IPL 2021 PBKS vs CSK Preview: ಇಂದು ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು​ ಪಂಜಾಬ್​ ಕಿಂಗ್ಸ್​ ನಡುವೆ ಹಣಾಹಣಿ: ಗೆಲುವು ಯಾರಿಗೆ?

ಐಪಿಎಲ್​ 2021 ಪಂದ್ಯ 8ರಲ್ಲಿ ಮೂರು ಬಾರಿ ಐಪಿಎಲ್ ಕಪ್​ ಗೆದ್ದಿರುವ ಚೆನ್ನೈ ಸೂಪರ್​ ಕಿಂಗ್ಸ್​ ತಂಡವು ಪುಟಿದೆದ್ದಿರುವ ಪಂಜಾಬ್​ ಕಿಂಗ್ಸ್​ ತಂಡದ ವಿರುದ್ಧ ಮುಂಬೈನಲ್ಲಿ ಇಂದು ಕಾದಾಡಲಿವೆ. ಸಂಜು ಸ್ಯಾಮ್ಸನ್ ಅಮೋಘ ಆಟದಿಂದಾಗಿ ಪಂಜಾಬ್​ ಕಿಂಗ್ಸ್​ ಪ್ರಸಕ್ತ IPL 14 ಟೂರ್ನಿಯಲ್ಲಿ ಆತ್ಮವಿಶ್ವಾಸದ ಆರಂಭ ಪಡೆದಿದೆ. ಅದೇ ಚೆನ್ನೈ ಸೂಪರ್​ ಕಿಂಗ್ಸ್​ ತಂಡವು ಡೆಲ್ಲಿ ಕ್ಯಾಪಿಟಲ್ಸ್​ ತಂಡದ ವಿರುದ್ಧ ಕಳಾಹೀನವಾಗಿ ಸೋತುಸುಣ್ಣವಾಗಿದೆ.

IPL 2021 PBKS vs CSK Preview: ಇಂದು ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು​ ಪಂಜಾಬ್​ ಕಿಂಗ್ಸ್​ ನಡುವೆ ಹಣಾಹಣಿ: ಗೆಲುವು ಯಾರಿಗೆ?
ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು​ ಪಂಜಾಬ್​ ಕಿಂಗ್ಸ್
ಸಾಧು ಶ್ರೀನಾಥ್​ Edited By:

Updated on: Apr 16, 2021 | 2:44 PM

ಐಪಿಎಲ್​ 2021 ಪಂದ್ಯ 8ರಲ್ಲಿ ಮೂರು ಬಾರಿ ಐಪಿಎಲ್ ಕಪ್​ ಗೆದ್ದಿರುವ ಚೆನ್ನೈ ಸೂಪರ್​ ಕಿಂಗ್ಸ್​ ತಂಡವು ಪುಟಿದೆದ್ದಿರುವ ಪಂಜಾಬ್​ ಕಿಂಗ್ಸ್​ ತಂಡದ ವಿರುದ್ಧ ಮುಂಬೈನಲ್ಲಿ ಇಂದು ಕಾದಾಡಲಿದೆ. ಸಂಜು ಸ್ಯಾಮ್ಸನ್ ಅಮೋಘ ಆಟದಿಂದಾಗಿ ಪಂಜಾಬ್​ ಕಿಂಗ್ಸ್​ ಪ್ರಸಕ್ತ IPL 14 ಟೂರ್ನಿಯಲ್ಲಿ ಆತ್ಮವಿಶ್ವಾಸದ ಆರಂಭ ಪಡೆದಿದೆ. ಅದೇ ಚೆನ್ನೈ ಸೂಪರ್​ ಕಿಂಗ್ಸ್​ ತಂಡವು ಡೆಲ್ಲಿ ಕ್ಯಾಪಿಟಲ್ಸ್​ ತಂಡದ ವಿರುದ್ಧ ಕಳಾಹೀನವಾಗಿ ಸೋತುಸುಣ್ಣವಾಗಿದೆ.

ಚೆನ್ನೈ ಸೂಪರ್​ ಕಿಂಗ್ಸ್​ ತಂಡ: ಮೂರು ಬಾರಿ ಚಾಂಪಿಯಜನ್​ ತಂಡವು ಮೊದಲ ಪಂದ್ಯದಲ್ಲೇ ಹೀನಾಯವಾಗಿ ಸೋತಿದೆಯಾದರೂ ಸಿಎಸ್​ಕೆ ತಂಡದಲ್ಲಿ ಕೆಲ ಆಶಾಭಾವನೆಗಳೂ ಇವೆ. ಸುರೇಶ್​ ರೈನಾ ಆಕರ್ಷಕ ಅರ್ಧ ಶತಕದೊಂದಿಗೆ ಲಯ ಕಂಡುಕೊಂಡಿದ್ದಾರೆ. ಓಪನಿಂಗ್​ ಬ್ಯಾಟ್ಸ್​ಮನ್​ಗಳು ಹೆಚ್ಚಿನ ಕೊಡುಗೆ ನೀಡದೇಹೋದರೂ ತಂಡವು 188 ರನ್​ ಗಳಿಸುವಲ್ಲಿ ಶಕ್ತವಾಗಿತ್ತು. ಓಪನರ್ಸ್​ ಜೊತೆಗೆ ಕ್ಯಾಪ್ಟನ್​ ಎಂಎಸ್​ ಧೋನಿ ಸಹ ನಿರಾಶೆ ಮೂಡಿಸಿದರಾದರೂ ಉಳಿದವರು ತಮ್ಮ ಶಕ್ತ್ಯಾನುಸಾರ ಬ್ಯಾಟ್​ ಬೀಸಿ, ತಂಡ ಉತ್ತಮ ಮೊತ್ತ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೆನ್​ ಇನ್​ ಯೆಲ್ಲೋ ಆಟಗಾರರನ್ನೊಳಗೊಂಡ ತಂಡದ ಮುಖ್ಯ ಸಮಸ್ಯೆಯೆಂದರೆ ಬೌಲಿಂಗ್​ ವಿಭಾಗ. 188 ರನ್​ ಮೊತ್ತವನ್ನು ಡಿಫೆಂಡ್​ ಮಾಡಿಕೊಳ್ಳಲು ತಂಡದ ಬೌಲರ್​ಗಳು ವಿಫಲರಾದರು ಎಂಬುದು ಶೋಚನೀಯ. ಇದಕ್ಕಿಂತ ಡೆಲ್ಲಿ ಕ್ಯಾಪಿಟಲ್ಸ್​ ಬ್ಯಾಟ್ಸ್​ಮನ್​ಗಳೇ ವಿಜೃಂಭಿಸಿದರು ಎಂಬುದು ಸೂಕ್ತವಾದೀತು.

ಪಂಜಾಬ್​ ಕಿಂಗ್ಸ್​ ತಂಡ: ರಾಜಸ್ಥಾನ್​ ರಾಯಲ್ಸ್​ ತಂಡದ ವಿರುದ್ಧ ಪಂಜಾಬ್​ ಕಿಂಗ್ಸ್ 221 ಬೃಹತ್​ ಮೊತ್ತ ಪೇರಿಸಿದರು. ಪಂಜಾಬ್​ ಕಿಂಗ್ಸ್​ ಬ್ಯಾಟ್ ಹಿಡಿದು ಗುಟುರು ಹಾಕುತ್ತಿದ್ದಾರೆ. ಕೆ ಎಲ್​ ರಾಹುಲ್​ 90ರ ಗಡಿಯಲ್ಲಿ ಔಟಾದರು ಎಂಬುದು ಬೇಸರದ ಸಂಗತಿಯೇ ಆದರೂ ಅವರು ಕೇವಲ 50 ಬಾಲ್​ನಲ್ಲಿ ಅಷ್ಟೂ ರನ್​ ಕಲೆ ಹಾಕಿದರು ಎಂಬುದು ನಿಜಕ್ಕೂ ಶ್ಲಾಘನಾರ್ಹ. ಕ್ರಿಸ್​ ಗೇಲ್ ತಮ್ಮ ಖ್ಯಾತಿಗೆ ತಕ್ಕಂತೆ 28 ಬಾಲ್​ನಲ್ಲಿ 40 ರನ್​ ಬಾರಿಸಿ ನಡೆದರು. ಆದರೆ ರಾಜಸ್ಥಾನ್​ ರಾಯಲ್ಸ್​ ತಂಡದ ವಿರುದ್ಧ ನಿಜಕ್ಕೂ ಮಿಂಚಿದ್ದು ದೀಪಕ್​ ಹೂಡಾ. ಇವಯ್ಯ 28 ಬಾಲ್​ಗಳಲ್ಲಿ 64 ರನ್​ ಬಾರಿಸಿದರು. ಮಯಾಂಕ್​ ಅಗರ್ವಾಲ್​ ಮತ್ತು ನಿಕಲೋಸ್​ ಪೂರನ್​ ಸಹ ಬ್ಯಾಟ್​ ಬೀಸಿ, ಒಂದಷ್ಟು ರನ್​ ಸೇರಿಸಿದರು. ಪಂಜಾಬ್​ ಕಿಂಗ್ಸ್​ ಬ್ಯಾಟಿಂಗ್ ಲೈನ್​ ಅದ್ಭುತ ಫಾರಂನಲ್ಲಿದೆ ಎಂಬುದು ಗಮನಾರ್ಹ.

ಆದರೆ ಪಂಜಾಬ್​ ಕಿಂಗ್ಸ್​ ಸಮಸ್ಯೆ ಅದೇ ಬೌಲಿಂಗ್. ಇಬ್ಬರು ವಿದೇಶಿ ವೇಗದ ಬೌಲರ್​ಗಳಾದ ಜೆಯ್​ ರಿಚರ್ಡ್ಸನ್ ಮತ್ತು ರಿಲೆ ಮೆರೆಡಿತ್ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ವಿಪರೀತ ಎನಿಸುವಷ್ಟು ರನ್​ಗಳನ್ನು ನೀಡಿದರು. ಮೊಹಮದ್​ ಶಮಿ ಉತ್ತಮವಾಗಿಯೇ ಬೌಲ್​ ಮಾಡಿದರು. ಆದರೂ ಐಪಿಎಲ್​ ಹೋರಾಟದಲ್ಲಿ ಸಾಲದು ಎಂಬಂತಿದೆ. ಎಂ ಅಶ್ವಿನ್ ಒಂದೂ ವಿಕೆಟ್​ ಪಡೆಯಲಿಲ್ಲ. ಆದರೆ 4 ಓವರ್​ಗಳಲ್ಲಿ 43 ರನ್​ ನೀಡಿ, ದುಬಾರಿ ಎನಿಸಿದರು. ಒಂದೇ ಆಶಾಕಿರಣವೆಂದರೆ ಅರ್ಶದೀಪ್​ ಸಿಂಗ್. ಒತ್ತಡದ ನಡುವೆಯೂ ಆತ ತನ್ನ ಗಟ್ಟಿತನ ತೋರಿದರು. ಸಂಜು ಸ್ಯಾಮ್ಸನ್ ಮತ್ತು ಕ್ರಿಸ್​ ಮೋರಿಸ್​ ಜೋಡಿಯ ವಿರುದ್ಧ ಕೊನೆಯ ಓವರ್​ನಲ್ಲಿ 13 ರನ್​ಗಳನ್ನು ಉತ್ತಮವಾಗಿ ಕಾಪಾಡಿಕೊಂಡರು.

ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಪಂಜಾಬ್​ ಕಿಂಗ್ಸ್​ ತಂಡ ನೇರ ಹಣಾಹಣಿ ದಾಖಲೆ:
ಐಪಿಎಲ್ ಟೂರ್ನಿಯ​ 23 ಪಂದ್ಯಗಳಲ್ಲಿ ಚೆನ್ನೈ ತಮಡ 14 ಪಂದ್ಯಗಳನ್ನು ಗೆದ್ದಿದೆ. ಅದೇ ಪಂಜಾಬ್​ ಕಿಂಗ್​ಗಳು ಕೇವಲ 9 ಪಂದ್ಯಗಳ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರಷ್ಟೇ. ಇನ್ನು ಕಳೆದ ಬಾರಿ ಒಂದು ಟೂ ಆಗಿತ್ತು.

ಏನೆಲ್ಲಾ ನಿರೀಕ್ಷಿಸಬಹುದು?: ವಾಂಖೇಡೆ ಸ್ಟೇಡಿಯಂನಲ್ಲಿನ ಪಿಚ್​ ಬ್ಯಾಟ್ಸ್​ನ್​ಗಳಿಗೆ ಸ್ವರ್ಗದಂತಿದೆ. ಕೆ ಎಲ್ ರಾಹುಲ್​, ಕ್ರಿಸ್​ ಗೇಲ್, ಸಂಜು ಸ್ಯಾಮ್ಸನ್ ಮತ್ತು ಜೋ ಬಟ್ಲರ್​ ಅವರಂತಹ ಬಲಾಢ್ಯ ಬ್ಯಾಟ್ಸ್​ಮನ್​ಗಳು ನಿಜಕ್ಕೂ ಅದ್ಭುತ ಪ್ರದರ್ಶನ ನೀಡಬಲ್ಲರು. ಎರಡೂ ತಂಡಗಳಿಂದ ಉತ್ತಮ ಸ್ಕೋರ್​ ಬರುವ ಅಂದಾಜಿದೆಯಾದರೂ ಕೊನೆಗೆ ಯಾವ ತಂಡದ ಬೌಲರ್​ಗಳು ಹಿಡಿತ ಸಾಧಿಸುತ್ತಾರೋ ಆ ತಂಡವೇ ಜಯಭೇರಿ ಬಾರಿಸುವುದು ಖಂಡಿತಾ.

ಪಂಜಾಬ್​ ಕಿಂಗ್ಸ್​ ತಂಡದ ಸಂಭಾವ್ಯ ಆಟಗಾರರು: ಋತುರಾಜ್​ ಗಾಯಕ್ವಾಡ್, ಫಾಪ್​ ದೂಪ್ಲೆಸಿಸ್, ಸುರೇಶ್​ ರೈನಾ, ಅಂಬಟಿ ರಾಯ್ಡು, ಮೊಯೀನ್​ ಅಲಿ, ಎಂ ಎಸ್​ ಧೋನಿ (ಕ್ಯಾಪ್ಟನ್​-ವಿಕೆಟ್​ ಕೀಪರ್), ರವೀದ್ರ ಜಡೇಜಾ, ಸ್ಯಾಮ್​ ಕರ್ರನ್, ಡಿ. ಬ್ರೇವೊ, ಶಾರ್ದೂಲ್ ಠಾಕೂರ್, ದೀಪಕ್​ ಚಹಾರ್.

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಸಂಭಾವ್ಯ ಆಟಗಾರರು: ಕೆ ಎಲ್ ರಾಹುಲ್ (ಕ್ಯಾಪ್ಟನ್​-ವಿಕೆಟ್​ ಕೀಪರ್), ಮಯಾಂಕ್​ ಅಗರ್ವಾಲ್, ಕ್ರಿಸ್ ಗೇಲ್, ನಿಖೊಲಸ್ ಪೂರನ್, ದೀಪಕ್ ಹೂಡಾ, ಶಾರೂಕ್​ ಖಾನ್, ಜೇಯ್​ ರಿಚರ್ಡ್​ಸನ್​, ಮುರುಗನ್​ ಅಶ್ವಿನ್, ರಿಲೆ ಮೆರೆಡಿತ್, ಮೊಹಮದ್​ ಶಮಿ, ಅರ್ಶದೀಪ್​ ಸಿಂಗ್.

Published On - 7:18 am, Fri, 16 April 21

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us