AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಂಪಿಯನ್ ಪರೋಪಕಾರಿ ಈ ಪಾಂಡಿಯನ್!

ಇಲ್ಲಿರುವ ಭಿಕ್ಷುಕನನ್ನು ಒಮ್ಮೆ ನೋಡಿ. ಆತ ಭಿಕ್ಷೆ ದಿನಾಲು ಭಿಕ್ಷೆ ಎತ್ತುತ್ತಿರುವುದು ತನಗಾಗಿ ಅಥವಾ ಆತನ ಮೇಲೆ ಅವಲಂಬಿತರಾಗಿರಬಹುದಾದ ಕುಟುಂಬದ ಸದಸ್ಯರಿಗೆ ಅಂತ ನೀವಂದುಕೊಳ್ಳುವುದಾದರೆ, ನಿಮ್ಮ ಊಹೆ ತಪ್ಪು. ನಿಮಗೆ ಆಶ್ಚರ್ಯವಾಗಬಹುದು, ತಮಿಳುನಾಡಿದ ಮದುರೈನಲ್ಲಿ ವಾಸಿಸುವ ಈತ ತಾನು ಭಿಕ್ಷೆ ಮೂಲಕ ಸಂಗ್ರಹಿಸಿದ ರೂ. 90,000 ಸಾವಿರಗಳ ಮೊತ್ತವನ್ನು, ಹತ್ತತ್ತು ಸಾವಿರಗಳ ಕಂತುಗಳ ಮೂಲಕ ತಮಿಳು ನಾಡು ಮುಖ್ಯಮಂತ್ರಿಗಳ ಕೊವಿಡ್ ಪರಿಹಾರ ನಿಧಿಗೆ ದೇಣಿಗೆ ರೂಪದಲ್ಲಿ ನೀಡಿದ್ದಾನೆ. ಕೊನೆಯ ರೂ.10,000ಗಳ ಕಂತನ್ನು ಆತ ಸೋಮವಾರದಂದು, ಮದುರೈ ಜಿಲ್ಲಾಧಿಕಾರಿಗಳಿಗೆ […]

ಚಾಂಪಿಯನ್ ಪರೋಪಕಾರಿ ಈ ಪಾಂಡಿಯನ್!
ಅರುಣ್​ ಕುಮಾರ್​ ಬೆಳ್ಳಿ
|

Updated on: Aug 18, 2020 | 5:57 PM

Share

ಇಲ್ಲಿರುವ ಭಿಕ್ಷುಕನನ್ನು ಒಮ್ಮೆ ನೋಡಿ. ಆತ ಭಿಕ್ಷೆ ದಿನಾಲು ಭಿಕ್ಷೆ ಎತ್ತುತ್ತಿರುವುದು ತನಗಾಗಿ ಅಥವಾ ಆತನ ಮೇಲೆ ಅವಲಂಬಿತರಾಗಿರಬಹುದಾದ ಕುಟುಂಬದ ಸದಸ್ಯರಿಗೆ ಅಂತ ನೀವಂದುಕೊಳ್ಳುವುದಾದರೆ, ನಿಮ್ಮ ಊಹೆ ತಪ್ಪು. ನಿಮಗೆ ಆಶ್ಚರ್ಯವಾಗಬಹುದು, ತಮಿಳುನಾಡಿದ ಮದುರೈನಲ್ಲಿ ವಾಸಿಸುವ ಈತ ತಾನು ಭಿಕ್ಷೆ ಮೂಲಕ ಸಂಗ್ರಹಿಸಿದ ರೂ. 90,000 ಸಾವಿರಗಳ ಮೊತ್ತವನ್ನು, ಹತ್ತತ್ತು ಸಾವಿರಗಳ ಕಂತುಗಳ ಮೂಲಕ ತಮಿಳು ನಾಡು ಮುಖ್ಯಮಂತ್ರಿಗಳ ಕೊವಿಡ್ ಪರಿಹಾರ ನಿಧಿಗೆ ದೇಣಿಗೆ ರೂಪದಲ್ಲಿ ನೀಡಿದ್ದಾನೆ. ಕೊನೆಯ ರೂ.10,000ಗಳ ಕಂತನ್ನು ಆತ ಸೋಮವಾರದಂದು, ಮದುರೈ ಜಿಲ್ಲಾಧಿಕಾರಿಗಳಿಗೆ ಅರ್ಪಿಸಿದ.

ಅಂದಹಾಗೆ, ಈ ಸಮಾಜಮುಖಿ ಭಿಕ್ಷುಕನ ಹೆಸರು ಪೂಲ್ ಪಾಂಡಿಯನ್. ಆತನನ್ನು ಭಿಕ್ಷುಕ ಎಂದು ಸಂಭೋದಿಸುವುದು ಸರ್ವಥಾ ತಪ್ಪಾಗುತ್ತದೆ. ಆ ಮಟ್ಟಿಗೆ ಹೃದಯ ವೈಶಾಲ್ಯತೆ ಹೊಂದಿರುವವನು, ಯಾವಾಗಲೂ ಸಮಾಜದ ಏಳಿಗೆ ಬಗ್ಗೆ ಯೋಚಿಸುವವನು ಭಿಕ್ಷುಕ ಹೇಗಾಗುತ್ತಾನೆ? ಸರಕಾರದಿಂದ ಕೋವಿಡ್ ಸೋಂಕಿತರಿಗೆಂದು ಬಿಡುಗಡೆಯಾಗುವ ಹಣವನ್ನು ದೋಚಿ ತಮ್ಮ ಜೇಬಿಗಿಳಿಸುವ ರಾಜಕಾರಣಿಗಳ ನಡುವೆ, ಪಾಂಡಿಯನ್ ಚಾಂಪಿಯನ್ ಪರೋಪಕಾರಿಯಂತೆ ಕಂಗೊಳಿಸುತ್ತಾನೆ. ಆತನ ಈ ಗುಣಕ್ಕೆ ಸರಿಸಾಟಿಯುಂಟೆ?

ತಾನು ಕೂಡಿಸಿದ ಹಣವನ್ನು ಹೀಗೆ ಸಮಾಜಮುಖಿ ಕೆಲಸಗಳಿಗೆ ಪಾಂಡಿಯನ್ ನೀಡುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಶಾಲೆಯೊಂದರ ಪೀಠೋಪಕರಣಗಳಿಗೆ ಮತ್ತು ಅಲ್ಲಿ ಓದುವ ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆತ ಸಾವಿರಾರು ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದ.

ಪಾಂಡಿಯನ್​ನೊಂದಿಗೆ ನಾವು ಬದುಕುತ್ತಿರುವುದು ಖಂಡಿತವಾಗಿಯೂ ಎದೆಸೆಟೆಸಿಕೊಂಡು ಹೇಳುವ ವಿಷಯವೇ, ಆತನ ಗುಣ ನಮ್ಮಲಿಲ್ಲದ ಹೊರತಾಗಿಯೂ………

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!