ನೀವು ಈ ಬೈಸಿಕಲ್ ತುಳಿದಿದ್ದರೆ ಅದರ ಬಗ್ಗೆ ನಿಮಗೊಂದು ನಿರಾಶೆಯ ಸುದ್ದಿ ಇಲ್ಲಿದೆ!

ಅಟ್ಲಾಸ್​ ಸೈಕಲ್ ಎಂಬುದು 80ರ ದಶಕದಲ್ಲಿ ಯುವಕರ ಕನಸು, ಅದನ್ನು ದಕ್ಕಿಸಿಕೊಂಡರೆ ಹೆಮ್ಮೆಯ ಸಂಗಾತಿ ಎಂಬಂತಾಗಿತ್ತು. ಅಷ್ಟರಮಟ್ಟಿಗೆ ಅಟ್ಲಾಸ್​ ಸೈಕಲ್ ಅಂದಿನ ಜನಜೀವನದಲ್ಲಿ ಹಾಸುಹೊಕ್ಕಿತ್ತು. ಇಂತಹ ಸೈಕಲ್​ಗೆ ಮೊನ್ನೆ ವಿಶ್ವ ಬೈಸಿಕಲ್ ದಿನ ಕೊನೆಯ ದಿನವಾಗಿತ್ತು. ಅಂದ್ರೆ ಅಟ್ಲಾಸ್​ ಸೈಕಲ್ ಉತ್ತರಪ್ರದೇಶದಲ್ಲಿದ್ದ ತನ್ನ ಕೊನೆಯ ಉತ್ಪಾದನಾ ಘಟಕದಲ್ಲಿ ಸೈಕಲ್ ತಯಾರಿಸುವುದನ್ನು ಸ್ಥಗಿತಗೊಳಿಸಿತು. ಅಲ್ಲಿಗೆ ಹಳೆಯ ಸೈಕಲ್ ಮಾಡೆಲ್​ಗಳ ಪೈಕಿ ಅಟ್ಲಾಸ್ ಕಂಪನಿಯ ಸೈಕಲ್ ಜನ ಮಾನಸದಿಂದ ದೂರವಾಗಿದೆ. ಅದಾಗಲೇ ಒಂದೊಂದೇ ಉತ್ಪಾದನಾ ಘಟಕವನ್ನು ಮುಚ್ಚುತ್ತಾ ಬಂದಿದ್ದ ಅಟ್ಲಾಸ್ […]

ನೀವು ಈ ಬೈಸಿಕಲ್ ತುಳಿದಿದ್ದರೆ ಅದರ ಬಗ್ಗೆ ನಿಮಗೊಂದು ನಿರಾಶೆಯ ಸುದ್ದಿ ಇಲ್ಲಿದೆ!
ಸಾಧು ಶ್ರೀನಾಥ್​

Updated on: Jun 06, 2020 | 1:25 PM

ಅಟ್ಲಾಸ್​ ಸೈಕಲ್ ಎಂಬುದು 80ರ ದಶಕದಲ್ಲಿ ಯುವಕರ ಕನಸು, ಅದನ್ನು ದಕ್ಕಿಸಿಕೊಂಡರೆ ಹೆಮ್ಮೆಯ ಸಂಗಾತಿ ಎಂಬಂತಾಗಿತ್ತು. ಅಷ್ಟರಮಟ್ಟಿಗೆ ಅಟ್ಲಾಸ್​ ಸೈಕಲ್ ಅಂದಿನ ಜನಜೀವನದಲ್ಲಿ ಹಾಸುಹೊಕ್ಕಿತ್ತು. ಇಂತಹ ಸೈಕಲ್​ಗೆ ಮೊನ್ನೆ ವಿಶ್ವ ಬೈಸಿಕಲ್ ದಿನ ಕೊನೆಯ ದಿನವಾಗಿತ್ತು. ಅಂದ್ರೆ ಅಟ್ಲಾಸ್​ ಸೈಕಲ್ ಉತ್ತರಪ್ರದೇಶದಲ್ಲಿದ್ದ ತನ್ನ ಕೊನೆಯ ಉತ್ಪಾದನಾ ಘಟಕದಲ್ಲಿ ಸೈಕಲ್ ತಯಾರಿಸುವುದನ್ನು ಸ್ಥಗಿತಗೊಳಿಸಿತು. ಅಲ್ಲಿಗೆ ಹಳೆಯ ಸೈಕಲ್ ಮಾಡೆಲ್​ಗಳ ಪೈಕಿ ಅಟ್ಲಾಸ್ ಕಂಪನಿಯ ಸೈಕಲ್ ಜನ ಮಾನಸದಿಂದ ದೂರವಾಗಿದೆ.

ಅದಾಗಲೇ ಒಂದೊಂದೇ ಉತ್ಪಾದನಾ ಘಟಕವನ್ನು ಮುಚ್ಚುತ್ತಾ ಬಂದಿದ್ದ ಅಟ್ಲಾಸ್ ಸೈಕಲ್ ಕಂಪನಿಗೆ ಕೊರೊನಾ ಸೋಂಕು ಅಂತಿಮ ಮೊಳೆ ಹೊಡೆದಿದೆ. ಕೊರೊನಾ ಕಾಲದಲ್ಲಿ ಉತ್ಪಾದನೆ ಮುಂದುವರಿಸಿಕೊಂಡು ಹೋಗುವುದು ಸಾಧ್ಯವಾಗುತ್ತಿಲ್ಲ ಎಂದು ಕಂಪನಿ ಸುಮಾರು 400 ಉದ್ಯೋಗಿಳನ್ನು ಮನೆಗೆ ಕಳಿಸಿಬಿಟ್ಟಿದೆ. ಜೊತೆಗೆ ಸೈಕಲ್ ಡೀಲರ್​ಗಳಿಗೂ ಭಾರಿ ಮೊತ್ತದ ಹಣವನ್ನು ಬಾಕಿ ಉಳಿಸಿಕೊಂಡುಬಿಟ್ಟಿದೆ.

Published On - 1:12 pm, Sat, 6 June 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us