Shravan Month 2025: ಶಿವಲಿಂಗಕ್ಕೆ ಯಾವ ವಸ್ತು ಅರ್ಪಿಸಿದ್ರೆ ಏನು ಫಲ? ಸಂಪೂರ್ಣ ವಿವರ ಇಲ್ಲಿದೆ

2025ರ ಶ್ರಾವಣ ಮಾಸ ಜುಲೈ 23 ರಿಂದ ಪ್ರಾರಂಭವಾಗುತ್ತಿದೆ. ಈ ಮಾಸದಲ್ಲಿ ಶಿವಪೂಜೆಗೆ ವಿಶೇಷ ಮಹತ್ವವಿದೆ. ಶಿವಲಿಂಗಕ್ಕೆ ಹಾಲು, ತುಪ್ಪ, ಅನ್ನ, ಗೋಧಿ, ಜೇನು, ಎಳ್ಳು, ಏಲಕ್ಕಿ, ಲವಂಗ, ಕುಂಕುಮ, ಬೆಲ್ಲ, ಬೇಲ್ಪತ್ರೆ ಮುಂತಾದವುಗಳನ್ನು ಅರ್ಪಿಸುವುದರಿಂದ ವಿವಿಧ ಫಲಗಳು ದೊರೆಯುತ್ತವೆ. ಈ ಅರ್ಪಣೆಗಳಿಂದ ಆರ್ಥಿಕ ಸಮೃದ್ಧಿ, ಆರೋಗ್ಯ, ಸಂತಾನ, ಶಾಂತಿ ಮತ್ತು ಪಿತೃ ದೋಷದಿಂದಲೂ ಮುಕ್ತಿ ಪಡೆಯಬಹುದು ಎಂದು ನಂಬಲಾಗಿದೆ.

Shravan Month 2025: ಶಿವಲಿಂಗಕ್ಕೆ ಯಾವ ವಸ್ತು ಅರ್ಪಿಸಿದ್ರೆ ಏನು ಫಲ? ಸಂಪೂರ್ಣ ವಿವರ ಇಲ್ಲಿದೆ
ಶ್ರಾವಣ ಮಾಸ

Updated on: Jul 15, 2025 | 11:32 AM

ವರ್ಷ ಅಂದರೆ 2025 ರಲ್ಲಿ ಶ್ರಾವಣ ಮಾಸ ಜುಲೈ 23 ರಿಂದ ಪ್ರಾರಂಭವಾಗಿ ಆಗಸ್ಟ್ 22 ರವರೆಗೆ ಇರಲಿದೆ. ಈ ಸಮಯದಲ್ಲಿ ಶಿವನ ಪೂಜೆಗೆ ವಿಶೇಷ ಆದ್ಯತೆಯನ್ನು ನೀಡಲಾಗುತ್ತದೆ. ಶ್ರಾವಣ ಮಾಸದಲ್ಲಿ ಶಿವನನ್ನು ಪೂಜಿಸುವುದರಿಂದ ಎಲ್ಲಾ ದುಃಖಗಳು ಮತ್ತು ನೋವುಗಳು ದೂರವಾಗುತ್ತವೆ ಎಂಬುದು ಧಾರ್ಮಿಕ ನಂಬಿಕೆಯಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಶ್ರಾವಣ ಮಾಸವು ಶಿವನನ್ನು ಮೆಚ್ಚಿಸಲು ಅತ್ಯಂತ ಶುಭ ಸಂದರ್ಭವಾಗಿದೆ. ಆದ್ದರಿಂದ ಈ ಸಮಯದಲ್ಲಿ , ಶಿವಲಿಂಗಕ್ಕೆ ಏನು ಅರ್ಪಿಸಿದರೆ ಏನು ಫಲ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಶಿವಲಿಂಗಕ್ಕೆ ಏಲಕ್ಕಿ,ಲವಂಗ ಅರ್ಪಿಸುವುದು :

ಶಿವಲಿಂಗಕ್ಕೆ ಏಲಕ್ಕಿ ಅರ್ಪಿಸುವುದರಿಂದ ಮನೆಯಲ್ಲಿ ಸಮೃದ್ಧಿ ಬರುತ್ತದೆ ಮತ್ತು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಲವಂಗವನ್ನು ಅರ್ಪಿಸುವುದರಿಂದ ಜೀವನದಲ್ಲಿ ಸಂತೋಷ, ಸಮೃದ್ಧಿ, ಶಾಂತಿ ಮತ್ತು ಸಕಾರಾತ್ಮಕ ಶಕ್ತಿ ಬರುತ್ತದೆ ಎಂಬ ನಂಬಿಕೆಯಿದೆ.

ಅನ್ನ, ಗೋಧಿ ಅರ್ಪಣೆ:

ಶಿವಲಿಂಗದ ಮೇಲೆ ಅನ್ನ ಅರ್ಪಿಸುವುದರಿಂದ ಶಿವನು ಸಂತುಷ್ಟನಾಗುತ್ತಾನೆ ಮತ್ತು ಭಕ್ತ ಶಿವನಿಂದ ಸಂಪತ್ತು ಮತ್ತು ಸಮೃದ್ಧಿಯ ಆಶೀರ್ವಾದವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಇದಲ್ಲದೇ ಶಿವಲಿಂಗದ ಮೇಲೆ ಗೋಧಿಯನ್ನು ಅರ್ಪಿಸುವುದರಿಂದ ಸಂತಾನ ವೃದ್ಧಿ, ಮಕ್ಕಳು ಸಮರ್ಥರು ಮತ್ತು ವಿಧೇಯರಾಗುವುದು ಮುಂತಾದ ಪ್ರಯೋಜನಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ.

ಜೇನುತುಪ್ಪ ಮತ್ತು ಕಪ್ಪು ಎಳ್ಳು:

ಶಿವಲಿಂಗಕ್ಕೆ ಜೇನುತುಪ್ಪ ಅರ್ಪಿಸುವುದರಿಂದ ಜೀವನದಲ್ಲಿ ಮಾಧುರ್ಯ, ಶಾಂತಿ ಮತ್ತು ಸಕಾರಾತ್ಮಕತೆ ಬರುತ್ತದೆ. ಇದಲ್ಲದೇ ಕಪ್ಪು ಎಳ್ಳನ್ನು ಅರ್ಪಿಸುವುದರಿಂದ ಪಿತೃ ದೋಷದಿಂದ ಮುಕ್ತಿ ಮತ್ತು ಪೂರ್ವಜರ ಆಶೀರ್ವಾದ ದೊರೆಯುತ್ತದೆ ಎಂಬ ನಂಬಿಕೆಯಿದೆ.

ಕುಂಕುಮ ಮತ್ತು ಸುಗಂಧ ದ್ರವ್ಯ:

ಶಿವಲಿಂಗಕ್ಕೆ ಕುಂಕುಮ ಅರ್ಪಿಸುವುದರಿಂದ ಶಿವನ ಆಶೀರ್ವಾದ ಸಿಗುತ್ತದೆ ಮತ್ತು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ. ಇದಲ್ಲದೇ ಶಿವಲಿಂಗದ ಮೇಲೆ ಸುಗಂಧ ದ್ರವ್ಯ ಅರ್ಪಿಸುವ ವ್ಯಕ್ತಿಯು ತನ್ನ ಜೀವನದಲ್ಲಿ  ಸಂಪತ್ತು ಮತ್ತು ಧಾನ್ಯಗಳನ್ನು ಒಳಗೊಂಡಂತೆ ಸಂತೋಷವನ್ನು ಪಡೆಯುತ್ತಾನೆ ಎಂಬ ನಂಬಿಕೆಯಿದೆ.

ಇದನ್ನೂ ಓದಿ: ಮದುವೆ ಸಮಯದಲ್ಲಿ ಅಲಂಕೃತ ತೆಂಗಿನಕಾಯಿ ಬಳಸುವುದು ಶುಭವೇ?

ಬೆಲ್ಲ ಮತ್ತು ಬೇಲ್ಪತ್ರ:

ಶಿವಲಿಂಗಕ್ಕೆ ಬೆಲ್ಲ ಅರ್ಪಿಸುವುದರಿಂದ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ ಮತ್ತು ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ. ಇದಲ್ಲದೇ ಬೇಲ್ಪತ್ರ ಅರ್ಪಿಸುವುದರಿಂದ ಶಿವನು ಸಂತುಷ್ಟನಾಗುತ್ತಾನೆ ಮತ್ತು ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ.

ಹಾಲು ಮತ್ತು ತುಪ್ಪ:

ಶಿವಲಿಂಗದ ಮೇಲೆ ಹಾಲು ಅರ್ಪಿಸುವುದರಿಂದ ಆರೋಗ್ಯ ಮತ್ತು ಎಲ್ಲಾ ರೋಗಗಳಿಂದ ಮುಕ್ತಿ ಸಿಗುತ್ತದೆ. ತುಪ್ಪ ಅರ್ಪಿಸುವುದರಿಂದ ತೇಜಸ್ಸು ಸಿಗುತ್ತದೆ ಮತ್ತು ಜೀವನದಲ್ಲಿ ಸಂತೋಷ ಉಳಿಯುತ್ತದೆ ಎಂಬ ನಂಬಿಕೆಯಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:28 am, Tue, 15 July 25