AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Travel Insurance: ಅಂತರರಾಷ್ಟ್ರೀಯ ಪ್ರಯಾಣ ವಿಮೆ: ಸಂಪೂರ್ಣ ಮಾರ್ಗದರ್ಶಿ ಮತ್ತು ಸಲಹೆಗಳು

ಇತ್ತೀಚಿನ ಅಹಮದಾಬಾದ್ ವಿಮಾನ ಅಪಘಾತದಿಂದ ಅಂತರರಾಷ್ಟ್ರೀಯ ಪ್ರಯಾಣ ವಿಮೆಯ ಮಹತ್ವ ಮತ್ತೆ ಸುದ್ದಿಯಲ್ಲಿದೆ. ವೈದ್ಯಕೀಯ ತುರ್ತು, ಪ್ರಯಾಣ ರದ್ದತಿ, ಸಾಮಾನು ನಷ್ಟ ಮುಂತಾದ ಅನಿರೀಕ್ಷಿತ ಘಟನೆಗಳಿಂದ ಆರ್ಥಿಕ ರಕ್ಷಣೆ ಪಡೆಯಲು ಇದು ಅತ್ಯವಶ್ಯಕ. ವಿಮೆಯ ವಿವಿಧ ರೀತಿಗಳು, ಆಯ್ಕೆ ಮಾಡುವ ವಿಧಾನ, ಹಾಗೂ ತುರ್ತು ಸಂದರ್ಭದಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳಿ.

Travel Insurance: ಅಂತರರಾಷ್ಟ್ರೀಯ ಪ್ರಯಾಣ ವಿಮೆ: ಸಂಪೂರ್ಣ ಮಾರ್ಗದರ್ಶಿ ಮತ್ತು ಸಲಹೆಗಳು
International Travel Insurance
ಅಕ್ಷತಾ ವರ್ಕಾಡಿ
|

Updated on: Jun 22, 2025 | 2:16 PM

Share

ಇತ್ತೀಚಿಗಷ್ಟೇ ಅಹಮದಾಬಾದ್ ನಲ್ಲಿ ನಡೆದಂತಹ ವಿಮಾನ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಭಾರತದಲ್ಲಿ ಹಲವು ರೀತಿಯ ವಿಮೆಗಳು ಇವೆ. ಆದರೆ ಅವುಗಳ ಖಚಿತ ಮಾಹಿತಿ ಹೆಚ್ಚಿನ ಜನರಿಗೆ ಇಲ್ಲ. ಅದರಲ್ಲಿ ವಿಮಾನಯಾನದ ವಿಮೆ air travel insurance ಮತ್ತು ಅಂತರ್ರಾಷ್ಟ್ರೀಯ ಪ್ರಯಾಣದ ವಿಮೆ. ವಿಮಾ ನಿಯಂತ್ರಣ ಪ್ರಾಧಿಕಾರ ವಿಮೆಗಳ ಬಗ್ಗೆ ಮಾಹಿತಿಯನ್ನು ನಾಗರಿಕರಿಗೆ ತಲುಪಿಸುವಂತಹ ಯೋಜನೆಯನ್ನು ನಿರೂಪಿಸಿ ಅದನ್ನು ಜಾರಿಗೆ ತರಬೇಕು. ಪದವಿ ಶಿಕ್ಷಣದಲ್ಲಿ ಸಂವಿಧಾನದ ಬಗೆಗಿನ ಪಠ್ಯ ಹೇಗೆ ಕಡ್ಡಾಯ ಮಾಡಲಾಗಿದೆಯೋ ಅದರಂತೆ ಸರಕಾರಿ ಯೋಜನೆಗಳು ಮತ್ತು ವಿಮೆ ಪಠ್ಯವನ್ನು ಕೂಡ ಸೇರ್ಪಡೆ ಗೊಳಿಸಬೇಕು. ಅಂತರರಾಷ್ಟ್ರೀಯ ಪ್ರಯಾಣ ವಿಮೆ ಅನಿರೀಕ್ಷಿತ ಘಟನೆಗಳು—ವೈದ್ಯಕೀಯ ತುರ್ತುಸ್ಥಿತಿ, ಪ್ರವಾಸ ರದ್ದು, ಸಾಮಾನು ಕಳೆದುಹೋಗುವುದು, ವಿಳಂಬ, ಅಪಘಾತ—ಇತ್ಯಾದಿಗಳಲ್ಲಿ ಆರ್ಥಿಕ ರಕ್ಷಣೆ ನೀಡುತ್ತದೆ.

ವಿಮೆಯ ಅಗತ್ಯತೆ ಏಕೆ?

ಅಂತರರಾಷ್ಟ್ರೀಯ ಪ್ರವಾಸದಲ್ಲಿ ಅನೇಕ ಅನಿಶ್ಚಿತತೆಗಳು ಎದುರಾಗಬಹುದು. ವಿಮೆಯಿಲ್ಲದೆ ವೆಚ್ಚ ಭಾರಿಯಾಗಬಹುದು.

ಸಾಮಾನ್ಯವಾಗಿ ಒಳಗೊಂಡಿರುವ ಅಂಶಗಳು:

  • ವೈದ್ಯಕೀಯ ವೆಚ್ಚಗಳು (ಚಿಕಿತ್ಸೆ, ಆಸ್ಪತ್ರೆ, ಔಷಧಿ)
  • ಪ್ರವಾಸ ರದ್ದು/ವಿಳಂಬ ವೆಚ್ಚ
  • ಸಾಮಾನು ನಷ್ಟ/ಹಾನಿ
  • ತುರ್ತು ಸ್ಥಳಾಂತರ
  • ಅಪಘಾತ ಸಾವು/ಅಂಗವಿಕಲತೆ
  • 24/7 ತುರ್ತು ಸಹಾಯ

ವಿಮೆಯ ಪ್ರಮುಖ ವಿಧಗಳು:

  • ಏಕ ಪ್ರವಾಸ ಒಂದು ನಿರ್ದಿಷ್ಟ ಪ್ರವಾಸಕ್ಕೆ ಮಾತ್ರ
  • ವಾರ್ಷಿಕ/ಬಹು ಪ್ರವಾಸ ವರ್ಷವಿಡೀ ಅನೇಕ ಪ್ರಯಾಣಗಳಿಗೆ
  • ವೈದ್ಯಕೀಯ ವಿಮೆ ವೈದ್ಯಕೀಯ ವೆಚ್ಚಗಳಿಗೆ ಕೇಂದ್ರೀಕೃತ
  • ಸ್ಥಳಾಂತರ ವಿಮೆ ತುರ್ತು ವೈದ್ಯಕೀಯ ಸ್ಥಳಾಂತರ ಖರ್ಚು
  • ಸಾಮಾನು ವಿಮೆ ವಸ್ತು ನಷ್ಟಕ್ಕೆ ಪರಿಹಾರ
  • ಸಾಹಸ ಕವರೇಜ್ ವಿಶೇಷ ಚಟುವಟಿಕೆಗಳಿಗೆ ಕವರೇಜ್

ಸರಿಯಾದ ವಿಮೆ ಆಯ್ಕೆ ಮಾಡಲು:

  • ನಿಮ್ಮ ಆರೋಗ್ಯ, ಪ್ರಯಾಣ ಅವಧಿ, ಚಟುವಟಿಕೆಗಳು ಪರಿಗಣಿಸಿ
  • ಪಾಲಿಸಿ ಮಿತಿಗಳು, ಹೊರಗಿಡುವಿಕೆಗಳು ಓದಿ
  • ಮೊದಲು ಇದ್ದ ರೋಗಗಳು ಘೋಷಿಸಿ
  • ವಿಮೆ ಅವಧಿ ನಿಮ್ಮ ಪ್ರವಾಸಕ್ಕೆ ಸರಿಹೊಂದಿರಲಿ

ತುರ್ತು ಸಂದರ್ಭಗಳಲ್ಲಿ ಏನು ಮಾಡಬೇಕು?

  • ವಿಮಾ ಪೂರೈಕೆದಾರರನ್ನು ತಕ್ಷಣ ಸಂಪರ್ಕಿಸಿ
  • ವೈದ್ಯಕೀಯ ಆರೈಕೆ ಪಡೆಯಿರಿ, ರಶೀದಿಗಳನ್ನು ಉಳಿಸಿ
  • ಘಟನೆ ದಾಖಲೆ (ಫೋಟೋ, ಪೊಲೀಸ್ ವರದಿ) ಇಟ್ಟುಕೊಳ್ಳಿ
  • ಸಮಯಕ್ಕೆ ಸರಿಯಾಗಿ ಕ್ಲೈಮ್ ಸಲ್ಲಿಸಿ

ಲೇಖನ: ಡಾ ರವಿಕಿರಣ ಪಟವರ್ಧನ ಶಿರಸಿ

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್