India vs England 3rd T20I Live Score: ಕೊಹ್ಲಿ ಶ್ರಮ ವ್ಯರ್ಥ, ಭಾರತಕ್ಕೆ 8 ವಿಕೆಟ್​ ಸೋಲು

ಗೆಲ್ಲಲು 157 ರನ್​ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಕೇವಲ 2 ವಿಕೆಟ್​ ಕಳೆದುಕೊಂಡು ಪಂದ್ಯವನ್ನು ಜಯಿಸಿತು. ಆರಂಭ ಆಟಗಾರ ಜೋಸ್ ಬಟ್ಲರ್  ಅಜೇಯ 83 (52 ಎಸೆತ, 5 ಬೌಂಡರಿ 4 ಸಿಕ್ಸ್) ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

India vs England 3rd T20I Live Score: ಕೊಹ್ಲಿ ಶ್ರಮ ವ್ಯರ್ಥ, ಭಾರತಕ್ಕೆ 8 ವಿಕೆಟ್​ ಸೋಲು
ಜೋಸ್ ಬಟ್ಲರ್
ಅರುಣ್​ ಕುಮಾರ್​ ಬೆಳ್ಳಿ

Updated on: Mar 16, 2021 | 11:14 PM

ಅಹಮದಾಬಾದ: ಭಾರತ ಮತ್ತು ಇಂಗ್ಲೆಂಡ್​ ನಡುವೆ ಅಹಮದಾಬಾದಿನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಮೂರನೇ ಪಂದ್ಯವನ್ನು ಪ್ರವಾಸಿ ತಂಡ 8 ವಿಕೆಟ್​ಗಳ ಅಧಿಕಾರಯುತವಾಗಿ ಗೆದ್ದು 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ.

ಗೆಲ್ಲಲು 157 ರನ್​ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಕೇವಲ 2 ವಿಕೆಟ್​ ಕಳೆದುಕೊಂಡು ಪಂದ್ಯವನ್ನು ಜಯಿಸಿತು. ಆರಂಭ ಆಟಗಾರ ಜೋಸ್ ಬಟ್ಲರ್  ಅಜೇಯ 83 (52 ಎಸೆತ, 5 ಬೌಂಡರಿ 4 ಸಿಕ್ಸ್) ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ಜಾನಿ ಬೇರ್​ಸ್ಟೋ 28 ಎಸೆತಗಳಲ್ಲಿ ಅಜೇಯ 40 ರನ್ ಬಾರಿಸಿದರು, ಇವರಿಬ್ಬರ ಜೊತೆಯಾಟದಲ್ಲಿ 78 ರನ್ ಬಂದವು,

ಭಾರತದ ಪರ ಸ್ಪಿನ್ನರ್​ಗಳಾದ ವಾಷಿಂಗ್ಟನ್ ಸುಂದರ್ ಮತ್ತು ಯುಜ್ವೇಂದ್ರ ಚಹಲ್ ತಲಾ ಒಂದು ವಿಕೆಟ್​ ಪಡೆದರು.

ವಿರಾಟ್ ಕೊಹ್ಲಿ

ಇದಕ್ಕೆ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಲು ಬಂದ  ಭಾರತದ ಆರಂಭ ಕೆಟ್ಟದ್ದಾಗಿತ್ತು. ಮೊದಲ 6 ಓವರ್​ಗಳಲ್ಲಿ  3 ವಿಕೆಟ್​ಗಳ ಪತನವಾಯಿತು. ನಾಯಕ ಕೊಹ್ಲಿ ಮತ್ತು ರಿಷಭ್ ಪಂತ್ ನಡುವೆ ಉತ್ತಮ ಜೊತೆಯಾಟ ಬರುತ್ತಿದ್ದಾಗಲೇ ಪಂತ್ 25 ರನ್ ಗಳಿಸಿ ಔಟಾದರು. ಮೊದಲ ಪಂದ್ಯದಲ್ಲಿ ಅದ್ಭುತ ಆಟವಾಡಿದ್ದ ಶ್ರೇಯಸ್ ಅಯ್ಯರ್ ಕೇವಲ 9 ರನ್ ಗಳಿಸಿ ಔಟಾದರು.

ಅದರೆ 6ನೇ ವಿಕೆಟ್​ಗೆ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಬಿರುಗಾಳಿ ವೇಗದಲ್ಲಿ ರನ್ ಗಳಿಸಿ ತಂಡದ ಮೊತ್ತವನ್ನು 156/6 ತಲುಪಿಸಿದರು. ಸತತ ಎರಡನೇ ಅರ್ಧ ಶತಕ ಬಾರಿಸಿದ ಕೊಹ್ಲಿ ಅಂತಿಮವಾಗಿ 77 ರನ್ ( 46 ಎಸೆತ, 8 ಬೌಂಡರಿ 4 ಸಿಕ್ಸ್ ) ಗಳಿಸಿ ಅಜೇಯರಾಗಿ ಉಳಿದರು. 2 ಸಿಕ್ಸ್ ಬಾರಿಸಿದ ಪಾಂಡ್ಯ 17 ರನ್ ಗಳಿಸಿ ಇನ್ನಿಂಗ್ಸ್​ ಕೊನೆಯ ಎಸೆತದಲ್ಲಿ ಔಟಾದರು.

ಈ ಪಂದ್ಯಕ್ಕೆ ವಾಪಸ್ಸು ಬಂದ ವೇಗದ ಬೌಲರ್ ಮಾರ್ಕ್ ವುಡ್​ 31 ರನ್​ಗೆ 3 ವಿಕೆಟ್​ ಪಡೆದು ಯಶಸ್ವೀ ಬೌಲರ್ ಎನಿಸಿದರು. ಕ್ರಿಸ್ ಜೊರ್ಡನ್ 2 ವಿಕೆಟ್​ ಪಡೆದರು.

ಸರಣಿಯ ನಾಲ್ಕನೇ ಪಂದ್ಯ ಇದೇ ಮೈದಾನದಲ್ಲಿ ಗುರುವಾರದಂದು ನಡೆಯಲಿದೆ. ​

ಇದನ್ನೂ ಓದಿ: India vs England | ಧೋನಿಯೊಂದಿಗೆ ಹೋಲಿಸುವ ಮಟ್ಟಕ್ಕೆ ಪಂತ್ ಮತ್ತು ಕಿಷನ್ ಬೆಳೆದದ್ದು ಹೆಮ್ಮೆಯ ವಿಚಾರ: ಸಬಾ ಕರೀಮ್

 

 

Published On - 10:39 pm, Tue, 16 March 21

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us