ಕ್ಯಾನ್ಸರನ್ನು ರೋಗಲಕ್ಷಣ ಕಾಣಿಸುವ ಮೊದಲೇ ಪತ್ತೆ ಹಚ್ಚಬಹುದಂತೆ
ಇತ್ತೀಚಿಗೆ ನಡೆದ ಸಂಶೋಧನೆಯೊಂದರ ಪ್ರಕಾರ 5 ಬಗೆಯ ಕ್ಯಾನ್ಸರ್ ವ್ಯಾಧಿಯ ಲಕ್ಷಣಗಳನ್ನು ಒಂದು ಸರಳವಾದ ರಕ್ತ ಪರೀಕ್ಷಣೆಯ (ಪ್ಯಾನ್ಸೀರ್ ಬ್ಲಡ್ ಟೆಸ್ಟ್) ಮೂಲಕ ನಾಲ್ಕು ವರ್ಷಗಳಷ್ಟು ಮೊದಲೇ ಪತ್ತೆಹಬಹುದಾದ ಆಶಾದಾಯಕ ಸಂಗತಿ ಹೊರಬಿದ್ದಿದೆ. ‘ಕ್ಯಾನ್ಸರ್’ ಉಲ್ಲೇಖವೇ ನಮ್ಮ ಮೈಯಲ್ಲಿ ಭಯದ ನಡುಕ ಹುಟ್ಟಿಸುತ್ತದೆ. ಮಾನವ ಪೀಳಿಗೆಯನ್ನು ಶತಮಾನಗಳಿಂದ ಕಾಡುತ್ತಿರುವ ಭಯಂಕರ ರೋಗವಿದು. ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆ ಗೆಡ್ಡೆಯಾಗಿ ಬೆಳೆದು ಆರೋಗ್ಯವಂತ ಜೀವಕೋಶಗಳನ್ನು ಹಾಳು ಮಾಡುತ್ತಾ ಇಡೀದೇಹವನ್ನೇ ಪಸರಿಸುವ ವ್ಯಾಧಿ. ರೋಗವನ್ನು ಆರಂಭಿಕ ಹಂತದಲ್ಲೇ ಗುರುತಿಸುವುದು ಕ್ಯಾನ್ಸರ್ ಚಿಕಿತ್ಸೆಯಲ್ಲಿ […]
ಅರುಣ್ ಕುಮಾರ್ ಬೆಳ್ಳಿ Edited By: ಆಯೇಷಾ ಬಾನು
Updated on:
Nov 23, 2020 | 11:47 AM
ಇತ್ತೀಚಿಗೆ ನಡೆದ ಸಂಶೋಧನೆಯೊಂದರ ಪ್ರಕಾರ 5 ಬಗೆಯ ಕ್ಯಾನ್ಸರ್ ವ್ಯಾಧಿಯ ಲಕ್ಷಣಗಳನ್ನು ಒಂದು ಸರಳವಾದ ರಕ್ತ ಪರೀಕ್ಷಣೆಯ (ಪ್ಯಾನ್ಸೀರ್ ಬ್ಲಡ್ ಟೆಸ್ಟ್) ಮೂಲಕ ನಾಲ್ಕು ವರ್ಷಗಳಷ್ಟು ಮೊದಲೇ ಪತ್ತೆಹಬಹುದಾದ ಆಶಾದಾಯಕ ಸಂಗತಿ ಹೊರಬಿದ್ದಿದೆ.
‘ಕ್ಯಾನ್ಸರ್’ ಉಲ್ಲೇಖವೇ ನಮ್ಮ ಮೈಯಲ್ಲಿ ಭಯದ ನಡುಕ ಹುಟ್ಟಿಸುತ್ತದೆ. ಮಾನವ ಪೀಳಿಗೆಯನ್ನು ಶತಮಾನಗಳಿಂದ ಕಾಡುತ್ತಿರುವ ಭಯಂಕರ ರೋಗವಿದು. ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆ ಗೆಡ್ಡೆಯಾಗಿ ಬೆಳೆದು ಆರೋಗ್ಯವಂತ ಜೀವಕೋಶಗಳನ್ನು ಹಾಳು ಮಾಡುತ್ತಾ ಇಡೀದೇಹವನ್ನೇ ಪಸರಿಸುವ ವ್ಯಾಧಿ. ರೋಗವನ್ನು ಆರಂಭಿಕ ಹಂತದಲ್ಲೇ ಗುರುತಿಸುವುದು ಕ್ಯಾನ್ಸರ್ ಚಿಕಿತ್ಸೆಯಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುತ್ತದೆ.
ನೇಚರ್ ಕಮ್ಯುನಿಕೇಷನ್ಸ್ ಹೆಸರಿನ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯೊಂದರ ಪ್ರಕಾರ, ಪ್ಯಾನ್ಸೀರ್ ಎನ್ನುವುದು ಒಂದು ಸರಳ ಬ್ಲಡ್ ಟೆಸ್ಟ್ ಆಗಿದ್ದು, ಈ ಪರೀಕ್ಷಣೆಯ ಮೂಲಕ ಶೇಕಡಾ 95ರಷ್ಟು ಕ್ಯಾನ್ಸರ್ನ ಲಕ್ಷಣಗಳನ್ನು ತೋರದ ಜನರಲ್ಲಿ, 4 ವರ್ಷಗಳಷ್ಟು ಮುಂಚೆಯೇ ರೋಗ ಪತ್ತೆ ಹಚ್ಚಬಹುದು. ದೊಡ್ಡಕರುಳು ಅಥವಾ ಗುದದ್ವಾದರ ಕ್ಯಾನ್ಸರ್, ಅನ್ನನಾಳ, ಯಕೃತ್ತು, ಶ್ವಾಸಕೋಶ ಮತ್ತು ಉದರದ ಕ್ಯಾನ್ಸರ್ಗಳನ್ನು ಪ್ಯಾನ್ಸೀರ್ ಟೆಸ್ಟ್ ಮೂಲಕ ಪತ್ತೆಹಚ್ಚಬಹುದಂತೆ.
ಜನರಲ್ಲಿ ಈಗಾಗಲೇ ಒಂದು ಭರವಸೆಯ ಕಿರಣ ಮೂಡಿಸಿರುವ ಸದರಿ ಟೆಸ್ಟ್ ಇನ್ನೂ ಪ್ರಾಯೋಗಿಕ ಹಂತದಲ್ಲ್ಲಿದೆ. ಆದರೆ, ಹಲವಾರು ವಿಜ್ಞಾನಿಗಳು ಟೆಸ್ಟ್ನ ನಿಖರತೆ ಕುರಿತು ಸಂದೇಹ ವ್ಯಕ್ತಪಡಿಸುತ್ತಿದ್ದಾರೆ.
Published On - 5:20 pm, Mon, 31 August 20
Arun Belly
ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.