ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳ ಸಂಕ್ರಾಂತಿ ಸಂಭ್ರಮಕ್ಕೆ ನಾಚಿ ನೀರಾದ ಸುಗ್ಗಿ ಹಬ್ಬ!
ಚಿಕ್ಕಬಳ್ಳಾಪುರದ ಅಗಲಗುರ್ಕಿ ಬಳಿ ಇರುವ ಬಿಜಿಎಸ್ ಶಾಲೆಯಲ್ಲಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ಓದುವ ವಿದ್ಯಾರ್ಥಿಗಳಲ್ಲಿ ಹಬ್ಬ, ಹರಿದಿನ, ಸಂಪ್ರದಾಯ, ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಲು ಶಾಲೆಯ ಆಡಳಿತ ಮಂಡಳಿ ಸಡಗರದ ಸಂಕ್ರಾಂತಿ ಆಯೋಜಿಸಿತ್ತು.
Updated on: Jan 14, 2024 | 5:06 PM

ಸಂಕ್ರಾಂತಿ ಎಂದರೆ ರೈತರಿಗೆ ಸುಗ್ಗಿ-ಹುಗ್ಗಿಯ ಹಬ್ಬ. ವರ್ಷವಿಡೀ ಕಷ್ಟಪಟ್ಟು ದುಡಿಯುವ ರೈತರು ಸಂಕ್ರಾಂತಿ ಬಂದರೆ ಸಾಕು ಬೆಳೆದ ಬೆಳೆ, ಜಾನುವಾರು, ಕುಟುಂಬ, ಬಂಧು-ಬಳಗದ ಜೊತೆ ಸುಗ್ಗಿಯನ್ನು ಹುಗ್ಗಿಯನ್ನಾಗಿ ಸಂಭ್ರಮಿಸುವ ಕಾಲ. ಖಾಸಗಿ ಶಾಲೆಯ ವಿದ್ಯಾರ್ಥಿಗಳು, ಸುಗ್ಗಿಯ ಸಂಭ್ರಮವೇ ನಾಚಿ ನೀರಾಗಾಗುವ ಹಾಗೆ ಸಡಗರದ ಸಂಕ್ರಾಂತಿ ಸಂಭ್ರಮ ಆಚರಿಸಿದ್ದಾರೆ.

ಚಿಕ್ಕಬಳ್ಳಾಪುರದ ಅಗಲಗುರ್ಕಿ ಬಳಿ ಇರುವ ಬಿಜಿಎಸ್ ಶಾಲೆಯಲ್ಲಿ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವ ಹಾಗೆ ಓದುವ ವಿದ್ಯಾರ್ಥಿಗಳಲ್ಲಿ ಹಬ್ಬ, ಹರಿದಿನ, ಸಂಪ್ರದಾಯ, ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಲು ಶಾಲೆಯ ಆಡಳಿತ ಮಂಡಳಿ ಸಡಗರದ ಸಂಕ್ರಾಂತಿ ಆಯೋಜಿಸಿತ್ತು.

ಪ್ರತಿದಿನ ಕೈಯಲ್ಲಿ ಪೆನ್ನು, ಪೇಪರ್ ಹಿಡಿದು ವಿದ್ಯಾಭ್ಯಾಸದಲ್ಲಿ ತೊಡಗಿರುತ್ತಿದ್ದ ವಿದ್ಯಾರ್ಥಿಗಳು, ಇಂದು ಕೈಯಲ್ಲಿ ಬೀಸುಕಲ್ಲು ಹಿಡಿದು ರಾಗಿ ಬೀಸುವುದು, ಭತ್ತ ಕುಟ್ಟಿ ಸಂಭ್ರಮಿಸುತ್ತಿರುವುದು, ರಾಗಿ ರಾಶಿ ಮಾಡಿ ನಲಿಯುವುದು, ಅವರೇಕಾಯಿ ಸುಲಿದು ಹಂಚಿಕೊಳ್ಳುವುದರ ಮೂಲಕ ಅದ್ದೂರಿ ಸಂಕ್ರಾಂತಿ ಸಂಬ್ರಮ ಆಚರಿಸಿದರು.

ಕೆಲವು ವಿದ್ಯಾರ್ಥಿನಿಯರು ಕೈಯಲ್ಲಿ ಬೀಸುಕಲ್ಲು ಹಿಡಿದು ರಾಗಿ ಬೀಸುವುದು, ಭತ್ತ ಕುಟ್ಟಿ ಸಂಭ್ರಮಿಸುತ್ತಿರುವುದು, ರಾಗಿ ರಾಶಿ ಮಾಡಿ ನಲಿಯುವುದು, ಅವರೇಕಾಯಿ ಸುಲಿದು ಸಂತಸ ಹಂಚಿಕೊಂಡರು.

ವಿದ್ಯಾರ್ಥಿಗಳು ತಾವೇನು ಕಡಿಮೆ ಎಂದು ಬೆಂಕಿ ಕಿಚ್ಚಲ್ಲಿ ಎತ್ತಿನಬಂಡಿ ಓಡಿಸಿಕೊಂಡು ನಲಿದಾಡಿದರು. ಇದೆ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಅವರೆಕಾಯಿ, ಕಡಲೆಕಾಯಿ, ಸಿಹಿ ಗೆಣಸು ಬೆಯಿಸಿ ಸವಿದಿದ್ದು ವಿಶೇಷವಾಗಿತ್ತು.

ಶಾಲಾ ಮಕ್ಕಳ ಸಡಗರದ ಸಂಕ್ರಾಂತಿಗೆ ಚಿಕ್ಕಬಳ್ಳಾಪುರದ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ನ್ಯಾಯಾಧೀಶೆಯಾದ ಶ್ರೀಮತಿ ಅರುಣಾಕುಮಾರಿ ಆಗಮಿಸಿ, ಮಕ್ಕಳ ಜೊತೆ ಮಕ್ಕಳಂತೆ ಕೆಲಹೊತ್ತು ಸಂಭ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಿಕ್ಕಿದ್ದೇ ಚಾನ್ಸ್ ಎಂದು ಸಾಂಪ್ರದಾಯಿಕ ಕಲರ ಪುಲ್ ಉಡುಗೆಗಳಲ್ಲಿ ಮಿರಾಮಿರಾ ಮಿಂಚುತ್ತಿದ್ದರು.

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.
Read More
