IPL 2020: ಡೆಲ್ಲಿ ಹುಡುಗರ ಮೇಲೆ ಹೈದ್ರಾಬಾದ್ ಅನುಭವಿಗಳು ಸವಾರಿ ನಡೆಸಿದ ಕ್ಷಣಗಳು

ಮರಳುನಾಡಿನ ಮಹಾಯುದ್ಧದಲ್ಲಿ ಸತತ ಎರಡು ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದ ಡೆಲ್ಲಿ ಕ್ಯಾಪಿಟಲ್ಸ್​ಗೆ, ಸನ್ ರೈಸರ್ಸ್ ಹೈದ್ರಾಬಾದ್ ಮೊದಲ ಸೋಲಿನ ಶಾಕ್ ನೀಡಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಹೈದ್ರಾಬಾದ್​ನ ರಶೀದ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು. 4 ಓವರ್​ಗಳಲ್ಲಿ 14 ರನ್ ನೀಡಿದ ರಶೀದ್ ಪ್ರಮುಖ ಮೂರು ವಿಕೆಟ್ ಪಡೆಯೋದ್ರೊಂದಿಗೆ, ತಂಡಕ್ಕೆ ಗೆಲುವು ತಂದುಕೊಟ್ಟರು. ಕಳೆದೆರೆಡು ಪಂದ್ಯಗಳಲ್ಲಿ ಒಂದು ವಿಕೆಟ್ ಪಡೆಯದೇ ನಿರಾಸೆ ಮೂಡಿಸಿದ್ದ ಭುವನೇಶ್ವರ್, ಡೆಲ್ಲಿ ವಿರುದ್ಧ ಎರಡು ವಿಕೆಟ್ ಪಡೆದರು. 4 ಓವರ್​ಗಳಲ್ಲಿ […]

IPL 2020: ಡೆಲ್ಲಿ ಹುಡುಗರ ಮೇಲೆ ಹೈದ್ರಾಬಾದ್ ಅನುಭವಿಗಳು ಸವಾರಿ ನಡೆಸಿದ ಕ್ಷಣಗಳು
ಸಾಧು ಶ್ರೀನಾಥ್​

Updated on: Sep 30, 2020 | 4:02 PM

ಮರಳುನಾಡಿನ ಮಹಾಯುದ್ಧದಲ್ಲಿ ಸತತ ಎರಡು ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದ ಡೆಲ್ಲಿ ಕ್ಯಾಪಿಟಲ್ಸ್​ಗೆ, ಸನ್ ರೈಸರ್ಸ್ ಹೈದ್ರಾಬಾದ್ ಮೊದಲ ಸೋಲಿನ ಶಾಕ್ ನೀಡಿದೆ.


ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಹೈದ್ರಾಬಾದ್​ನ ರಶೀದ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು. 4 ಓವರ್​ಗಳಲ್ಲಿ 14 ರನ್ ನೀಡಿದ ರಶೀದ್ ಪ್ರಮುಖ ಮೂರು ವಿಕೆಟ್ ಪಡೆಯೋದ್ರೊಂದಿಗೆ, ತಂಡಕ್ಕೆ ಗೆಲುವು ತಂದುಕೊಟ್ಟರು.


ಕಳೆದೆರೆಡು ಪಂದ್ಯಗಳಲ್ಲಿ ಒಂದು ವಿಕೆಟ್ ಪಡೆಯದೇ ನಿರಾಸೆ ಮೂಡಿಸಿದ್ದ ಭುವನೇಶ್ವರ್, ಡೆಲ್ಲಿ ವಿರುದ್ಧ ಎರಡು ವಿಕೆಟ್ ಪಡೆದರು. 4 ಓವರ್​ಗಳಲ್ಲಿ 25 ರನ್ ನೀಡಿದ ಭುವನೇಶ್ವರ್, ಪೃಥ್ವಿ ಶಾ ಹಾಗೂ ಶಿಮ್ರಾನ್ ಹೇಟ್ಮೆರ್ ವಿಕೆಟ್ ಪಡೆದರು.


ಹೈದ್ರಾಬಾದ್ ವಿರುದ್ಧ ಎರಡು ವಿಕೆಟ್ ಪಡೆದ ಡೆಲ್ಲಿ ಕ್ಯಾಪಿಟಲ್ಸ್​ನ ಕಗಿಸೋ ರಬಾಡ, ಮೊಹಮ್ಮದ್ ಶಮಿ ಜೊತೆಗೆ ಪರ್ಪಲ್ ಕ್ಯಾಪ್ ಹಂಚಿಕೊಂಡಿದ್ದಾರೆ. ಮೊಹಮ್ಮದ್ ಶಮಿ ಹಾಗೂ ರಬಾಡ ಇಬ್ಬರೂ ವೇಗಿಗಳು ತಲಾ 7 ವಿಕೆಟ್ ಕಬಳಿಸಿದ್ದಾರೆ.


ಈ ಬಾರಿಯ ಐಪಿಎಲ್​ನ ಮೊದಲ ಪಂದ್ಯದಲ್ಲೇ ಬರೋಬ್ಬರಿ 162 ಸಿಕ್ಸರ್​ಗಳು ದಾಖಲಾಗಿವೆ. ಶಾರ್ಜಾ ಕ್ರಿಕೆಟ್ ಮೈದಾನದಲ್ಲೇ 2 ಪಂದ್ಯಗಳ ಪೈಕಿ 62 ಸಿಕ್ಸರ್ ದಾಖಲಾಗಿದ್ದು, ದುಬೈನಲ್ಲಿ 5 ಪಂದ್ಯಗಳ ಪೈಕಿ 58 ಸಿಕ್ಸ್​ಗಳು ದಾಖಲಾಗಿವೆ.


ಈ ಸೀಸನ್​ನಲ್ಲಿ ಮೊದಲ ಪಂದ್ಯವಾಡಿದ ಕೇನ್ ವಿಲಿಯಮ್ಸನ್, ಸ್ಫೋಟಕ ಬ್ಯಾಟಿಂಗ್ ಮಾಡೋದ್ರೊಂದಿಗೆ ತಂಡದ ಸ್ಕೋರ್ ಹೆಚ್ಚಿಸಿದರು. 26 ಎಸೆತಗಳಲ್ಲಿ 5 ಬೌಂಡರಿ ಬಾರಿಸಿದ ವಿಲಿಯಮ್ಸನ್, 41 ರನ್ ಗಳಿಸಿದರು.


ಹಾಗೇ ಕ್ಯಾಪ್ಟನ್ ವಾರ್ನರ್​ಗೆ ಸಾಥ್ ನೀಡಿದ ಬೇರಿಸ್ಟೋ ಕೂಡ ಅರ್ಧಶತಕ ಬಾರಿಸಿ ಮಿಂಚಿದರು. 48 ಎಸೆತಗಳನ್ನ ಎದುರಿಸಿದ ಬೇರಿಸ್ಟೋ, 53 ರನ್ ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದರು.


ಈ ಬಾರಿಯ ಐಪಿಎಲ್​ನ ಮೊದಲೆರೆಡು ಪಂದ್ಯಗಳಲ್ಲಿ ಸೋತಿದ್ದ ಸನ್​ರೈಸರ್ಸ್ ಹೈದ್ರಾಬಾದ್, ಅಂಕಪಟ್ಟಿಯಲ್ಲಿ ಗೆಲುವಿನ ಖಾತೆ ಓಪನ್ ಮಾಡಿದೆ. ಹೈದ್ರಾಬಾದ್ ಮೈನಸ್ 0.22 ರನ್​ರೇಟ್​ನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

Published On - 4:01 pm, Wed, 30 September 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us