಾರಂಭಿಸಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು. ನಿನ್ನೆಯಿಂದ ಆರಂಭವಾದ ವಾಟ್ ಇಂಡಿಯಾ ಥಿಂಕ್ಸ್​ ಟುಡೇ ಜಾಗತಿಕ ಶೃಂಗಸಭೆ ಇಂದು ಮುಕ್ತಾಯವಾಗಲಿದೆ. ಭಾರತವು ತನ್ನದೇ ಆದ ಚಿಪ್‌ಗಳನ್ನು ತಯಾರಿಸಲು ಹೇಗೆ ತಯಾರಿ ನಡೆಸುತ್ತಿದೆ ಮತ್ತು ಆನ್‌ಲೈನ್ ವಿಷಯಕ್ಕಾಗಿ ನಮ್ಮದೇ ಆದ ಸಾಂಸ್ಕೃತಿಕ ರೂಢಿಗಳನ್ನು ರಚಿಸುವ ಮಹತ್ವವನ್ನು ಅವರು ಎತ್ತಿ ತೋರಿಸಿದರು.

ಬಿಜೆಪಿ ಎಲ್ಲಾ ಭಾಷೆಯನ್ನೂ ಗೌರವಿಸುತ್ತದೆ, ದಕ್ಷಿಣ ಭಾರತವನ್ನು ನಿರ್ಲಕ್ಷ್ಯಿಸುತ್ತಿಲ್ಲ; WITT ಶೃಂಗಸಭೆಯಲ್ಲಿ ಕೇಂದ್ರ ಸಚಿವ ಕಿಶನ್ ರೆಡ್ಡಿ

ಟಿವಿ9 ನೆಟ್​ವರ್ಕ್ ಆಯೋಜಿಸಿರುವ WITT 2025 ಶೃಂಗಸಭೆಯಲ್ಲಿ ಮಾತನಾಡಿದ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ. ಕಿಶನ್ ರೆಡ್ಡಿ ಅವರು ತಮಿಳುನಾಡು ಸಿಎಂ ಸ್ಟಾಲಿನ್ ರಾಜಕೀಯ ಲಾಭಕ್ಕಾಗಿ ಹಿಂದಿ ವಿರೋಧಿ ವಿಷಯವನ್ನು ಎತ್ತುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಎಲ್ಲಾ ಮಾತೃಭಾಷೆಗಳನ್ನು ಗೌರವಿಸುತ್ತದೆ ಮತ್ತು ದಕ್ಷಿಣ ಭಾರತವನ್ನು ನಿರ್ಲಕ್ಷಿಸುವುದಿಲ್ಲ ಎಂದು ಹೇಳಿದರು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಚುನಾವಣೆಗೆ ಮುನ್ನ ರಾಜಕೀಯ ಲಾಭಕ್ಕಾಗಿ ಹಿಂದಿ ಹೇರಿಕೆಯ ಆರೋಪವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

WITT Global Summit 2025: ಅತಿ ಹೆಚ್ಚು ಬೇಡಿಕೆಯಿರುವ ಖನಿಜ ಸಂಪತ್ತು ದೇಶದಲ್ಲಿದೆ, ಪತ್ತೆ ಹಚ್ಚಿ ಹೊರತೆಗೆಯುವ ಪ್ರಯತ್ನವಾಗಲಿ : ಅನಿಲ್ ಅಗರ್ವಾಲ್

ಟಿವಿ9 ನೆಟ್‌ವರ್ಕ್‌ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ (What India Thinks Today) ಜಾಗತಿಕ ಶೃಂಗಸಭೆಯ ಮೂರನೇ ಆವೃತ್ತಿ ನಿನ್ನೆ ಇಂದು ಎರಡು ದಿನಗಳ ಕಾಲ ನಡೆಯುತ್ತಿದೆ. ಎರಡನೇ ದಿನದ ಕಾರ್ಯಕ್ರಮದಲ್ಲಿ ವೇದಾಂತ ರಿಸೋರ್ಸಸ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಅನಿಲ್ ಅಗರ್ವಾಲ್ ಭಾಗವಹಿಸಿದ್ದು, 'ಜಗತ್ತಿನಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ಖನಿಜಗಳು ದೇಶದಲ್ಲಿವೆ. ಅದನ್ನು ಹೊರತೆಗೆಯುವ ಬಗ್ಗೆ ವಿವರಿಸಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.

WITT Global Summit 2025: ರಣವೀರ್ ಸಿಂಗ್ ನಟನೆಯ ಧುರಂಧರ್ ಚಿತ್ರದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಟಿ ಯಾಮಿ ಗೌತಮ್

ಟಿವಿ9 ನೆಟ್‌ವರ್ಕ್‌ನ ‘ವಾಟ್ ಇಂಡಿಯಾ ಥಿಂಕ್ಸ್ ಟುಡೇ’ (What India Thinks Today) ಜಾಗತಿಕ ಶೃಂಗಸಭೆಯ ಮೂರನೇ ಆವೃತ್ತಿ ನಿನ್ನೆಯಿಂದ ಶುರುವಾಗಿದೆ. ದೆಹಲಿಯ ಭಾರತ ಮಂಟಪಂನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿ, ಟಿವಿ9 ಕೆಲಸವನ್ನು ಶ್ಲಾಘಿಸಿದ್ದಾರೆ. ಎರಡನೇ ದಿನದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಯಾಮಿ ಗೌತಮ್ ಅವರು ತಮ್ಮ ಪತಿ ಹಾಗೂ ಖ್ಯಾತ ನಿರ್ದೇಶಕ ಆದಿತ್ಯ ಧರ್ ಅವರ ಮುಂಬರುವ ಚಿತ್ರ 'ಧುರಂಧರ್' ಬಗ್ಗೆ ಬಿಗ್ ಅಪ್ಡೇಟ್ ನೀಡಿದ್ದಾರೆ.

WITT Summit 2025: ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ, ಆದರೆ ಅದನ್ನು ಸರಿಯಾಗಿ ಉಪಯೋಗಿಸುತ್ತಿಲ್ಲ: ಅನಿಲ್ ಅಗರ್ವಾಲ್

ದೇಶದಲ್ಲಿ ಸಾಕಷ್ಟು ತೈಲ, ಅನಿಲ ಮತ್ತು ಚಿನ್ನದ ನಿಕ್ಷೇಪಗಳಿವೆ, ಅವುಗಳನ್ನು ಪತ್ತೆಹಚ್ಚಿ ಕೊರೆಯಬೇಕಾಗಿದೆ ಎಂದು ಹೇಳಿದರು. ಗಣಿಗಾರಿಕೆ ಭಾರತದಲ್ಲಿ ಪ್ರಾರಂಭವಾದರೆ, ತೈಲ, ಅನಿಲ ಮತ್ತು ಚಿನ್ನಕ್ಕಾಗಿ ನಾವು ಇತರರನ್ನು ಅವಲಂಬಿಸಬೇಕಾಗಿಲ್ಲ. ಅದಕ್ಕಾಗಿ ನಾವು ಮೊದಲು ಅದನ್ನು ಸರಿಯಾಗಿ ಉಪಯೋಗಿಸಬೇಕು ಎಂದು ವೇದಾಂತ ರಿಸೋರ್ಸಸ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಅನಿಲ್ ಅಗರ್ವಾಲ್ ಹೇಳಿದ್ದಾರೆ.

WITT Summit 2025: ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ನಾಯಕತ್ವ, ತಮ್ಮ ಸ್ಪರ್ಧೆಯ ಬಗ್ಗೆ ಚಿರಾಗ್ ಪಾಸ್ವಾನ್ ಹೇಳಿದ್ದೇನು?

ಟಿವಿ9 ನೆಟ್‌ವರ್ಕ್ ಆಯೋಜಿಸಿರುವ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT 2025) ಶೃಂಗಸಭೆಯು ಮಾರ್ಚ್ 28-29ರಂದು ನಡೆಯುವ 2 ದಿನಗಳ ಕಾರ್ಯಕ್ರಮವಾಗಿದೆ. ಇದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ರಾಜಕೀಯ, ಆಡಳಿತ, ಅರ್ಥಶಾಸ್ತ್ರ, ಆರೋಗ್ಯ, ಸಂಸ್ಕೃತಿ ಮತ್ತು ಕ್ರೀಡೆಗಳ ಕುರಿತು ಚರ್ಚೆಗಳನ್ನು ಒಳಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಮೊದಲ ದಿನವಾದ ನಿನ್ನೆ ಈ ಶೃಂಗಸಭೆಯಲ್ಲಿ ಭಾಷಣ ಮಾಡಿದರು. ಇಂದು ಈ ಶೃಂಗಸಭೆಯಲ್ಲಿ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಮಾತನಾಡಿದ್ದಾರೆ.

WITT Summit 2025: ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು: ಮಲೇಷ್ಯಾದ ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್

ಟಿವಿ9 ನ ವಾಟ್ ಇಂಡಿಯಾ ಥಿಂಕ್ಸ್ ಟುಡೇ ಕಾರ್ಯಕ್ರಮದಲ್ಲಿ ಮಲೇಷ್ಯಾದ ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್, ಭಾರತದ ಪರವಾಗಿ ಮಾತನಾಡಿದ್ದಾರೆ. ಭಾರತ ಶಾಂತಿ ದಾರಿಯಲ್ಲಿದೆ ವಿಶ್ವಸಂಸ್ಥೆ ರಚನೆಯಾದಾಗಲೂ ಭಾರತ ಯಾವುದೇ ಗುಂಪಿನಲ್ಲಿ ಇರಲಿಲ್ಲ. ಭಾರತವು ಒಂದು ದೊಡ್ಡ ಭೂಪ್ರದೇಶವಾಗಿದೆ, ಆದರೆ ಇದರ ಹೊರತಾಗಿಯೂ ಅದನ್ನು ವಿಶ್ವಸಂಸ್ಥೆಯಲ್ಲಿ ಶಾಶ್ವತ ಸದಸ್ಯ ಎಂದು ಗುರುತಿಸಲಾಗುತ್ತಿಲ್ಲ ಎಂದು ಹೇಳಿದರು. ಭಾರತಕ್ಕೆ ಶಾಶ್ವತ ಸದಸ್ಯತ್ವ ಬೇಕು ಎಂದು ಹೇಳಿದರು.

ದುರ್ಗಾಪರಮೇಶ್ವರಿ ರಥೋತ್ಸವ ವೇಳೆ ಅವಘಡ: ತೇರಿನ ಮೇಲ್ಭಾಗ ಏಕಾಏಕಿ ಕುಸಿತ
ದುರ್ಗಾಪರಮೇಶ್ವರಿ ರಥೋತ್ಸವ ವೇಳೆ ಅವಘಡ: ತೇರಿನ ಮೇಲ್ಭಾಗ ಏಕಾಏಕಿ ಕುಸಿತ
ತಂದೆಯ ಮರಣ ನಂತರ ರಿಯಲ್​ ಎಸ್ಟೇಟ್ ಮಾಡಿಕೊಂಡಿರುವ ರಿಕ್ಕಿ ರೈ
ತಂದೆಯ ಮರಣ ನಂತರ ರಿಯಲ್​ ಎಸ್ಟೇಟ್ ಮಾಡಿಕೊಂಡಿರುವ ರಿಕ್ಕಿ ರೈ
Daily Devotional: ಕುಜ ದೋಷ ನಿವಾರಣೆಗೆ ಇದೊಂದು ಕೆಲಸ ಮಾಡಿ
Daily Devotional: ಕುಜ ದೋಷ ನಿವಾರಣೆಗೆ ಇದೊಂದು ಕೆಲಸ ಮಾಡಿ
ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ವಿದೇಶಕ್ಕೆ ತೆರಳುವ ಅವಕಾಶ
ಈ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ವಿದೇಶಕ್ಕೆ ತೆರಳುವ ಅವಕಾಶ
ಸೆಂಟಿಮೆಂಟ್​ನಿಂದ ಸಿನಿಮಾ ಗೆಲ್ತು ಎಂಬ ಮಾತು ನನಗೆ ಬೇಡ: ಅಜಯ್ ರಾವ್
ಸೆಂಟಿಮೆಂಟ್​ನಿಂದ ಸಿನಿಮಾ ಗೆಲ್ತು ಎಂಬ ಮಾತು ನನಗೆ ಬೇಡ: ಅಜಯ್ ರಾವ್
ಅರವಿಂದ್ ಕೇಜ್ರಿವಾಲ್ ಮಗಳ ಮದುವೆಯಲ್ಲಿ ಪಂಜಾಬ್ ಸಿಎಂ ಭರ್ಜರಿ ಡ್ಯಾನ್ಸ್
ಅರವಿಂದ್ ಕೇಜ್ರಿವಾಲ್ ಮಗಳ ಮದುವೆಯಲ್ಲಿ ಪಂಜಾಬ್ ಸಿಎಂ ಭರ್ಜರಿ ಡ್ಯಾನ್ಸ್
ಬಾಲಕನಂತೆ ಸೈಕಲ್ ಸವಾರಿ ಮಾಡಿದ ಶಿವಣ್ಣ; ವೈರಲ್ ವಿಡಿಯೋ ನೋಡಿ..
ಬಾಲಕನಂತೆ ಸೈಕಲ್ ಸವಾರಿ ಮಾಡಿದ ಶಿವಣ್ಣ; ವೈರಲ್ ವಿಡಿಯೋ ನೋಡಿ..
ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಹಾರಿ ಬಿದ್ದ ಯುವಕ
ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ