AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂದ್ಯದ ಬಳಿಕ ಗಂಟೆಗಟ್ಟಲೇ ಮಾತಿಗಿಳಿಯುತ್ತಿದ್ದರು: ಧೋನಿ ಸ್ನೇಹ ಸಂಪಾದಿಸಿದ್ದ ಆ ಕ್ರಿಕೆಟಿಗ ಯಾರು?

ಧೋನಿ ಮತ್ತು ಫಾಫ್ ಕೇವಲ 5 ಅಥವಾ 10 ನಿಮಿಷ ಮಾತಾನಾಡಿ ಸುಮ್ಮನಾಗುತ್ತಿರಲಿಲ್ಲ. ಕೆಲವೊಮ್ಮೆ ಅವರು ಒಂದು ಗಂಟೆ ಮತ್ತು ಕೆಲವೊಮ್ಮೆ ಎರಡು ಗಂಟೆಗಳ ಕಾಲ ಮಾತನಾಡುತ್ತಿರುತ್ತಾರೆ

ಪಂದ್ಯದ ಬಳಿಕ ಗಂಟೆಗಟ್ಟಲೇ ಮಾತಿಗಿಳಿಯುತ್ತಿದ್ದರು: ಧೋನಿ ಸ್ನೇಹ ಸಂಪಾದಿಸಿದ್ದ ಆ ಕ್ರಿಕೆಟಿಗ ಯಾರು?
ಐಪಿಎಲ್​ನ ದ್ವಿತಿಯಾರ್ಧ ರಂಗೇರಲು ಇನ್ನು ದಿನ ಮಾತ್ರ ಉಳಿದಿವೆ. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡವು ಬಲಿಷ್ಠ ಮುಂಬೈ ಇಂಡಿಯನ್ಸ್​ ತಂಡವನ್ನು ಎದುರಿಸಲಿದೆ. ಆದರೆ ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಸ್ಟಾರ್ ಆಟಗಾರ ಆಡುವುದು ಅನುಮಾನ.
ಪೃಥ್ವಿಶಂಕರ
|

Updated on: Jun 04, 2021 | 6:37 PM

Share

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಅವರ ಬಗ್ಗೆ ಈಗ ಒಂದು ದೊಡ್ಡ ರಹಸ್ಯ ಬಹಿರಂಗವಾಗಿದೆ. ಎಂಎಸ್ ಧೋನಿ ಕಳೆದ ವರ್ಷವಷ್ಟೇ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರೂ ಈಗ ಮಹೀ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಅಭಿಮಾನಿಗಳನ್ನು ಆಟದ ಮೂಲಕ ರಂಜಿಸುತ್ತಿದ್ದಾರೆ. ಧೋನಿ ತಮ್ಮ ನಾಯಕತ್ವದಲ್ಲಿ ಮೂರು ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಏತನ್ಮಧ್ಯೆ, ಧೋನಿ ತಂಡದ ಪ್ರಮುಖ ಆಟಗಾರ ಧೋನಿಯ ಬಗ್ಗೆ ದೊಡ್ಡ ರಹಸ್ಯವನ್ನು ಬಹಿರಂಗಪಡಿಸಿದ್ದಾನೆ. ಆ ರಹಸ್ಯವೆಂದರೆ ಪಂದ್ಯದ ನಂತರ, ಧೋನಿ ಎರಡು ಗಂಟೆಗೂ ಅಧಿಕ ಸಮಯ ಮಾತಾನಾಡುತ್ತಿದ್ದ ವ್ಯಕ್ತಿ ಯಾರೆಂಬುದನ್ನು ಬಹಿರಂಗಪಡಿಸಿದ್ದಾರೆ.

ವಾಸ್ತವವಾಗಿ, ಈ ವಿಚಾರವನ್ನು ಐಪಿಎಲ್‌ನಲ್ಲಿ ಧೋನಿ ತಂಡದ ಚೆನ್ನೈ ಸೂಪರ್ ಕಿಂಗ್ಸ್‌ನ ಆರಂಭಿಕ ಆಟಗಾರ ರುತುರಾಜ್ ಗೈಕ್ವಾಡ್ ಬಹಿರಂಗಪಡಿಸಿದ್ದಾರೆ. ದಕ್ಷಿಣ ಆಫ್ರಿಕಾದ ತಂಡದ ಮಾಜಿ ನಾಯಕ ಮತ್ತು ಸಿಎಸ್‌ಕೆ ಓಪನರ್ ಫಾಫ್ ಡು ಪ್ಲೆಸಿಸ್ ಅವರೊಂದಿಗೆ ಧೋನಿ ಗಂಟೆಗಟ್ಟಲೆ ಮಾತುಕತೆ ನಡೆಸಿದ್ದರು ಎಂದು ರುತುರಾಜ್ ಹೇಳಿದರು. ಗೈಕ್ವಾಡ್ ಪ್ರಕಾರ, ಧೋನಿ ಮತ್ತು ಫಾಫ್ ತುಂಬಾ ಆಪ್ತ ಗೆಳೆಯರಾಗಿದ್ದಾರೆ. ಇಬ್ಬರೂ ಪರಸ್ಪರ ಗೌರವಿಸುತ್ತಾರೆ ಮತ್ತು ಅನೇಕ ವಿಷಯಗಳ ಬಗ್ಗೆ ಪರಸ್ಪರ ಮಾತನಾಡುತ್ತಾರೆ. ಅವರ ವೃತ್ತಿಜೀವನದ ಈ ಹಂತದಲ್ಲಿಯೂ ಸಹ ಇಬ್ಬರೂ ಸಾಕಷ್ಟು ಚರ್ಚಿಸುತ್ತಾರೆ ಎಂದು ವಿವರಿಸಿದರು.

ಇಬ್ಬರು ಮಾತಿಗಿಳಿದರೆ ಸಮಯದ ಮಿತಿ ಇರುತ್ತಿರಲಿಲ್ಲ ಧೋನಿ ಮತ್ತು ಫಾಫ್ ಕೇವಲ 5 ಅಥವಾ 10 ನಿಮಿಷ ಮಾತಾನಾಡಿ ಸುಮ್ಮನಾಗುತ್ತಿರಲಿಲ್ಲ. ಕೆಲವೊಮ್ಮೆ ಅವರು ಒಂದು ಗಂಟೆ ಮತ್ತು ಕೆಲವೊಮ್ಮೆ ಎರಡು ಗಂಟೆಗಳ ಕಾಲ ಮಾತನಾಡುತ್ತಿರುತ್ತಾರೆ ಎಂದಿದ್ದಾರೆ. ಇಬ್ಬರೂ ಸಹ ಅಭ್ಯಾಸದ ನಂತರ ಪ್ರತಿದಿನ ಮಾತನಾಡುತ್ತಾರೆ. ಕೆಲವೊಮ್ಮೆ ಮಹಿ ಭಾಯ್ ಸ್ವತಃ ಫಾಫ್‌ ಹತ್ತಿರ ಹೋಗಿ ಮಾತಿಗಿಳಿಯುತ್ತಾರೆ. ಐಪಿಎಲ್‌ನ ಈ ಋತುವಿನಲ್ಲಿ ಚೆನ್ನೈ ಆಡಿದ ಏಳು ಪಂದ್ಯಗಳಲ್ಲಿ, ಫಾಫ್ ಡು ಪ್ಲೆಸಿಸ್ ಸತತ ನಾಲ್ಕು ಅರ್ಧಶತಕಗಳ ಸಹಾಯದಿಂದ 320 ರನ್ ಗಳಿಸಿದ್ದಾರೆ. ಈ ಏಳು ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಚೆನ್ನೈ ಗೆದ್ದಿದೆ. ಅದೇ ಸಮಯದಲ್ಲಿ, ಗೈಕ್ವಾಡ್ ಈ ಋತುವಿನಲ್ಲಿ ಎರಡು ಬಾರಿ ಫಾಫ್ ಜೊತೆ ಶತಕದ ಪಾಲುದಾರಿಕೆಯನ್ನು ಗಳಿಸಿದ್ದಾರೆ. 25 ವರ್ಷದ ಗೈಕ್ವಾಡ್ ಈ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಎರಡು ಅರ್ಧಶತಕಗಳ ಸಹಾಯದಿಂದ ಏಳು ಪಂದ್ಯಗಳಲ್ಲಿ 196 ರನ್ ಗಳಿಸಿದರು.

ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ