
ಯಾದಗಿರಿ ಜಿಲ್ಲಾ ಕೇಂದ್ರ ರಸ್ತೆಗಳನ್ನ ಒಮ್ಮೆ ನೋಡಿದರೆ ಮತ್ತೊಮ್ಮೆ ಇತ್ತ ಬರಲೇಬಾರದು ಎನ್ನುವಂತಾಗಿದೆ. ಏಕೆಂದರೆ ನಗರದ ಯಾವ ರಸ್ತೆಗೆ ಕಾಲಿಟ್ಟರೂ ಹೊಂಡಗಳ ಕಾಣಸಿಗುತ್ತದೆ. ಕಳೆದ ಎರಡು ತಿಂಗಳಲ್ಲಿ ಈ ಗುಂಡಿಗಳಿಂದ ಮೂವರು ವಾಹನ ಸವಾರರು ಸಾವಿಗೀಡಾಗಿದ್ದಾರೆ. ದುರ್ಘಟನೆಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳಿಗೆ ಮಾತ್ರ ಕರುಣೆ ಬಂದಿಲ್ಲ. ಹೀಗಾಗಿ ವಾಹನ ಸವಾರರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಲು ಆರಂಭಿಸಿದ್ದಾರೆ.

ಯಾದಗಿರಿ ನಗರದ ಹೃದಯ ಭಾಗದಲ್ಲಿರುವ ಸುಭಾಷ್ ವೃತ್ತದಲ್ಲಿ ರಸ್ತೆಯ ತುಂಬೆಲ್ಲ ಗುಂಡಿಗಳು ಬಿದ್ದಿವೆ. ಅಷ್ಟೇ ಯಾಕೆ ನಗರದ ಹತ್ತಿಕುಣಿ ಕ್ರಾಸ್ ರಸ್ತೆ, ಜಿಲ್ಲಾಧಿಕಾರಿ ಕಚೇರಿ ರಸ್ತೆ, ಹೈದ್ರಾಬಾದ್ ರಸ್ತೆ ಸೇರಿದಂತೆ ನಾನಾ ಕಡೆ ಇರುವ ರಸ್ತೆಗಳ ತುಂಬೆಲ್ಲ ಗುಂಡಿಗಳೇ ಹೆಚ್ಚಾಗಿ ಕಾಣುತ್ತಿವೆ.

Yadgiri Potholes on main roads in Yadgir city news in kannada

Yadgiri Potholes on main roads in Yadgir city news in kannada

Yadgiri Potholes on main roads in Yadgir city news in kannada
Published On - 10:56 am, Mon, 7 November 22