ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸಲು ಸ್ವಂತ ಹಣ ಖರ್ಚು ಮಾಡಿ, ಸರ್ಕಾರಿ ಶಾಲೆಯ ಅಭಿವೃದ್ಧಿ ಮಾಡಿದ ಪರಮೇಶ್ವರ್ ಟೀಚರ್!

| Updated By: ಸಾಧು ಶ್ರೀನಾಥ್​

Updated on: Dec 21, 2021 | 10:38 AM

Ghonasagi school teacher Parameshwar Gadyal: ತಾನು ಕಾರ್ಯನಿರ್ವಹಿಸುತ್ತಿರುವ ಶಾಲೆಯ ಅಭಿವೃದ್ಧಿಗೆ ಪಣ ತೊಟ್ಟ ಯುವ ಶಿಕ್ಷಕ ಸ್ವಂತ ಹಣ ಖರ್ಚು ಮಾಡಿ ಅಂದಚೆಂದಗೊಳಿಸಿ, ಮಕ್ಕಳ ಮನಸ್ಸು ಮುದಗೊಳಿಸಿದ್ದಾರೆ. ಜೊತೆಗೆ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳಲು ಕಾರಣಕರ್ತರಾಗಿದ್ದಾರೆ. ಒಂದು ಪಕ್ಷ ರೂಪಾಯಿ ಸ್ವಂತ ಹಣ ಖರ್ಚು ಮಾಡಿ ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಅವರು ನೆರವೇರಿಸಿದ್ದಾರೆ. ಪರಮೇಶ್ವರ ಗದ್ಯಾಳ ಎಂಬ ಯುವ ಶಿಕ್ಷಕ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಘೊಣಸಗಿ ಎಲ್ ಟಿ ನಂಬರ್ 1 ರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಸೇವೆ ಸಲ್ಲಿಸಿದ್ದಾರೆ.

1 / 5
ಬಂಜಾರ ಸಮುದಾಯದ ಮಕ್ಕಳಿಗೆ ನೈಜ ಕಲಿಕೆಗೆ ಒತ್ತು ಕೊಡುವ ನಿಟ್ಟಿನಲ್ಲಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಭಿವೃದ್ಧಿ ಕಾರ್ಯಗಳ ಮಾಡಿರುವ ಪರಮೇಶ್ವರ ಗದ್ಯಾಳ

ಬಂಜಾರ ಸಮುದಾಯದ ಮಕ್ಕಳಿಗೆ ನೈಜ ಕಲಿಕೆಗೆ ಒತ್ತು ಕೊಡುವ ನಿಟ್ಟಿನಲ್ಲಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಭಿವೃದ್ಧಿ ಕಾರ್ಯಗಳ ಮಾಡಿರುವ ಪರಮೇಶ್ವರ ಗದ್ಯಾಳ

2 / 5
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆಗಳ ಮೇಲೆ ಕಲಿಕಾ ಬರಹ. ಶಾಲೆಯ ತರಗತಿಗಳ ಹೊರ ಭಾಗದಲ್ಲಿ ರಾಷ್ಟ್ರ, ರಾಜ್ಯ ಸೇರಿದಂತೆ ವಿವಿಧ ನಕ್ಷೆಗಳ ಚಿತ್ರ ಬಿಡಿಸೋ ಮೂಲಕ ಚಿತ್ರ ಕಲಿಕೆಗೆ ಒತ್ತು

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆಗಳ ಮೇಲೆ ಕಲಿಕಾ ಬರಹ. ಶಾಲೆಯ ತರಗತಿಗಳ ಹೊರ ಭಾಗದಲ್ಲಿ ರಾಷ್ಟ್ರ, ರಾಜ್ಯ ಸೇರಿದಂತೆ ವಿವಿಧ ನಕ್ಷೆಗಳ ಚಿತ್ರ ಬಿಡಿಸೋ ಮೂಲಕ ಚಿತ್ರ ಕಲಿಕೆಗೆ ಒತ್ತು

3 / 5
ಶಾಲಾ ಕಟ್ಟಡದ ರಿಪೇರಿ, ವಿದ್ಯುತ್ ಸಂಪರ್ಕ ಅಡುಗೆ ಮನೆ ಹಾಗೂ ಶೌಚಾಲಯ ದುರಸ್ತಿ ಮಾಡಿಸಿದ ಶಿಕ್ಷಕ ಪರಮೇಶ್ವರ ಗದ್ಯಾಳ. ಇದಕ್ಕಾಗಿ ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿ ಹಣ ಖರ್ಚು ಮಾಡಿದ ಪರಮೇಶ್ವರ್ ಟೀಚರ್

ಶಾಲಾ ಕಟ್ಟಡದ ರಿಪೇರಿ, ವಿದ್ಯುತ್ ಸಂಪರ್ಕ ಅಡುಗೆ ಮನೆ ಹಾಗೂ ಶೌಚಾಲಯ ದುರಸ್ತಿ ಮಾಡಿಸಿದ ಶಿಕ್ಷಕ ಪರಮೇಶ್ವರ ಗದ್ಯಾಳ. ಇದಕ್ಕಾಗಿ ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿ ಹಣ ಖರ್ಚು ಮಾಡಿದ ಪರಮೇಶ್ವರ್ ಟೀಚರ್

4 / 5
ಬಂಜಾರ ಸಮುದಾಯದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿ ಈ ಕಾರ್ಯ ಮಾಡಿದ್ದಾಗಿ ಸಂತೃಪ್ತ ಭಾವದಿಂದ ಹೇಳಿದ ಶಿಕ್ಷಕ ಪರಮೇಶ್ವರ್.

ಬಂಜಾರ ಸಮುದಾಯದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕೆಂಬ ನಿಟ್ಟಿನಲ್ಲಿ ಈ ಕಾರ್ಯ ಮಾಡಿದ್ದಾಗಿ ಸಂತೃಪ್ತ ಭಾವದಿಂದ ಹೇಳಿದ ಶಿಕ್ಷಕ ಪರಮೇಶ್ವರ್.

5 / 5
ನೈಜ ಕಲಿಕೆಗೆ ಉತ್ತಮ ವಾತಾವರಣವಿರಬೇಕು ಎಂಬ ಉದ್ದೇಶದಿಂದಲೇ ಹಣ ಖರ್ಚು ಮಾಡಿದ ಶಿಕ್ಷಕ ಪರಮೇಶ್ವರ್ ಗದ್ಯಾಳ ಕಾರ್ಯಕ್ಕೆ ಶೈಕ್ಷಣಿಕ ವಲಯ ಹಾಗೂ ಸಾರ್ವಜನಿಕರಲ್ಲಿ ಮೆಚ್ಚುಗೆಯೋ ಮೆಚ್ಚುಗೆ.

ನೈಜ ಕಲಿಕೆಗೆ ಉತ್ತಮ ವಾತಾವರಣವಿರಬೇಕು ಎಂಬ ಉದ್ದೇಶದಿಂದಲೇ ಹಣ ಖರ್ಚು ಮಾಡಿದ ಶಿಕ್ಷಕ ಪರಮೇಶ್ವರ್ ಗದ್ಯಾಳ ಕಾರ್ಯಕ್ಕೆ ಶೈಕ್ಷಣಿಕ ವಲಯ ಹಾಗೂ ಸಾರ್ವಜನಿಕರಲ್ಲಿ ಮೆಚ್ಚುಗೆಯೋ ಮೆಚ್ಚುಗೆ.