Mysuru Dasara 2022: ಯಶಸ್ವಿಯಾಗಿ ನಡೆದ ಜಂಬೂಸವಾರಿ, ಬನ್ನಿಮಂಟಪದಲ್ಲಿ ರಾಷ್ಟ್ರಗೀತೆ ನುಡಿಸಿ ಗೌರವ ವಂದನೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 06, 2022 | 6:45 AM

2022ನೇ ಸಾಲಿನ ಮೈಸೂರು ದಸರಾ ಜಂಬೂಸವಾರಿ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಅರಮನೆಯಿಂದ ಆರಂಭವಾದ ಜಂಬೂಸವಾರಿ ಬನ್ನಿಮಂಟಪ ತಲುಪಿತು. ಸುಮಾರು ಎರಡು ಗಂಟೆಗಳ ಕಾಲ ನಡೆ ಜಂಬೂಸವಾರಿಯನ್ನು ಜನರು ಕಣ್ತುಬಿಂಕೊಂಡರು.

Mysuru Dasara 2022: ಯಶಸ್ವಿಯಾಗಿ ನಡೆದ ಜಂಬೂಸವಾರಿ, ಬನ್ನಿಮಂಟಪದಲ್ಲಿ ರಾಷ್ಟ್ರಗೀತೆ ನುಡಿಸಿ ಗೌರವ ವಂದನೆ
ಮೈಸೂರು ಜಂಬು ಸವಾರಿ

ಜಂಬೂಸವಾರಿ​ ಬನ್ನಿ ಮಂಟಪ ತಲುಪಿದೆ. ಈ ಮೂಲಕ ಮೈಸೂರು ದಸರಾ ಜಂಬೂಸವಾರಿ ಯಶಸ್ವಿಯಾಗಿ ನಡೆಯಿತು. ಅರಮನೆಯಿಂದ ಬನ್ನಿಮಂಟಪದ ವರೆಗೆ ಒಟ್ಟು 2 ಗಂಟೆ ಕಾಲ ಜಂಬೂಸವಾರಿ ನಡೆದಿದ್ದು, ಜಂಬೂಸವಾರಿ ಬನ್ನಿಮಂಟಕ್ಕೆ ತಲುಪಿದ ಬಳಿಕ ಪೊಲೀಸ್ರು ರಾಷ್ಟ್ರಗೀತೆ ನುಡಿಸಿ ಗೌರವ ವಂದನೆ ಸಲ್ಲಿಸಿದರು.

ಜಂಬೂ ಸವಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ್ದರು. ಜಂಬೂ ಸವಾರಿ ಅರಮನೆಯಿಂದ ಹೊರಟು ಕೆ.ಆರ್ ಸರ್ಕಲ್, ಸಯ್ಯಾಜಿ ರಾವ್, ರಸ್ತೆ, ಆಯುರ್ವೇದಿಕ್ ವೃತ್ತ, ಆರ್.ಎಂ.ಸಿ, ತಿಲಕ್ ನಗರ ರಸ್ತೆ ಮೂಲಕ ಜಂಬೂ ಸವಾರಿ ಬನ್ನಿ ಮಂಟಪ ತಲುಪಿದೆ. ಈ ಮೂಲಕ 2022ನೇ ಸಾಲಿನ ಮೈಸೂರು ದಸರಾ ಜಂಬೂಸವರಿ ಯಶಸ್ವಿಯಾಗಿ ಸಂಪನ್ನಗೊಂಡಿತು.

ಎರಡು ವರ್ಷ ಕರೋನಾದಿಂದ ಕಳೆಗುಂದಿದ್ದ(Mysore Dasara) ಜಂಬೂಸವಾರಿ ಈ ಭಾರಿ ಬಹಳ ವಿಜೃಂಭಣೆಯಿಂದ ನಡೆಯಿತು. ಜಂಬೂಸವಾರಿ ಸಾಗುತ್ತಿದ್ದ ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ಸೇರಿದ್ರು, ಹಾಗೇ ಜಂಬೂಸವಾರಿ ಮುಂದೆ ಕಲಾ ತಂಡಗಳು ಸಹ ಮೆರಗು ನೀಡಿದವು. ಇದೆಲ್ಲವನ್ನು ಸಹಸ್ರಾರು ಜನರು  ಕಣ್ತುಂಬಿಕೊಂಡು, ತಾಯಿ ಚಾಮುಂಡೇಶ್ವರಿಗೆ ಕೈ ಮುಗಿದು ಪ್ರಾರ್ಥಿಸಿಕೊಂಡರು.

ಈ ಭಾರೀ ರಾಷ್ಟ್ರಪತಿ ದ್ರೌಪದಿ ಮುರ್ಮು ಮೈಸೂರು ದಸರಾಕ್ಕೆ ಚಾಲನೆ ನೀಡಿದರು.ಈ ಬಾರಿಯೂ ಅಂಬಾರಿಯನ್ನು ಅಭಿಮನ್ಯು ಹೊಂತಿದ್ದಾನೆ. ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿ ವಿರಾಜಮಾನಳಾಗಿದ್ದಾಳೆ.

ಅಭಿಮನ್ಯು ಈಗಾಗಲೇ ಎರಡು ಬಾರಿ ಅಂಬಾರಿಯನ್ನು ಹೊತ್ತಿದ್ದು, ಮೂರನೇ ಬಾರಿಗೆ ಹೊತ್ತಿದ್ದಾನೆ. ಅಭಿಮನ್ಯುವಿನೊಂದಿಗೆ ಅರ್ಜುನ ನಿಶಾನೆ ಆನೆ , ಚೈತ್ರ ಮತ್ತು ಕಾವೇರಿ ಕುಮ್ಕಿ ಆನೆಗಳಾಗಿ ಜಂಬೂ ಸವಾರಿಯಲ್ಲಿ ಸಾಗಲಿವೆ. ಟೋಟಲಿ 9 ಆನೆಗಳು ರಾಜ ಬೀದಿಗಳಲ್ಲಿ ಸಾಗಿದೆ.

ಜಂಬೂಸವಾರಿ ಮೆರವಣಿಗೆ ವೇಳೆ 47 ಸ್ತಬ್ಧಚಿತ್ರ ಪ್ರದರ್ಶನ ವಾಗಲಿವೆ. 31 ಜಿಲ್ಲೆಗಳ ಕಲೆ, ಸಾಹಿತ್ಯ, ಇತಿಹಾಸವನ್ನು ಸ್ತಬ್ಧಚಿತ್ರ ಪ್ರತಿಬಿಂಬಿಸಿವೆ. ಈ ಬಾರಿ ನಟ ದಿ. ಪುನೀತ್​ ರಾಜಕುಮಾರ್​ ಭಾವಚಿತ್ರ ಇರುವ ಸ್ತಬ್ಧಚಿತ್ರ ಪ್ರದರ್ಶನವಾಗಿದೆ.

LIVE NEWS & UPDATES

The liveblog has ended.
  • 05 Oct 2022 06:16 PM (IST)

    ಕಿಟಕಿ ಮೂಲಕ ಜಂಬೂ ಸವಾರಿ ವೀಕ್ಷಿಸಿದ ರಾಜಮಾತೆ ಪ್ರಮೋದಾದೇವಿ

  • 05 Oct 2022 06:14 PM (IST)

    ಕೆ.ಆರ್.ಸರ್ಕಲ್​ ತಲುಪಿದ ದಸರಾ ಜಂಬೂ ಸವಾರಿ

    ಐತಿಹಾಸಿಕ ಮೈಸೂರು ದಸರಾ ಜಂಬೂಸವಾರಿ ಕೆ.ಆರ್.ಸರ್ಕಲ್​ ತಲುಪಿದೆ.


  • 05 Oct 2022 05:56 PM (IST)

    ಜಂಬೂ ಸವಾರಿ ನೋಡಲು ಮರವೇರಿ ಕೂತ ಯುವಕರು

    ಎರಡು ವರ್ಷ ಕರೋನಾದಿಂದ ಕಳೆಗುಂದಿದ್ದ ಜಂಬು ಸವಾರಿಯನ್ನು ವೀಕ್ಷಿಸಲು ಜನರು ಕಿಕ್ಕಿರಿದು ಸೇರಿದ್ದಾರೆ. ಜಂಬೂ ಸವಾರಿಯನ್ನು ನೋಡಲು ದೇಶ-ವಿದೇಶದಿಂದ ಜನರು ಆಗಮಿಸಿದ್ದಾರೆ. ಯುವಕರು ಜಂಬೂ ಸವಾರಿ ನೋಡಲು ಮರವೇರಿ ಕೂತಿದ್ದಾರೆ. ಜಂಬೂ ಸವಾರಿ ವೀಕ್ಷಣೆಗೆ 50 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ವಿಐಪಿ ಹಾಗೂ ವಿವಿಐಪಿಗಳಿಗೆ ಅರಮನೆಯ ಮೊದಲನೇ ಮಹಡಿಯ ಪ್ರಾಂಗಣದಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಯದುವೀರ್​, ನ್ಯಾಯಾಧೀಶರು, ರಾಜ್ಯಪಾಲ ಗೆಹ್ಲೋಟ್​, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

  • 05 Oct 2022 05:50 PM (IST)

    ಪುಷ್ಪಾರ್ಚನೆ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

    ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದ್ದಾರೆ. ಜಂಬೂ ಸವಾರಿ ಮೆರವಣಿಗೆ ಪ್ರಾರಂಭವಾಗಿದೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌, ರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ , ಮೈಸೂರು ಪಾಲಿಕೆ ಮೇಯರ್ ಶಿವಕುಮಾರ್‌,  ಜಿಲ್ಲಾಧಿಕಾರಿ ಬಗಾದಿ ಗೌತಮ್‌, ಪೊಲೀಸ್ ಆಯುಕ್ತ ಚಂದ್ರಗುಪ್ತ ಉಪಸ್ಥಿತರಿದ್ದರು.

  • 05 Oct 2022 05:49 PM (IST)

    ಮೂರನೇ ಭಾರಿಗೆ ಅಂಬಾರಿಯನ್ನು ಹೊತ್ತ ಅಭಿಮನ್ಯು

    ಅಭಿಮನ್ಯು ಈಗಾಗಲೇ ಎರಡು ಬಾರಿ ಅಂಬಾರಿಯನ್ನು ಹೊತ್ತಿದ್ದು, ಈಗ ಮೂರನೇ ಬಾರಿಗೆ ಹೊತ್ತಿದ್ದಾನೆ. ರಾಜಬೀದಿಯಲ್ಲಿ ಅಭಿಮನ್ಯು ಅಂಬಾರಿಯನ್ನು ಹೊತ್ತು ರಾಜಗಾಂಭೀರ್ಯದಿಂದ ಸಾಗುತ್ತಿದ್ದಾನೆ. ಅರ್ಜುನ ನಿಶಾನೆ ಆನೆ, ಚೈತ್ರ ಮತ್ತು ಕಾವೇರಿ ಕುಮ್ಕಿ ಅಭಿಮನ್ಯುವಿನೊಂದಿಗೆ ಸಾಗುತ್ತಿದ್ದಾರೆ. ಟೋಟಲಿ 9 ಆನೆಗಳು ರಾಜ ಬೀದಿಗಳಲ್ಲಿ ಸಾಗುತ್ತಿದೆ. ಅರಮನೆಯಿಂದ ಕೆ.ಆರ್ ಸರ್ಕಲ್, ಸಯ್ಯಾಜಿ ರಾವ್, ರಸ್ತೆ, ಆಯುರ್ವೇದಿಕ್ ವೃತ್ತ, ಆರ್.ಎಂ.ಸಿ, ತಿಲಕ್ ನಗರ ರಸ್ತೆ ಮೂಲಕ ಜಂಬೂ ಸವಾರಿ ಬನ್ನಿ ಮಂಟಪ ತಲುಪಲಿದೆ.

  • 05 Oct 2022 05:00 PM (IST)

    Jamboo Savari 2022 Live: ಜಂಬೂ ಸವಾರಿ ನೋಡಲು ಮುಗಿಬಿದ್ದ ಜನ

    ಮೈಸೂರಿನಲ್ಲಿ ದಸರಾ ವೈಭವದ ಸಂಭ್ರಮ ಮನೆಮಾಡಿದ್ದು, ಜಂಬೂಸವಾರಿಯನ್ನ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಪೊಲೀಸರು ಇದ್ದರು ನೂಕಾಟ ತಳ್ಳಾಟ ಉಂಟಾಗಿದೆ. ಬ್ಯಾರಿಕೇಡ್​​ ನೂಕಿದ್ದಾರೆ.

  • 05 Oct 2022 04:54 PM (IST)

    Jamboo Savari 2022 Live: ಮೈ ಜುಮ್ಮೆನಿಸುವ ಫೈರ್ ಸ್ಟಂಟ್

    ಮೈಸೂರಿನಲ್ಲಿ ದಸರಾ ವೈಭವದ ಸಂಭ್ರಮ ಜೋರಾಗಿದೆ. ಜಂಬೂಸವಾರಿಯನ್ನ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನ ನೆರೆದಿದ್ದಾರೆ. ಸ್ತಬ್ಧಚಿತ್ರಗಳ ಮೆರವಣಿಗೆ ವೇಳೆ ಕಲಾತಂಡದ ಫೈರ್ ಸ್ಟಂಟ್ ಎಲ್ಲರ ಗಮನ ಸೆಳೆಯಿತು.

  • 05 Oct 2022 04:51 PM (IST)

    Jamboo Savari 2022 Live: ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗಲಿರುವ ಮೆರವಣಿಗೆ

    ಐತಿಹಾಸಿಕ ಮೈಸೂರು ದಸರಾ ಜಂಬೂಸವಾರಿಗೆ ಕ್ಷಣಗಣನೆ ಶುರುವಾಗಿದ್ದು, ಅರಮನೆಯಿಂದ ಕೆ.ಆರ್.ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ಆಯುರ್ವೇದಿಕ್ ವೃತ್ತ, RMC, ತಿಲಕ್ ನಗರ ರಸ್ತೆ ಮೂಲಕ ಬನ್ನಿ ಮಂಟಪ ತಲುಪಲಿದೆ.

  • 05 Oct 2022 04:48 PM (IST)

    Jamboo Savari 2022 Live: ಬನ್ನಿಮಂಟಪದಲ್ಲಿ ಪಂಜಿನ ಕವಾಯತಿಗೆ ಸಕಲ ಸಿದ್ಧತೆ

    ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022 ಬನ್ನಿಮಂಟಪದಲ್ಲಿ ಪಂಜಿನ ಕವಾಯತಿಗೆ ಸಕಲ ಸಿದ್ಧತೆ ಮಾಡಲಾಗಿದೆ. ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತು ನಡೆಯಲಿದ್ದು, ಸಹಸ್ರಾರು ಜನ ಪಂಜಿನ ಕವಾಯತು ಕಣ್ತುಂಬಿಕೊಳ್ಳಲಿದ್ದಾರೆ. ಪಂಜಿನ ಕವಾಯತು ನಂತರ ಮೈಸೂರು ದಸರಾಗೆ ತೆರೆ.

  • 05 Oct 2022 03:20 PM (IST)

    ಸ್ತಬ್ಧಚಿತ್ರ ಪ್ರದರ್ಶನ ಮೆರವಣಿಗೆ ಪ್ರಾರಂಭ: ಗಮನ ಸೆಳೆಯಲಿದೆ ಅಪ್ಪು ಮೂರ್ತಿ

    ಈ ಭಾರಿ ಜಂಬೂ ಸವಾರಿ ಮೆರವಣಿಗೆಯಲ್ಲಿ 31 ಜಿಲ್ಲೆಗಳ ಕಲೆ, ಸಾಹಿತ್ಯ, ಇತಿಹಾಸವನ್ನು ಸ್ತಬ್ಧಚಿತ್ರ ಪ್ರತಿಬಿಂಬಿಸುವ 47 ಸ್ತಬ್ಧಚಿತ್ರಗಳು ಭಾಗಿಯಾಗಿವೆ. ಈಗಾಗಲೇ  ಸ್ತಬ್ಧಚಿತ್ರ  ಪ್ರದರ್ಶನ ಮೆರವಣಿಗೆ ಪ್ರಾರಂಭವಾಗಿದ್ದು, ವಿಶೇಷವಾಗಿ ನಟ ದಿ. ಪುನೀತ್​ ರಾಜಕುಮಾರ್​ ಭಾವಚಿತ್ರ ಇರುವ ಸ್ತಬ್ಧಚಿತ್ರ ಪ್ರದರ್ಶನವಾಗಲಿದೆ. ಜಂಬೂ ಸವಾರಿ ನೋಡಲು ಅರಮನೆಗೆ ಸಾಕಷ್ಟು ಜನರು ಆಗಮಿಸುತ್ತಿದ್ದು, ಜಂಬೂ ಸವಾರಿಯನ್ನು ಕಣ್ಣು ತುಂಬಿಕೊಳ್ಳಲು ಕಾಯುತ್ತಿದ್ದಾರೆ.

    1. ಬಾಗಲಕೋಟೆ -ಮುಧೋಳ ಶ್ವಾನ, ಇಳಕೆಲ್ ಸೀರೆ, ದುರ್ಗಾಂಬ ದೇವಸ್ಥಾನ
    2. ಬಳ್ಳಾರಿ-ದುರ್ಗಾಂಬ ದೇವಾಸ್ಥಾನ, ಮಿಂಜೇರಿ ಗುಡ್ಡ, ಬಳ್ಳಾರಿ ಕೋಟೆ
    3. ಬೆಳಗಾವಿ-ಶೀ ರೇಣುಕಾದೇವಿ ದೇವಾಸ್ಥಾನ, ಕಮಲ ಬಸದಿ
    4. ಬೆಂಗಳೂರು(ಗಾ)- ಮನ್ಯಾಪುರ ದೇವಸ್ಥಾನ,, ಕಪಿಲೇಶ್ಷರ ದೇವಸ್ಥಾನ, ಜೈನಬಸದಿ, ಸಿಂಪಾಡಿಪುರ ವೀಣೆ
    5. ಬೆಂಗಳೂರು ನಗರ -ಕಡಲೆಕಾಯಿ ಪರಸೆ, ಬಸವನ ಗುಡಿ
    6. ಬೀದರ್-ನೂತನ ಅನುಭವ ಮಂಟಪ
    7. ಚಾಮರಾಜನಗರ -ವನ್ಯಧಾಮ, ಶ್ರೀಮಹದೇಶ್ವೇರ ವಿಗ್ರಹ, ಪುನೀತ್‌ ರಾಜಕುಮಾರ್ ಪ್ರತಿಮೆ
    8. ಚಿಕಬಳ್ಳಾಪುರ -ಗ್ರೀನ್ ನಂದಿ & ಕ್ಲೀನ್ ನಂದಿ, ಭೋಗೇಶ್ವರ ದೇವಸ್ಥಾನ
    9. ಚಿಕ್ಕಮಗಳೂರು- ದ್ವಾದಶ ಜಿಲ್ಲೆಗಳಿಗೆ ಜೀವನಾಡಿ ಚಿಕ್ಕಮಗಳೂರು ಜಿಲ್ಲೆಯು ಸಪ್ತ ನದಿಗಳ ತವರು
    10. ಚಿತದುರ್ಗ-ವಾಣಿವಿಲಾಸ ಜಲಾಶಯ, ಓನಕೆ ಓಬ್ಬವ, ಕುದುರೆ ಮೇಲೆ ಅಸನರಾಗಿರುವ ಮದಕರಿ ನಾಯಕ ಪ್ರತಿಮೆ, ದೀಪಸ್ತಂಭ
    11. ದಕ್ತಿಣ ಕನ್ನಡ-ಕಂಬಳ, ಹುಲಿವೇಶ,ಭೂತ ಕೋಲ
    12. ದಾವಣಗೆರೆ-ಸಂತೆ ಬೆನ್ನೂರು ಪುಷ್ಕರಣಿ
    13. ಧಾರವಾಡ-ಸಂಗೀತ ದಿಗ್ಗಜರು
    14. ಗದಗ-ಶ್ರೀ ಕ್ಷೇತ್ರ ಶ್ರೀಮಂತಗಡ, ಹೊಳಲಮ್ಮ ದೇವಿ ಮತ್ತು ಶಿವಾಜಿ
    15. ಹಾಸನ-ಬೇಲೂರು ಚೆನ್ನಕೇಶವ ದೇವಸ್ಥಾನ, ಶ್ರವಣಬೆಳಗೊಳ- ಗೊಮ್ಮಟೇಶ್ವರ
    16. ಹಾವೇರಿ-ಗುರು ಗೋವಿಂದಭಟ್ರು, ಸಂತೆ ಶಿಶುನಾಳ ಷರೀಫರು, ಮುಕ್ತೇಶ್ವರ ದೇವಾಲಯ
    17. ಕಲಬುರಗಿ-ರಾಜವಂಶಸ್ಥರ ಕೋಟೆ, ಚಿಂಚೋಳಿ ಅರಣ್ಯ ಪ್ರದೇಶ, ವನ್ಯಜೀವಿ ಧಾಮ
    18. ಕೊಡಗು-ಬ್ರಹ್ಮಗಿರಿ ಬೆಟ್ಟ, ಬೃಗೇಂಡಶ್ವೇರ ದೇವಸ್ಥಾನ, ತಲಕಾವೇರಿ ತೀರ್ಥೋಬವ, ಇರ್ಪು ಜಲಾಶಯ
    19. ಕೋಲಾರ-ಬಿಕೆಎಸ್‌ ಅಯ್ಯಂಗಾರ್ ಯೋಗನಾಥ್ ಹಾಗೂ ಅಂತರಗಂಗೆ ಬೆಟ್ಟ
    20. ಕೊಪ್ಪಳ-ಆನೆಗುಂದಿ ಬೆಟ್ಟ,ಕಿನ್ನಾಳ ಗೊಂಬೆಗಳು, ಅಂಜನಾದ್ರಿ ಬೆಟ್ಟ
    21. ಮಂಡ್ಯ-ಮಂಡ್ಯಜಿಲ್ಲೆಯ ದೇಗುಲಗಳು
    22. ಮೈಸೂರು-ಮೈಸೂರು ಜಿಲ್ಲೆ ವಿಶೇಷತೆಗಳು
    23. ರಾಯಚೂರು-ಸಿರಿಧಾನ್ಯ ಬೆಳೆಗಳ ಅಭಿಯಾನ
    24. ರಾಮನಗರ-ರಾಮದೇವರ ಬೆಟ್ಟ, ರಣಹದ್ದು ಪಕ್ಷಿಧಾಮ
    25. ಶಿವಮೊಗ್ಗ-ಅಕ್ಕಮಹಾದೇವಿ ಜನ್ಮಸ್ಥಳ, ಉಡುತಡಿ, ಶಿಕಾರಿಪುರ
    26. ತುಮಕೂರು-ನಿಟ್ಟೂರಿನ ಹೆಚ್‌ಎಎಲ್‌ ತಯಾರಿಕ ಘಟಕ, ಪಾವಗಡದ ವಿಶ್ವದ ಮೊದಲ ಬೃಹತ್ ಸೋಲಾರ್ ಪಾರ್ಕ್
    27. ಉಡುಪಿ-ಜಿಐ ಟ್ಯಾಗ್ ಹೊಂದಿರುವ ಉಡುಪಿ ಕೈಮಗ್ಗ, ಸೀರೆ ನೇಯ್ಗೆ ,ಸಂಪ್ರಾದಾಯಕ ಕಲಾ ಪ್ರದರ್ಶನ
    28. ಉತ್ತರ ಕನ್ನಡ-ಕಾರವಾರ ನೌಕನೆಲೆ,(ಐಎನ್‌ಎಸ್‌ ವಿಕ್ರಮ್)
    29.  ವಿಜಯಪುರ-ಸಿದ್ದರಾಮೇಶ್ವರ ದೇವಸ್ಥಾನ,
    30. ವಿಜಯನಗರ-ಉಗ್ರ ನರಸಿಂಹ, ದರೋಜಿ ಕರಡಿಧಾಮ, ಕಲ್ಲಿನ ರಥ

    ಸ್ತಬ್ಧಚಿತ್ರಗಳ ಉಪಸಮಿತಿ

    1. ಯಾದಗಿರಿ-ಸುರಪುರ ಕೋಟೆ
    2. ಅರಮನೆ ವಾದ್ಯಗೋಷ್ಠಿ
    3. ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಸೋಮನಾಥಪುರ ದೇವಾಲಯ
    4. ಆಜಾದಿ ಕಾ ಅಮೃತ ಮಹೋತ್ಸವ

    ಇಲಾಖಾವಾರು ಸ್ತಬ್ಧಚಿತ್ರಗಳ ಪಟ್ಟಿ

    1. ಸಮಾಜ ಕಲ್ಯಾಣ ಇಲಾಖೆ- ಸಾಮಾಜಿಕ ನ್ಯಾಯ
    2. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ- ಐಟಿಐ, ಜಿಟಿಟಿಸಿ, ಕೌಶಲ ತರಬೇತಿ
    3. ಹಾಲು ಉತ್ಪಾದಕರ ಮಹಾಮಂಡಲ- ನಂದಿನಿ ಕ್ಷೀರಧಾರೆ, ಉತ್ಪನ್ನಗಳು
    4. ಮೈಸೂರು ವಿಶ್ವವಿದ್ಯಾಲಯ- 106 ವರ್ಷಗಳ ಇತಿಹಾಸ
    5. ಕಾವೇರಿ ನೀರಾವರಿ ನಿಗಮ- ರೈತರು ಮತ್ತು ಸಾರ್ವಜನಿಕರಿಗೆ ಆಗುವ ಅನುಕೂಲಕಗಳು
    6. ಸೆಸ್ಕ್-‌ ಡಿಡಿಯು ಯೋಜನೆ, ಬೆಳಕು ಯೋಜನೆ, ಪರಿವರ್ತಕ ಅಭಿಯಾನ
    7. ವಾರ್ತಾ ಮತ್ತು ಪ್ರಚಾರ ಇಲಾಖೆ- ಇಲಾಖೆ ಕಾರ್ಯಕ್ರಮಗಳು
    8. ಡಾ.ಬಾಬು ಜಗಜೀವನರಾಂ ಅಭಿವೃದ್ಧಿ ನಿಗಮ- ಲಿಡ್ಕರ್‌ ಉತ್ಪನ್ನಗಳು
    9. ಅಖಿಲ ಭಾರತ ವಾಕ್‌ ಮತ್ತು ಶ್ರಾವಣ ಸಂಸ್ಥೆ- ಎಲ್ಲರಿಗೂ ದಯೆ ಮತ್ತು ಪ್ರೀತಿಗಾಗಿ
    10. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ- ಆರ್ಥಿಕ ಹೊರಯಿಂದ ರಕ್ಷಣೆ, ನಮ್ಮ ಕ್ಲಿನಿಕ್‌
    11. ಸಹಕಾರ ಇಲಾಖೆ- ಸಹಕಾರ ಕ್ಷೇತ್ರದ ಯೋಜನೆಗಳು
    12. ಮಂಡ್ಯ ಜಿಲ್ಲೆ ಮಹಾ ಕುಂಭ ಮೇಳ- ಪುಣ್ಯ ಸ್ನಾನ ಮತ್ತು ಶ್ರೀ ಮಹದೇಶ್ವರ ಜ್ಯೋತಿ ಸ್ವೀಕಾರ
    13. ಪ್ರವಾಸೋದ್ಯಮ ಇಲಾಖೆ- ಚನ್ನಕೇಶವ ದೇವಾಲಯ, ಬೇಲೂರು, ಹಂಪಿ ಆನೆಲಾಯ
  • 05 Oct 2022 02:37 PM (IST)

    ನಂದಿ ಧ್ವಜ ಪೂಜೆಯಲ್ಲಿ ಭಾಗಿಯಾದ ಸಿಎಂ ಬೊಮ್ಮಾಯಿ

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿನ್ನೆಯೇ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಿದ್ದಾರೆ. ಮಧ್ಯಾಹ್ನ 12.30ಕ್ಕೆ ಭೋಜನ ಮುಗಿಸಿ ನಂದಿ ಧ್ವಜ ಪೂಜೆಯಲ್ಲಿ ಭಾಗಿಯಾಗಿದ್ದಾರೆ. 2.36 ರಿಂದ 02:50ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ನಡೆದಿದೆ. ಸಿಎಂ ಬೊಮ್ಮಾಯಿ ನಂದಿ ಧ್ವಜ ಕಂಬಕ್ಕೆ ಪುಷ್ಪಾರ್ಚನೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು. ಜನತೆಗೆ ಚಾಮುಂಡೇಶ್ವರಿ ಸುಖ-ಶಾಂತಿ, ಸಮೃದ್ಧಿ ನೀಡಲಿ. ನಾಡಿನ ಜನತೆಗೆ ಮತ್ತೊಮ್ಮೆ ದಸರಾ ಹಬ್ಬದ ಶುಭಾಶಯಗಳು. ದಸರಾ ಮಹೋತ್ಸವನ್ನ ಯಶಸ್ವಿಯಾಗಿ ನಡೆಸಿದ್ದಕ್ಕೆ ಮೈಸೂರಿನ ಜಿಲ್ಲಾ ಉಸ್ತುವಾರಿ, ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

Published On - 2:37 pm, Wed, 5 October 22

Follow us on