AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Analysis: ಡಬಲ್ ಎಂಜಿನ್, ಡಬಲ್ ಬಿನಿಫಿಟ್; ಒಂದೇ ಕಲ್ಲಿಗೆ ಎರಡು ಹಕ್ಕಿಯ ಮೇಲೆ ಗುರಿಯಿಟ್ಟ ಮೋದಿ ಮಾತು

PM Narendra Modi: ಯಾದಗಿರಿ ಸಮೀಪದ ಕೊಡೆಕಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರು ಪದೇಪದೆ ಉಲ್ಲೇಖಿಸಿದ ‘ಡಬಲ್ ಎಂಜಿನ್’ ಪದಗುಚ್ಛದ ಹಿಂದಿರುವ ರಾಜಕಾರಣವನ್ನು ಈ ರೀತಿ ಅರ್ಥೈಸಬಹುದು.

Analysis: ಡಬಲ್ ಎಂಜಿನ್, ಡಬಲ್ ಬಿನಿಫಿಟ್; ಒಂದೇ ಕಲ್ಲಿಗೆ ಎರಡು ಹಕ್ಕಿಯ ಮೇಲೆ ಗುರಿಯಿಟ್ಟ ಮೋದಿ ಮಾತು
ಯಾದಿಗಿರಿ ಜಿಲ್ಲೆ ಕೊಡೆಕಲ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Jan 19, 2023 | 2:19 PM

ಬೆಂಗಳೂರು: ರಾಷ್ಟ್ರ ರಾಜಕಾರಣದಲ್ಲಿ ಬಲವರ್ಧನೆಗೆ ಮತ್ತು ಅಸ್ತಿತ್ವಕ್ಕೆ ಕರ್ನಾಟಕ (Karnataka Politics) ಎಷ್ಟು ಮುಖ್ಯ ಎಂಬುದನ್ನು ಬಿಜೆಪಿ ಹೈಕಮಾಂಡ್​ ಮನಗಂಡಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಬಿಜೆಪಿಯ ಚುನಾವಣಾ ಕಾರ್ಯತಂತ್ರ ನಿಪುಣ ಅಮಿತ್ ಶಾ (Amit Shah) ಹಲವು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ದುರ್ಬಲವಾಗಿರುವ ಸ್ಥಳಗಳನ್ನೇ ಕೇಂದ್ರೀಕರಿಸಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಗಳಲ್ಲಿ ಇಂದು (ಜ 19) ಪ್ರಧಾನಿ ನರೇಂದ್ರ ಮೋದಿ ಸಮಕ್ಷಮ ನಡೆಯುತ್ತಿರುವ ಕಾರ್ಯಕ್ರಮಗಳನ್ನು ಈ ಹಿನ್ನೆಲೆಯಲ್ಲಿಯೇ ನೋಡಬೇಕಿದೆ. ಯಾದಗಿರಿ ಸಮೀಪದ ಕೊಡೆಕಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿ ಅವರು ಪದೇಪದೆ ಉಲ್ಲೇಖಿಸಿದ ‘ಡಬಲ್ ಎಂಜಿನ್’ ಪದಗುಚ್ಛವನ್ನೂ ಈ ಹಿನ್ನೆಲೆಯಲ್ಲಿಯೇ ಅರ್ಥೈಸಬೇಕಿದೆ.

ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಡೆದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಹಾಗೂ ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆಯವರು ಆಯ್ಕೆಯಾಗಿದ್ದು ಕರ್ನಾಟಕದ ಮಟ್ಟಿಗೆ ಕಾಂಗ್ರೆಸ್​ಗೆ ನವಚೇತನ ನೀಡಿದ್ದು ಸುಳ್ಳಲ್ಲ. ತೆಲಂಗಾಣದ ಚಂದ್ರಶೇಖರ್​ ರಾವ್ ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡ ನಂತರ ಹೊಸ ಉತ್ಸಾಹದಿಂದ ರಾಜಕಾರಣ ಆರಂಭಿಸಿರುವ ಎಚ್​.ಡಿ.ಕುಮಾರಸ್ವಾಮಿ ಸಹ ಪಂಚರತ್ನ ರಥಯಾತ್ರೆಯ ಮೂಲಕ ಕರ್ನಾಟಕದ ಮೂಲೆಮೂಲೆ ತಲುಪಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್​ಗಳ ಈ ತಂತ್ರಕ್ಕೆ ಪ್ರತಿಯಾಗಿ ಬಿಜೆಪಿಯು ಬಿಜೆಪಿ ಜನಸಂಪರ್ಕ ಯಾತ್ರೆ, ಜನೋತ್ಸವ ಸೇರಿದಂತೆ ಹಲವು ರೀತಿಯ ಸಂಪರ್ಕ ಅಭಿಯಾನಗಳನ್ನು ಆರಂಭಿಸಿರುವುದು ನಿಜ. ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಪರೋಕ್ಷವಾಗಿ ಒಂದೆರೆಡು ವರ್ಷಗಳ ಹಿಂದೆಯೂ ಘೋಷಿಸಿರುವುದರಿಂದ ಅವರು ಇದೀಗ ಹೊಸ ವೇಗದಲ್ಲಿ ಕಾರ್ಯತತ್ಪರರಾಗಿರುವುದೂ ನಿಜ. ಆದರೆ ಸ್ವತಂತ್ರವಾಗಿ ಅಧಿಕಾರ ಹಿಡಿಯುವಷ್ಟು ಬಹುಮತವು ಮುಂದಿನ ಚುನಾವಣೆಯಲ್ಲಿ ಸಿಗಲಿದೆಯೇ ಎಂಬ ಪ್ರಶ್ನೆಗೆ ಖಚಿತ ಉತ್ತರ ಸಿಗುತ್ತಿಲ್ಲ.

ಬಿಜೆಪಿಯು ಖಾಸಗಿ ಸಂಸ್ಥೆಗಳ ಮೂಲಕ ಪಡೆಯುತ್ತಿರುವ ಸಮೀಕ್ಷಾ ವರದಿಗಳು, ಗುಪ್ತಚರ ವರದಿಗಳಲ್ಲಿ ಅತಂತ್ರ ವಿಧಾನಸಭೆಯ ಭವಿಷ್ಯ ಸಿಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಅದು ಮಾಡಿಸಿರುವ ಸಮೀಕ್ಷಾ ವರದಿಗಳಲ್ಲಿ ಗೆಲುವಿನ ತುಪ್ಪ ಮೂಗಿಗೆ ಬಡಿದಿದೆ. ಜೆಡಿಎಸ್​ಗೆ ಸ್ವತಂತ್ರ ಸರ್ಕಾರ ‘ದೂರದಬೆಟ್ಟ’ ಎನಿಸಿದರೆ ‘ಕಿಂಗ್​ಮೇಕರ್’ ಆಗುವ ಎಚ್​.ಡಿ.ಕುಮಾರಸ್ವಾಮಿ ಆಸೆಗೆ ಈ ಸಮೀಕ್ಷೆಗಳು ನೀರೆರೆದಿರುವುದು ಸುಳ್ಳಲ್ಲ. ಹೀಗಾಗಿಯೇ ಮೋದಿ ಅವರ ಇಂದಿನ ಭಾಷಣದಲ್ಲಿ ಪ್ರಸ್ತಾಪವಾದ ‘ಡಬಲ್ ಎಂಜಿನ್, ಡಬಲ್ ಬೆನಿಫಿಟ್’ ಎಂಬ ಪದಗುಚ್ಛ ಗಮನ ಸೆಳೆಯುತ್ತಿದೆ.

ಯಡಿಯೂರಪ್ಪ ನೇಪಥ್ಯಕ್ಕೆ ಸರಿದ ನಂತರ ಕರ್ನಾಟಕದಲ್ಲಿ ಬಿಜೆಪಿ ಪ್ರಭಾವಿ ಜನನಾಯಕನ ಮುಖವೊಂದು ಸಿಗುತ್ತಿಲ್ಲ. ಯಡಿಯುರಪ್ಪ ಅವರನ್ನು ತೆರವುಗೊಳಿಸಿ, ಅದೇ ಸ್ಥಾನಕ್ಕೆ ತಂದುಕೂರಿಸಿದ ಬಸವರಾಜ ಬೊಮ್ಮಾಯಿ ಸ್ವತಃ ತಮ್ಮನ್ನು ತಾವು ‘ಕಾಮನ್ ಮ್ಯಾನ್ ಸಿಎಂ’ ಎಂದು ಕರೆದುಕೊಂಡರಾದರೂ, ಜನರು ಅವರನ್ನು ಆ ರೀತಿ ಈವರೆಗೂ ಸ್ವೀಕರಿಸಿಲ್ಲ. ಚುನಾವಣೆಯ ವರ್ಷದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಬದಲಿಸುವ ಧೈರ್ಯ ಬಿಜೆಪಿ ಹೈಕಮಾಂಡ್​ಗೂ ಇಲ್ಲ. ರಾಜ್ಯ ರಾಜಕಾರಣದ ಎಲ್ಲ ಏರಿಳಿತಗಳ ನಡುವೆಯೂ ಪ್ರಧಾನಿ ನರೇಂದ್ರ ಮೋದಿಗೆ ಜನಬೆಂಬಲ ಕಡಿಮೆಯಾಗಿಲ್ಲ ಎನ್ನುವುದನ್ನು ಲಕ್ಷ್ಯದಲ್ಲಿರಿಸಿಕೊಂಡೇ ಚುನಾವಣಾ ಕಾರ್ಯಂತ್ರ ಹೆಣೆಯಲು ಹೈಕಮಾಂಡ್ ಮುಂದಾಗಿದೆ.

‘ಡಬಲ್ ಎಂಜಿನ್ ಎಂದರೆ ಡಬಲ್ ಸ್ಪೀಡ್, ಡಬಲ್ ಎಂಜಿನ್ ಎಂದರೆ ಡಬಲ್ ಬೆನಿಫಿಟ್’ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಯಾದಗಿರಿ ಭಾಷಣದಲ್ಲಿ ಹಲವು ಬಾರಿ ಹೇಳಿದರು. ಇದನ್ನು ಈ ರೀತಿ ಅರ್ಥೈಸಬಹುದಾಗಿದೆ. ‘ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಕರ್ನಾಟಕದಲ್ಲಿಯೂ ಬಿಜೆಪಿಗೆ ಮತ್ತೊಂದು ಅವಕಾಶ ಕೊಡಿ’ ಎಂಬ ಪರೋಕ್ಷ ಸಂದೇಶವನ್ನು ಮೋದಿ ರವಾನಿಸಿದರು. ಬಿಜೆಪಿಯು ಮುಂದಿನ ದಿನಗಳಲ್ಲಿ ಹೆಣೆಯಬೇಕಾದ ಚುನಾವಣಾ ಕಾರ್ಯತಂತ್ರಕ್ಕೂ ಮೋದಿ ಅವರ ಈ ಭಾಷಣವು ಮುನ್ನುಡಿ ಬರೆದಂತೆ ಇತ್ತು.

ಇದನ್ನೂ ಓದಿ: PM Modi Speech: ನಾವು ವೋಟ್​ ಬ್ಯಾಂಕ್ ರಾಜಕಾರಣ ಮಾಡಲ್ಲ: ಪ್ರಧಾನಿ ನರೇಂದ್ರ ಮೋದಿ

Published On - 2:04 pm, Thu, 19 January 23

ವಾಸ್ತು ಪ್ರಕಾರ ಮನೆಗೆ ಮೆಟ್ಟಿಲುಗಳನ್ನ ಇಡುವುದರ ಮಹತ್ವ ತಿಳಿಯಿರಿ
ವಾಸ್ತು ಪ್ರಕಾರ ಮನೆಗೆ ಮೆಟ್ಟಿಲುಗಳನ್ನ ಇಡುವುದರ ಮಹತ್ವ ತಿಳಿಯಿರಿ
Daily horoscope: ಈ ರಾಶಿಯವರು ಸಾಲಗಾರರ ಕಾಟದಿಂದ ಮುಕ್ತರಾಗುವರು
Daily horoscope: ಈ ರಾಶಿಯವರು ಸಾಲಗಾರರ ಕಾಟದಿಂದ ಮುಕ್ತರಾಗುವರು
ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ಮದ್ವೆಯಾಗ್ತೀನಿ ಎಂದು ಕರೆದೊಯ್ದ..ಪ್ರೇಮಿಗಳ ಗೋವಾ ರಹಸ್ಯ ಬಿಚ್ಚಿಟ್ಟ ಆಯುಕ್ತ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ಜೂನ್ 21ರಂದು ಕಾರ್ಯಕ್ರಮ, ಅಭಿನಂದನಾ ಗ್ರಂಥವೂ ಅಂದೇ ಬಿಡುಗಡೆ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ರಶ್ಮಿಕಾ ಕೂಡ ಪ್ರಚಾರಕ್ಕೆ ಬರ್ತಾರೆ, ಆದರೆ ರಚಿತಾ ಬರಲಿಲ್ಲ: ನಾಗಶೇಖರ್ ಗರಂ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಮುಂದಿನ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಪಡೆಯುವ ವಿಶ್ವಾಸ ಪ್ರೀತಂ ಗೌಡಗೆ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಅದೃಷ್ಟವಶಾತ್ ಮರ ಉರುಳಿಬಿದ್ದಾಗ ಕಾರೊಳಗೆ ಯಾರೂ ಇರಲಿಲ್ಲ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ಹಣ ಪಡೆದು ನಿರ್ಮಾಪಕಿಯ ಸತಾಯಿಸಿದರೇ ರಚಿತಾ ರಾಮ್, ವಿವರ ಇಲ್ಲಿದೆ
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ನಂದಿನಿ ಉತ್ಪನ್ನಗಳ ಕಿಯಾಸ್ಕ್​ಗಳು 8 ನಿಲ್ದಾಣಗಳಲ್ಲಿ ಬರಲಿವೆ: ಶಿವಕುಮಾರ್
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ
ಥಗ್ ಲೈಫ್ ರಿಲೀಸ್ ಆದರೆ ನಾವೇ ಟಿಕೆಟ್ ಖರೀದಿಸಿ ನೋಡ್ತಿವಿ: ಪ್ರವೀಣ್ ಶೆಟ್ಟಿ