AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amarnath Yatra: ಅಮರನಾಥಕ್ಕೆ ತೆರಳುವ ಭಕ್ತರಿಗೆ ಮಾರ್ಗಸೂಚಿ ಹೊರಡಿಸಿದ ದೇಗುಲ ಮಂಡಳಿ

ಯಾತ್ರಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಅಮರನಾಥ ದೇಗುಲ ಮಂಡಳಿಯು ಈ ವರ್ಷ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆಹಾರ ಮತ್ತು ಕುಡಿಯುವ ನೀರಿನ ಮೇಲೆ ಹಲವು ನಿರ್ಬಂಧಗಳನ್ನು ಹೇರಲಾಗಿದೆ.

Rakesh Nayak Manchi
|

Updated on: Jun 13, 2023 | 9:50 PM

Share
Amarnath Yatra Amarnath shrine board issues guidelines for devotees going to Amarnath

ಜುಲೈ 1ರಿಂದ ಅಮರನಾಥ ಯಾತ್ರೆ ಆರಂಭವಾಗಲಿದೆ. ಅಮರನಾಥ ಯಾತ್ರೆ ಸುಲಭವಲ್ಲ. ದುರ್ಗಮ ಪರ್ವತಗಳನ್ನು ದಾಟಿ ಅಮರನಾಥವನ್ನು ತಲುಪಬೇಕು. ಶೀತ ವಾತಾವರಣದಲ್ಲಿ ಬೆಟ್ಟ ಹತ್ತುವುದು ತುಂಬಾ ಕಷ್ಟ. ಹಾಗಾಗಿ ಅಮರನಾಥ ಯಾತ್ರೆಗೆ ಕೆಲವು ವಿಶೇಷ ಸಲಹೆಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

1 / 8
Amarnath Yatra Amarnath shrine board issues guidelines for devotees going to Amarnath

ಜುಲೈ 1ರಿಂದ ಅಮರನಾಥ ಯಾತ್ರೆಗೆ ನೋಂದಣಿ ಆರಂಭವಾಗಲಿದೆ. ಆಗಸ್ಟ್ 31 ರವರೆಗೆ ನೋಂದಾಯಿಸಿಕೊಳ್ಳಲು ಅವಕಾಶ ಇದೆ. ದೇಶಾದಲ್ಲಿರುವ 542 ಬ್ಯಾಂಕ್‌ಗಳ ಮೂಲಕ ಅಮರನಾಥ ಯಾತ್ರೆಗೆ ನೋಂದಾಯಿಸಿಕೊಳ್ಳಬಹುದು. ನೋಂದಣಿಗೆ ಆಧಾರ್ ಕಾರ್ಡ್ ಅಗತ್ಯವಿದೆ.

2 / 8
Amarnath Yatra Amarnath shrine board issues guidelines for devotees going to Amarnath

ಅಮರನಾಥ ದೇಗುಲ ಮಂಡಳಿಯ ನಿಯಮಗಳ ಪ್ರಕಾರ, 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು 75 ವರ್ಷಕ್ಕಿಂತ ಮೇಲ್ಪಟ್ಟವರು ಅಮರನಾಥ ಯಾತ್ರೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ಅಮರನಾಥ ಚಾರಣ ಮಾಡಲು ದೈಹಿಕವಾಗಿಯೂ ಸದೃಢವಾಗಿರಬೇಕು.

3 / 8
Amarnath Yatra Amarnath shrine board issues guidelines for devotees going to Amarnath

ನೀವು ಎರಡು ಮಾರ್ಗಗಳ ಮೂಲಕ ಅಮರನಾಥಕ್ಕೆ ಹೋಗಬಹುದು. ಅನಂತನಾಗ್ ಜಿಲ್ಲೆಯ ಪಹೇಲ್ಗಾಂವ್ ಮೂಲಕ ಅಮರನಾಥವನ್ನು ತಲುಪಬಹುದು. ಇದು ಅಮರನಾಥಕ್ಕೆ ಅತ್ಯಂತ ಜನಪ್ರಿಯ ಮಾರ್ಗವಾಗಿದೆ. ಇದಲ್ಲದೆ, ಅಮರನಾಥ ಗಂದರ್ಬಾಲ್ ಜಿಲ್ಲೆಯ ಬಲ್ತಾತ್ ಮೂಲಕವೂ ಹೋಗಬಹುದು.

4 / 8
Amarnath Yatra Amarnath shrine board issues guidelines for devotees going to Amarnath

ಯಾತ್ರಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಅಮರನಾಥ ದೇಗುಲ ಮಂಡಳಿಯು ಈ ವರ್ಷ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ತಿನ್ನಲು ಮತ್ತು ಕುಡಿಯಲು ವಿಶೇಷ ನಿರ್ಬಂಧಗಳನ್ನು ವಿಧಿಸಲಾಗಿದೆ. ಅಮರನಾಥಕ್ಕೆ ಹೋಗುವ ದಾರಿಯಲ್ಲಿ ನೀವು ಯಾವ ಆಹಾರಗಳನ್ನು ಸೇವಿಸಬಹುದು ಮತ್ತು ಯಾವ ಆಹಾರಗಳನ್ನು ಕೊಂಡೊಯ್ಯಬಾರದು ಎಂಬುದನ್ನು ತಿಳಿಸಿದೆ.

5 / 8
Amarnath Yatra Amarnath shrine board issues guidelines for devotees going to Amarnath

ಅಮರನಾಥ ಯಾತ್ರೆಯಲ್ಲಿ ಜಂಕ್ ಫುಡ್ ನಿಷೇಧಿಸಲಾಗಿದೆ. ತಂಪು ಪಾನೀಯಗಳು, ಸಿಹಿತಿಂಡಿಗಳಾದ ಜೆಲ್ಲಿ, ಹಲ್ವಾ, ತೈಲ ಆಧಾರಿತ ಉತ್ಪನ್ನಗಳಾದ ಪುರಿ, ಚೋಳ ಒಳ್ಳೆಯದಲ್ಲ. ಫ್ರೈಡ್ ರೈಸ್, ಪಿಜ್ಜಾ, ಬರ್ಗರ್, ಪರೋಠಾ, ದೋಸೆ, ಬೆಣ್ಣೆ-ಬ್ರೆಡ್, ಉಪ್ಪಿನಕಾಯಿ, ಚಟ್ನಿ, ಫ್ರೈಡ್ ಚಿಪ್ಸ್ ಇತ್ಯಾದಿಗಳನ್ನು ಸಹ ತೆಗೆದುಕೊಳ್ಳಬಾರದು.

6 / 8
Amarnath Yatra Amarnath shrine board issues guidelines for devotees going to Amarnath

ಅಮರನಾಥ ಯಾತ್ರೆಯಲ್ಲಿ ನಿಮಗೆ ಅಕ್ಕಿ, ವಿವಿಧ ಬೇಳೆಕಾಳುಗಳು, ತರಕಾರಿಗಳು, ಸೋಯಾಬೀನ್, ಹಸಿರು ಸಲಾಡ್, ಹಣ್ಣುಗಳು, ಜೀರಿಗೆ ಅನ್ನ, ಖಿಚುರಿ ಸಿಗುತ್ತದೆ. ಗಿಡಮೂಲಿಕೆ ಚಹಾ, ಕಾಫಿ, ಕಡಿಮೆ ಕೊಬ್ಬಿನ ಹಾಲು, ಹಣ್ಣಿನ ರಸ, ನಿಂಬೆ ರಸ ಮತ್ತು ತರಕಾರಿ ಸೂಪ್ ಲಭ್ಯವಿದೆ. (Photo: SNS)

7 / 8
Amarnath Yatra Amarnath shrine board issues guidelines for devotees going to Amarnath

ಅಮರನಾಥ ಯಾತ್ರೆಯಲ್ಲಿ ಮದ್ಯ, ತಂಬಾಕು, ಗುಟ್ಕಾ, ಹುರುಳಿ ಮಸಾಲಾ, ಧೂಮಪಾನದಂತಹ ಎಲ್ಲಾ ರೀತಿಯ ಅಮಲು ಪದಾರ್ಥಗಳನ್ನು ನಿಷೇಧಿಸಲಾಗಿದೆ. ಆದಾಗ್ಯೂ, ಗುಡ್ಡಗಾಡು ಹಾದಿಗಳಲ್ಲಿ ನಡೆಯುವಾಗ ಡ್ರೈ ಫ್ರೂಟ್ಸ್ ಸೇವನೆ ಮಾಡಬಹುದು.

8 / 8
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು