Horseshoe Luck: ಮನೆಯ ಬಾಗಿಲಿಗೆ ಕುದುರೆ ಲಾಳ ಹಾಕಿದರೆ ಅದೃಷ್ಟವಂತೆ! ಅದನ್ನು ಹಾಕುವುದು ಹೇಗೆ?

Horseshoe Vastu: ಲಕಿ ಚಾರ್ಮ್ ಆಗಿ ಹಾರ್ಸ್ ಶೂ ಇಂದಿಗೂ ಚಾಲ್ತಿಯಲ್ಲಿರುವ ಹಳೆಯ ಸಂಪ್ರದಾಯವಾಗಿದೆ. ಅದನ್ನು ತಪ್ಪು ದಿಕ್ಕಿನಲ್ಲಿ ಇಡುವುದು ಧನಾತ್ಮಕ ಶಕ್ತಿಯ ಹರಿವಿಗೆ ಅಡ್ಡವಾಗುತ್ತದೆ. ಹಾರ್ಸ್‌ ಶೂ ಶಾಸ್ತ್ರದ ಪ್ರಕಾರ ಅದರ ಸರಿಯಾದ ನಿಯೋಜನೆಯು ಆರ್ಥಿಕ ಯೋಗಕ್ಷೇಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಅದೇ ಹಾರ್ಸ್‌ ಶೂ ಅನ್ನು ತಪ್ಪಾಗಿ ಇಡುವುದರಿಂದ ಹಣಕಾಸಿನ ಪ್ರಕ್ಷುಬ್ಧತೆ ಅಥವಾ ನಷ್ಟಕ್ಕೆ ಕಾರಣವಾಗಬಹುದು. ವಾಸ್ತವವಾಗಿ ಹಾರ್ಸ್‌ ಶೂ ಎಂಬುದು ಕುದುರೆಯ ಬೂಟು ಆಗಿದೆ. ಇದು ಕುಟುಂಬಸ್ಥರನ್ನು ನಕಾರಾತ್ಮಕತೆಯಿಂದ ರಕ್ಷಿಸುವಂತೆಯೇ ಕುದುರೆಯ ಗೊರಸನ್ನು ರಕ್ಷಣೆ ಮಾಡುವ ಸಾಧನವಾಗಿದೆ!

Horseshoe Luck: ಮನೆಯ ಬಾಗಿಲಿಗೆ ಕುದುರೆ ಲಾಳ ಹಾಕಿದರೆ ಅದೃಷ್ಟವಂತೆ! ಅದನ್ನು ಹಾಕುವುದು ಹೇಗೆ?
ಮನೆಯಲ್ಲಿ ಕುದುರೆ ಲಾಳ ಹಾಕಿದರೆ ಅದೃಷ್ಟ ಬರುತ್ತದಂತೆ!
ಸಾಧು ಶ್ರೀನಾಥ್​

Updated on: Sep 14, 2024 | 10:57 AM

Horseshoe Vastu: ಅದೃಷ್ಟದ ಸಂಕೇತವಾಗಿರುವ ಕುದುರೆ ಶೂ (ಲಕಿ ಹಾರ್ಸ್ ಶೂ) ಬಳಕೆ ಪ್ರವೃತ್ತಿಯು ಹೊಸದೇನಲ್ಲ. ವಾಸ್ತವವಾಗಿ ಇದು ಭಾರತ, ಚೀನಾ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ನೂರಾರು ವರ್ಷಗಳಿಂದ ಜನಪ್ರಿಯವಾಗಿದೆ (Vastu Shastra, Feng Shui energy). ಕುದುರೆ ಶೂ/ ಬೂಟು, ಕುದುರೆ ಲಾಳ, ಘೋಡಾ ಕಾ ನಾಲ್ ಎಂದೆಲ್ಲಾ ಜನಪ್ರಿಯವಾಗಿರುವ ಹಾರ್ಸ್ ಶೂ ಅನಾದಿ ಕಾಲದಿಂದಲೂ ಮನೆಯ ಬಾಗಿಲುಗಳ ಮೇಲೆ ನೇತುಹಾಕುವುದು ಜನಪ್ರಿಯವಾಗಿದೆ. ನಾವೀಗ ಹಾರ್ಸ್ ಶೂ ವಾಸ್ತು ಬಗ್ಗೆ ಸ್ವಲ್ಪ ಹೆಚ್ಚು ಅನ್ವೇಷಿಸೋಣ. ಹಾರ್ಸ್ ಶೂ ಲಕ್ಕಿ ಚಾರ್ಮ್ ಇತಿಹಾಸವನ್ನು ಸ್ವಲ್ಪ ಕೆದುಕೋಣ. ಹಾರ್ಸ್ ಶೂ – ಘೋಡಾ ಕಾ ನಾಲ್ ವಿಶ್ವದಾದ್ಯಂತ ಅತ್ಯಂತ ಸಾಮಾನ್ಯ ಅದೃಷ್ಟದ ಮೋಡಿಗಳಲ್ಲಿ ಒಂದಾಗಿದೆ. ಇದು ನಿಮ್ಮ ಕುಟುಂಬಕ್ಕೆ ಅದೃಷ್ಟವನ್ನು ತಂದುಕೊಡುತ್ತದೆ ಮತ್ತು ದುರದೃಷ್ಟದಿಂದ ರಕ್ಷಣೆ ನೀಡುತ್ತದೆ. ಆಧ್ಯಾತ್ಮಿಕ ಶಕ್ತಿಯನ್ನು ಮನೆಯ ದಿಕ್ಕಿಗೆ ಆಕರ್ಷಿಸುತ್ತದೆ. ಹಾರ್ಸ್ ಶೂ ಎಂದರೇನು?: ಹಾರ್ಸ್ ಶೂ ಎಂದರೆ U ಅಥವಾ ವಿಸ್ತೃತ ವೃತ್ತಾಕಾರದ ಎರಕಹೊಯ್ದ ಕಬ್ಬಿಣದ ತುಂಡು. ಕುದುರೆಯ ಗೊರಸುಗಳನ್ನು (ಪಾದ ಭಾಗ) ಗಾಯಗಳಿಂದ ರಕ್ಷಿಸಲು ಇದನ್ನು ಗೊರಸುಗಳಿಗೆ (hooves) ಜೋಡಿಸಲಾಗುತ್ತದೆ. ಕುದುರೆಗಳ ಗೊರಸುಗಳು ಸ್ವಾಭಾವಿಕವಾಗಿ ಕಠಿಣವಾಗಿರುವುದಿಲ್ಲ, ಬದಲಿಗೆ ಮೃದುವಾಗಿರುತ್ತದೆ; ಅದು ಕುದುರೆಯ ಸೂಕ್ಷ್ಮ ಭಾಗವಾಗಿರುತ್ತದೆ. ಆದ್ದರಿಂದ, ಕುದುರೆಗಳಿಗೆ ಕಡ್ಡಾಯವಾಗಿ ಹಾರ್ಸ್ ಶೂಗಳನ್ನು ಅಳವಡಿಸಲಾಗುತ್ತದೆ. ಇದರಿಂದ ಅವುಗಳಿಗೆ ನೋವು ಕಡಿಮೆಯಾಗುತ್ತದೆ. ಕುದುರೆಗಳಿಗೆ ಕಬ್ಬಿಣದ...

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ