10 ವಿಕೆಟ್ ಉರುಳಿಸಿ 10 ಸಾವಿರ ರೂ. ಪಡೆದ ಶೊಯೆಬ್ ಖಾನ್

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 10 ವಿಕೆಟ್ ಪಡೆದ ಮೊದಲ ಬೌಲರ್ ಜಿಮ್ ಲೇಕರ್. 1951 ರಲ್ಲಿ ಬರೆದ ಈ ವಿಶ್ವ ದಾಖಲೆಯನ್ನು 1999 ರಲ್ಲಿ ಅನಿಲ್ ಕುಂಬ್ಳೆ ಸರಿಗಟ್ಟಿದ್ದರು. ಇದಾದ ಬಳಿಕ ನ್ಯೂಝಿಲೆಂಡ್​ನ ಸ್ಪಿನ್ನರ್ ಏಜಾಝ್ ಪಟೇಲ್ ಈ ದಾಖಲೆಯನ್ನು ಪುನರಾವರ್ತಿಸಿದ್ದರು. ಇದೀಗ ದೇಶೀಯ ಅಂಗಳದಲ್ಲಿ ಶೊಯೆಬ್ ಖಾನ್ 10 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

10 ವಿಕೆಟ್ ಉರುಳಿಸಿ 10 ಸಾವಿರ ರೂ. ಪಡೆದ ಶೊಯೆಬ್ ಖಾನ್
Shoaib Khan
Follow us
|

Updated on: Sep 24, 2024 | 3:10 PM

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 10 ವಿಕೆಟ್ ಪಡೆದಿರುವುದು ಕೇವಲ ಮೂವರು ಬೌಲರ್​ಗಳು ಮಾತ್ರ. ಇದಾಗ್ಯೂ ದೇಶೀಯ ಅಂಗಳದಲ್ಲಿ ಕೆಲವರು ಎರಡಂಕಿ ವಿಕೆಟ್​ ಉರುಳಿಸಿ ಗಮನ ಸೆಳೆದಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಶೊಯೆಬ್ ಖಾನ್. ಮುಂಬೈ ಮೂಲದ ಕ್ರಿಕೆಟಿಗ ಶೊಯೆಬ್ ಇದೀಗ 10 ವಿಕೆಟ್​ಗಳನ್ನು ಕಬಳಿಸಿ ಸುದ್ದಿಯಲ್ಲಿದ್ದಾರೆ.

ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸುವ ಕಂಗ ಕ್ರಿಕೆಟ್ ಲೀಗ್​ನಲ್ಲಿ ಶೊಯೆಬ್ ಖಾನ್ 10 ವಿಕೆಟ್​ಗಳನ್ನು ಉರುಳಿಸಿದ್ದಾರೆ. ಗೌರ್-ಸರಸ್ವತ್ ಕ್ರಿಕೆಟ್ ಕ್ಲಬ್ ಮತ್ತು ಜಾಲಿ ಕ್ರಿಕೆಟರ್ಸ್ ನಡುವಿನ ಇ ವಿಭಾಗದ ಪಂದ್ಯದಲ್ಲಿ ಶೊಯೆಬ್ ಈ ಅದ್ಭುತ ಸಾಧನೆ ಮಾಡಿದರು.

ಈ ಪಂದ್ಯದಲ್ಲಿ ಗೌರ್-ಸರಸ್ವತ್ ಕ್ರಿಕೆಟ್ ಕ್ಲಬ್ ಪರ ಕಣಕ್ಕಿಳಿದ ಎಡಗೈ ಸ್ಪಿನ್ನರ್ ಶೊಯೆಬ್, ಜಾಲಿ ಕ್ರಿಕೆಟರ್ಸ್ ಬ್ಯಾಟರ್​ಗಳನ್ನು ಬ್ಯಾಕ್ ಟು ಬ್ಯಾಕ್ ಪೆವಿಲಿಯನ್​ಗೆ ಕಳುಹಿಸಿದರು. ಅಲ್ಲದೆ 17.4 ಓವರ್ ಬೌಲಿಂಗ್ ಮಾಡಿ ತಲಾ 10 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದರು. ಶೊಯೆಬ್ ಖಾನ್ ಅವರ ಈ ಸ್ಪಿನ್ ಮೋಡಿಯಿಂದಾಗಿ ಜಾಲಿ ಕ್ರಿಕೆಟರ್ಸ್ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ 67 ರನ್​ಗಳಿಗೆ ಆಲೌಟ್ ಆಯಿತು.

10 ಸಾವಿರ ರೂ. ಬಹುಮಾನ:

ಈ ಪಂದ್ಯದಲ್ಲಿ ಶೊಯೆಬ್ ಖಾನ್ 10 ವಿಕೆಟ್ ಉರುಳಿಸುತ್ತಿದ್ದಂತೆ ಗೌರ್-ಸರಸ್ವತ್ ಕ್ರಿಕೆಟ್ ಕ್ಲಬ್ ತಂಡದ ಮಾಲೀಕರಾದ ರವಿ ಮಾಂಡ್ರೇಕರ್ ಅವರು 10 ಸಾವಿರ ರೂ. ಬಹುಮಾನ ಮೊತ್ತವನ್ನು ನೀಡಿದರು. ಈ ಮೂಲಕ ಯುವ ಸ್ಪಿನ್ನರ್ ಸಾಧನೆಯನ್ನು ಪ್ರೋತ್ಸಾಹಿಸಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಹೊಸ ಚರಿತ್ರೆ: ಪೂರನ್ ಪವರ್​ಗೆ ಹಳೆಯ ದಾಖಲೆ ಉಡೀಸ್

ಅಂದಹಾಗೆ ಕಂಗ ಕ್ರಿಕೆಟ್ ಲೀಗ್​ನಲ್ಲಿ ಸಚಿನ್ ತೆಂಡೂಲ್ಕರ್ ಕೂಡ ಆಡಿದ ಇತಿಹಾಸವಿದೆ. ಹೀಗಾಗಿ ಇದೀಗ 10 ವಿಕೆಟ್​ಗಳೊಂದಿಗೆ ಗಮನ ಸೆಳೆದಿರುವ ಶೊಯೆಬ್ ಖಾನ್ ಮುಂದೊಂದು ದಿನ ರಣಜಿ ಅಥವಾ ಭಾರತದ ಪರ ಕಣಕ್ಕಿಳಿದರೂ ಅಚ್ಚರಿಪಡಬೇಕಿಲ್ಲ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 10 ವಿಕೆಟ್ ಪಡೆದ ಬೌಲರ್​ಗಳು:

ಒಂದು ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ಗಳನ್ನು ಪಡೆದ ಬೌಲರ್‌ಗಳು ವರ್ಷ
ಜಿಮ್ ಲೇಕರ್ (ಇಂಗ್ಲೆಂಡ್) 1956
ಅನಿಲ್ ಕುಂಬ್ಳೆ (ಭಾರತ) 1999
ಏಜಾಝ್ ಪಟೇಲ್ (ನ್ಯೂಝಿಲೆಂಡ್) 2021
ಮಹಿಳಾ ಟಿ20 ವಿಶ್ವಕಪ್ 2024ರ ಆ್ಯಂಥಮ್ ಸಾಂಗ್ ಬಿಡುಗಡೆ
ಮಹಿಳಾ ಟಿ20 ವಿಶ್ವಕಪ್ 2024ರ ಆ್ಯಂಥಮ್ ಸಾಂಗ್ ಬಿಡುಗಡೆ
ಮುಡಾ ಪ್ರಾಸಿಕ್ಯೂಷನ್ ಕೇಸ್​: ಸಿದ್ದರಾಮಯ್ಯಗೆ ರಿಲೀಫ್​ ಸಿಗಲ್ಲ ಎಂದ ವಕೀಲರು
ಮುಡಾ ಪ್ರಾಸಿಕ್ಯೂಷನ್ ಕೇಸ್​: ಸಿದ್ದರಾಮಯ್ಯಗೆ ರಿಲೀಫ್​ ಸಿಗಲ್ಲ ಎಂದ ವಕೀಲರು
CM ಅರ್ಜಿ ಹೈಕೋರ್ಟ್‌ ವಜಾ; ಸತ್ಯಕ್ಕೆ ಜಯ ಸಿಕ್ಕಿದೆ ಎಂದ ದೂರುದಾರ
CM ಅರ್ಜಿ ಹೈಕೋರ್ಟ್‌ ವಜಾ; ಸತ್ಯಕ್ಕೆ ಜಯ ಸಿಕ್ಕಿದೆ ಎಂದ ದೂರುದಾರ
ಮುಡಾ ತೀರ್ಪು: ಸಿಎಂ ಮನೆ ಸೇರಿದಂತೆ ರಾಜ್ಯಾದ್ಯಂತ ಬಿಗಿ ಭದ್ರತೆ ಲೈವ್​
ಮುಡಾ ತೀರ್ಪು: ಸಿಎಂ ಮನೆ ಸೇರಿದಂತೆ ರಾಜ್ಯಾದ್ಯಂತ ಬಿಗಿ ಭದ್ರತೆ ಲೈವ್​
ಫ್ಲಿಪ್​ಕಾರ್ಟ್​ ಬಿಗ್ ಬಿಲಿಯನ್ ಡೇ ಸೇಲ್​ ₹49,999ಕ್ಕೆ ಆ್ಯಪಲ್ ಐಫೋನ್ 15
ಫ್ಲಿಪ್​ಕಾರ್ಟ್​ ಬಿಗ್ ಬಿಲಿಯನ್ ಡೇ ಸೇಲ್​ ₹49,999ಕ್ಕೆ ಆ್ಯಪಲ್ ಐಫೋನ್ 15
ಸ್ಪರ್ಧಿಗಳ ಪಟ್ಟಿ ಸುದೀಪ್​ಗೆ ಸಿಗೋದು ಯಾವಾಗ? ಉತ್ತರಿಸಿದ ಕಿಚ್ಚ
ಸ್ಪರ್ಧಿಗಳ ಪಟ್ಟಿ ಸುದೀಪ್​ಗೆ ಸಿಗೋದು ಯಾವಾಗ? ಉತ್ತರಿಸಿದ ಕಿಚ್ಚ
ಲೆಬನಾನ್​ ಮೇಲೆ ಇಸ್ರೇಲ್​ ರಾಕೆಟ್​ ದಾಳಿ ಹೇಗಿತ್ತು
ಲೆಬನಾನ್​ ಮೇಲೆ ಇಸ್ರೇಲ್​ ರಾಕೆಟ್​ ದಾಳಿ ಹೇಗಿತ್ತು
ನಮ್ಮ ಪರ ತೀರ್ಪು ಬರದಿದ್ದರೆ ಸುಪ್ರೀಂ ಮೊರೆ ಹೋಗುತ್ತೇವೆಂದ ಸ್ನೇಹಮಯಿ ಕೃಷ್ಣ
ನಮ್ಮ ಪರ ತೀರ್ಪು ಬರದಿದ್ದರೆ ಸುಪ್ರೀಂ ಮೊರೆ ಹೋಗುತ್ತೇವೆಂದ ಸ್ನೇಹಮಯಿ ಕೃಷ್ಣ
Vijayapura Rain: ವಿಜಯಪುರದಲ್ಲಿ ಭಾರೀ ಮಳೆ, ಕೆರೆಯಂತಾದ ರಸ್ತೆಗಳು
Vijayapura Rain: ವಿಜಯಪುರದಲ್ಲಿ ಭಾರೀ ಮಳೆ, ಕೆರೆಯಂತಾದ ರಸ್ತೆಗಳು
ಕೆಸರಿನ ಗುಂಡಿಯಲ್ಲಿ ಸಿಲುಕಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್​ ಕಾರು
ಕೆಸರಿನ ಗುಂಡಿಯಲ್ಲಿ ಸಿಲುಕಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್​ ಕಾರು