
ಶುಕ್ರವಾರ ಲಕ್ಷ್ಮಿ ದೇವಿಯ ಆರಾಧನೆಗೆ ಸಮರ್ಪಿತವಾದ ದಿನ. ನಿಮಗೆ ಎಂದಿಗೂ ಹಣದ ಕೊರತೆ ಬರಬಾರದು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಯಾವಾಗಲೂ ನಿಮ್ಮೊಂದಿಗೆ ಇರಬೇಕೆಂದು ಬಯಸಿದರೆ, ಶುಕ್ರವಾರದಂದು ಲಕ್ಷ್ಮಿ ದೇವಿಗೆ ಕೆಲವು ವಸ್ತುಗಳನ್ನು ಅರ್ಪಿಸುವುದು ಬಹಳ ಮುಖ್ಯ. ಹೀಗೆ ಮಾಡುವುದರಿಂದ ನಿಮಗೆ ಎಂದಿಗೂ ಹಣದ ಕೊರತೆಯಾಗುವುದಿಲ್ಲ. ಆದ್ದರಿಂದ ಶುಕ್ರವಾರ ಲಕ್ಷ್ಮಿ ದೇವಿಯ ಪೂಜೆಯ ವೇಳೆ ದೇವಿಗೆ ಏನನ್ನು ಅರ್ಪಿಸಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಶುಕ್ರವಾರ ಈ ಪರಿಹಾರ ಮಾಡಿದರೆ, ನಿಮಗೆ ಎರಡು ಪಟ್ಟು ಲಾಭ ಸಿಗುತ್ತದೆ ಎಂಬ ನಂಬಿಕೆಯಿದೆ.
ಲಕ್ಷ್ಮಿ ದೇವಿಗೆ ಬಿಳಿ ಬಣ್ಣದ ವಸ್ತುಗಳು ಮತ್ತು ಹಾಲಿನಿಂದ ಮಾಡಿದ ವಸ್ತುಗಳು ಇಷ್ಟ. ಆದ್ದರಿಂದ ಶುಕ್ರವಾರ ಹಾಲು ಮತ್ತು ಅನ್ನದಿಂದ ಮಾಡಿದ ಪಾಯಸ ಅಥವಾ ಖೀರ್ನ್ನು ನೈವೇದ್ಯವಾಗಿ ಅರ್ಪಿಸಿ. ನೀವು ಲಕ್ಷ್ಮಿ ದೇವಿಗೆ ಸಕ್ಕರೆ ಮಿಠಾಯಿಯನ್ನು ಸಹ ನೀಡಬಹುದು.
ಲಕ್ಷ್ಮಿ ದೇವಿಗೆ ವೀಳ್ಯದ ಎಲೆಗಳೆಂದರೆ ತುಂಬಾ ಇಷ್ಟ ಆದ್ದರಿಂದ ಈ ಎಲೆಯನ್ನು ದೇವಿಗೆ ಅರ್ಪಿಸಿ. ಲಕ್ಷ್ಮಿ ದೇವಿಯನ್ನು ಸಂಪತ್ತು ಮತ್ತು ಅದೃಷ್ಟದ ದೇವತೆ ಎಂದೂ ಕರೆಯುತ್ತಾರೆ. ವೀಳ್ಯದ ಎಲೆಯು ಸಂತೋಷದೊಂದಿಗೆ ಸಂಬಂಧ ಹೊಂದಿದೆ. ಏಕೆಂದರೆ ಹಿಂದೂ ಸಂಪ್ರದಾಯದಲ್ಲಿ ವೀಳ್ಯದ ಎಲೆಗಳಿಗೆ ವಿಶೇಷ ಮಹತ್ವವಿದೆ. ಪೂಜೆಗಳು, ಮದುವೆಗಳು ಮತ್ತು ಶುಭ ಸಮಾರಂಭಗಳಲ್ಲಿ ವೀಳ್ಯದ ಎಲೆಗಳು ಅತ್ಯಗತ್ಯ.
ಇದನ್ನೂ ಓದಿ: ವಾಸ್ತು, ರಾಹು-ಕೇತು ದೋಷ ನಿವಾರಣೆಗೆ ಮನೆಯ ದಕ್ಷಿಣ ದಿಕಿನಲ್ಲಿ ಈ ಒಂದು ಮರ ನೆಡಿ!
ಸಂಪತ್ತು ಮತ್ತು ಅದೃಷ್ಟದ ದೇವತೆಯಾದ ಲಕ್ಷ್ಮಿ ದೇವಿಗೆ ಸುವಾಸನೆಯ ವಸ್ತು ಇಷ್ಟ. ಹೂವುಗಳ ಸುವಾಸನೆ ಇರುವ ಮನೆಯಲ್ಲಿ ಲಕ್ಷ್ಮಿ ದೇವಿಯು ಯಾವಾಗಲೂ ವಾಸಿಸುತ್ತಾಳೆ ಎಂದು ಹೇಳಲಾಗುತ್ತದೆ. ನೀವು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಬಯಸಿದರೆ, ನೀವು ಲಕ್ಷ್ಮಿ ದೇವಿಗೆ ಹೂವುಗಳನ್ನು ಅರ್ಪಿಸಬೇಕು. ಗುಲಾಬಿ ಹೂವುಗಳು, ಕಮಲದ ಹೂವುಗಳು ಅಥವಾ ಶ್ರೀಗಂಧವನ್ನು ಅರ್ಪಿಸುವುದು ಸಹ ಶುಭ.
ಕೆಂಪು ಬಟ್ಟೆಯನ್ನು ಅದೃಷ್ಟ, ಪ್ರೀತಿ ಮತ್ತು ಐಷಾರಾಮಿ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಕೆಂಪು ವಸ್ತುಗಳನ್ನು ಹೆಚ್ಚಾಗಿ ಶುಭ ಸಮಾರಂಭಗಳಲ್ಲಿ, ವಿಶೇಷವಾಗಿ ಮದುವೆಗಳಲ್ಲಿ ಬಳಸಲಾಗುತ್ತದೆ. ವಿವಾಹಿತ ಮಹಿಳೆಯರು ಶುಕ್ರವಾರದಂದು ಲಕ್ಷ್ಮಿ ದೇವಿಗೆ ಕೆಂಪು ಬಳೆ ಅಥವಾ ಕೆಂಪು ಬಟ್ಟೆಯನ್ನು ಅರ್ಪಿಸಿ ದೇವಿಯ ಆಶೀರ್ವಾದವನ್ನು ಪಡೆಯುತ್ತಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ