AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs AUS 3rd Test: ಜಡೇಜಾಗೆ ಸಾಥ್ ನೀಡಬೇಕಿದೆ ಇತರೆ ಬೌಲರ್​ಗಳು: ಕುತೂಹಲ ಕೆರಳಿಸಿದೆ ದ್ವಿತೀಯ ದಿನದಾಟ

India vs Australia 3rd Test: ಟೀಮ್ ಇಂಡಿಯಾ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 109 ರನ್​ಗೆ ಸರ್ವಪತನ ಕಂಡಿತು. ಮ್ಯಾಥ್ಯೂ ಕುಹ್ನೆಮನ್ ಹಾಗೂ ನೇಥನ್ ಲಿಯಾನ್ ಸ್ಪಿನ್ ದಾಳಿಗೆ ಭಾರತೀಯ ಬ್ಯಾಟರ್​ಗಳು ತತ್ತರಿಸಿದರು.

Vinay Bhat
|

Updated on:Mar 02, 2023 | 7:54 AM

Share
ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಿರುವ ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ತೃತೀಯ ಟೆಸ್ಟ್ ಪಂದ್ಯ ಕುತೂಹಲ ಕೆರಳಿಸಿದೆ. ಈ ಪಂದ್ಯದಲ್ಲೂ ಸ್ಪಿನ್ನರ್​ಗಳೇ ಮೇಲುಗೈ ಸಾಧಿಸುತ್ತಿದ್ದು ಮೊದಲ ದಿನವೇ 14 ವಿಕೆಟ್​ಗಳು ಉರುಳಿದವು.

ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಿರುವ ಬಾರ್ಡರ್- ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ತೃತೀಯ ಟೆಸ್ಟ್ ಪಂದ್ಯ ಕುತೂಹಲ ಕೆರಳಿಸಿದೆ. ಈ ಪಂದ್ಯದಲ್ಲೂ ಸ್ಪಿನ್ನರ್​ಗಳೇ ಮೇಲುಗೈ ಸಾಧಿಸುತ್ತಿದ್ದು ಮೊದಲ ದಿನವೇ 14 ವಿಕೆಟ್​ಗಳು ಉರುಳಿದವು.

1 / 10
ಟೀಮ್ ಇಂಡಿಯಾ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 109 ರನ್​ಗೆ ಸರ್ವಪತನ ಕಂಡಿತು. ಮ್ಯಾಥ್ಯೂ ಕುಹ್ನೆಮನ್ ಹಾಗೂ ನೇಥನ್ ಲಿಯಾನ್ ಸ್ಪಿನ್ ದಾಳಿಗೆ ಭಾರತೀಯ ಬ್ಯಾಟರ್​ಗಳು ತತ್ತರಿಸಿದರು. ತಂಡದಿಂದ ಕೆಎಲ್ ರಾಹುಲ್ ಕೈಬಿಟ್ಟು ಶುಭ್​ಮನ್ ಗಿಲ್ ಅವರನ್ನು ಸೇರಿಸಿಕೊಂಡಿದ್ದು ಪ್ರಯೋಜನಕ್ಕೆ ಬರಲಿಲ್ಲ.

ಟೀಮ್ ಇಂಡಿಯಾ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 109 ರನ್​ಗೆ ಸರ್ವಪತನ ಕಂಡಿತು. ಮ್ಯಾಥ್ಯೂ ಕುಹ್ನೆಮನ್ ಹಾಗೂ ನೇಥನ್ ಲಿಯಾನ್ ಸ್ಪಿನ್ ದಾಳಿಗೆ ಭಾರತೀಯ ಬ್ಯಾಟರ್​ಗಳು ತತ್ತರಿಸಿದರು. ತಂಡದಿಂದ ಕೆಎಲ್ ರಾಹುಲ್ ಕೈಬಿಟ್ಟು ಶುಭ್​ಮನ್ ಗಿಲ್ ಅವರನ್ನು ಸೇರಿಸಿಕೊಂಡಿದ್ದು ಪ್ರಯೋಜನಕ್ಕೆ ಬರಲಿಲ್ಲ.

2 / 10
ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿದ್ದ ರೋಹಿತ್​ ಶರ್ಮಾ ಅವರ ನಿರ್ಧಾರ ಬುಡಮೇಲಾಯಿತು. 50 ರನ್​ಗು ಮೊದಲೇ 5 ವಿಕೆಟ್​ಗಳು ಪತನಗೊಂಡವು. ಮೊದಲ ಓವರ್​ನಲ್ಲಿ ಜೀವದಾನ ಪಡೆದರೂ ರೋಹಿತ್‌ ಆಟ 23 ಎಸೆತಗಳಲ್ಲಿ 12 ರನ್​ಗೆ ಅಂತ್ಯವಾಯಿತು.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿದ್ದ ರೋಹಿತ್​ ಶರ್ಮಾ ಅವರ ನಿರ್ಧಾರ ಬುಡಮೇಲಾಯಿತು. 50 ರನ್​ಗು ಮೊದಲೇ 5 ವಿಕೆಟ್​ಗಳು ಪತನಗೊಂಡವು. ಮೊದಲ ಓವರ್​ನಲ್ಲಿ ಜೀವದಾನ ಪಡೆದರೂ ರೋಹಿತ್‌ ಆಟ 23 ಎಸೆತಗಳಲ್ಲಿ 12 ರನ್​ಗೆ ಅಂತ್ಯವಾಯಿತು.

3 / 10
ಇವರ ಬೆನ್ನಲ್ಲೇ ಶುಭಮನ್ ಗಿಲ್‌ ಕೂಡ ಪೆವಿಲಿಯನ್‌ ಸೇರಿದರು. ಕೆ.ಎಲ್‌ ರಾಹುಲ್‌ ಸ್ಥಾನದಲ್ಲಿ ಆಡುವ ಅವಕಾಶ ಪಡೆದ ಗಿಲ್, 18 ಎಸೆತಗಳಲ್ಲಿ 3 ಫೋರ್‌ಗಳೊಂದಿಗೆ 23 ರನ್‌ ಬಾರಿಸಿದರು.

ಇವರ ಬೆನ್ನಲ್ಲೇ ಶುಭಮನ್ ಗಿಲ್‌ ಕೂಡ ಪೆವಿಲಿಯನ್‌ ಸೇರಿದರು. ಕೆ.ಎಲ್‌ ರಾಹುಲ್‌ ಸ್ಥಾನದಲ್ಲಿ ಆಡುವ ಅವಕಾಶ ಪಡೆದ ಗಿಲ್, 18 ಎಸೆತಗಳಲ್ಲಿ 3 ಫೋರ್‌ಗಳೊಂದಿಗೆ 23 ರನ್‌ ಬಾರಿಸಿದರು.

4 / 10
ಚೇತೇಶ್ವರ್ ಪೂಜಾರ ಆಟ 1 ರನ್​ಗೆ ಅಂತ್ಯವಾಯಿತು. ಟೀಮ್ ಇಂಡಿಯ ಪರ ವಿರಾಟ್‌ ಕೊಹ್ಲಿ 22 ರನ್‌ ಗಳಿಸುವ ಮೂಲಕ ಗರಿಷ್ಠ ರನ್‌ ಸ್ಕೋರರ್‌ ಎನಿಸಿದರು. ರವೀಂದ್ರ ಜಡೇಜಾ 4 ರನ್​ಗೆ ಸುಸ್ತಾದರೆ, ಶ್ರೇಯಸ್ ಅಯ್ಯರ್ ಸೊನ್ನೆ ಸುತ್ತಿದರು. ಇನ್‌ ಫಾರ್ಮ್‌ ಬ್ಯಾಟರ್‌ ಅಕ್ಷರ್‌ ಪಟೇಲ್‌ 12 ರನ್‌ ಗಳಿಸಿ ಔಟಾಗದೇ ಉಳಿದರು.

ಚೇತೇಶ್ವರ್ ಪೂಜಾರ ಆಟ 1 ರನ್​ಗೆ ಅಂತ್ಯವಾಯಿತು. ಟೀಮ್ ಇಂಡಿಯ ಪರ ವಿರಾಟ್‌ ಕೊಹ್ಲಿ 22 ರನ್‌ ಗಳಿಸುವ ಮೂಲಕ ಗರಿಷ್ಠ ರನ್‌ ಸ್ಕೋರರ್‌ ಎನಿಸಿದರು. ರವೀಂದ್ರ ಜಡೇಜಾ 4 ರನ್​ಗೆ ಸುಸ್ತಾದರೆ, ಶ್ರೇಯಸ್ ಅಯ್ಯರ್ ಸೊನ್ನೆ ಸುತ್ತಿದರು. ಇನ್‌ ಫಾರ್ಮ್‌ ಬ್ಯಾಟರ್‌ ಅಕ್ಷರ್‌ ಪಟೇಲ್‌ 12 ರನ್‌ ಗಳಿಸಿ ಔಟಾಗದೇ ಉಳಿದರು.

5 / 10
ಭಾರತ ಪರ ಇನಿಂಗ್ಸ್‌ ಕೊನೆಯಲ್ಲಿ ಉಮೇಶ್‌ ಯಾದವ್‌ 13 ಎಸೆತಗಳಲ್ಲಿ 17 ರನ್ ಬಾರಿಸಿದ ಫಲವಾಗಿ ತಂಡದ ಮೊತ್ತ 100ರ ಗಡಿ ದಾಟಲು ಸಾಧ್ಯವಾಯಿತು. ಟೀಮ್ ಇಂಡಿಯಾ 33.2 ಓವರ್​ಗಳಲ್ಲಿ 109 ರನ್​ಗೆ ಆಲೌಟ್ ಆಯಿತು.

ಭಾರತ ಪರ ಇನಿಂಗ್ಸ್‌ ಕೊನೆಯಲ್ಲಿ ಉಮೇಶ್‌ ಯಾದವ್‌ 13 ಎಸೆತಗಳಲ್ಲಿ 17 ರನ್ ಬಾರಿಸಿದ ಫಲವಾಗಿ ತಂಡದ ಮೊತ್ತ 100ರ ಗಡಿ ದಾಟಲು ಸಾಧ್ಯವಾಯಿತು. ಟೀಮ್ ಇಂಡಿಯಾ 33.2 ಓವರ್​ಗಳಲ್ಲಿ 109 ರನ್​ಗೆ ಆಲೌಟ್ ಆಯಿತು.

6 / 10
ಮ್ಯಾಥ್ಯೂ ಕುಹ್ನೆಮನ್ 16 ರನ್​ ಬಿಟ್ಟುಕೊಟ್ಟು ಭಾರತದ 5 ವಿಕೆಟ್​ಗಳನ್ನು ಕಬಳಿಸಿದರು. ನೇಥನ್ ಲಿಯಾನ್ 3 ವಿಕೆಟ್ ಪಡೆದರು.

ಮ್ಯಾಥ್ಯೂ ಕುಹ್ನೆಮನ್ 16 ರನ್​ ಬಿಟ್ಟುಕೊಟ್ಟು ಭಾರತದ 5 ವಿಕೆಟ್​ಗಳನ್ನು ಕಬಳಿಸಿದರು. ನೇಥನ್ ಲಿಯಾನ್ 3 ವಿಕೆಟ್ ಪಡೆದರು.

7 / 10
ನಂತರ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿದ ಆಸೀಸ್ 2ನೇ ಓವರ್​ನಲ್ಲಿ ವಿಕೆಟ್ ಕಳೆದುಕೊಂಡಿದ್ದು ಬಿಟ್ಟರೆ ನಂತರ ಉತ್ತಮ ಜೊತೆಯಾಟ ಆಡಿತು. ಎರಡನೇ ಓವರ್​ ಮಾಡಿದ ಜಡೇಜಾ, ಟ್ರಾವಿಸ್ ಹೆಡ್ (9) ಅವರ ವಿಕೆಟ್​ ತೆಗೆದರು.

ನಂತರ ತನ್ನ ಮೊದಲ ಇನ್ನಿಂಗ್ಸ್ ಶುರು ಮಾಡಿದ ಆಸೀಸ್ 2ನೇ ಓವರ್​ನಲ್ಲಿ ವಿಕೆಟ್ ಕಳೆದುಕೊಂಡಿದ್ದು ಬಿಟ್ಟರೆ ನಂತರ ಉತ್ತಮ ಜೊತೆಯಾಟ ಆಡಿತು. ಎರಡನೇ ಓವರ್​ ಮಾಡಿದ ಜಡೇಜಾ, ಟ್ರಾವಿಸ್ ಹೆಡ್ (9) ಅವರ ವಿಕೆಟ್​ ತೆಗೆದರು.

8 / 10
ನಂತರ ಬಂದ ಮಾರ್ನಸ್ ಲಬುಶೇನ್​ ಮತ್ತು ಉಸ್ಮಾನ್​ ಖವಾಜಾ 100 ರನ್​ಗಳ ಜೊತೆಯಾಟವಾಡಿದರು. ಇದರಿಂದ ಭಾರತದ ಮೊದಲ ಇನ್ನಿಂಗ್ಸ್​ನ ಸನಿಹಕ್ಕೆ ಕಾಂಗರೂ ಪಡೆ ಸುಲಭವಾಗಿ ತಲುಪಿತು. 34 ರನ್​ ಗಳಿಸಿದ್ದ ಲಬುಶೇನ್​​ ಜಡೇಜಾ ಬೌಲಿಂಗ್​ನಲ್ಲಿ ಕ್ಲೀನ್​ ಬೌಲ್ಡ್​ ಆದರು.

ನಂತರ ಬಂದ ಮಾರ್ನಸ್ ಲಬುಶೇನ್​ ಮತ್ತು ಉಸ್ಮಾನ್​ ಖವಾಜಾ 100 ರನ್​ಗಳ ಜೊತೆಯಾಟವಾಡಿದರು. ಇದರಿಂದ ಭಾರತದ ಮೊದಲ ಇನ್ನಿಂಗ್ಸ್​ನ ಸನಿಹಕ್ಕೆ ಕಾಂಗರೂ ಪಡೆ ಸುಲಭವಾಗಿ ತಲುಪಿತು. 34 ರನ್​ ಗಳಿಸಿದ್ದ ಲಬುಶೇನ್​​ ಜಡೇಜಾ ಬೌಲಿಂಗ್​ನಲ್ಲಿ ಕ್ಲೀನ್​ ಬೌಲ್ಡ್​ ಆದರು.

9 / 10
ನಾಯಕ ಸ್ಟೀವ್​ ಸ್ಮಿತ್​ - ಖವಾಜಾ ಜೊತೆಯಾಟ ಹೆಚ್ಚು ಸಮಯ ಇರಲಿಲ್ಲ. ಅರ್ಧಶತಕ ಗಳಿಸಿ ಮುನ್ನುಗ್ಗುತ್ತಿದ್ದ ಖವಾಜಾ (60) ಅವರ ವಿಕೆಟನ್ನು ಜಡೇಜಾ ಕಬಳಿಸಿದರು. 26 ರನ್​ ಗಳಿಸಿದ್ದ ಸ್ಮಿತ್​ ಅವರನ್ನು ಕೂಡ ಜಡೇಜಾ ಪೆವಿಲಿಯನ್​ಗೆ ಅಟ್ಟಿದರು. ದಿನದಾಟದ ಅಂತ್ಯಕ್ಕೆ ಆಸೀಸ್ 4 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದೆ. ಪೀಟರ್ ಹ್ಯಾಂಡ್ಸ್​ಕಾಂಬ್ 7 ಹಾಗೂ ಕ್ಯಾಮ್ರೋನ್ ಗ್ರೀನ್ 6 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 47 ರನ್​ಗಳ ಮುನ್ನಡೆ ಪಡೆದುಕೊಂಡಿದ್ದಾರೆ.

ನಾಯಕ ಸ್ಟೀವ್​ ಸ್ಮಿತ್​ - ಖವಾಜಾ ಜೊತೆಯಾಟ ಹೆಚ್ಚು ಸಮಯ ಇರಲಿಲ್ಲ. ಅರ್ಧಶತಕ ಗಳಿಸಿ ಮುನ್ನುಗ್ಗುತ್ತಿದ್ದ ಖವಾಜಾ (60) ಅವರ ವಿಕೆಟನ್ನು ಜಡೇಜಾ ಕಬಳಿಸಿದರು. 26 ರನ್​ ಗಳಿಸಿದ್ದ ಸ್ಮಿತ್​ ಅವರನ್ನು ಕೂಡ ಜಡೇಜಾ ಪೆವಿಲಿಯನ್​ಗೆ ಅಟ್ಟಿದರು. ದಿನದಾಟದ ಅಂತ್ಯಕ್ಕೆ ಆಸೀಸ್ 4 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದೆ. ಪೀಟರ್ ಹ್ಯಾಂಡ್ಸ್​ಕಾಂಬ್ 7 ಹಾಗೂ ಕ್ಯಾಮ್ರೋನ್ ಗ್ರೀನ್ 6 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 47 ರನ್​ಗಳ ಮುನ್ನಡೆ ಪಡೆದುಕೊಂಡಿದ್ದಾರೆ.

10 / 10

Published On - 7:54 am, Thu, 2 March 23

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು