IPL 2020: ಪಂಜಾಬ್​ ಕಿಂಗ್ಸ್​ ಮೇಲೆ ಚೆನ್ನೈ ಸೂಪರ್​ ರೈಡ್​ ಮಾಡಿದ ಫೋಟೊಗಳಿವು..

ದುಬೈನಲ್ಲಿ ನಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಕಿಂಗ್ಸ್‌ ಎಲೆವನ್‌ ಪಂಜಾಬ್‌ ನಡುವಿನ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪಂಜಾಬ್‌ ಕಿಂಗ್ಸ್‌ ಮೇಲೆ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಂಜಾಬ್​ಗೆ ವೇಗವಾಗಿ ರನ್ ಹರಿದು ಬರಲಿಲ್ಲ. 26 ರನ್​ಗಳಿಸಿದ್ದ ಮಯಾಂಕ್ ಅಗರ್ವಾಲ್, ಪಿಯೂಷ್ ಚಾವ್ಲಾಗೆ ವಿಕೆಟ್ ಒಪ್ಪಿಸಿದರು. ನಾಯಕ ಕೆ.ಎಲ್.ರಾಹುಲ್ ಏಕಾಂಗಿ ಹೋರಾಟ ನಡೆಸಿದ್ರೂ, ಸ್ಫೋಟಕ ಆಟವಾಡ್ಲಿಲ್ಲ. 52 ಎಸೆತಗಳನ್ನ ಎದುರಿಸಿದ ರಾಹುಲ್ 63ರನ್ ಗಳಿಸಿದ್ರು. ಕಿಂಗ್ಸ್ ಇಲೆವೆನ್ ಬೌಲರ್​ಗಳನ್ನ […]

IPL 2020: ಪಂಜಾಬ್​ ಕಿಂಗ್ಸ್​ ಮೇಲೆ ಚೆನ್ನೈ ಸೂಪರ್​ ರೈಡ್​ ಮಾಡಿದ ಫೋಟೊಗಳಿವು..
ಸಾಧು ಶ್ರೀನಾಥ್​

Updated on: Oct 05, 2020 | 5:05 PM

ದುಬೈನಲ್ಲಿ ನಡೆದ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಕಿಂಗ್ಸ್‌ ಎಲೆವನ್‌ ಪಂಜಾಬ್‌ ನಡುವಿನ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪಂಜಾಬ್‌ ಕಿಂಗ್ಸ್‌ ಮೇಲೆ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.


ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಂಜಾಬ್​ಗೆ ವೇಗವಾಗಿ ರನ್ ಹರಿದು ಬರಲಿಲ್ಲ. 26 ರನ್​ಗಳಿಸಿದ್ದ ಮಯಾಂಕ್ ಅಗರ್ವಾಲ್, ಪಿಯೂಷ್ ಚಾವ್ಲಾಗೆ ವಿಕೆಟ್ ಒಪ್ಪಿಸಿದರು.


ನಾಯಕ ಕೆ.ಎಲ್.ರಾಹುಲ್ ಏಕಾಂಗಿ ಹೋರಾಟ ನಡೆಸಿದ್ರೂ, ಸ್ಫೋಟಕ ಆಟವಾಡ್ಲಿಲ್ಲ. 52 ಎಸೆತಗಳನ್ನ ಎದುರಿಸಿದ ರಾಹುಲ್ 63ರನ್ ಗಳಿಸಿದ್ರು.


ಕಿಂಗ್ಸ್ ಇಲೆವೆನ್ ಬೌಲರ್​ಗಳನ್ನ ಸರಿಯಾಗೇ ಬೆಂಡಿತ್ತಿದ ವ್ಯಾಟ್ಸನ್-ಡುಪ್ಲೆಸಿಸ್ ಜೋಡಿ, 181 ರನ್​ಗಳಿಸೋದ್ರೊಂದಿಗೆ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ರು.


ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಕೆ.ಎಲ್.ರಾಹುಲ್ ಕ್ಯಾಚ್ ಹಿಡಿದ ಮಹೇಂದ್ರ ಸಿಂಗ್ ಧೋನಿ, ಹೊಸ ದಾಖಲೆ ಬರೆದ್ರು. ಐಪಿಎಲ್​ನಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ಎರಡನೇ ವಿಕೆಟ್ ಕೀಪರ್ ಅನ್ನೋ ಖ್ಯಾತಿಗೆ ಎಂ.ಎಸ್.ಧೋನಿ ಭಾಜನರಾದ್ರು.


ಚೆನ್ನೈ ಪರ ಆರಂಭಿಕರಾಗಿ ಕಣಕ್ಕಿಳಿದ ಶೇನ್‌ ವಾಟ್ಸನ್‌ ಅಜೇಯ 83 ರನ್ ಗಳಿಸಿ ಚೆನ್ನೈ ಗೆಲುವಿಗೆ ಕಾರಣಕರ್ತರಾದರು.


ಐಪಿಎಲ್​ ಆರಂಭದಿಂದಲೂ ಉತ್ತಮವಾಗಿ ಆಡುತ್ತಿರುವ ಫ್ಯಾಫ್‌ ಡು ಫ್ಲೆಸಿಸ್‌ ಅಜೇಯ 87 ರನ್‌ ಗಳಿಸಿ ಚೆನ್ನೈಗೆ 10 ವಿಕೆಟ್‌ಗಳ ಜಯ ಭರ್ಜರಿ ಜಯ ತಂದು ಕೊಟ್ಟರು.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us