ಟೇಬಲ್ ಟೆನಿಸ್ ಫೆಡರೇಶನ್ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ ಮನಿಕಾ ಬಾತ್ರಾ; ನ್ಯಾಯಪೀಠ ಹೇಳಿದ್ದೇನು ಗೊತ್ತಾ?

ಫೆಡರೇಶನ್ ಇತ್ತೀಚೆಗೆ ಏಷ್ಯನ್ ಚಾಂಪಿಯನ್‌ಶಿಪ್‌ಗಾಗಿ ತಂಡವನ್ನು ಘೋಷಿಸಿತ್ತು. ಮನಿಕಾ ಬಾತ್ರಾ ಅವರ ಹೆಸರನ್ನು ಈ ತಂಡದಲ್ಲಿ ಸೇರಿಸಲಾಗಿಲ್ಲ. ಈ ನಿರ್ಧಾರದಿಂದ ಮನಿಕಾ ಬಾತ್ರಾ ಫೆಡರೇಶನ್ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಹೋಗಲು ನಿರ್ಧರಿಸಿದರು.

ಟೇಬಲ್ ಟೆನಿಸ್ ಫೆಡರೇಶನ್ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ ಮನಿಕಾ ಬಾತ್ರಾ; ನ್ಯಾಯಪೀಠ ಹೇಳಿದ್ದೇನು ಗೊತ್ತಾ?
ಮನಿಕಾ ಬಾತ್ರಾ
Edited By:

Updated on: Sep 20, 2021 | 4:08 PM

ಭಾರತದ ಟೇಬಲ್ ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ಮತ್ತೊಮ್ಮೆ ಟೇಬಲ್ ಟೇಬಲ್ ಟೆನಿಸ್ ಫೆಡರೇಶನ್ ಆಫ್ ಇಂಡಿಯಾ (ಟಿಟಿಎಫ್‌ಐ) ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಏಷ್ಯನ್ ಚಾಂಪಿಯನ್‌ಶಿಪ್​ನಿಂದ ತೆಗೆದುಹಾಕಿದ ನಂತರ ಅವರು ದೆಹಲಿ ಹೈಕೋರ್ಟ್‌ನಲ್ಲಿ ಫೆಡರೇಶನ್ ವಿರುದ್ಧ ಮೇಲ್ಮನವಿ ಸಲ್ಲಿಸಿದರು. ಮನಿಕಾ ಬಾತ್ರಾ ಅವರ ಅರ್ಜಿಯ ಮೇಲೆ, ಕೇಂದ್ರ ಸರ್ಕಾರದ ವಕೀಲರಿಗೆ ದೆಹಲಿ ಹೈಕೋರ್ಟ್ ಪ್ರತಿಕ್ರಿಯೆ ನೀಡುವಂತೆ ಕೇಳಿದೆ. ಇದರೊಂದಿಗೆ, ಈ ವಿಷಯದ ಬಗ್ಗೆ ಮಾಹಿತಿ ನೀಡುವಂತೆಯೂ ಕೇಳಲಾಗಿದೆ.

ಟೋಕಿಯೊ ಒಲಿಂಪಿಕ್ಸ್ ನಿಂದ ಮನಿಕಾ ಬಾತ್ರಾ ಮತ್ತು ಟೇಬಲ್ ಟೆನಿಸ್ ಫೆಡರೇಷನ್ ನಡುವೆ ವಿವಾದವಿದೆ. ಟೋಕಿಯೊ ಒಲಿಂಪಿಕ್ಸ್​ನಲ್ಲಿ ಮಹಿಳಾ ಸಿಂಗಲ್ಸ್​ನಲ್ಲಿ ಮೂರನೇ ಸುತ್ತು ತಲುಪುವ ಮೂಲಕ ಮನಿಕಾ ಇತಿಹಾಸ ಸೃಷ್ಟಿಸಿದರು. ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಕಳೆದ ಕೆಲವು ವರ್ಷಗಳಲ್ಲಿ ಮನಿಕಾ ದೇಶಕ್ಕಾಗಿ ಸಾಕಷ್ಟು ಯಶಸ್ಸನ್ನು ಸಾಧಿಸಿದ್ದಾರೆ ಆದರೆ ಒಕ್ಕೂಟದೊಂದಿಗಿನ ಸಂಬಂಧವು ಹುಳಿಯಾಗಿ ಉಳಿದಿದೆ.

ಮನಿಕಾ ರಾಷ್ಟ್ರೀಯ ಶಿಬಿರದಲ್ಲಿ ಭಾಗವಹಿಸಲಿಲ್ಲ
ಫೆಡರೇಶನ್ ಇತ್ತೀಚೆಗೆ ಏಷ್ಯನ್ ಚಾಂಪಿಯನ್‌ಶಿಪ್‌ಗಾಗಿ ತಂಡವನ್ನು ಘೋಷಿಸಿತ್ತು. ಮನಿಕಾ ಬಾತ್ರಾ ಅವರ ಹೆಸರನ್ನು ಈ ತಂಡದಲ್ಲಿ ಸೇರಿಸಲಾಗಿಲ್ಲ. ಈ ನಿರ್ಧಾರದಿಂದ ಮನಿಕಾ ಬಾತ್ರಾ ತುಂಬಾ ಕೋಪಗೊಂಡಿದ್ದರು ಮತ್ತು ಈ ಕಾರಣಕ್ಕಾಗಿ ಅವರು ಫೆಡರೇಶನ್ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಹೋಗಲು ನಿರ್ಧರಿಸಿದರು ಮತ್ತು ಅರ್ಜಿ ಸಲ್ಲಿಸಿದರು. ಅದೇ ಸಮಯದಲ್ಲಿ, ಸೋನೆಪತ್‌ನಲ್ಲಿ ನಡೆದ ರಾಷ್ಟ್ರೀಯ ಶಿಬಿರದಲ್ಲಿ ಮಣಿಕಾ ಭಾಗವಹಿಸದ ಕಾರಣ ಅವರು ತಂಡದಲ್ಲಿ ಆಯ್ಕೆಯಾಗಿಲ್ಲವೆಂದು ಫೆಡರೇಶನ್ ಹೇಳಿಕೆ ನೀಡಿದೆ. ಒಕ್ಕೂಟದ ಪ್ರಕಾರ, ಎಲ್ಲಾ ಆಟಗಾರರು ಶಿಬಿರದಲ್ಲಿ ಭಾಗವಹಿಸುವುದು ಕಡ್ಡಾಯ ಎಂದು ಅವರು ಈಗಾಗಲೇ ಸ್ಪಷ್ಟಪಡಿಸಿದ್ದರು. ಏಷ್ಯನ್ ಚಾಂಪಿಯನ್‌ಶಿಪ್‌ಗಳು ಸೆಪ್ಟೆಂಬರ್ 28 ರಂದು ದೋಹಾದಲ್ಲಿ ಆರಂಭವಾಗುತ್ತವೆ. ವಿಶ್ವ ನಂ. 56 ಸುತೀರ್ಥ್ ಮುಖರ್ಜಿ 97 ನೇ ಸ್ಥಾನದಲ್ಲಿರುವ ಬಾತ್ರಾ ಸ್ಥಾನದಲ್ಲಿ ಮಹಿಳಾ ತಂಡವನ್ನು ಮುನ್ನಡೆಸಲಿದ್ದಾರೆ. ಅದೇ ಸಮಯದಲ್ಲಿ ಪುರುಷರ ತಂಡವನ್ನು ಮಾನವ್ ಠಕ್ಕರ್ ನೇತೃತ್ವ ವಹಿಸಲಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ನಂತರ ವಿವಾದ ಆರಂಭವಾಯಿತು
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಮನಿಕಾ ರಾಷ್ಟ್ರೀಯ ತರಬೇತುದಾರರಿಲ್ಲದೆ ಆಡಲು ಬಂದಿದ್ದರು. ಇದರ ನಂತರ ಟಿಟಿಎಫ್‌ಐ ಅವರಿಗೆ ಶೋಕಾಸ್ ನೋಟಿಸ್ ನೀಡಿತು. ಇದಕ್ಕೆ ಉತ್ತರಿಸಿದ ಮನಿಕಾ, ರಾಯ್ ಸಹಾಯ ಪಡೆಯಲು ನಿರಾಕರಿಸುವ ಮೂಲಕ ತಾನು ಆಟದ ಪ್ರತಿಷ್ಠೆಯನ್ನು ಹಾಳುಮಾಡಿದ್ದನ್ನು ತೀವ್ರವಾಗಿ ನಿರಾಕರಿಸಿದ್ದರು. ಮಾರ್ಚ್‌ನಲ್ಲಿ ನಡೆದ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ರಾಯ್ ತನ್ನನ್ನು ಮ್ಯಾಚ್ ಫಿಕ್ಸಿಂಗ್‌ ಮಡಿಕೊಳ್ಳುವಂತೆ ಒತ್ತಾಯಿಸಿದ್ದರು. ಅದಕ್ಕಾಗಿಯೇ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸಿಂಗಲ್ಸ್ ಸ್ಪರ್ಧೆಯಲ್ಲಿ ರಾಯರ ಸಹಾಯವನ್ನು ಪಡೆಯಲು ನಿರಾಕರಿಸಿದ್ದೆ ಎಂದು ಮನಿಕಾ ಆರೋಪಿಸಿದ್ದಾರೆ.

ಇದನ್ನೂ ಓದಿ:ಒಲಿಂಪಿಕ್ಸ್ ಕೋಚ್ ವಿವಾದ; ಏಷ್ಯನ್ ಚಾಂಪಿಯನ್‌ಶಿಪ್ ತಂಡದಿಂದ ಮನಿಕಾ ಬಾತ್ರಾಗೆ ಗೇಟ್​ಪಾಸ್!

Published On - 3:30 pm, Mon, 20 September 21

Follow Us