AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kieron Pollard: ಕೀರೊನ್ ಪೊಲಾರ್ಡ್ ಸ್ಫೋಟಕ ಸಿಕ್ಸ್​ಗೆ ರೋಡ್​ಗೆ ಬಿದ್ದ ಚೆಂಡು: ದಂಗಾದ ಇಡೀ ಸ್ಟೇಡಿಯಂ

Desert Vipers vs MI Emirates, ILT20: ಮೊಹಮ್ಮದ್ ವಾಸೀಂ, ಕೀರೊನ್ ಪೊಲಾರ್ಡ್ (Kieron Pollard) ಹಾಗೂ ಆಂಡ್ರೆ ಫ್ಲೆಟ್ಚರ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಎಂಐ ಎಮಿರೇಟ್ಸ್ ತಂಡ 20 ಓವರ್​ಗಳಲ್ಲಿ ಗಳಿಸಿದ್ದು 241 ರನ್.

Kieron Pollard: ಕೀರೊನ್ ಪೊಲಾರ್ಡ್ ಸ್ಫೋಟಕ ಸಿಕ್ಸ್​ಗೆ ರೋಡ್​ಗೆ ಬಿದ್ದ ಚೆಂಡು: ದಂಗಾದ ಇಡೀ ಸ್ಟೇಡಿಯಂ
kieron pollard SIX
Vinay Bhat
|

Updated on:Jan 31, 2023 | 11:06 AM

Share

ದುಬೈನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಟಿ20 ಲೀಗ್ (ILT20) ಸಾಕಷ್ಟು ರೋಚಕತೆ ಪಡೆಯುತ್ತಿದೆ. ಪ್ರತಿಯೊಂದು ಪಂದ್ಯ ಹೈವೋಲ್ಟೇಜ್​ನಿಂದ ಕೂಡಿದೆ. ಅದರಂತೆ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಡಿಸರ್ಟ್ ವೈಪರ್ಸ್ ವಿರುದ್ಧದ ಪಂದ್ಯದಲ್ಲಿ ಎಂಐ ಎಮಿರೇಟ್ಸ್ (DV vs MIE) ತಂಡ ಸ್ಫೋಟಕ ಬ್ಯಾಟಿಂಗ್ ನಡೆಸಿ ಬರೋಬ್ಬರಿ 157 ರನ್​ಗಳ ಅಮೋಘ ಗೆಲುವು ಸಾಧಿಸಿತು. ಮೊಹಮ್ಮದ್ ವಾಸೀಂ, ಕೀರೊನ್ ಪೊಲಾರ್ಡ್ (Kieron Pollard) ಹಾಗೂ ಆಂಡ್ರೆ ಫ್ಲೆಟ್ಚರ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಎಂಐ ಎಮಿರೇಟ್ಸ್ ತಂಡ 20 ಓವರ್​ಗಳಲ್ಲಿ ಗಳಿಸಿದ್ದು 241 ರನ್. ಈ ಟಾರ್ಗೆಟ್​ನ ಹತ್ತಿರ ಕೂಡ ಸುಳಿಯದ ಡಿಸರ್ಟ್ ವೈಪರ್ಸ್ 84 ರನ್​ಗೆ ಸರ್ವಪತನ ಕಂಡಿತು. ಅದರಲ್ಲೂ ಈ ಪಂದ್ಯದಲ್ಲಿ ಪೊಲಾರ್ಡ್ ಸಿಡಿಸಿದ ಸಿಕ್ಸ್ ಇಡೀ ಸ್ಟೇಡಿಯಂ ಅನ್ನು ಒಂದು ಕ್ಷಣ ದಂಗಾಗಿಸಿದ್ದು ಸುಳ್ಳಲಿಲ್ಲ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಎಂಐ ಎಮಿರೇಟ್ಸ್ ತಂಡ ಹಿಂದೆಂದೂ ಕಾಣದ ಭರ್ಜರಿ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಆಂಡ್ರೆ ಫ್ಲೆಚರ್ ಹಾಗೂ ಮೊಹಮ್ಮದ್ ವಾಸೀಂ ಹೊಡಿಬಡಿ ಆಟವಾಡಿ ದೊಡ್ಡ ಮೊತ್ತ ಕಲೆಹಾಕಲು ಪ್ರಮುಖ ಕಾರಣರಾದರು. ಮೊದಲ ವಿಕೆಟ್​ಗೆನೇ ಈ ಜೋಡಿ ಕೇವಲ 12. 3 ಓವರ್​ನಲ್ಲಿ 141 ರನ್ ಪೇರಿಸಿತು. 39 ಎಸೆತಗಳಲ್ಲಿ 4 ಫೋರ್, 2 ಸಿಕ್ಸರ್ ಬಾರಿಸಿ 50 ರನ್​ಗೆ ಫ್ಲೆಚರ್ ಔಟಾದರೆ, ವಸೀಂ 44 ಎಸೆತಗಳಲ್ಲಿ 11 ಫೋರ್, 4 ಸಿಕ್ಸರ್​ನೊಂದಿಗೆ 86 ರನ್ ಚಚ್ಚಿದರು. ಇವರಿಬ್ಬರ ನಿರ್ಗಮನದ ಬಳಿಕ ಶುರುವಾಗಿದ್ದು ನಾಯಕ ಕೀರೊನ್ ಪೊಲಾರ್ಡ್ ಆಟ.

ಇದನ್ನೂ ಓದಿ
Image
WIW vs INDW: ವಿಂಡೀಸ್ ವಿರುದ್ಧ ಭಾರತಕ್ಕೆ 8 ವಿಕೆಟ್​ಗಳ ಜಯ: ಫೆ. 2ಕ್ಕೆ ಆಫ್ರಿಕಾ ವಿರುದ್ಧ ಫೈನಲ್ ಫೈಟ್
Image
IND vs NZ 3rd T20I: ಭಾರತ-ನ್ಯೂಜಿಲೆಂಡ್ ಸರಣಿ ನಿರ್ಣಾಯಕ ತೃತೀಯ ಟಿ20 ಪಂದ್ಯ ಯಾವಾಗ?, ಎಲ್ಲಿ ನಡೆಯಲಿದೆ?
Image
IND vs NZ 3rd T20I: ಆರಂಭಿಕರಿಬ್ಬರ ವೈಫಲ್ಯ: ಯುವ ಬ್ಯಾಟರ್​​ಗೆ ಅವಕಾಶ ಸಾಧ್ಯತೆ
Image
Yuzvendra Chahal: ಟೀಮ್ ಇಂಡಿಯಾ ಪರ ಹೊಸ ದಾಖಲೆ ಬರೆದ ಚಹಾಲ್

ಮನಬಂದಂತೆ ಬ್ಯಾಟ್ ಬೀಸಿದ ಪೊಲಾರ್ಡ್ ಫೋರ್-ಸಿಕ್ಸರ್​ಗಳ ಮಳೆ ಸುರಿಸಿದರು. ಕೇವಲ 19 ಎಸೆತಗಳಲ್ಲಿ ತಲಾ 4 ಫೋರ್, ಸಿಕ್ಸರ್ ಸಿಡಿಸಿ ಅಜೇಯ 50 ರನ್ ಬಾರಿಸಿದರು. ಇವರಿಗೆ ಡ್ಯಾನ್ ಮೌಸ್ಲೆ (ಅಜೇಯ 31, 17 ಎಸೆತ) ಉತ್ತಮ ಸಾಥ್ ನೀಡಿದರು. ಇವರ ಈ ಸ್ಪೋಟಕ ಆಟದ ನೆರವಿನಿಂದ ಎಂಐ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 241 ರನ್ ಕಲೆಹಾಕಿತು. ಪೊಲಾರ್ಡ್ ಬ್ಯಾಟಿಂಗ್​ನಲ್ಲಿ ಪ್ರಮುಖ ಹೈಲೇಟ್ ಆಗಿದ್ದು ಅವರು ಸಿಡಿಸಿದ ಸಿಕ್ಸರ್. ಪೊಲಾರ್ಡ್ ಬಾರಿಸಿದ ಸಿಕ್ಸ್​ಗೆ ಚೆಂಡು ಸ್ಟೇಡಿಯಂನಿಂದಲೇ ಹೊರ ನಡೆದು ರಸ್ತೆಗೆ ತಲುಪಿತು. ಬಳಿಕ ರೋಡ್​ನಲ್ಲಿದ್ದ ವ್ಯಕ್ತಿ ಆ ಚೆಂಡನ್ನು ಮೈದಾನಕ್ಕೆ ಎಸೆತದರು. ಮೌಸ್ಲೆ ಕೂಡ ಸಿಕ್ಸ್​ ಸಿಡಿಸಿದಾಗ ಚೆಂಡು ರಸ್ತೆಗೆ ತಲುಪಿದ ಘಟನೆ ನಡೆಯಿತು.

IPL 2023: 10 ತಂಡಗಳ ವಿದೇಶಿ ಆಟಗಾರರು: ಹೊಸ ಪ್ಲೇಯರ್​ ಆಯ್ಕೆಗೆ ಯಾವ ಟೀಮ್​ಗೆ ಚಾನ್ಸ್​?

242 ರನ್​ಗಳ ಬಿಗ್ ಟಾರ್ಗೆಟ್ ಬೆನ್ನಟ್ಟಿದ ಡಿಸರ್ಟ್ ವೈಪರ್ಸ್ ತಂಡ 100 ರನ್ ಕೂಡ ಕಲೆಹಾಕಲು ಸಾಧ್ಯವಾಗಲಿಲ್ಲ. ತಂಡದ ಪರ ಯಾವೊಬ್ಬ ಬ್ಯಾಟರ್​ನ ಸ್ಕೋರ್ 15ರ ಗಡಿ ದಾಟಲಿಲ್ಲ. ಟಾಮ್ ಕುರ್ರನ್ ಹಾಗೂ ಮಾರ್ಕ್ ವಾಟ್ 12 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್ ಆಗಿತ್ತು. ಕೇವಲ 12.1 ಓವರ್​ಗಳಲ್ಲಿ 84 ರನ್​ಗೆ ಡಿಸರ್ಟ್ ವೈಪರ್ಸ್ ತಂಡ ಆಲೌಟ್ ಆಯಿತು. ಎಂಐ ಪರ ಫಜಲ್ಲಖ್ ಫಾರುಖಿ 3 ವಿಕೆಟ್ ಕಿತ್ತರೆ, ಜಹೂರ್ ಖಾನ್ ಹಾಗೂ ಇಮ್ರಾನ್ ತಾಹಿರ್ ತಲಾ 2 ವಿಕೆಟ್ ಪಡೆದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:06 am, Tue, 31 January 23

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್