IPL 2024: DKಯ ಅತಿಯಾದ ಆತ್ವವಿಶ್ವಾಸದಿಂದ ಸೋತ RCB

Edited By:

Updated on: Apr 22, 2024 | 11:40 AM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2024) 36ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಕಾರಣವಾಗಿತ್ತು. ಆದರೆ ಈ ಹೋರಾಟದಲ್ಲಿ ಆರ್​ಸಿಬಿ ಕೇವಲ 1 ರನ್​ನಿಂದ ಸೋಲಬೇಕಾಯಿತು. ಈ ಸೋಲಿಗೆ ಮುಖ್ಯ ಕಾರಣ ದಿನೇಶ್ ಕಾರ್ತಿಕ್ ಎಂಬ ವಾದಗಳು ಕೇಳಿ ಬರುತ್ತಿದೆ. ಇದಕ್ಕೆ ಕಾರಣ 19ನೇ ಓವರ್​ನಲ್ಲಿ ಡಿಕೆ ತೋರಿಸಿದ ಅತಿಯಾದ ಆತ್ಮವಿಶ್ವಾಸ.

1 / 7
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ಆರ್​ಸಿಬಿ ತಂಡವು 7ನೇ ಬಾರಿ ಸೋಲನುಭವಿಸಿದೆ. ಆದರೆ ಈ ಬಾರಿ ಸೋಲಿನ ಅಂತರ ಕೇವಲ 1 ರನ್​ ಮಾತ್ರ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಕೊನೆಯ ಎಸೆತದಲ್ಲಿ ಸೋಲನುಭವಿಸಿತು. ಅದು ಕೂಡ ರನೌಟ್ ಆಗುವ ಮೂಲಕ ಎಂಬುದು ವಿಶೇಷ.

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ಆರ್​ಸಿಬಿ ತಂಡವು 7ನೇ ಬಾರಿ ಸೋಲನುಭವಿಸಿದೆ. ಆದರೆ ಈ ಬಾರಿ ಸೋಲಿನ ಅಂತರ ಕೇವಲ 1 ರನ್​ ಮಾತ್ರ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಕೊನೆಯ ಎಸೆತದಲ್ಲಿ ಸೋಲನುಭವಿಸಿತು. ಅದು ಕೂಡ ರನೌಟ್ ಆಗುವ ಮೂಲಕ ಎಂಬುದು ವಿಶೇಷ.

2 / 7

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 222 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಆರ್​ಸಿಬಿ ದಿಟ್ಟ ಹೋರಾಟವನ್ನೇ ಪ್ರದರ್ಶಿಸಿತು. ಪರಿಣಾಮ ಆರ್​ಸಿಬಿ ತಂಡಕ್ಕೆ ಕೊನೆಯ 12 ಎಸೆತಗಳಲ್ಲಿ 31 ರನ್​ಗಳು ಬೇಕಿತ್ತು.

3 / 7

ಅತ್ತ ದಿನೇಶ್ ಕಾರ್ತಿಕ್ ಹಾಗೂ ಕರ್ಣ್ ಶರ್ಮಾ ಕ್ರೀಸ್​ನಲ್ಲಿದ್ದರು. ಹೀಗಾಗಿಯೇ ಆರ್​ಸಿಬಿ ತಂಡವು ಚೇಸ್ ಮಾಡಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಆ್ಯಂಡ್ರೆ ರಸೆಲ್ ಎಸೆತದ 19ನೇ ಓವರ್​ನ ಮೊದಲ ಎರಡು ಎಸೆತಗಳಲ್ಲಿ ದಿನೇಶ್ ಕಾರ್ತಿಕ್ ಯಾವುದೇ ರನ್ ಓಡಿರಲಿಲ್ಲ. ಇನ್ನು ಮೂರನೇ ಎಸೆತದಲ್ಲಿ ಸಿಕ್ಸ್ ಬಾರಿಸಿದರು.

4 / 7

ಆದರೆ 4ನೇ ಎಸೆತದಲ್ಲಿ ರನ್ ಓಡಲು ನಿರಾಕರಿಸಿದರು. 5ನೇ ಎಸೆತದಲ್ಲಿ ಫೋರ್ ಬಾರಿಸಿದರು. ಇನ್ನು ಕೊನೆಯ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ ಮೂರು ಬಾರಿ 1 ರನ್ ಓಡುವ ಅವಕಾಶವಿದ್ದರೂ ದಿನೇಶ್ ಕಾರ್ತಿಕ್ ಕರ್ಣ್ ಶರ್ಮಾಗೆ ಸ್ಟ್ರೈಕ್ ನೀಡಲು ನಿರಾಕರಿಸಿದ್ದರು.

5 / 7

ಆರ್​ಸಿಬಿ ತಂಡದಲ್ಲಿ ಆಲ್​ರೌಂಡರ್ ಆಗಿಯೇ ಸ್ಥಾನ ಪಡೆದಿರುವ ಕರ್ಣ್ ಶರ್ಮಾ ಮೇಲೆ ದಿನೇಶ್ ಕಾರ್ತಿಕ್ ಕಿಂಚಿತ್ತೂ ವಿಶ್ವಾಸ ಹೊಂದಿರಲಿಲ್ಲ. ಅಲ್ಲದೆ ತಾನೇ ಫಿನಿಶಿಂಗ್ ಮಾಡುತ್ತೇನೆ ಎಂಬ ಅತಿಯಾದ ಆತ್ವವಿಶ್ವಾಸದಲ್ಲಿ ಡಿಕೆ ಬ್ಯಾಟ್ ಬೀಸಿದ್ದರು.

6 / 7

ಪರಿಣಾಮ 19ನೇ ಓವರ್​ನಲ್ಲಿ ಆರ್​ಸಿಬಿ 3 ರನ್​ಗಳನ್ನು ಕೈಚೆಲ್ಲಿಕೊಂಡಿತು. ಇತ್ತ ಕೊನೆಯ ಓವರ್​ನಲ್ಲಿ 21 ರನ್​ಗಳ ಗುರಿ ಪಡೆದ ಕರ್ಣ್ ಶರ್ಮಾ ತಾನು ಯಾವುದೇ ಫಿನಿಶರ್​ಗೂ ಕಮ್ಮಿ ಇಲ್ಲ ಎಂಬಂತೆ ಮಿಚೆಲ್ ಸ್ಟಾರ್ಕ್​ಗೆ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿದರು. ಆದರೆ 5ನೇ ಎಸೆತದಲ್ಲಿ ಸ್ಟಾರ್ಕ್ ಹಿಡಿದ ಅದ್ಭುತ ಕ್ಯಾಚ್​ನಿಂದಾಗಿ ಕರ್ಣ್ ಶರ್ಮಾ ಹೊರನಡೆಯಬೇಕಾಯಿತು.

7 / 7

ಅಂತಿಮವಾಗಿ ಆರ್​ಸಿಬಿ ತಂಡವು 1 ರನ್​ನಿಂದ ಸೋಲೊಪ್ಪಿಕೊಂಡಿತು. ಒಂದು ವೇಳೆ ಡಿಕೆ 19ನೇ ಓವರ್​ನಲ್ಲಿ 3 ಬಾರಿ ಸಿಕ್ಕ ಅವಕಾಶದಲ್ಲಿ ಕನಿಷ್ಠ 1 ರನ್​ ಓಡಿದ್ದರೂ ಈ ಪಂದ್ಯದಲ್ಲಿ ಆರ್​ಸಿಬಿ ತಂಡಕ್ಕೆ ಗೆಲುವು ದಕ್ಕುತ್ತಿತ್ತು. ಆದರೆ ದಿನೇಶ್ ಕಾರ್ತಿಕ್ ಅವರ ಅತಿಯಾದ ಆತ್ಮವಿಶ್ವಾಸವೇ ಆರ್​ಸಿಬಿ ಪಾಲಿಗೆ ಮುಳುವಾಯಿತು.

Loading...
Unable to load recommendations.
Follow Us