Garuda Purana: ಮನೆಯಲ್ಲಿ ಪ್ರತಿದಿನ ಜಗಳಕ್ಕೆ ಕಾರಣವೇನು? ಗರುಡ ಪುರಾಣ ಏನು ಹೇಳುತ್ತದೆ?

|

Updated on: Mar 19, 2025 | 9:19 AM

ಗರುಡ ಪುರಾಣದ ಪ್ರಕಾರ, ಮನೆಯ ಸ್ವಚ್ಛತೆಯು ಸಮೃದ್ಧಿ ಮತ್ತು ಸಂತೋಷಕ್ಕೆ ಅತ್ಯಂತ ಮುಖ್ಯ. ಅನಗತ್ಯ ವಸ್ತುಗಳನ್ನು ತೆಗೆದುಹಾಕುವುದು, ಅಡುಗೆ ಮನೆಯನ್ನು ಸ್ವಚ್ಛವಾಗಿಡುವುದು ಮತ್ತು ನಿತ್ಯದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕಲಹವನ್ನು ತಪ್ಪಿಸುತ್ತದೆ ಎಂದು ಪುರಾಣ ಹೇಳುತ್ತದೆ. ಇದು ಲಕ್ಷ್ಮಿ ದೇವಿಯ ಅನುಗ್ರಹವನ್ನು ಪಡೆಯಲು ಸಹಾಯ ಮಾಡುತ್ತದೆ.

Garuda Purana: ಮನೆಯಲ್ಲಿ ಪ್ರತಿದಿನ  ಜಗಳಕ್ಕೆ ಕಾರಣವೇನು? ಗರುಡ ಪುರಾಣ ಏನು ಹೇಳುತ್ತದೆ?
Garuda Purana
Image Credit source: Pinterest
Follow us on

ಮಹರ್ಷಿ ವೇದವ್ಯಾಸರು ಬರೆದಿರುವ ಗರುಡ ಪುರಾಣಕ್ಕೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವಿದೆ.ಇದು 18 ಮಹಾಪುರಾಣಗಳಲ್ಲಿ ಒಂದಾಗಿದೆ. ಇದು ಸಾಮಾನ್ಯ ಪುಸ್ತಕವಲ್ಲ.ಗರುಡ ಪುರಾಣ ಪ್ರಪಂಚದ ಸೃಷ್ಟಿಕರ್ತನಾದ ವಿಷ್ಣುವು ತನ್ನ ಭಕ್ತರಿಗೆ ನೀಡಿದ ಜ್ಞಾನವನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವುದರಿಂದ ಜೀವನದ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆಯಿದೆ.

ಗರುಡ ಪುರಾಣವು ಧಾರ್ಮಿಕ ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲೇಖಿಸುತ್ತದೆ. ಕೆಲವು ಅಭ್ಯಾಸಗಳನ್ನು ಸಮಯಕ್ಕೆ ತಕ್ಕಂತೆ ಬದಲಾಯಿಸದಿದ್ದರೆ, ಮನೆಯಲ್ಲಿ ಘರ್ಷಣೆಗಳು ಉಂಟಾಗಬಹುದು. ಆದ್ದರಿಂದ, ನಿಮ್ಮ ಮನೆಯ ಸಂತೋಷ ಮತ್ತು ಸಮೃದ್ಧಿಗಾಗಿ ಯಾವ ಅಭ್ಯಾಸಗಳನ್ನು ಬದಲಾಯಿಸಬೇಕೆಂದು ಇಲ್ಲಿ ತಿಳಿದುಕೊಳ್ಳಿ.

ಕೆಲವರಿಗೆ ಮನೆಯಲ್ಲಿ ಅನಗತ್ಯ ಕಸವನ್ನು ಬಿಡದೆ ಸಂಗ್ರಹಿಸಿಡುವ ಅಭ್ಯಾಸವಿರುತ್ತದೆ. ಆದರೆ ಇದು ಬಡತನವನ್ನು ಆಹ್ವಾನಿಸುತ್ತದೆ. ಕಸ ಸಂಗ್ರಹವಾಗುವಲ್ಲಿ ನಕಾರಾತ್ಮಕ ಶಕ್ತಿ ವೇಗವಾಗಿ ಹರಡುತ್ತದೆ. ಇದರಿಂದ ಕುಟುಂಬದಲ್ಲಿ ಜಗಳ ಹೆಚ್ಚಾಗುತ್ತದೆ. ಕುಟುಂಬ ಸದಸ್ಯರ ನಡುವಿನ ಪ್ರೀತಿ ಕಡಿಮೆಯಾಗುತ್ತದೆ ಮತ್ತು ಸಂಬಂಧಗಳು ಜಗಳಗಳಿಂದ ತುಂಬುತ್ತವೆ. ಅದಕ್ಕಾಗಿಯೇ ಮನೆಯಲ್ಲಿರುವ ಅನಗತ್ಯ ವಸ್ತುಗಳನ್ನು ತಕ್ಷಣ ತೆಗೆದುಹಾಕಬೇಕು.

ಇದನ್ನೂ ಓದಿ
ಮನೆಯಿಂದಲೇ ಕೆಲಸ ಮಾಡುತ್ತಿದ್ದೀರಾ? ಹಾಗಿದ್ರೆ ಈ ವಾಸ್ತು ಸಲಹೆ ಅನುಸರಿಸಿ
ಈ ಮೂರು ರಾಶಿಯವರಿಗೆ ಗಜಕೇಸರಿ ಯೋಗ; ಅದೃಷ್ಟ ಖುಲಾಯಿಸಲಿದೆ
ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗ ಈ ವಿಷ್ಯ ನೆನಪಿಟ್ಟುಕೊಳ್ಳಿ
ನರಸಿಂಹ ದ್ವಾದಶಿ ಯಾವಾಗ? ದಿನಾಂಕ, ಶುಭ ಸಮಯ ಮತ್ತು ಪೂಜಾ ವಿಧಾನ ತಿಳಿಯಿರಿ

ಇದನ್ನೂ ಓದಿ: ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಸಿಂಹ ಕಾಣಿಸಿದರೆ ಏನು ಅರ್ಥ?

ಮನೆಯೊಳಗಿನ ಅಡುಗೆ ಮನೆ ದೇವಸ್ಥಾನದಂತಿರಬೇಕು. ಏಕೆಂದರೆ ಅಲ್ಲಿ ಅನ್ನಪೂರ್ಣ ದೇವಿ ನೆಲೆಸಿದ್ದಾಳೆ. ಆದರೆ ಅನೇಕ ಜನರು ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದಿಲ್ಲ. ಖಾಲಿ ಪಾತ್ರೆಗಳನ್ನು ರಾತ್ರಿಯಿಡೀ ಸಿಂಕ್‌ನಲ್ಲಿ ಬಿಡಲಾಗುತ್ತದೆ. ಹೀಗೆ ಮಾಡುವುದರಿಂದ ಕುಟುಂಬದಲ್ಲಿ ಕಲಹ ಹೆಚ್ಚಾಗುತ್ತದೆ. ಹಾಗಾಗಿ, ರಾತ್ರಿ ಪಾತ್ರೆಗಳನ್ನು ತೊಳೆದ ನಂತರವೇ ನೀವು ಮಲಗಬೇಕು.

ಲಕ್ಷ್ಮಿ ದೇವಿಯು ಸ್ವಚ್ಛತೆಯನ್ನು ಪ್ರೀತಿಸುತ್ತಾಳೆ. ಮನೆ ಸ್ವಚ್ಛವಾಗಿದ್ದರೆ ಅವಳು ಸಂತೋಷವಾಗಿರುತ್ತಾಳೆ. ಪ್ರತಿದಿನ ಸ್ವಚ್ಛಗೊಳಿಸದ ಮನೆಗಳಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಇದು ಮನೆಯ ಸಂತೋಷಕ್ಕೆ ಅಡ್ಡಿಯಾಗುತ್ತದೆ. ಅದಕ್ಕಾಗಿಯೇ ಗರುಡ ಪುರಾಣದಲ್ಲಿ ಮನೆಯ ಸ್ವಚ್ಛತೆಯ ಬಗ್ಗೆ ಉಲ್ಲೇಖಸಲಾಗಿದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:19 am, Wed, 19 March 25