GT vs CSK, IPL 2023 Final Highlights: ನಿಲ್ಲದ ಮಳೆ; ಸೋಮವಾರ ನಡೆಯಲಿದೆ ಫೈನಲ್ ಪಂದ್ಯ

|

Updated on:May 28, 2023 | 11:10 PM

Gujarat Titans vs Chennai Super Kings, IPL 2023 Highlights: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಇಂದು ನಡೆಯಬೇಕಿದ್ದ ಫೈನಲ್ ಪಂದ್ಯ ಮಳೆಯಿಂದಾಗಿ ಇಂದು ನಡೆಯಲಿಲ್ಲ. ಈ ಪಂದ್ಯವು ಈಗ ಮೀಸಲು ದಿನ ಅಂದರೆ ಸೋಮವಾರದಂದು ನಡೆಯಲಿದೆ.

GT vs CSK, IPL 2023 Final Highlights: ನಿಲ್ಲದ ಮಳೆ; ಸೋಮವಾರ ನಡೆಯಲಿದೆ ಫೈನಲ್ ಪಂದ್ಯ
ಚೆನ್ನೈ- ಗುಜರಾತ್ ಮುಖಾಮುಖಿ

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಇಂದು ನಡೆಯಬೇಕಿದ್ದ ಫೈನಲ್ ಪಂದ್ಯ ಮಳೆಯಿಂದಾಗಿ ಇಂದು ನಡೆಯಲಿಲ್ಲ. ಈ ಪಂದ್ಯವು ಈಗ ಮೀಸಲು ದಿನ ಅಂದರೆ ಸೋಮವಾರದಂದು ನಡೆಯಲಿದೆ. ಪಂದ್ಯ ಆರಂಭಕ್ಕೂ ಮುನ್ನ ಮಳೆ ಸುರಿಯಲಾರಂಭಿಸಿದ್ದು, ಎಡಬಿಡದೆ ಸುರಿಯುತ್ತಿದೆ. ಹೀಗಾಗಿ ಅಂಪೈರ್‌ಗಳು ಅಂತಿಮ ಪಂದ್ಯವನ್ನು ಮುಂದೂಡಿ ಸೋಮವಾರ ನಡೆಸಲು ತೀರ್ಮಾನಿಸಿದರು.

LIVE NEWS & UPDATES

The liveblog has ended.
  • 28 May 2023 11:03 PM (IST)

    ಸೋಮವಾರ ನಡೆಯಲಿದೆ ಫೈನಲ್ ಪಂದ್ಯ

    11 ಗಂಟೆಗೊಳಗೆ ಮಳೆ ನಿಂತಿತ್ತಾದರೂ ಉಭಯ ತಂಡದ ನಾಯಕರು ಹಾಗೂ ಅಂಪೈರ್​ಗಳ ಒಮ್ಮತ ನಿರ್ಧಾರದ ಮೇರೆಗೆ ಫೈನಲ್ ಪಂದ್ಯವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

  • 28 May 2023 10:58 PM (IST)

    ಪಂದ್ಯದ ಬಗ್ಗೆ ಅಂಪೈರ್ ಮಾತು

  • 28 May 2023 10:35 PM (IST)

    11 ಗಂಟೆಯೊಳಗೆ ಮಳೆ ನಿಂತರೆ ಆಟ ಆರಂಭ

    ಫಿಲ್ಡ್ ಅಂಪೈರ್​ಗಳ ಹೇಳಿಕೆಯ ಪ್ರಕಾರ ಮಳೆ 11:06ರೊಳಗೆ ನಿಂತರೆ ಇಂದೇ ಫೈನಲ್ ನಡೆಯಲಿದೆ.

  • 28 May 2023 10:07 PM (IST)

    ಎಷ್ಟು ಓವರ್‌ ಕಡಿತ?

    ಅಂದಹಾಗೆ, ಮಳೆಯಿಂದಾಗಿ ಇಂದು ಪಂದ್ಯ ಆಡುವ ಸಾಧ್ಯತೆಯು ತುಂಬಾ ಕಷ್ಟಕರವಾಗಿದೆ. ಮತ್ತೆ ಮಳೆ ಆರಂಭವಾಗುತ್ತಿದ್ದು, ಪಂದ್ಯ ಯಾವಾಗ ಆರಂಭವಾಗಲಿದೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. 9:45ಕ್ಕೆ ಪಂದ್ಯ ಆರಂಭವಾದರೆ ಒಂದು ಓವರ್ ಮಾತ್ರ ಕಡಿತಗೊಳಿಸಲಾಗುತ್ತದೆ. 10 ಗಂಟೆಗೆ ಪಂದ್ಯ ಆರಂಭವಾದರೆ ತಲಾ 17 ಓವರ್‌ ಪಂದ್ಯ ನಡೆಯುತ್ತದೆ. 10:30 ಕ್ಕೆ ಆರಂಭವಾದರೆ ಪ್ರತಿ ಇನಿಂಗ್ಸ್‌ಗೆ 15 ಓವರ್‌ ಸಿಗಲಿದೆ. ಪಂದ್ಯ 12:06 ಕ್ಕೆ ಪ್ರಾರಂಭವಾದರೆ ಪ್ರತಿ ಇನಿಂಗ್ಸ್‌ಗೆ ಐದು ಓವರ್‌ ಸಿಗಲಿದೆ.

  • 28 May 2023 09:58 PM (IST)

    ಮತ್ತೆ ಮಳೆ

  • 28 May 2023 09:58 PM (IST)

    ಓವರ್ ಕಡಿತ ಆರಂಭ

  • 28 May 2023 09:23 PM (IST)

    ಮತ್ತೆ ಮಳೆ ಆರಂಭ

    ಸ್ವಲ್ಪ ಸಮಯ ವಿರಾಮ ತೆಗೆದುಕೊಂಡಿದ್ದ ಮಳೆ ರಾಯ ಮತ್ತೆ ಸುರಿಯಲಾರಂಭಿಸಿದ್ದಾನೆ. ಹೀಗಾಗಿ ಮತ್ತೆ ಮೈದಾನದಿಂದ ಆಟಗಾರರು ಪೆವಿಲಿಯನ್​ಗೆ ತೆರಳಿದ್ದಾರೆ. 9:35ರೊಳಗೆ ಪಂದ್ಯ ಆರಂಭವಾಗದಿದ್ದರೆ ಓವರ್​ಗಳನ್ನು ಕಡಿತಗೊಳಿಸುವ ಪ್ರಕ್ರಿಯೆ ಆರಂಭವಾಗಲಿದೆ.

  • 28 May 2023 09:06 PM (IST)

    ಅಹಮದಾಬಾದ್‌ನಲ್ಲಿ ಮಳೆ ನಿಂತಿದೆ

    ಅಹಮದಾಬಾದ್‌ನಲ್ಲಿ ಮಳೆ ನಿಂತಿದ್ದು ಪಿಚ್ ಮೇಲೆ ಹೊದಿಸಲಾಗಿದ್ದ ಕವರ್​ಗಳನ್ನು ತೆಗೆಯಲಾಗಿದೆ.

  • 28 May 2023 08:25 PM (IST)

    ಮಳೆ ಮತ್ತೆ ಆರಂಭ

    ಅಹಮದಾಬಾದ್‌ನಲ್ಲಿ ಎಡಬಿಡದೆ ಮಳೆಯಾಗುತ್ತಿದೆ. 9.35ರೊಳಗೆ ಪಂದ್ಯ ಆರಂಭವಾದರೆ ಓವರ್‌ಗಳನ್ನು ಕಡಿತಗೊಳಿಸುವುದಿಲ್ಲ.

  • 28 May 2023 07:00 PM (IST)

    ಅಹಮದಾಬಾದ್‌ನಲ್ಲಿ ಭಾರೀ ಮಳೆ

    ಟಾಸ್‌ಗೂ ಮುನ್ನವೇ ಅಹಮದಾಬಾದ್‌ನಲ್ಲಿ ವಾತಾವರಣ ಹದಗೆಟ್ಟಿದೆ. ಜೋರು ಮಳೆ ಶುರುವಾಗಿದೆ.

  • 28 May 2023 05:31 PM (IST)

    ಇದೇ ದಿನ ಫೈನಲ್ ಗೆದ್ದಿದ್ದ ಚೆನ್ನೈ

    ನಿಖರವಾಗಿ 12 ವರ್ಷಗಳ ಹಿಂದೆ, ಈ ದಿನ ಅಂದರೆ 28 ಮೇ 2011 ರಂದು, ಚೆನ್ನೈ ತನ್ನ ಎರಡನೇ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. 12 ವರ್ಷಗಳ ಹಿಂದೆ ಚೆನ್ನೈ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿ ಚಾಂಪಿಯನ್​ ಪಟ್ಟಕ್ಕೇರಿತ್ತು.

  • 28 May 2023 04:51 PM (IST)

    ಫೈನಲ್‌ಗೆ ಮಳೆ ಕಾಟ

    ಹವಾಮಾನ ಇಲಾಖೆಯ ವರದಿಯ ಪ್ರಕಾರ ರಾತ್ರಿ 8 ರಿಂದ 9 ಗಂಟೆಯವರೆಗೆ ಅಹಮದಾಬಾದ್​ನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಪಂದ್ಯಕ್ಕೆ ಮಳೆ ವಿಲನ್ ಆಗುವ ಸಾಧ್ಯತೆಗಳಿವೆ.

  • Published On - May 28,2023 4:46 PM

    Follow us
    ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
    ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
    ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
    ಇಲ್ಲಿ ನಾನೇ ಅಭ್ಯರ್ಥಿ: ಅಚ್ಚರಿ ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್​
    ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
    ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
    ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
    ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
    ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
    ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
    ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
    ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
    ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
    ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
    ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
    ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
    ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
    ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
    ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
    ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ