AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಯಿಂಟ್ಸ್ ಟೇಬಲ್ ಅಗ್ರಸ್ಥಾನದಲ್ಲಿರುವ ಡಿಸಿಗೆ ಇಂದು ತಳದಲ್ಲಿರುವ ಎಸ್​ಆರ್​ಹೆಚ್ ಎದುರಾಳಿ

ರಾಜಸ್ತಾನ ರಾಯಲ್ಸ್ ಜೊತೆ ಇಂಡಿಯನ್ ಪ್ರಿಮೀಯರ್ ಲೀಗ್​ನ 13ನೇ ಆವೃತಿಯಲ್ಲಿ ಇದುವರೆಗೆ ಆಜೇಯವಾಗಿರುವ ಮತ್ತು ಉಳಿದೆಲ್ಲ ತಂಡಗಳಿಗಿಂತ ಹೆಚ್ಚು ಸಮತೋಲಿತ ಎನಿಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯ11ನೇ ದಿನವಾಗಿರುವ ಇಂದು ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಸನ್​ರೈಸರ್ಸ್ ಹೈದರಾಬಾದನ್ನು ಅಬು ಧಾಬಿಯಲ್ಲಿ ಎದುರಿಸಲಿದೆ. ಶ್ರೇಯಸ್ ಅಯ್ಯರ್ ಡೆಲ್ಲಿಯ ನಾಯಕನಾಗಿ ಗಮನಸೆಳೆಯುವಂಥ ಪ್ರಬುದ್ಧತೆಯನ್ನು ತೋರುತ್ತಿದ್ದಾರೆ. ಅವರ ಈಸಿ ಗೋ ಲಕ್ಕಿ ಅಪ್ರೋಚ್​ನಿಂದ ಟೀಮಿನ ಇತರ ಆಟಗಾರರು ಸಹ ಪ್ರೇರಿತರಾಗುತ್ತಿದ್ದಾರೆ. ಫೀಲ್ಡ್​ನಲ್ಲಿ ಅವರು ಪ್ರದರ್ಶಿತ್ತಿರುವ ಪಾಸಿಟಿವ್ ಅಪ್ರೋಚ್ ಎದುರಾಳಿಗಳನ್ನು ದಿಕ್ಕೆಡಿಸುತ್ತಿದೆ. ಈ […]

ಪಾಯಿಂಟ್ಸ್ ಟೇಬಲ್ ಅಗ್ರಸ್ಥಾನದಲ್ಲಿರುವ ಡಿಸಿಗೆ ಇಂದು ತಳದಲ್ಲಿರುವ ಎಸ್​ಆರ್​ಹೆಚ್ ಎದುರಾಳಿ
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ| Edited By: ಸಾಧು ಶ್ರೀನಾಥ್​|

Updated on:Sep 29, 2020 | 6:24 PM

Share

ರಾಜಸ್ತಾನ ರಾಯಲ್ಸ್ ಜೊತೆ ಇಂಡಿಯನ್ ಪ್ರಿಮೀಯರ್ ಲೀಗ್​ನ 13ನೇ ಆವೃತಿಯಲ್ಲಿ ಇದುವರೆಗೆ ಆಜೇಯವಾಗಿರುವ ಮತ್ತು ಉಳಿದೆಲ್ಲ ತಂಡಗಳಿಗಿಂತ ಹೆಚ್ಚು ಸಮತೋಲಿತ ಎನಿಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯ11ನೇ ದಿನವಾಗಿರುವ ಇಂದು ಸತತ ಎರಡು ಸೋಲುಗಳಿಂದ ಕಂಗೆಟ್ಟಿರುವ ಸನ್​ರೈಸರ್ಸ್ ಹೈದರಾಬಾದನ್ನು ಅಬು ಧಾಬಿಯಲ್ಲಿ ಎದುರಿಸಲಿದೆ.

ಶ್ರೇಯಸ್ ಅಯ್ಯರ್ ಡೆಲ್ಲಿಯ ನಾಯಕನಾಗಿ ಗಮನಸೆಳೆಯುವಂಥ ಪ್ರಬುದ್ಧತೆಯನ್ನು ತೋರುತ್ತಿದ್ದಾರೆ. ಅವರ ಈಸಿ ಗೋ ಲಕ್ಕಿ ಅಪ್ರೋಚ್​ನಿಂದ ಟೀಮಿನ ಇತರ ಆಟಗಾರರು ಸಹ ಪ್ರೇರಿತರಾಗುತ್ತಿದ್ದಾರೆ. ಫೀಲ್ಡ್​ನಲ್ಲಿ ಅವರು ಪ್ರದರ್ಶಿತ್ತಿರುವ ಪಾಸಿಟಿವ್ ಅಪ್ರೋಚ್ ಎದುರಾಳಿಗಳನ್ನು ದಿಕ್ಕೆಡಿಸುತ್ತಿದೆ. ಈ ತಂಡದಲ್ಲಿದಿರುವ ಹೆಚ್ಚಿನ ಆಟಗಾರರು ಯುವಕರು. ಹಿಂದೆ, ಟೀಮ್ ಇಂಡಿಯಾದ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ ಲಾಂಚ್ ಮಾಡಿದ ‘ನಿರ್ಭೀತಿಯ ಕ್ರಿಕೆಟ್’ ಧೋರಣೆಯನ್ನು ಡೆಲ್ಲಿ ಟೀಮು ಅಳವಡಿಸಿಕೊಂಡಿರುವಂತಿದೆ. ಇದಕ್ಕೆ ಪುಟವಿಟ್ಟಂತೆ ಅಯ್ಯರ್ ವೈಯಕ್ತಿಕ ಉದಾಹರಣೆಯೊಂದಿಗೆ ಟೀಮನ್ನು ಲೀಡ್ ಮಾಡುತ್ತಿದ್ದಾರೆ. [yop_poll id=”1″]

ಪಂಜಾಬ್ ವಿರುದ್ಧ ಆಡಿದ ಟೂರ್ನಿಯ ತನ್ನ ಮೊದಲ ಪಂದ್ಯವನ್ನು ಸೂಪರ್ ಓವರ್​ನಲ್ಲಿ ಗೆದ್ದ ಡೆಲ್ಲಿ ಎರಡನೇಯದರಲ್ಲಿ ಚೆನೈ ಸೂಪರ್ ಕಿಂಗ್ಸ್ ವಿರುದ್ಧ ಅಧಿಕಾರಯುತ ಗೆಲುವು ಸಾಧಿಸಿತು. ಉತ್ತಮ ರನ್ರೇಟ್ ಸಹ ಹೊಂದಿರುವ ಅದು ಪಾಯಿಂಟ್ಸ್ ಟೇಬಲ್​ನಲ್ಲಿ ಅಗ್ರಸ್ಥಾನದಲ್ಲಿರುವಿದು ಅಚ್ಚರಿಯೇನಲ್ಲ.

ಶಿಖರ್ ಧವನ್, ಪೃಥ್ವಿ ಶಾ ಮತ್ತು ಅಯ್ಯರ್ ಅವರನ್ನೊಳಗೊಂಡಿರುವ ಡೆಲ್ಲಿಯ ಟಾಪ್ ಆರ್ಡರ್ ಸಧೃಡ ಮಾತ್ರವಾಗಿರದೆ, ರನ್ ಸಹ ಗಳಿಸುತ್ತಿದೆ. ವಿಂಡೀಸ್​ನ ಶರ್ಮನ್ ಹೆಟ್ಮೆಯರ್ ವಿಫಲರಾಗುತ್ತಿರುವುದು ನಿಜವಾದರೂ ಉಳಿದ ಆಟಗಾರರು ಆ ಕೊರತೆಯನ್ನು ಇದುವರೆಗೆ ಯಶಸ್ವೀಯಾಗಿ ನೀಗಿದ್ದಾರೆ. ಟೀಮಿನ ಮೆಂಟರ್ ರಿಕ್ಕಿ ಪಾಂಟಿಂಗ್ ಡಿಫರೆಂಟಾಗಿ ಯೋಚನೆ ಮಾಡುತ್ತಾರೆ ಮತ್ತು ಅವರ ಪ್ಲ್ಯಾನನ್ನು ಆಯ್ಯರ್ ಮೈದಾನದಲ್ಲಿ ಯಥಾವತ್ತಾಗಿ ಕಾರ್ಯರೂಪಕ್ಕೆ ತರುತ್ತಿದ್ದಾರೆ. ಸಕ್ಸಸ್ ಫಾರ್ಮುಲಾ ಇದರಲ್ಲೇ ಅಡಗಿರುವಂತಿದೆ. ಅಜಿಂಕ್ಯಾ ರಹಾನೆಯನ್ನು ಇನ್ನೂ ಆಡುವ ಎಲೆವೆನ್​ನಲ್ಲಿ ತಾರದಿರುವುದು ಪಾಂಟಿಂಗ್ ಯುವಕರಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿರುವುದು ವೇದ್ಯವಾಗುತ್ತದೆ. ಆಲ್​ರೌಂಡರ್ ಮಾರ್ಕಸ್ ಸ್ಟಾಯ್ನಿಸ್ ಟೀಮಿಗೆ ಉತ್ತಮ ಬ್ಯಾಲೆನ್ಸ್ ಒದಗಿಸುತ್ತಿರುವುದು ಟೀಮ್ ಥಿಂಕ್ ಟ್ಯಾಂಕನ್ನು ನಿರಾಳವಾಗಿಸಿದೆ.

ಕಗಿಸೊ ರಬಾಡ ನೇತೃತ್ವದ ವೇಗದ ಬೌಲಿಂಗ್ ವಿಭಾಗ ಸಹ ನಿರೀಕ್ಷಿತ ಪ್ರದರ್ಶನ ನೀಡುತ್ತಿದೆ. ಅನ್ರಿಖ್ ನೋರೆ ಸಕಾಲದಲ್ಲಿ ಬ್ರೇಕ್​ಥ್ರೂಗಳನ್ನು ಒದಗಿಸುತ್ತಿದ್ದಾರೆ. ಇಶಾತ್ ಶರ್ಮಗೆ ಇನ್ನೂ ಚಾನ್ಸ್ ಸಿಕ್ಕಿಲ್ಲ. ಸ್ಪಿನ್ನರ್​ಗಳ ವಿಷಯಕ್ಕೆ ಬಂದರೆ ಎರಡನೆ ಪಂದ್ಯದಲ್ಲಿ ಅಮಿತ್ ಮಿಶ್ರಾ ಮತ್ತು ಅಕ್ಸರ್ ಪಟೇಲ್ ಜೋಡಿಯು ರವಿಚಂದ್ರನ್ ಅವರ ಅನುಪಸ್ಥಿತಿಯನ್ನು ಮರೆಸುವ ಬೌಲಿಂಗ್ ಪ್ರದರ್ಶನ ನೀಡಿತು.

ಪಾಯಿಂಟ್ಸ್ ಟೇಬಲ್​ನಲ್ಲಿ ಆಗ್ರಸ್ಥಾನದಲ್ಲಿರುವ ಡೆಲ್ಲಿಯ ಸ್ಥಿತಿ ಹೀಗಿದ್ದರೆ, ಕೊನೆಯ ಸ್ಥಾನದಲ್ಲಿದಿರುವ ಹೈದರಾಬಾದ್ ಕೊಲ್ಲಿ ರಾಷ್ಟ್ರಗಳ ಪಿಚ್​ಗಳಿಗೆ ಹೊಂದಿಕೊಳ್ಳಲು ತಿಣುಕಾಡುತ್ತಿದೆ. ಮೊದಲ ಪಂದ್ಯದಲ್ಲಿ ಆರ್ ಸಿ ಬಿಗೆ ಸೋತ ನಂತರ ಎರಡನೆಯದರಲ್ಲಿ ಕೆಕೆಆರ್​ಗೆ ಶರಣಾದ ಡೇವಿಡ್ ವಾರ್ನರ್ ವಿನ್ನಿಂಗ್ ವೇಸ್​ ಅನ್ನು ಮರಳುಗಾಡಿನಲ್ಲಿ ಹುಡುಕಾಡುತ್ತಿದೆ. ಖುದ್ದು ವಾರ್ನರ್ ರನ್ ಗಳಿಸುವ ಕೆಲಸದಲ್ಲಿ ವಿಫಲರಾಗುತ್ತಿದ್ದಾರೆ. ಬೆಂಗಳೂರು ವಿರುದ್ಧ ಮಿಂಚಿದ ಜಾನಿ ಬೇರ್​ಸ್ಟೋ, ಕೊಲ್ಕತಾ ವಿರುದ್ಧ ಮುಗ್ಗುರಿಸಿದರು. ಹೈದರಾಬಾದಿನ ಸೇವಿಂಗ್ ಗ್ರೇಸ್ ಅಂದರೆ ಕರ್ನಾಟಕದ ಬ್ಯಾಟ್ಸ್​ಮನ್ ಮನೀಶ್ ಪಾಂಡೆ. ಕೆಕೆಆರ್ ಮೇಲೆ ಪಾಂಡೆ ಅರ್ಧ ಶತಕ ಬಾರಿಸಿ ಟೀಮಿಗೆ ಗರಿಷ್ಠ ವೈಯಕ್ತಿಕ ಕಾಣಿಕೆ ಒದಗಿಸಿದರು. ಆದರೆ, ಸ್ಟಾರ್ ಬ್ಯಾಟ್ಸ್​ಮನ್ ಕೇನ್ ವಿಲಿಯಮ್ಸನ್ ಅವರನ್ಯಾಕೆ ಆಡುವ ಎಲೆವೆನ್​ನಿಂದ ಹೊರಗಿಡಲಾಗುತ್ತಿದೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಅವರನ್ನು ಆಡಿಸಿದ್ದೇಯಾದಲ್ಲಿ ಶಿಥಿಲ ಅನಿಸುತ್ತಿರುವ ಬ್ಯಾಟಿಂಗ್ ಬಲಗೊಳ್ಳಬಹುದು.

ವೃದ್ಧಿಮಾನ್ ಸಹಾ ಕೊಲ್ಕತಾ ವಿರುದ್ಧ ರನ್ ಗಳಿಸಿದರಾದರೂ ಅವರ ಬ್ಯಾಟಿಂಗ್​ನಲ್ಲಿ ಧೃಡತೆ ಕಾಣಿಸಲಿಲ್ಲ. ಪ್ರಿಯಮ್ ಗಾರ್ಗ್, ವಿಜಯ್ ಶಂಕರ್ ಸಹ ನಿರಾಶೆಗೊಳಿಸುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಮತ್ತು ರಶೀದ್ ಖಾನ್ ಅವರನ್ನು ಜಾಸ್ತಿ ನೆಚ್ಚಿಕೊಳ್ಳಲಾಗುತ್ತಿದೆ. ಹೈದರಾಬಾದ್ ಒಂದು ಯುನಿಟ್ ಆಗಿ ಫೈರ್ ಮಾಡಬೇಕಿದೆ. ಅದು ಇಂದು ಸಾಧ್ಯಾವಾಗಬಹುದೆ ಅಂತ ಕಾದು ನೋಡಬೇಕು.

  

Published On - 5:05 pm, Tue, 29 September 20

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ