
ಸಣ್ಣ ವಿಷಯಗಳಿಗೂ ಅತಿಯಾದ ಕೋಪ ಬರಲು ಕಾರಣಗಳೇನು ಎಂಬುದಕ್ಕೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಮನುಷ್ಯನಲ್ಲಿ ತಾಮಸ, ರಜೋ ಮತ್ತು ಸತ್ವ ಎಂಬ ಮೂರು ಗುಣಗಳಿರುತ್ತವೆ. ಕೆಲವೊಮ್ಮೆ ಪರಿಸ್ಥಿತಿಗಳು ವ್ಯಕ್ತಿಗಳನ್ನು ಕೋಪಿಷ್ಟರನ್ನಾಗಿ ಮಾಡಬಹುದು. ಗುರುಬಲ, ಅದೃಷ್ಟ, ಹಣ ಮತ್ತು ಉದ್ಯೋಗವಿದ್ದರೂ ಕೂಡ ಕೆಲವರಿಗೆ ಇದ್ದಕ್ಕಿದ್ದಂತೆ ಕೋಪ ಬರುತ್ತದೆ. ಈ ಅತಿ ಕೋಪಕ್ಕೆ ಜ್ಯೋತಿಷ್ಯದ ಗ್ರಹಗತಿಗಳು ಹೇಗೆ ಕಾರಣವಾಗುತ್ತವೆ ಮತ್ತು ಅದಕ್ಕೆ ಪರಿಹಾರಗಳೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಜ್ಯೋತಿಷ್ಯದಲ್ಲಿ ಬುಧ ಗ್ರಹವು ಬುದ್ಧಿಕಾರಕನಾಗಿದ್ದು, ಸೂಕ್ಷ್ಮತೆಯನ್ನು ನೀಡುತ್ತದೆ. ಬುಧ ಗ್ರಹ ದುರ್ಬಲವಾದಾಗ, ಪಾಪಗ್ರಹಗಳ ದೃಷ್ಟಿ ಇದ್ದಾಗ, ನೀಚನಾಗಿದ್ದಾಗ ಅಥವಾ ಪಾಪಗ್ರಹಗಳ ಜೊತೆ ಸೇರಿದಾಗ ವ್ಯಕ್ತಿಗಳ ಜಾತಕದಲ್ಲಿ ತಕ್ಷಣ ಕೋಪ ಕಾಣಿಸಿಕೊಳ್ಳುತ್ತದೆ. ಇಂತಹವರಿಗೆ ಬುಧವಾರ ಮತ್ತು ಸೋಮವಾರದಂತಹ ಕೆಲವು ದಿನಗಳಲ್ಲಿ, ಅಥವಾ ನಿರ್ದಿಷ್ಟ ಹೋರಾ ಸಮಯದಲ್ಲಿ ಕೋಪ ಹೆಚ್ಚಾಗಿರುತ್ತದೆ.
ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ಜೋಡಿ ಒಂಟೆಯ ಪ್ರತಿಮೆ ಇರಿಸಿ; ಹಣಕ್ಕೆಂದೂ ಕೊರತೆಯಾಗದು!
ಇಂತಹ ಪರಿಹಾರಗಳನ್ನು ಅನುಸರಿಸುವುದರಿಂದ ತಾಳ್ಮೆ ಹೆಚ್ಚುತ್ತದೆ ಮತ್ತು ಅತಿಯಾದ ಕೋಪ ನಿಯಂತ್ರಣಕ್ಕೆ ಬರುತ್ತದೆ. ಇದು ಬುಧ ಗ್ರಹದ ಪ್ರಭಾವವನ್ನು ಸಕಾರಾತ್ಮಕವಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ