ಲಾವೋಸ್​ನಲ್ಲಿ ಭಾರತೀಯ ಕರಕುಶಲತೆ ಅನಾವರಣ; ಜಾಗತಿಕ ನಾಯಕರಿಗೆ ವಿಶೇಷ ಉಡುಗೊರೆ ನೀಡಿದ ಮೋದಿ

|

Updated on: Oct 11, 2024 | 3:35 PM

ಲಾವೋಸ್​ನಲ್ಲಿ ಆಸಿಯಾನ್- ಭಾರತ ಶೃಂಗಸಭೆಯಲ್ಲಿ ಭಾಗವಹಿಸಲು ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ಜಪಾನ್, ನ್ಯೂಜಿಲೆಂಡ್, ಥೈಲ್ಯಾಂಡ್ ಮುಂತಾದ ದೇಶಗಳ ನಾಯಕರನ್ನು ಭೇಟಿಯಾಗಿದ್ದಾರೆ. ಈ ವೇಳೆ ಭಾರತದ ಸಂಸ್ಕೃತಿಯನ್ನು ಬಿತ್ತರಿಸುವ ಹಲವು ಕಲಾತ್ಮಕ ಉಡುಗೊರೆಗಳನ್ನು ಮೋದಿ ನೀಡಿದ್ದಾರೆ.

1 / 7
ಪ್ರಧಾನಿ ನರೇಂದ್ರ ಮೋದಿ ಅವರು ಲಾವೋಸ್‌ಗೆ ಭೇಟಿ ನೀಡಿದ್ದಾರೆ. ಈ ಭೇಟಿಯ ಎರಡನೇ ದಿನವಾದ ಶುಕ್ರವಾರ ಲಾವೋಸ್‌ನಲ್ಲಿ ನಡೆಯುತ್ತಿರುವ 21ನೇ ಆಸಿಯಾನ್ ಭಾರತ ಮತ್ತು 19 ನೇ ಪೂರ್ವ ಏಷ್ಯಾ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದರು. ಆಸಿಯಾನ್ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಬಲಪಡಿಸುವ ಉದ್ದೇಶದಿಂದ ಈ ಸಮಾವೇಶವನ್ನು ನಡೆಸಲಾಗುತ್ತಿದೆ. ಈ ಶೃಂಗಸಭೆಯಲ್ಲಿ 10 ASEAN ಸದಸ್ಯ ರಾಷ್ಟ್ರಗಳು ಮತ್ತು 8 ಪಾಲುದಾರ ರಾಷ್ಟ್ರಗಳು ಭಾಗವಹಿಸಿದ್ದವು. ಅವರಿಗೆ ಮೋದಿ ನೀಡಿರುವ ಉಡುಗೊರೆಗಳ ಬಗ್ಗೆ ಮಾಹಿತಿ ಇಲ್ಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಲಾವೋಸ್‌ಗೆ ಭೇಟಿ ನೀಡಿದ್ದಾರೆ. ಈ ಭೇಟಿಯ ಎರಡನೇ ದಿನವಾದ ಶುಕ್ರವಾರ ಲಾವೋಸ್‌ನಲ್ಲಿ ನಡೆಯುತ್ತಿರುವ 21ನೇ ಆಸಿಯಾನ್ ಭಾರತ ಮತ್ತು 19 ನೇ ಪೂರ್ವ ಏಷ್ಯಾ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದರು. ಆಸಿಯಾನ್ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಬಲಪಡಿಸುವ ಉದ್ದೇಶದಿಂದ ಈ ಸಮಾವೇಶವನ್ನು ನಡೆಸಲಾಗುತ್ತಿದೆ. ಈ ಶೃಂಗಸಭೆಯಲ್ಲಿ 10 ASEAN ಸದಸ್ಯ ರಾಷ್ಟ್ರಗಳು ಮತ್ತು 8 ಪಾಲುದಾರ ರಾಷ್ಟ್ರಗಳು ಭಾಗವಹಿಸಿದ್ದವು. ಅವರಿಗೆ ಮೋದಿ ನೀಡಿರುವ ಉಡುಗೊರೆಗಳ ಬಗ್ಗೆ ಮಾಹಿತಿ ಇಲ್ಲಿದೆ.

2 / 7
ಜಪಾನ್ ಪ್ರಧಾನಿಗೆ ಬೆಳ್ಳಿ ನಕ್ಕಾಶಿ ಕುಸುರಿ ವರ್ಕ್ ಇರುವ ನವಿಲಿನ ಮೂರ್ತಿಯನ್ನು ನೀಡಲಾಗಿದೆ. ಈ ಸೊಗಸಾದ ಬೆಳ್ಳಿಯ ನವಿಲು ಶಿಲ್ಪವು ಸಂಕೀರ್ಣವಾದ ನಕ್ಕಾಶಿ (ಕೆತ್ತನೆ) ಕೆಲಸದಿಂದ ಅಲಂಕರಿಸಲ್ಪಟ್ಟಿದೆ. ಇದು ಭಾರತದ ಪಶ್ಚಿಮ ಬಂಗಾಳ ಮೂಲದ್ದಾಗಿದೆ. ಕರಕುಶಲತೆಯು ಈ ಸಾಂಪ್ರದಾಯಿಕ ಲೋಹದ ಕಲಾತ್ಮಕತೆಯ ವಿಶಿಷ್ಟ ಲಕ್ಷಣವಾಗಿದೆ. ಇದರಲ್ಲಿ ನವಿಲನ್ನು ಸಮಚಿತ್ತದ ಸ್ಥಿತಿಯಲ್ಲಿ ಚಿತ್ರಿಸಲಾಗಿದೆ. ಅದರ ಕುತ್ತಿಗೆಯು ಆಕರ್ಷಕವಾಗಿ ಮೇಲಕ್ಕೆ ಬಾಗಿರುತ್ತದೆ ಮತ್ತು ಅದರ ಗರಿಗಳನ್ನು ವಿಸ್ತಾರವಾಗಿ ಹರಡಿದಂತೆ ವಿನ್ಯಾಸಗೊಳಿಸಲಾಗಿದೆ.

ಜಪಾನ್ ಪ್ರಧಾನಿಗೆ ಬೆಳ್ಳಿ ನಕ್ಕಾಶಿ ಕುಸುರಿ ವರ್ಕ್ ಇರುವ ನವಿಲಿನ ಮೂರ್ತಿಯನ್ನು ನೀಡಲಾಗಿದೆ. ಈ ಸೊಗಸಾದ ಬೆಳ್ಳಿಯ ನವಿಲು ಶಿಲ್ಪವು ಸಂಕೀರ್ಣವಾದ ನಕ್ಕಾಶಿ (ಕೆತ್ತನೆ) ಕೆಲಸದಿಂದ ಅಲಂಕರಿಸಲ್ಪಟ್ಟಿದೆ. ಇದು ಭಾರತದ ಪಶ್ಚಿಮ ಬಂಗಾಳ ಮೂಲದ್ದಾಗಿದೆ. ಕರಕುಶಲತೆಯು ಈ ಸಾಂಪ್ರದಾಯಿಕ ಲೋಹದ ಕಲಾತ್ಮಕತೆಯ ವಿಶಿಷ್ಟ ಲಕ್ಷಣವಾಗಿದೆ. ಇದರಲ್ಲಿ ನವಿಲನ್ನು ಸಮಚಿತ್ತದ ಸ್ಥಿತಿಯಲ್ಲಿ ಚಿತ್ರಿಸಲಾಗಿದೆ. ಅದರ ಕುತ್ತಿಗೆಯು ಆಕರ್ಷಕವಾಗಿ ಮೇಲಕ್ಕೆ ಬಾಗಿರುತ್ತದೆ ಮತ್ತು ಅದರ ಗರಿಗಳನ್ನು ವಿಸ್ತಾರವಾಗಿ ಹರಡಿದಂತೆ ವಿನ್ಯಾಸಗೊಳಿಸಲಾಗಿದೆ.

3 / 7
ಲಾವೋ ಪಿಡಿಆರ್​ ಪ್ರಧಾನಿ ಸೋನೆಕ್ಸೆ ಸಿಫಾಂಡೋನ್ ಅವರಿಗೆ ಪಿಎಂ ನರೇಂದ್ರ ಮೋದಿ ಕಡಂ ವುಡ್ ಬಣ್ಣದ ಬುದ್ಧನ ತಲೆಯ ಉಬ್ಬು ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಡಮ್ವುಡ್ ಬಣ್ಣದ ಉಬ್ಬುಶಿಲೆಯ ಬುದ್ಧನ ತಲೆಯು ಅದ್ಭುತವಾದ ಕಲಾಕೃತಿಯಾಗಿದ್ದು ಅದು ಸಾಂಪ್ರದಾಯಿಕ ಕರಕುಶಲತೆಯನ್ನು ವಿವರಿಸುತ್ತದೆ. ಈ ಸೊಗಸಾದ ಶಿಲ್ಪವು ಪ್ರಶಾಂತತೆ ಮತ್ತು ಜ್ಞಾನೋದಯದ ಸಾರವನ್ನು ಸೆರೆಹಿಡಿಯುತ್ತದೆ, ಇದು ಯಾವುದೇ ಆಧ್ಯಾತ್ಮಿಕ ಅಥವಾ ಅಲಂಕಾರಿಕತೆಗೆ ಪರಿಪೂರ್ಣ ಆಯ್ಕೆಯಾಗಿದೆ. ಇದನ್ನು ಉತ್ತಮ ಗುಣಮಟ್ಟದ ಕಡಮ್‌ವುಡ್‌ನಿಂದ ರಚಿಸಲಾಗಿದೆ.

ಲಾವೋ ಪಿಡಿಆರ್​ ಪ್ರಧಾನಿ ಸೋನೆಕ್ಸೆ ಸಿಫಾಂಡೋನ್ ಅವರಿಗೆ ಪಿಎಂ ನರೇಂದ್ರ ಮೋದಿ ಕಡಂ ವುಡ್ ಬಣ್ಣದ ಬುದ್ಧನ ತಲೆಯ ಉಬ್ಬು ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಡಮ್ವುಡ್ ಬಣ್ಣದ ಉಬ್ಬುಶಿಲೆಯ ಬುದ್ಧನ ತಲೆಯು ಅದ್ಭುತವಾದ ಕಲಾಕೃತಿಯಾಗಿದ್ದು ಅದು ಸಾಂಪ್ರದಾಯಿಕ ಕರಕುಶಲತೆಯನ್ನು ವಿವರಿಸುತ್ತದೆ. ಈ ಸೊಗಸಾದ ಶಿಲ್ಪವು ಪ್ರಶಾಂತತೆ ಮತ್ತು ಜ್ಞಾನೋದಯದ ಸಾರವನ್ನು ಸೆರೆಹಿಡಿಯುತ್ತದೆ, ಇದು ಯಾವುದೇ ಆಧ್ಯಾತ್ಮಿಕ ಅಥವಾ ಅಲಂಕಾರಿಕತೆಗೆ ಪರಿಪೂರ್ಣ ಆಯ್ಕೆಯಾಗಿದೆ. ಇದನ್ನು ಉತ್ತಮ ಗುಣಮಟ್ಟದ ಕಡಮ್‌ವುಡ್‌ನಿಂದ ರಚಿಸಲಾಗಿದೆ.

4 / 7
ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲುಕ್ಸನ್ ಅವರಿಗೆ ಅಮೂಲ್ಯವಾದ ಸ್ಟೋನ್ ವರ್ಕ್​ಗಳಿಂದ ಕೂಡಿದ ಝಲಾರ್ ಕುಸುರಿಯ ಸೊಗಸಾದ ಬೆಳ್ಳಿ ದೀಪಗಳನ್ನು ಮೋದಿ ಉಡುಗೊರೆಯಾಗಿ ನೀಡಿದ್ದಾರೆ. ಝಲಾರ್ ಕುಸುರಿ ಮತ್ತು ಅಮೂಲ್ಯವಾದ ಸ್ಟೋನ್​ಗಳನ್ನು ಹೊಂದಿರುವ ಈ ಬೆಳ್ಳಿಯ ದೀಪದ ಜೋಡಿಯು ಭಾರತೀಯ ಕರಕುಶಲತೆಯ ಪ್ರತೀಕವಾಗಿದೆ. ಆ್ಯಂಟಿಕ್ ಕಲಾಕೃತಿಯಾದ ಇದನ್ನು ಮಹಾರಾಷ್ಟ್ರದ ಕುಶಲಕರ್ಮಿ ತಯಾರಿಸಿದ್ದಾರೆ.

ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲುಕ್ಸನ್ ಅವರಿಗೆ ಅಮೂಲ್ಯವಾದ ಸ್ಟೋನ್ ವರ್ಕ್​ಗಳಿಂದ ಕೂಡಿದ ಝಲಾರ್ ಕುಸುರಿಯ ಸೊಗಸಾದ ಬೆಳ್ಳಿ ದೀಪಗಳನ್ನು ಮೋದಿ ಉಡುಗೊರೆಯಾಗಿ ನೀಡಿದ್ದಾರೆ. ಝಲಾರ್ ಕುಸುರಿ ಮತ್ತು ಅಮೂಲ್ಯವಾದ ಸ್ಟೋನ್​ಗಳನ್ನು ಹೊಂದಿರುವ ಈ ಬೆಳ್ಳಿಯ ದೀಪದ ಜೋಡಿಯು ಭಾರತೀಯ ಕರಕುಶಲತೆಯ ಪ್ರತೀಕವಾಗಿದೆ. ಆ್ಯಂಟಿಕ್ ಕಲಾಕೃತಿಯಾದ ಇದನ್ನು ಮಹಾರಾಷ್ಟ್ರದ ಕುಶಲಕರ್ಮಿ ತಯಾರಿಸಿದ್ದಾರೆ.

5 / 7
ಆಸಿಯಾನ್ ಶೃಂಗಸಭೆಯಲ್ಲಿ ಭಾಗಿಯಾಗಿದ್ದ ಥೈಲ್ಯಾಂಡ್ ಪ್ರಧಾನಿ ಪೇಟೊಂಗ್ಟಾರ್ನ್ ಶಿನಾವತ್ರಾ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ "ಹಿಮಾಲಯನ್ ಚಾರ್ಮ್" ಎಂಬ ವಿಶಿಷ್ಟವಾದ ಭಾರತೀಯ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಂಕೀರ್ಣವಾದ ಪೋರ್ ಕೆತ್ತನೆಗಳೊಂದಿಗೆ ಲಡಾಕ್‌ನಲ್ಲಿ ವಿನ್ಯಾಸಗೊಳಿಸಲಾದ ಈ ಮರದ ಟೀಪಾಯಿ ವಿಶೇಷವಾದ ಬಣ್ಣಗಳಿಂದ ಕೂಡಿದೆ. ಅದರ ಮೇಲೊಂದು ಕಲಾತ್ಮಕವಾದ ಹೂಜಿ ಕೂಡ ಇದೆ. ಇದು ಸಾಂಪ್ರದಾಯಿಕ ಕರಕುಶಲತೆ ಮತ್ತು ಕಲಾತ್ಮಕತೆಯ ಪರಿಪೂರ್ಣ ಮಿಶ್ರಣವಾಗಿದೆ. ಲಡಾಖ್‌ನ ಸಾಂಸ್ಕೃತಿಕ ಪರಂಪರೆಯನ್ನು ಇದು ಸಾರುತ್ತದೆ.

ಆಸಿಯಾನ್ ಶೃಂಗಸಭೆಯಲ್ಲಿ ಭಾಗಿಯಾಗಿದ್ದ ಥೈಲ್ಯಾಂಡ್ ಪ್ರಧಾನಿ ಪೇಟೊಂಗ್ಟಾರ್ನ್ ಶಿನಾವತ್ರಾ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ "ಹಿಮಾಲಯನ್ ಚಾರ್ಮ್" ಎಂಬ ವಿಶಿಷ್ಟವಾದ ಭಾರತೀಯ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಂಕೀರ್ಣವಾದ ಪೋರ್ ಕೆತ್ತನೆಗಳೊಂದಿಗೆ ಲಡಾಕ್‌ನಲ್ಲಿ ವಿನ್ಯಾಸಗೊಳಿಸಲಾದ ಈ ಮರದ ಟೀಪಾಯಿ ವಿಶೇಷವಾದ ಬಣ್ಣಗಳಿಂದ ಕೂಡಿದೆ. ಅದರ ಮೇಲೊಂದು ಕಲಾತ್ಮಕವಾದ ಹೂಜಿ ಕೂಡ ಇದೆ. ಇದು ಸಾಂಪ್ರದಾಯಿಕ ಕರಕುಶಲತೆ ಮತ್ತು ಕಲಾತ್ಮಕತೆಯ ಪರಿಪೂರ್ಣ ಮಿಶ್ರಣವಾಗಿದೆ. ಲಡಾಖ್‌ನ ಸಾಂಸ್ಕೃತಿಕ ಪರಂಪರೆಯನ್ನು ಇದು ಸಾರುತ್ತದೆ.

6 / 7
ಹಾಗೇ, ಲಾವೋ ಪಿಡಿಆರ್​​ ಪ್ರಧಾನಿ ಸೋನೆಕ್ಸೆ ಸಿಫಾಂಡೋನ್ ಅವರ ಪತ್ನಿ ವಂದರಾ ಸಿಫಂಡೋನ್ ಅವರಿಗೆ ರಾಧಾ-ಕೃಷ್ಣನ ಥೀಮ್ ಹೊಂದಿರುವ ಮಲಾಕೈಟ್ ಮತ್ತು ಒಂಟೆ ಬೋನ್ ಬಾಕ್ಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉಡುಗೊರೆಯಾಗಿ ನೀಡಿದರು. ಈ ಪೆಟ್ಟಿಗೆಯು ಮಲಾಕೈಟ್ ಮತ್ತು ಒಂಟೆ ಮೂಳೆಯನ್ನು ಸೇರಿಸಿ ಮಾಡಲಾದ ವಿಶಿಷ್ಟವಾದ ಕಲಾಕೃತಿಯಾಗಿದೆ.

ಹಾಗೇ, ಲಾವೋ ಪಿಡಿಆರ್​​ ಪ್ರಧಾನಿ ಸೋನೆಕ್ಸೆ ಸಿಫಾಂಡೋನ್ ಅವರ ಪತ್ನಿ ವಂದರಾ ಸಿಫಂಡೋನ್ ಅವರಿಗೆ ರಾಧಾ-ಕೃಷ್ಣನ ಥೀಮ್ ಹೊಂದಿರುವ ಮಲಾಕೈಟ್ ಮತ್ತು ಒಂಟೆ ಬೋನ್ ಬಾಕ್ಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉಡುಗೊರೆಯಾಗಿ ನೀಡಿದರು. ಈ ಪೆಟ್ಟಿಗೆಯು ಮಲಾಕೈಟ್ ಮತ್ತು ಒಂಟೆ ಮೂಳೆಯನ್ನು ಸೇರಿಸಿ ಮಾಡಲಾದ ವಿಶಿಷ್ಟವಾದ ಕಲಾಕೃತಿಯಾಗಿದೆ.

7 / 7
ಲಾವೋಸ್ ಪಿಡಿಆರ್ ಅಧ್ಯಕ್ಷ ಥೋಂಗ್ಲಾನ್ ಸಿಸೌಲಿತ್ ಅವರಿಗೆ ತಮಿಳುನಾಡಿನ ಕಲಾಕೃತಿಯಾದ ಮಿನಾ ವರ್ಕ್‌ನೊಂದಿಗೆ ವಿಂಟೇಜ್ ಬ್ರಾಸ್ ಬುದ್ಧನನ್ನು ಮೋದಿ ಉಡುಗೊರೆಯಾಗಿ ನೀಡಿದ್ದಾರೆ. ಈ ವಿಂಟೇಜ್ ಹಿತ್ತಾಳೆಯ ಬುದ್ಧನ ಪ್ರತಿಮೆಯು ಮಿನಾ (ಎನಾಮೆಲ್) ಕುಸುರಿಯಿಂದ ಅಲಂಕರಿಸಲ್ಪಟ್ಟಿದೆ. ನುರಿತ ಕುಶಲಕರ್ಮಿಗಳಿಂದ ರಚಿಸಲಾದ ಈ ಕಲಾಕೃತಿ ದಕ್ಷಿಣ ಭಾರತದ ಕರಕುಶಲತೆ ಮತ್ತು ಬೌದ್ಧ ತತ್ತ್ವಶಾಸ್ತ್ರದ ಸಾರವನ್ನು ಒಳಗೊಂಡಿದೆ.

ಲಾವೋಸ್ ಪಿಡಿಆರ್ ಅಧ್ಯಕ್ಷ ಥೋಂಗ್ಲಾನ್ ಸಿಸೌಲಿತ್ ಅವರಿಗೆ ತಮಿಳುನಾಡಿನ ಕಲಾಕೃತಿಯಾದ ಮಿನಾ ವರ್ಕ್‌ನೊಂದಿಗೆ ವಿಂಟೇಜ್ ಬ್ರಾಸ್ ಬುದ್ಧನನ್ನು ಮೋದಿ ಉಡುಗೊರೆಯಾಗಿ ನೀಡಿದ್ದಾರೆ. ಈ ವಿಂಟೇಜ್ ಹಿತ್ತಾಳೆಯ ಬುದ್ಧನ ಪ್ರತಿಮೆಯು ಮಿನಾ (ಎನಾಮೆಲ್) ಕುಸುರಿಯಿಂದ ಅಲಂಕರಿಸಲ್ಪಟ್ಟಿದೆ. ನುರಿತ ಕುಶಲಕರ್ಮಿಗಳಿಂದ ರಚಿಸಲಾದ ಈ ಕಲಾಕೃತಿ ದಕ್ಷಿಣ ಭಾರತದ ಕರಕುಶಲತೆ ಮತ್ತು ಬೌದ್ಧ ತತ್ತ್ವಶಾಸ್ತ್ರದ ಸಾರವನ್ನು ಒಳಗೊಂಡಿದೆ.

Published On - 3:33 pm, Fri, 11 October 24