
ದಾವಣಗೆರೆ ನಗರದ ಹೊರವಲಯ ಬಸಾಪುರದಲ್ಲಿ ಮಹೇಶ್ವರಸ್ವಾಮಿ ಜಾತ್ರೆ ಶುರುವಾಗಿದೆ. ಸಾವಿರಾರೂ ಭಕ್ತ ಜಾತ್ರೆ ಬರುತ್ತಾರೆ. ಆದರೆ ಇಲ್ಲೊಂದು ವಿಶೇಷವಿದೆ. ಜಾತ್ರೆಗೆ ಪುರುಷರಿಗೆ ಮಾತ್ರ ಅವಕಾಶ ನೀಡಲಾಗಿದೆ. ಮಹಿಳೆಯರು ಈ ಜಾತ್ರೆಗೆ ಬರುವಂತಿಲ್ಲ.

ಪುಷ್ಯ ಮಾಸದ ಎಳ್ಳು ಅಮವಾಸ್ಯೆ ವೇಳೆ ಮೂರು ದಿನಗಳ ಕಾಲ ಇಲ್ಲಿ ಜಾತ್ರೆ ನಡೆಯುತ್ತದೆ. ಆದರೆ ಜಾತ್ರೆಗೆ ಮಹಿಳೆಯರು ಬರುವಂತಿಲ್ಲ. ಈ ಪದ್ಧತಿ 50-60 ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಜಾತ್ರೆಯಲ್ಲಿ ಸರ್ವಜನಾಂದವರು ಜಾತ್ರೆಯಲ್ಲಿ ಪಾಲ್ಗೊಳ್ತಾರೆ.

ಕಳೆದ ನಾಲ್ಕು ಶತಮಾನಗಳಿಂದ ಮಹೇಶ್ವರ ಸ್ವಾಮಿ ಪೂಜೆ ಇಲ್ಲಿ ನಡೆಯುತ್ತ ಬಂದಿದೆ. ದೊಡ್ಡ ಮರದ ಕೆಳಗೆ ಸುತ್ತಲು ಭತ್ತದ ಗದ್ದೆಗಳಿರುವ ಪ್ರದೇಶದಲ್ಲಿ ಮಹೇಶ್ವರ ಸ್ವಾಮಿ ನೆಲೆಸಿದ್ದಾರೆ.

Gandasara Jathre (3)ವರ್ಷಕ್ಕೊಮ್ಮೆ ಮಹೇಶ್ವರ ಸ್ವಾಮೀಯಜಾತ್ರೆ ನಡೆಯುತ್ತದೆ. ಜಾತ್ರೆಯ ಸಮಯದಲ್ಲಿ ಅಥವಾ ಪೂಜೆಯ ಸಮಯದಲ್ಲಿ ಮಹಿಳೆಯರು ಇಲ್ಲಿಗೆ ಬರುವಂತಿಲ್ಲ. ಒಂದು ವೇಳೆ ಬಂದರೆ ಅಪಯಾ ಕಟ್ಟಿಟ ಬುತ್ತಿ.

ಮಹೇಶ್ವರಸ್ವಾಮಿ ಗದ್ದುಗೆ ಸಮೀಪದಲ್ಲಿ ಆನೆಕೊಂಡ ಬಸವೇಶ್ವರಸ್ವಾಮಿ, ಗುರುಸಿದ್ಧೇಶ್ವರಸ್ವಾಮಿ ಹಾಗೂ ಹಾಲಸ್ವಾಮಿ ದೇವರುಗಳ ಭೇಟಿಯಾಗುತ್ತದೆ. ಈ ಗದ್ದುಗೆಯ ಮೇಲೆ ಬಾಳೆಹಣ್ಣಿನ ಸಿಪ್ಪೆಗಳನ್ನು ಎಸೆಯುತ್ತಾರೆ.

ಪೂಜಾರಿ ಪುಷ್ಕರಣಿಯಲ್ಲಿ ಈ ಬಾಳೆಹಣ್ಣಿನ ಸಿಪ್ಪೆ ವಿಸರ್ಜಿಸ್ತಾರೆ. ಈ ಸಿಪ್ಪೆಗಳು ತೇಲಿದ್ರೆ ಗ್ರಾಮಕ್ಕೆ ಒಳಿತು, ಮುಳುಗಿದ್ರೆ ಆಪತ್ತು ಎಂಬ ನಂಬಿಕೆ ಇಲ್ಲಿದೆ. ಜತೆಗೆ ಇಲ್ಲಿ ಅನ್ನದಾನ ಸೇವೆ ಕೂಡ ಇರುತ್ತದೆ.
Published On - 8:15 am, Thu, 18 December 25