AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karun Nair: ಇನ್ನೂ ಕ್ರೀಸ್​ಗೆ ಬಂದಿಲ್ಲ: ಅದಾಗಲೇ ವಿಶ್ವ ದಾಖಲೆ ನಿರ್ಮಿಸಿದ ಕರುಣ್ ನಾಯರ್

India vs England 1st Test: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಕರುಣ್ ನಾಯರ್ ಆಡುವ ಹನ್ನೊಂದಕ್ಕೆ ಮರಳಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿ ಮತ್ತು ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ತಮ್ಮ ಪ್ರತಿಭೆಯನ್ನು ತೋರಿಸಿ ಈಗ ಟೀಮ್ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಆದರೆ, ಇನ್ನೂ ಕರುಣ್ ಕ್ರೀಸ್ಗೆ ಬಂದಿಲ್ಲ. ಇದಕ್ಕೂ ಮೊದಲೇ ಅವರು ವಿಶೇಷ ದಾಖಲೆ ನಿರ್ಮಿಸಿದ್ದಾರೆ.

Karun Nair: ಇನ್ನೂ ಕ್ರೀಸ್​ಗೆ ಬಂದಿಲ್ಲ: ಅದಾಗಲೇ ವಿಶ್ವ ದಾಖಲೆ ನಿರ್ಮಿಸಿದ ಕರುಣ್ ನಾಯರ್
Karun Nair (2)
Vinay Bhat
|

Updated on: Jun 21, 2025 | 2:00 PM

Share

ಬೆಂಗಳೂರು (ಜೂ. 21): ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ ಮತ್ತು ರವಿಚಂದ್ರನ್ ಅಶ್ವಿನ್ ಇಲ್ಲದೆ ಇಂಗ್ಲೆಂಡ್ ಪ್ರವಾಸಕ್ಕೆ ಬಂದ ಯುವ ಭಾರತೀಯ ತಂಡವನ್ನು ತುರ್ಬಲ ಎಂದು ಕೆಲವರು ಕರೆದಿದ್ದರು. ಕಠಿಣ ಇಂಗ್ಲೆಂಡ್ ಪರಿಸ್ಥಿತಿಗಳಲ್ಲಿ ಭಾರತ ತಂಡವು ರನ್ ಗಳಿಸಲು ಪರದಾಡಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಲೀಡ್ಸ್ ಟೆಸ್ಟ್‌ನ ಮೊದಲ ದಿನದಂದು, ನಡೆದಿದ್ದೇ ಬೇರೆ. ಭಾರತೀಯ ತಂಡ ಎಲ್ಲರನ್ನೂ ಮೌನಗೊಳಿಸಿತು. ಟಾಸ್ ಸೋತ ನಂತರ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ, ನಾವು ಯಾರಿಗೂ ಕಡಿಮೆಯಿಲ್ಲ ಎಂಬಂತೆ ಬ್ಯಾಟ್ ಬೀಸಿತು.

ಪಂದ್ಯದ ಮೊದಲ ದಿನದಂದು 85 ಓವರ್‌ಗಳು ಇದ್ದವು, ಇದರಲ್ಲಿ ಭಾರತ ತಂಡವು 3 ವಿಕೆಟ್‌ಗಳಿಗೆ 359 ರನ್ ಗಳಿಸಿತು. ನಾಯಕ ಶುಭ್​ಮನ್ ಗಿಲ್ ಅದ್ಭುತ ಇನ್ನಿಂಗ್ಸ್ ಆಡಿದರು ಮತ್ತು ದಿನದ ಅಂತ್ಯದವರೆಗೆ 127 ರನ್‌ಗಳನ್ನು ಆಡುವ ಮೂಲಕ ಅಜೇಯರಾಗಿ ಉಳಿದರು. ಯಶಸ್ವಿ ಜೈಸ್ವಾಲ್ ಕೂಡ 101 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಇದಲ್ಲದೆ, ರಿಷಭ್ ಪಂತ್ 67 ರನ್ ಗಳಿಸಿದ ಔಟಾಗದೆ ಉಳಿದರು.

ಒಟ್ಟಾರೆಯಾಗಿ, ಇಡೀ ಭಾರತೀಯ ತಂಡವು ಮೊದಲ ದಿನ ಉತ್ತಮ ಪ್ರದರ್ಶನ ನೀಡಿದೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಕರುಣ್ ನಾಯರ್ ಆಡುವ ಹನ್ನೊಂದಕ್ಕೆ ಮರಳಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿ ಮತ್ತು ಐಪಿಎಲ್ 2025 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ತಮ್ಮ ಪ್ರತಿಭೆಯನ್ನು ತೋರಿಸಿ ಈಗ ಟೀಮ್ ಇಂಡಿಯಾಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಆದರೆ, ಇನ್ನೂ ಕರುಣ್ ಕ್ರೀಸ್​ಗೆ ಬಂದಿಲ್ಲ. ಇದಕ್ಕೂ ಮೊದಲೇ ಅವರು ವಿಶೇಷ ದಾಖಲೆ ನಿರ್ಮಿಸಿದ್ದಾರೆ.

ಇದನ್ನೂ ಓದಿ
Image
ಧೋನಿ ದಾಖಲೆ ಹಿಂದಿಕ್ಕಿ ನಂ. 1 ವಿಕೆಟ್ ಕೀಪರ್ ಆದ ರಿಷಭ್ ಪಂತ್
Image
ಎರಡನೇ ದಿನದಾಟಕ್ಕೆ 5 ಮಾಸ್ಟರ್ ಪ್ಲ್ಯಾನ್ ರೂಪಿಸಿದ ಶುಭ್​ಮನ್ ಗಿಲ್
Image
ಯಂಗ್ ಇಂಡಿಯಾದ ಆಟಕ್ಕೆ ಹೈರಾಣಾದ ಆಂಗ್ಲರು
Image
ಕೊಹ್ಲಿ ಸ್ಥಾನದಲ್ಲಿ ಕಣಕ್ಕಿಳಿದು ಭರ್ಜರಿ ಶತಕ ಸಿಡಿಸಿದ ಗಿಲ್

Rishabh Pant: ಎಂಎಸ್ ಧೋನಿ ದಾಖಲೆ ಹಿಂದಿಕ್ಕಿ ನಂ. 1 ವಿಕೆಟ್ ಕೀಪರ್ ಆದ ರಿಷಭ್ ಪಂತ್

ಕರುಣ್ ನಾಯರ್ ವಿಶೇಷ ದಾಖಲೆ

ಕರುಣ್ ನಾಯರ್ 2017 ರಲ್ಲಿ ಭಾರತ ತಂಡದ ಪರ ಕೊನೆಯ ಪಂದ್ಯ ಆಡಿದ್ದರು. ಈಗ ಅವರು 8 ವರ್ಷಗಳ ನಂತರ ಆಡುವ ಹನ್ನೊಂದಕ್ಕೆ ಮರಳಿದ್ದಾರೆ. ಈ ಸಮಯದಲ್ಲಿ, ಕರುಣ್ ಭಾರತೀಯ ತಂಡಕ್ಕಾಗಿ ಒಟ್ಟು 402 ಅಂತರರಾಷ್ಟ್ರೀಯ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ತಪ್ಪಿಸಿಕೊಂಡ ವಿಶ್ವ ದಾಖಲೆಯನ್ನು ಅವರು ಸೃಷ್ಟಿಸಿದ್ದಾರೆ. 400 ಕ್ಕೂ ಹೆಚ್ಚು ಪಂದ್ಯಗಳನ್ನು ತಪ್ಪಿಸಿಕೊಂಡ ಕ್ರಿಕೆಟ್ ಜಗತ್ತಿನ ಏಕೈಕ ಆಟಗಾರ ಇವರು.

ಇದಕ್ಕೂ ಮೊದಲು ಈ ದಾಖಲೆ ವೆಸ್ಟ್ ಇಂಡೀಸ್‌ನ ರಾಯದ್ ಅಮೃತ್ ಅವರ ಹೆಸರಿನಲ್ಲಿತ್ತು. 2007 ಮತ್ತು 2018 ರ ನಡುವೆ ಅವರು ವೆಸ್ಟ್ ಇಂಡೀಸ್ ತಂಡಕ್ಕಾಗಿ ಒಟ್ಟು 396 ಅಂತರರಾಷ್ಟ್ರೀಯ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಈಗ ನಾಯರ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಭಾರತ ಪರ ಟೆಸ್ಟ್‌ನಲ್ಲಿ ತ್ರಿಶತಕ

ಕರುಣ್ ನಾಯರ್ 2016 ರಲ್ಲಿ ಭಾರತ ತಂಡಕ್ಕೆ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅಂದಿನಿಂದ, ಅವರು 6 ಟೆಸ್ಟ್ ಪಂದ್ಯಗಳಲ್ಲಿ ಒಂದು ತ್ರಿಶತಕ ಸೇರಿದಂತೆ 374 ರನ್ ಗಳಿಸಿದ್ದಾರೆ. ನಾಯರ್ ಇಂಗ್ಲೆಂಡ್ ವಿರುದ್ಧವೇ ತ್ರಿಶತಕ ಗಳಿಸಿದರು. ಆದರೆ ಮುಂದಿನ ಪಂದ್ಯದಿಂದಲೇ ಅವರನ್ನು ಕೈಬಿಡಲಾಯಿತು. ಇದಲ್ಲದೆ, ಅವರು ಭಾರತ ತಂಡಕ್ಕಾಗಿ ಎರಡು ಏಕದಿನ ಪಂದ್ಯಗಳನ್ನು ಆಡಿದರು, ಅದರಲ್ಲಿ ಅವರು 46 ರನ್ ಗಳಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾರೀ ಮಳೆಯಲ್ಲೂ ಪ್ರಧಾನಿ ಮೋದಿಗೆ ಬಂಗಾಳದ ದುರ್ಗಾಪುರದಲ್ಲಿ ಭರ್ಜರಿ ಸ್ವಾಗತ
ಭಾರೀ ಮಳೆಯಲ್ಲೂ ಪ್ರಧಾನಿ ಮೋದಿಗೆ ಬಂಗಾಳದ ದುರ್ಗಾಪುರದಲ್ಲಿ ಭರ್ಜರಿ ಸ್ವಾಗತ
ಕಾವಿ-ಖಾದಿ ನಡುವಿನ ಸೂಕ್ಷ್ಮತೆ ಸೂಚ್ಯವಾಗಿ ತೋರಿಸಿದ ಸುತ್ತೂರು ಶ್ರೀಗಳು
ಕಾವಿ-ಖಾದಿ ನಡುವಿನ ಸೂಕ್ಷ್ಮತೆ ಸೂಚ್ಯವಾಗಿ ತೋರಿಸಿದ ಸುತ್ತೂರು ಶ್ರೀಗಳು
ಕನ್ನಡ ಸ್ಟಾರ್ ನಟರ ಮೇಲೆ ಉರಿದು ಬಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್
ಕನ್ನಡ ಸ್ಟಾರ್ ನಟರ ಮೇಲೆ ಉರಿದು ಬಿದ್ದ ನಿರ್ಮಾಪಕ ಕನಕಪುರ ಶ್ರೀನಿವಾಸ್
ಸರ್ಕಾರ ನೀಡುತ್ತಿರುವ ಸೌಲಭ್ಯವನ್ನು ಜನ ಸದುಪಯೋಗ ಮಾಡಿಕೊಳ್ಳಬೇಕು: ಸಚಿವ
ಸರ್ಕಾರ ನೀಡುತ್ತಿರುವ ಸೌಲಭ್ಯವನ್ನು ಜನ ಸದುಪಯೋಗ ಮಾಡಿಕೊಳ್ಳಬೇಕು: ಸಚಿವ
ಸಿಎಂ ಸಿದ್ದರಾಮಯ್ಯ ಪ್ರತಾಪ್​ನಂತೆ ಕೆಲಸವಿಲ್ಲದವರಲ್ಲ: ಪ್ರದೀಪ್ ಈಶ್ವರ್
ಸಿಎಂ ಸಿದ್ದರಾಮಯ್ಯ ಪ್ರತಾಪ್​ನಂತೆ ಕೆಲಸವಿಲ್ಲದವರಲ್ಲ: ಪ್ರದೀಪ್ ಈಶ್ವರ್
ಕೆಡಿಪಿ ಸಭೆಯಲ್ಲಿ ಗಂಭೀರ ಚರ್ಚೆ, ಇತ್ತ ಧಿಕಾರಿ ರಮ್ಮಿ ಆಟದಲ್ಲಿ ಮಗ್ನ
ಕೆಡಿಪಿ ಸಭೆಯಲ್ಲಿ ಗಂಭೀರ ಚರ್ಚೆ, ಇತ್ತ ಧಿಕಾರಿ ರಮ್ಮಿ ಆಟದಲ್ಲಿ ಮಗ್ನ
ಮಳೆಗಾಲದಲ್ಲಿ ಮಕ್ಕಳ ಪ್ರತಿನಿತ್ಯದ ಗೋಳಿದು, ಶಾಸಕರಿಗಿಲ್ಲ ಕಾಳಜಿ
ಮಳೆಗಾಲದಲ್ಲಿ ಮಕ್ಕಳ ಪ್ರತಿನಿತ್ಯದ ಗೋಳಿದು, ಶಾಸಕರಿಗಿಲ್ಲ ಕಾಳಜಿ
ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ಜತೆ ಪ್ರಧಾನಿ ಮೋದಿ ರೋಡ್ ಶೋ
ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ಜತೆ ಪ್ರಧಾನಿ ಮೋದಿ ರೋಡ್ ಶೋ
ಎಫ್ಐಅರ್​ನಲ್ಲಿ ಹೆಸರಿರುವ ಕಾರಣ ಶಾಸಕನ ವಿಚಾರಣೆ ನಡೆಯಲಿದೆ: ಪರಮೇಶ್ವರ್
ಎಫ್ಐಅರ್​ನಲ್ಲಿ ಹೆಸರಿರುವ ಕಾರಣ ಶಾಸಕನ ವಿಚಾರಣೆ ನಡೆಯಲಿದೆ: ಪರಮೇಶ್ವರ್
ಬೈಕ್​, ಕಾರು ಆಯ್ತು ಈಗ ಥೈಲ್ಯಾಂಡ್​ನಲ್ಲಿ ಯಾಚ್ ಡ್ರೈವ್ ಮಾಡಿದ ದರ್ಶನ್
ಬೈಕ್​, ಕಾರು ಆಯ್ತು ಈಗ ಥೈಲ್ಯಾಂಡ್​ನಲ್ಲಿ ಯಾಚ್ ಡ್ರೈವ್ ಮಾಡಿದ ದರ್ಶನ್