AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Obstructing The Field: ಫೀಲ್ಡಿಂಗ್​ಗೆ ಅಡಚಣೆ ಮಾಡಿ ಔಟಾದ ವಿಶ್ವದ ಎಂಟನೇ ಆಟಗಾರ ಶ್ರೀಲಂಕಾದ ಗುಣತಿಲಕ

ಒಬ್ಬ ಬ್ಯಾಟ್ಸ್​ಮನ್ ರನ್ ಕದಿಯುವಾಗ ಉದ್ದೇಶಪೂರ್ವವಾಗಿ ಚೆಂಡನ್ನು ಫೀಲ್ಡರ್​ ಕೈಗೆ ಸಿಗದಂತೆ ಬ್ಯಾಟ್​ನಿಂದಾಗಲೀ ಇಲ್ಲವೇ ಕಾಲಿನಿಂದಾಗಲೀ ದೂರ ತಳ್ಳಿದರೆ ಆಗ ಅ ಬ್ಯಾಟ್ಸ್​ಮನ್ ಅಬ್​ಸ್ಟ್ರಕ್ಟಿಂಗ್ ದಿ ಫೀಲ್ಡ್ ಆಗುತ್ತಾನೆ. ಫೀಲ್ಡರ್ ವಿಕೆಟ್​ಗಳತ್ತ ಮಾಡಿದ ಥ್ರೋ ಅನ್ನು ಸಹ ಬ್ಯಾಟ್ಸ್​ಮನ್​ ಉದ್ದೇಶಪೂರ್ವಕವಾಗಿ ತಡೆದರೆ ಅಗಲೂ ಬ್ಯಾಟ್ಸಮನ್​ ಅಬ್​ಸ್ಟ್ರಕ್ಟಿಂಗ್ ದಿ ಫೀಲ್ಡ್ ಆಗುತ್ತಾನೆ

Obstructing The Field: ಫೀಲ್ಡಿಂಗ್​ಗೆ ಅಡಚಣೆ ಮಾಡಿ ಔಟಾದ ವಿಶ್ವದ ಎಂಟನೇ ಆಟಗಾರ ಶ್ರೀಲಂಕಾದ ಗುಣತಿಲಕ
ಶಾಯ್ ಹೋಪ್ ಮತ್ತು ಎವಿನ್ ಲೂಯಿಸ್
ಅರುಣ್​ ಕುಮಾರ್​ ಬೆಳ್ಳಿ
|

Updated on:Mar 11, 2021 | 7:52 PM

Share

ಅಬ್​ಸ್ಟ್ರಕ್ಟಿಂಗ್ ದಿ ಫೀಲ್ಡ್ ಔಟ್ ಕ್ರಿಕೆಟ್​ ಪಂದ್ಯಗಳಲ್ಲಿ ಒಬ್ಬ ಬ್ಯಾಟ್ಸ್​​ಮನ್​ ಔಟಾಗಬಹುದಾದ 10 ವಿಧಗಳಲ್ಲಿ ಒಂದು. ಆದರೆ ಬ್ಯಾಟ್ಸ್​ಮನ್ ಹಾಗೆ ಔಟಾಗುವುದು ಬಹಳ ಅಪರೂಪ. ಕ್ರಿಕೆಟ್​ ಇತಿಹಾಸದಲ್ಲಿ ಕೇವಲ 8 ಬ್ಯಾಟ್ಸ್​ಮನ್​ಗಳು ಮಾತ್ರ ಹಾಗೆ ಔಟಾಗಿದ್ದಾರೆ. 8ನೇ ಘಟನೆ ಬುಧವಾರದಂದು ವೆಸ್ಟ್​ ಇಂಡೀಸ್​ನ ಆ್ಯಂಟಿಗುವಾದಲ್ಲಿರುವ ಸರ್​ ವಿವಿಯನ್ ರಿಚರ್ಡ್ಸ್ ಕ್ರಿಕೆಟ್​ ಮೈದಾನದಲ್ಲಿ ಸಂಭವಿಸಿದೆ. ಅಂಥ ತೀರ್ಪಿಗೆ ಬಲಿಯಾದ ಆಟಗಾರ ಶ್ರೀಲಂಕಾದ ಆರಂಭ ದನುಷ್ಕಾ ಗುಣತಿಲಕ. ಈ ಘಟನೆ ಸಂಭವಿಸುವ ಮೊದಲು, ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಒಂದು ದಿನದ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಶ್ರೀಲಂಕಾ ತಂಡ ಅಧಿಕಾರಯುತ ಸ್ಥಿತಿಯಲ್ಲಿತ್ತು. ಮೊದಲ ವಿಕೆಟ್​ಗೆ ಗುಣತಿಲಕ (52) ತಮ್ಮ ನಾಯಕ ದಿಮುತ್ ಕರುಣರತ್ನೆ (55) ಜೊತೆ 105 ರನ್​ಗಳ ಜೊತೆಯಾಟದಲ್ಲಿ ಪಾಲ್ಗೊಂಡಿದ್ದರು. ಅದರೆ, ಗುಣತಿಲಕ ಅಬ್​ಸ್ಟ್ರಕ್ಟಿಂಗ್ ದಿ ಫೀಲ್ಡ್ ರೂಪದಲ್ಲಿ ಔಟಾಗಿ ಪೆವಲಿಯನ್​ಗೆ ಮರಳಿದ ನಂತರ ಶ್ರೀಲಂಕಾ ತಂಡದ ಬ್ಯಾಟಿಂಗ್ ಕುಸಿಯಿತು.

ಒಬ್ಬ ಬ್ಯಾಟ್ಸ್​ಮನ್ ರನ್ ಕದಿಯುವಾಗ ಉದ್ದೇಶಪೂರ್ವವಾಗಿ ಚೆಂಡನ್ನು ಫೀಲ್ಡರ್​ ಕೈಗೆ ಸಿಗದಂತೆ ಬ್ಯಾಟ್​ನಿಂದಾಗಲೀ ಇಲ್ಲವೇ ಕಾಲಿನಿಂದಾಗಲೀ ದೂರ ತಳ್ಳಿದರೆ ಆಗ ಅ ಬ್ಯಾಟ್ಸ್​ಮನ್ ಅಬ್​ಸ್ಟ್ರಕ್ಟಿಂಗ್ ದಿ ಫೀಲ್ಡ್ ಆಗುತ್ತಾನೆ. ಫೀಲ್ಡರ್ ವಿಕೆಟ್​ಗಳತ್ತ ಮಾಡಿದ ಥ್ರೋ ಅನ್ನು ಸಹ ಬ್ಯಾಟ್ಸ್​ಮನ್​ ಉದ್ದೇಶಪೂರ್ವಕವಾಗಿ ತಡೆದರೆ ಅಗಲೂ ಬ್ಯಾಟ್ಸಮನ್​ ಅಬ್​ಸ್ಟ್ರಕ್ಟಿಂಗ್ ದಿ ಫೀಲ್ಡ್ ಆಗುತ್ತಾನೆ

ಶ್ರೀಲಂಕಾದ 232 ರನ್ ಮೊತ್ತವನ್ನು ಸುಲಭವಾಗಿ ಬೆನ್ನಟ್ಟಿದ ವಿಂಡೀಸ್ 8 ವಿಕೆಟ್​ಗಳ ಜಯ ಸಾಧಿಸಿತು. ಆರಂಭ ಆಟಗಾರ ಶಾಯ್ ಹೋಪ್ 133 ಎಸೆತಗಳಲ್ಲಿ 110 ರನ್ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ಸರಿ, ಆ ಅಪೂರ್ವ ಘಟನೆಗೆ ವಾಪಸ್ಸು ಹೋಗೋಣ, ಅದು ಜರುಗಿದ್ದು ಶ್ರೀಲಂಕಾ ಇನ್ನಿಂಗ್ಸ್​ನ 21ನೇ ಓವರ್​ನಲ್ಲಿ. ಆಗ ವಿಂಡೀಸ್​ ತಂಡದ ನಾಯಕ ಕೈರನ್ ಪೊಲ್ಲಾರ್ಡ್ ಬೌಲಿಂಗ್ ಮಾಡುತ್ತಿದ್ದರು. ಉತ್ತಮ ಅಂತರದಲ್ಲಿ ಬಂದ ಅವರ ಎಸೆತವೊಂದನ್ನು ಗುಣತಿಲಕ ತಮ್ಮ ಮುಂದೆಯೇ ರಕ್ಷಣಾತ್ಮಕವಾಗಿ ಆಡಿ ರನ್​ಗೆ ಕಾಲ್​ ಮಾಡಿ ಸ್ವಲ್ಪ ಮುಂದೆ ಓಡಿದರು. ನಾನ್​-ಸ್ಟ್ರೈಕರ್ ತುದಿಯಲ್ಲಿದ್ದ ಪಥುಮ್ ನಿಸ್ಸಾಂಕ ಸಹ ಅವರ ಕರೆಗೆ ಓಗೊಟ್ಟು ಓಡಲಾರಂಭಿದರು. ಆದರೆ ಫಾಲೋ ಥ್ರೂನಲ್ಲಿ ಪೊಲ್ಲಾರ್ಡ್​ ವೇಗವಾಗಿ ಚೆಂಡಿನತ್ತ ಓಡಿ ಬರುತ್ತಿರುವದನ್ನು ಗಮನಿಸಿದ ಗುಣತಿಲಕ, ನಿಸ್ಸಾಂಕ ಅವರನ್ನು ವಾಪಸ್ಸು ಕಳಿಸಿ ತಾವು ಹಿಮ್ಮುಖವಾಗಿ ತಮ್ಮ ಕ್ರೀಸಿಗೆ ಮರಳಿದರು. ಆದರೆ ಹಾಗೆ ವಾಪಸ್ಸು ಹೋಗುವಾಗ ಅವರ ಚೆಂಡನ್ನು ತುಳಿದಿದ್ದರಿಂದ ಅದು ಸ್ವಲ್ಪ ದೂರಕ್ಕೆ ಹೋಗಿ ಫೊಲ್ಲಾರ್ಡ್​​ ಕೈಗೆ ಸಿಗದಂತಾಯಿತು. ಗುಣತಿಲಕ ಉದ್ದೇಶಪೂರ್ವಕವಾಗಿ ಚೆಂಡನ್ನು ದೂರ ಒದ್ದರು, ಅದು ಅಬ್​ಸ್ಟ್ರಕ್ಟಿಂಗ್ ದಿ ಫೀಲ್ಡ್ ಅಗಿದೆ, ಹಾಗಾಗಿ ಅವರು ಔಟ್​ ಎಂದು ಪರಿಗಣಿಸಿಬೇಕು ಎಂದು ವಿಂಡೀಸ್ ಅಟಗಾರರು ಮಾಡಿದ ಮನವಿಯನ್ನು ಅಂಪೈರ್​ಗಳು ಸಮಾಲೋಚನೆ ನಡೆಸಿ ಗುಣತಿಲಕ ಅಬ್​ಸ್ಟ್ರಕ್ಟಿಂಗ್ ದಿ ಫೀಲ್ಡ್ ಔಟ್ ಎಂದು ಘೋಷಿಸಿದರು.

ಕ್ರಿಕೆಟ್​ ಇತಿಹಾಸದಲ್ಲಿ ಕೇವಲ 8 ಜನ ಮಾತ್ರ ಹೀಗೆ ಔಟಾಗಿದ್ದರೆ. ಟೆಸ್ಟ್ ಕ್ರಿಕೆಟ್​ನಲ್ಲಿ ಒಮ್ಮೆ ಮಾತ್ರ ಅದು ಸಂಭವಿಸಿದರೆ ಉಳಿದ 7 ಪ್ರಕರಣಗಳು ಒಂದು ದಿನ ಪಂದ್ಯಗಳಲ್ಲಿ ಘಟಿಸಿವೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ಅಬ್​ಸ್ಟ್ರಕ್ಟಿಂಗ್ ದಿ ಫೀಲ್ಡ್ ಆದವರು ಇಂಗ್ಲೆಂಡ್​ನ ಲೆನ್ ಹಟ್ಟನ್, ಅದು ನಡೆದದ್ದು 1951ರ ಇಂಗ್ಲೆಂಡ್​ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಸರಣಿಯಲ್ಲಿ. ಒಂದು ದಿನ ಪಂದ್ಯಗಳಲ್ಲಿ ಅಬ್​ಸ್ಟ್ರಕ್ಟಿಂಗ್ ದಿ ಫೀಲ್ಡ್ ಆಗಿರುವವರು; ಪಾಕಿಸ್ತಾನದ ರಮೀಜ್ ರಾಜಾ, ಭಾರತದ ಮೊಹಿಂದರ್ ಅಮರನಾಥ್, ಪಾಕಿಸ್ತಾನದವರೇ ಅಗಿರುವ ಇಂಜಮಾಮ್ ಉಲ್ ಹಕ್, ಮೊಹಮ್ಮದ್ ಹಫೀಜ್, ಅನ್ವರ್ ಅಲಿ ಮತ್ತು ಇಂಗ್ಲೆಂಡ್​ನ ಬೆನ್ ಸ್ಟೋಕ್ಸ್ .

ಇದನ್ನೂ ಓದಿ: India vs England Test Series: ಪಂತ್ ಎರಡು ತಿಂಗಳ ಅವಧಿಯಲ್ಲಿ ಎರಡು ಶ್ರೇಷ್ಠ ಇನ್ನಿಂಗ್ಸ್​ಗಳನ್ನಾಡಿದ್ದಾರೆ: ಸಂಜಯ ಮಂಜ್ರೇಕರ್

Published On - 7:34 pm, Thu, 11 March 21

ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಎಷ್ಟು ಅದ್ದೂರಿಯಾಗಿದೆ ನೋಡಿ ಅಲ್ಲು ಅರ್ಜುನ್ ಹೊಸ ಥಿಯೇಟರ್
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಗಿಲ್ಲಿ ಬಿಗ್ ಬಾಸ್ ಮನೆ ಒಳಗೆ ಇಟ್ಟ ಬೇಡಿಕೆಯನ್ನು ಹೊರಗೆ ಈಡೇರಿಸಿದ ಫ್ಯಾನ್ಸ
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!