
ದಸರಾ ಎಂದರೆ ಸಾಕು ರಜಾದಿನಗಳು, ಈ ಸಮಯದಲ್ಲಿ ಹೊರಗೆ ಟ್ರಿಪ್ ಹೋಗುವ ಎಂದು ಈಗಾಗಲೇ ಪ್ಲಾನ್ ಹಾಕಿರಬಹುದು ಆದರೆ ಎಲ್ಲಿಗೆ ಹೋಗುವುದು ಎಂಬ ಚಿಂತೆ ನಿಮ್ಮಲ್ಲಿದೆ, ಔಟ್ ಆಫ್ ಸ್ಟೇಟ್ ಹೋಗುವ ಬದಲು ನಮ್ಮ ರಾಜ್ಯ ಕರ್ನಾಟಕದಲ್ಲೇ ಕೆಲವೊಂದು ಪ್ರದೇಶಗಳು ಇದೆ. ಅಲ್ಲಿಯೇ ನಿಮ್ಮ ಪ್ರವಾಸ ಮಾಡಿ , ನಿಮ್ಮ ಸಮಯವು ಉಳಿಯುತ್ತದೆ. ನಮ್ಮ ಕರ್ನಾಟಕದಲ್ಲೇ ಇಂತಹ ಸೌಂದರ್ಯಯುತವಾದ ಪ್ರದೇಶಗಳಿಗೆ ಭೇಟಿ ನೀಡಿ ನಿಮ್ಮ ಕುಟುಂಬದ ಜೊತೆಗೆ ಆನಂದ ಕ್ಷಣಗಳನ್ನು ಕಳೆಯಬಹುದು.

ನಾಗರಹೊಳೆ: ನಾಗರಹೊಳೆ ಇದು ಕೂಡ ಒಂದು ಸುಂದರ ತಾಣ, ಇಲ್ಲಿ ನಿಮ್ಮ ಮಕ್ಕಳ ಜೊತೆಗೆ ಬಂದರೆ ಖಂಡಿತ ಅವರಿಗೆ ಇಷ್ಟವಾಗುತ್ತದೆ. ಕೆಲವೊಂದು ಪ್ರಾಣಿಗಳ ಪರಿಚಯವನ್ನು ಮಾಡಿಕೊಳ್ಳಬಹುದು. ಈ ಉದ್ಯಾನವನದಲ್ಲಿ ಹಲವು ಜಾತಿಯ ವನ್ಯಜೀವಿಗಳು ಇವೆ. ಮಕ್ಕಳ ಮನಸ್ಸಿಗೂ ಆನಂದವನ್ನು ನೀಡುತ್ತದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನವು ಶ್ರೀಮಂತ ವನ್ಯಜೀವಿ ಅಭಯಾರಣ್ಯಕ್ಕೆ ಹೆಸರುವಾಸಿಯಾಗಿದೆ. ಅಕ್ಟೋಬರ್ ತಿಂಗಳಿನಿಂದ ಮೇ ವರೆಗಿನ ಸಮಯ ಕೊಡಗಿನಲ್ಲಿರುವ ನಾಗರಹೊಳೆ ಅಭಯಾರಣ್ಯವನ್ನು ಭೇಟಿಗೆ ಸೂಕ್ತ ಸಮಯವಾಗಿರುತ್ತದೆ.








Published On - 4:49 pm, Fri, 23 September 22