AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs England Test Series: 2ನೇ ಟೆಸ್ಟ್​ನಲ್ಲಿ ನದೀಮ್ ಬದಲು ಅಕ್ಸರ್ ಪಟೇಲ್ ಆಟ

ನದೀಮ್ ಮತ್ತು ವಾಷಿಂಗ್ಟನ್​ ಸುಂದರ್ ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳ ಮೇಲೆ ಒತ್ತಡ ಹೇರುವಲ್ಲಿ ವಿಫಲರಾದರು ಅಂತ ಬಹಿರಂಗವಾಗೇ ಕೊಹ್ಲಿ ಅಸಾಮಾಧಾನ ಹೊರಹಾಕಿದ್ದರು.

India vs England Test Series: 2ನೇ ಟೆಸ್ಟ್​ನಲ್ಲಿ ನದೀಮ್ ಬದಲು ಅಕ್ಸರ್ ಪಟೇಲ್ ಆಟ
ವಿರಾಟ್​ ಕೊಹ್ಲಿಯೊಂದಗೆ ಅಕ್ಸರ್ ಪಟೇಲ್
ಅರುಣ್​ ಕುಮಾರ್​ ಬೆಳ್ಳಿ
|

Updated on:Feb 10, 2021 | 10:08 PM

Share

ಚೆನೈಯಲ್ಲಿ ಅನಿರೀಕ್ಷಿತ 227 ರನ್​ಗಳ ಸೋಲನ್ನು ಅನುಭವಿಸಿದ ಭಾರತ ತಂಡಕ್ಕೆ ಅದೇ ಮೈದಾನದ ಬೇರೆ ಪಿಚ್​ನಲ್ಲಿ ​ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಮೊಣಕಾಲು ಗಾಯದಿಂದ ಚೇತರಿಸಿಕೊಂಡಿರುವ ಎಡಗೈ ಸ್ಪಿನ್ನರ್ ಅಕ್ಸರ್ ಪಟೇಲ್ ಆಡುವ ಎಲೆವೆನ್ ಸೇರಿಕೊಳ್ಳವುದು ಖಚಿತ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮೂಲಗಳು ತಿಳಿಸಿವೆ. ಪಟೇಲ್ ತಂಡದೊಂದಿಗೆ ಅಭ್ಯಾಸವನ್ನೂ ಪ್ರಾರಂಭಿಸಿದ್ದು ಮೊದಲ ಟೆಸ್ಟ್​ನಲ್ಲಿ ಆಡಿದ ಮತ್ತೊಬ್ಬ ಎಡಗೈ ಸ್ಪಿನ್ನರ್ ಶಾಹಭಾಜ್ ನದೀಮ್ ಅವರು ಪಟೇಲ್​ಗೆ ಸ್ಥಾನ ತೆರವು ಮಾಡಲಿದ್ದಾರೆ.

ಮೊದಲ ಟೆಸ್ಟ್​ನಲ್ಲಿ ಆಡಬೇಕಿದ್ದ ಪಟೇಲ್ ಅಭ್ಯಾಸ ಮಾಡುತ್ತಿದ್ದಾಗ ಗಾಯಗೊಂಡಿದ್ದರಿಂದ ಕಡೇ ಗಳಿಗೆಯಲ್ಲಿ ಬದಲೀ ಆಟಗಾರನಾಗಿ ಲಭ್ಯರಿದ್ದ ನದೀಮ್ ಅವರನ್ನು ಟೀಮಿಗೆ ಸೇರಿಸಿಕೊಳ್ಳಲಾಗಿತ್ತು.

‘ಅಕ್ಸರ್​ ಮೊಣಕಾಲಿಗೆ ಪೆಟ್ಟಾಗಿತ್ತು, ಅವರೀಗ ಚೇತರಿಸಕೊಂಡಿದ್ದು ನೆಟ್ಸ್​ನಲ್ಲಿ ಬ್ಯಾಟಂಗ್ ಅಭ್ಯಾಸ ಶುರುಮಾಡಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಅವರು ಬೌಲಿಂಗ್ ಅಭ್ಯಾಸವನ್ನು ಆರಂಭಿಸಲಿದ್ದಾರೆ. ಮೊದಲ ಟೆಸ್ಟ್​ಗೆ ಅವರೇ ಪ್ರಥಮ ಆಯ್ಕೆಯಾಗಿದ್ದರು. ಎರಡನೇ ಟೆಸ್ಟ್​ಗೆ ಆಡುವ ಇಲೆವೆನ್ ಅನ್ನು ಕೋಚ್ ರವಿ ಶಾಸ್ತ್ರೀ, ನಾಯಕ ವಿರಾಟ್​ ಕೊಹ್ಲಿ ಮತ್ತು ಬೌಲಿಂಗ್ ಕೋಚ್ ಭರತ್ ಅರುಣ್ ಅಂತಿಮಗೊಳಿಸಲಿದ್ದಾರೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

Axar Patel

ಶಾಹಭಾಜ್ ನದೀಮ್

ನದೀಮ್ ಬೌಲಿಂಗ್ ಪ್ರದರ್ಶನದ ಬಗ್ಗೆ ಕೊಹ್ಲಿ ಮೊದಲ ಟೆಸ್ಟ್ ಮುಗಿದ ನಂತರ ನಿರಾಶೆ ವ್ಯಕ್ತಪಡಿಸಿದ್ದರು. ನದೀಮ್ ಮತ್ತು ವಾಷಿಂಗ್ಟನ್​ ಸುಂದರ್ ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳ ಮೇಲೆ ಒತ್ತಡ ಹೇರುವಲ್ಲಿ ವಿಫಲರಾದರು ಅಂತ ಬಹಿರಂಗವಾಗೇ ಕೊಹ್ಲಿ ಅಸಾಮಾಧಾನ ಹೊರಹಾಕಿದ್ದರು. ಆಂಗ್ಲ ಬ್ಯಾಟ್ಸ್​ಮನ್​ಗಳ ಮೇಲೆ ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮ ಮತ್ತು ರವಿಚಂದ್ರನ್ ಅಶ್ವಿನ್ ಸೃಷ್ಟಿಸಿದ್ದ ಒತ್ತಡವನ್ನು ಕಾಯ್ದುಕೊಳ್ಳಲು ಸುಂದರ್ ಮತ್ತು ನದೀಮ್​ ವಿಫಲರಾದರು ಅಂತ ಕೊಹ್ಲಿ ಹೇಳಿದ್ದರು.

ಮೊದಲ ಟೆಸ್ಟ್​ನಲ್ಲಿ ನದೀಮ್ ಒಟ್ಟು 4 ವಿಕೆಟ್ ಪಡೆದರಾದರೂ ಅದಕ್ಕಾಗಿ 233 ರನ್​ಗಳನ್ನು ಖರ್ಚು ಮಾಡಿದರು. ಅದು ಸಾಲದೆಂಬಂತೆ ಮರು ಪಂದ್ಯದಲ್ಲಿ 9 ಬಾರಿ ಓವರ್​ಸ್ಟೆಪ್ ಮಾಡಿ ನೋ ಬಾಲ್​ಗಳನ್ನು ಎಸೆದರು. ಟೆಸ್ಟ್ ಕ್ರಿಕೆಟ್​ನಲ್ಲಿ ಒಬ್ಬ ಸ್ಪಿನ್ನರ್ ನೋ ಬಾಲ್ ಎಸೆಯುವುದನ್ನು ಅಪರಾಧ ಎಂದು ಉಲ್ಲೇಖಿಸಲಾಗುತ್ತದೆ. ತಮ್ಮಿಂದ ಪ್ರಮಾದವಾಗುತ್ತಿರುವುದನ್ನು ಖುದ್ದು ನದೀಮ್ ಅಂಗೀಕರಿಸಿದ್ದಾರೆ. ಎಸೆತವನ್ನು ಬೌಲ್ ಮಾಡುವ ಮುನ್ನ ತಾನು ಮಾಡುವ ಜಿಗಿತದಲ್ಲಿ ಎಡವಟ್ಟಾಗಿ ಓವರ್​ಸ್ಟೆಪ್​ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.

ಸುಂದರ್ ಮೊದಲ ಇನ್ನಿಂಗ್ಸ್​ನಲ್ಲಿ 26 ಓವರ್​ಗಳನ್ನು ಬೌಲ್ ಮಾಡಿ ಒಂದೂ ವಿಕೆಟ್ ಪಡೆಯದೇ ಹೋದರು. ಅವರ ಮೇಲಿನ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಂತೆ ಗೋಚರಿಸಿದ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 1 ಓವರ್ ಮಾತ್ರ ಬೌಲ್ ಮಾಡಿಸಿದರು. ಆದರೆ, ಬ್ಯಾಟಿಂಗ್​ನಲ್ಲಿ ಮಿಂಚಿದ ಸುಂದರ್ ಅಡುವ ಇಲೆವೆನ್​ನಲ್ಲಿ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ: ಭಾರತದ ಸೋಲಿಗೆ ಪಿಚ್ ಕಾರಣ ಎಂದ ವಿರಾಟ್ ಕೊಹ್ಲಿ, ಬೌಲರ್​ಗಳಿಂದ ಗೆಲುವು ದಕ್ಕಿತು ಎಂದ ಜೋ ರೂಟ್

Axar Patel

ವಾಷಿಂಗ್ಟನ್ ಸುಂದರ್

ಆದರೆ, ಎಡಗೈ ರಿಸ್ಟ್​ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಮೊದಲ ಟೆಸ್ಟ್​ನಿಂದ ಹೊರಗಿಟ್ಟಿದ್ದಕ್ಕೆ ಸಾಕಷ್ಟು ಚರ್ಚೆಗಳು ನಡೆದರೂ ಚೈನಾಮನ್​ಗಳನ್ನು ಬೌಲ್ ಮಾಡುವ ಯಾದವ್​ರನ್ನು ಎರಡನೇ ಟೆಸ್ಟ್​ನಲ್ಲಿ ಆಡಿಸುವ ಸಾಧ್ಯತೆ ತೀರಾ ಕಮ್ಮಿ.

ಮೊದಲ ಟೆಸ್ಟ್​ನಲ್ಲಿ ಯಾವ ಕಾಂಬಿನೇಷನೊಂದಿಗೆ ಕಣಕ್ಕಿಳಿಯಬೇಕುನ್ನುವ ಬಗ್ಗೆ ನಮ್ಮಲ್ಲಿ ಸ್ಪಷ್ಟತೆ ಇತ್ತು. ಮೊದಲ ಟೆಸ್ಟ್​ಗೆ ಆಯ್ಕೆ ಮಾಡಿದ ಸದಸ್ಯರ ಬಗ್ಗೆ ನಮಗೆ ಯಾವುದೇ ವಿಷಾದವಿಲ್ಲ. ಮುಂಬರುವ ದಿನಗಳಲ್ಲಿ ನಾವು ಭಿನ್ನ ಕಾಂಬಿನೇಷನ್​ಗಳ ಬಗ್ಗೆ ಯೋಚಿಸಲಿದ್ದೇವೆ. ಬಲಗೈ ಬ್ಯಾಟ್ಸ್​ಮನ್​ಗೆ ಆಫ್​ ಸ್ಟಂಪ್​ನಿಂದ ಆಚೆ ಹೋಗುವ ಎಸೆತಗಳನ್ನು ಬೌಲ್ ಮಾಡುವ ಬೌಲರ್​ಗಳ ಬಗ್ಗೆ ನಾವು ಯೋಚಿಸಿಬೇಕಿದೆ, ಅದು ಖಂಡಿತವಾಗಿಯೂ ಆಕ್ರಮಣವನ್ನು ವೈವಿಧ್ಯಮಯ ಮಾಡಲಿದೆ,’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

Published On - 8:35 pm, Wed, 10 February 21

‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​ನ್ಯೂಸ್​​​: ಪೊಲೀಸ್ ಇಲಾಖೆಯಿಂದ ತರಬೇತಿ