IND vs SA: ಜೋಹಾನ್ಸ್​ಬರ್ಗ್ ಕದನದಲ್ಲಿ ಸೋತ ಭಾರತ! ಪಂದ್ಯ ಕೈ ತಪ್ಪಲು 5 ಅಂಶಗಳೇ ಕಾರಣ

IND vs SA: ದಕ್ಷಿಣ ಆಫ್ರಿಕಾ 240 ರನ್‌ಗಳ ಗುರಿಯನ್ನು ಅತ್ಯುತ್ತಮ ಶೈಲಿಯಲ್ಲಿ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು ಸಾಧಿಸಿತು. ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಪಿಚ್ ಕಷ್ಟಕರವಾಗಿತ್ತು ಆದರೆ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ವಿಕೆಟ್‌ನಲ್ಲಿಯೇ ಉಳಿದು ಕೊನೆಯಲ್ಲಿ ಟೆಸ್ಟ್ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದರು.

IND vs SA: ಜೋಹಾನ್ಸ್​ಬರ್ಗ್ ಕದನದಲ್ಲಿ ಸೋತ ಭಾರತ! ಪಂದ್ಯ ಕೈ ತಪ್ಪಲು 5 ಅಂಶಗಳೇ ಕಾರಣ
ಭಾರತ- ಆಫ್ರಿಕಾ ತಂಡದ ಆಟಗಾರರು
Edited By:

Updated on: Jan 06, 2022 | 9:49 PM

ಜೋಹಾನ್ಸ್​ಬರ್ಗ್ ಟೆಸ್ಟ್​ನಲ್ಲೇ ಟೆಸ್ಟ್ ಸರಣಿ ಗೆಲ್ಲುವ ಕನಸು ಕಾಣುತ್ತಿದ್ದ ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾ ತಂಡ ಹೊಡೆತ ನೀಡಿದೆ. ನಾಯಕ ಡೀನ್ ಎಲ್ಗರ್ ಅವರ ಅಜೇಯ 96 ಮತ್ತು ರೆಸಿ ವ್ಯಾನ್ ಡೆರ್ ಡಸ್ಸೆ ಅವರ ಅಮೋಘ 40 ರನ್‌ಗಳ ನೆರವಿನಿಂದ ಆತಿಥೇಯರು 7 ವಿಕೆಟ್‌ಗಳ ಜಯ ಸಾಧಿಸಿದರು. ದಕ್ಷಿಣ ಆಫ್ರಿಕಾ 240 ರನ್‌ಗಳ ಗುರಿಯನ್ನು ಅತ್ಯುತ್ತಮ ಶೈಲಿಯಲ್ಲಿ ಕೇವಲ 3 ವಿಕೆಟ್‌ಗಳನ್ನು ಕಳೆದುಕೊಂಡು ಸಾಧಿಸಿತು. ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಪಿಚ್ ಕಷ್ಟಕರವಾಗಿತ್ತು ಆದರೆ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ವಿಕೆಟ್‌ನಲ್ಲಿಯೇ ಉಳಿದು ಕೊನೆಯಲ್ಲಿ ಟೆಸ್ಟ್ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದರು.

ಅಮೋಘ ಬೌಲಿಂಗ್‌ನಿಂದ ಸಜ್ಜುಗೊಂಡಿರುವ ಟೀಂ ಇಂಡಿಯಾ ಎಲ್ಲಿ ಕೈ ತಪ್ಪಿತು? ಮೂರನೇ ದಿನದವರೆಗೂ ಪಂದ್ಯದಲ್ಲೇ ಉಳಿದಿದ್ದ ಟೀಂ ಇಂಡಿಯಾ ಅಷ್ಟಕ್ಕೂ ಸೋಲನುಭವಿಸಿದ್ದು ಹೇಗೆ? ಜೋಹಾನ್ಸ್‌ಬರ್ಗ್ ಟೆಸ್ಟ್ ಟೀಮ್ ಇಂಡಿಯಾ ಕೈಯಿಂದ ಹೇಗೆ ತಪ್ಪಿತು ಎಂದು ನಾವು ನಿಮಗೆ ಹೇಳಲಿದ್ದೇವೆ.

ಬುಮ್ರಾ ಕಳಪೆ ಲೈನ್-ಲೆಂತ್
ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ ಗೆಲ್ಲಬೇಕೆಂದರೆ ಜಸ್ಪ್ರೀತ್ ಬುಮ್ರಾ ಮೇಲೆ ಬಹಳಷ್ಟು ಅವಲಂಬಿತವಾಗಿದೆ. ಆದರೆ ಈ ಬೌಲರ್ ಜೋಹಾನ್ಸ್‌ಬರ್ಗ್‌ನಲ್ಲಿ ನಿರಾಶೆಗೊಳಿಸಿದರು. ಜಸ್ಪ್ರೀತ್ ಬುಮ್ರಾ ವಿಕೆಟ್ ಕಬಳಿಸಲು ಸಾಕಷ್ಟು ಪ್ರಯತ್ನಿಸಿದರು. ಆದರೆ ಈ ಪ್ರಯತ್ನದಲ್ಲಿ ಅವರು ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. ಬುಮ್ರಾ ಆಫ್-ಸ್ಟಂಪ್ ಮೇಲೆ ದಾಳಿ ಮಾಡುವ ಬದಲು ವಿಕೆಟ್‌ಗಳನ್ನು ಗುರಿಯಾಗಿಸಲು ಪ್ರಯತ್ನಿಸಿದರು ಮತ್ತು ಈ ಸಮಯದಲ್ಲಿ ಅವರು ಪಾದಗಳ ಮೇಲೆ ಅನೇಕ ಚೆಂಡುಗಳನ್ನು ಎಸೆದರು, ಅದರ ಲಾಭವನ್ನು ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ಪಡೆದರು. ಬುಮ್ರಾ ಪ್ರತಿ ಓವರ್‌ಗೆ 4 ರನ್‌ಗಳಂತೆ ರನ್ ಬಿಟ್ಟುಕೊಟ್ಟರು ಇದು ಅತ್ಯಂತ ಕಳಪೆ ಪ್ರದರ್ಶನವಾಗಿದೆ.

ಮೊಹಮ್ಮದ್ ಸಿರಾಜ್ ಬೌಲಿಂಗ್ ಮಾಡಲಿಲ್ಲ
ಜೋಹಾನ್ಸ್​ಬರ್ಗ್ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಮೊಹಮ್ಮದ್ ಸಿರಾಜ್ ಅವರನ್ನು ತುಂಬಾ ಮಿಸ್ ಮಾಡಿಕೊಂಡಿತ್ತು. ಸಿರಾಜ್ ಮೊದಲ ಇನ್ನಿಂಗ್ಸ್‌ನಲ್ಲಿ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದರು, ಈ ಕಾರಣದಿಂದಾಗಿ ಅವರು ಬೌಲಿಂಗ್ ಮಾಡಲು ಸಂಪೂರ್ಣವಾಗಿ ಫಿಟ್ ಆಗಿರಲಿಲ್ಲ. ಈ ಪಂದ್ಯದಲ್ಲಿ ಸಿರಾಜ್ ಕೇವಲ 4 ಓವರ್ ಬೌಲ್ ಮಾಡಿದ್ದರು.

ಕೆಎಲ್ ರಾಹುಲ್ ಕಳಪೆ ನಾಯಕತ್ವ
ಟೀಂ ಇಂಡಿಯಾ ಸೋಲಿಗೆ ಕೆಎಲ್ ರಾಹುಲ್ ನಾಯಕತ್ವವೂ ದೊಡ್ಡ ಕಾರಣ. ನಾಲ್ಕನೇ ಇನ್ನಿಂಗ್ಸ್‌ನಲ್ಲಿ ರಾಹುಲ್ ಸಾಕಷ್ಟು ರಕ್ಷಣಾತ್ಮಕ ಕ್ಷೇತ್ರವನ್ನು ಉಳಿಸಿಕೊಂಡರು, ಇದರ ಲಾಭವನ್ನು ದಕ್ಷಿಣ ಆಫ್ರಿಕಾ ಪಡೆದುಕೊಂಡಿತು. ಭಾರತದ ನಾಯಕ ಅಂತಹ ಫೀಲ್ಡಿಂಗ್ ಅನ್ನು ಮುಂದಿಟ್ಟರು, ಅದರ ಮುಂದೆ ಹೊಸ ಬ್ಯಾಟ್ಸ್‌ಮನ್‌ಗಳು ಸಿಂಗಲ್ಸ್‌ಗಳನ್ನು ಸುಲಭವಾಗಿ ತೆಗೆದುಕೊಂಡರು.

ಕೊಹ್ಲಿ ಆಡಲಿಲ್ಲ
ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ಯಶಸ್ಸಿನಲ್ಲಿ ವಿರಾಟ್ ಕೊಹ್ಲಿಯ ದೊಡ್ಡ ಕೈವಾಡವಿದೆ. ಅವರ ಅನುಭವ, ಆಕ್ರಮಣಕಾರಿ ಧೋರಣೆ ಮತ್ತು ಬೌಲರ್‌ಗಳಲ್ಲಿ ವಿಕೆಟ್ ಉರುಳಿಸುವ ಹುರುಪು ತುಂಬುವ ಅವರ ಆಟವನ್ನು ಟೀಂ ಇಂಡಿಯಾ ಜೋಹಾನ್ಸ್‌ಬರ್ಗ್‌ನಲ್ಲಿ ಮಿಸ್ ಮಾಡಿಕೊಂಡಿದೆ. ಕೊಹ್ಲಿ ಗಾಯ ಭಾರತಕ್ಕೆ ಭಾರಿ ನಷ್ಟವಾಗಿದೆ.

ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳ ದಿಟ್ಟ ಪ್ರದರ್ಶನ
ಭಾರತದ ಸೋಲಿಗೆ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳ ಅತ್ಯುತ್ತಮ ಪ್ರದರ್ಶನವೇ ದೊಡ್ಡ ಕಾರಣ. ಡೀನ್ ಎಲ್ಗರ್, ಡ್ಯೂಸ್ ಬೌಲಿಂಗ್​ನಲ್ಲಿ ಸಾಕಷ್ಟು ಪೆಟ್ಟು ತಿಂದರು. ಆದರೆ ಇದರ ಹೊರತಾಗಿಯೂ ಅವರು ವಿಕೆಟ್‌ ಬಿಟ್ಟು ಕೊಡಲಿಲ್ಲ. ಇಬ್ಬರೂ ಮೂರನೇ ವಿಕೆಟ್‌ಗೆ 82 ರನ್‌ಗಳ ಜೊತೆಯಾಟ ನಡೆಸಿದರು. ಮಾರ್ಕ್ರಾಮ್ ಎಲ್ಗರ್ ಜೊತೆ 47 ರನ್ ಸೇರಿಸಿದರು ಮತ್ತು ನಂತರ ಕೀಗನ್ ಪೀಟರ್ಸನ್ ಎಲ್ಗರ್ ಜೊತೆ 46 ರನ್ಗಳ ಪ್ರಮುಖ ಜೊತೆಯಾಟವನ್ನು ಮಾಡಿದರು.

Web contact

TV9 Kannada

Read More
Follow Us