AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಟಾರ್ಗೆಟ್ ಟೀಮ್ ಇಂಡಿಯಾ ಅಲ್ಲ.. ಓನ್ಲಿ ಸಚಿನ್ ’?!

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಎರಡು ದಶಕಗಳಿಗೂ ಅಧಿಕ ಕಾಲ ಕ್ರಿಕೆಟ್ ಲೋಕವನ್ನ ಆಳಿದ ಅನಭಿಷಿಕ್ತ ದೊರೆ. ಫೀಲ್ಡ್​ನಲ್ಲಿ ಸಚಿನ್ ಹವಾ ಹೇಗಿತ್ತು ಅಂದ್ರೇ, ಎದುರಾಳಿ ತಂಡದ ಆಟಗಾರರು ಮ್ಯಾಚ್​ನಲ್ಲಿ ಭಾರತವನ್ನು ಮಣಿಸೋದಕ್ಕಿಂತ ಸಚಿನ್ ಒಬ್ಬರನ್ನೇ ಹೇಗೆ ಔಟ್​ ಮಾಡಬೇಕು ಅಂತಾ ಪ್ಲಾನ್​ ಹೆಣೆದಿದ್ದೇ ಹೆಚ್ಚು. ಅಷ್ಟರ ಮಟ್ಟಿಗೆ ಸಚಿನ್ ತೆಂಡೂಲ್ಕರ್ ಎದುರಾಳಿ ತಂಡಗಳಿಗೆ ಸಿಂಹಸ್ವಪ್ನವಾಗಿದ್ದರು. ಮ್ಯಾಚ್​ನಲ್ಲಿ ಸಚಿನ್​ರನ್ನ ಹತ್ತಿಕ್ಕಲು ಡ್ರೆಸ್ಸಿಂಗ್​ ರೂಮ್​ನಲ್ಲಿ ಎದುರಾಳಿ ತಂಡದವರು ಮಾಡಿರುವ ಸ್ಟ್ರಾಟೆಜಿಗಳಿಗೆ ಲೆಕ್ಕವೇ ಇಲ್ಲ. ಇದರ ಒಂದು ಉದಾಹರಣೆಯನ್ನ ಖುದ್ದು […]

‘ನನ್ನ ಟಾರ್ಗೆಟ್ ಟೀಮ್ ಇಂಡಿಯಾ ಅಲ್ಲ.. ಓನ್ಲಿ ಸಚಿನ್ ’?!
ಸಚಿನ್ ತೆಂಡೂಲ್ಕರ್
KUSHAL V
|

Updated on: Jul 07, 2020 | 7:34 PM

Share

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಎರಡು ದಶಕಗಳಿಗೂ ಅಧಿಕ ಕಾಲ ಕ್ರಿಕೆಟ್ ಲೋಕವನ್ನ ಆಳಿದ ಅನಭಿಷಿಕ್ತ ದೊರೆ. ಫೀಲ್ಡ್​ನಲ್ಲಿ ಸಚಿನ್ ಹವಾ ಹೇಗಿತ್ತು ಅಂದ್ರೇ, ಎದುರಾಳಿ ತಂಡದ ಆಟಗಾರರು ಮ್ಯಾಚ್​ನಲ್ಲಿ ಭಾರತವನ್ನು ಮಣಿಸೋದಕ್ಕಿಂತ ಸಚಿನ್ ಒಬ್ಬರನ್ನೇ ಹೇಗೆ ಔಟ್​ ಮಾಡಬೇಕು ಅಂತಾ ಪ್ಲಾನ್​ ಹೆಣೆದಿದ್ದೇ ಹೆಚ್ಚು. ಅಷ್ಟರ ಮಟ್ಟಿಗೆ ಸಚಿನ್ ತೆಂಡೂಲ್ಕರ್ ಎದುರಾಳಿ ತಂಡಗಳಿಗೆ ಸಿಂಹಸ್ವಪ್ನವಾಗಿದ್ದರು.

ಮ್ಯಾಚ್​ನಲ್ಲಿ ಸಚಿನ್​ರನ್ನ ಹತ್ತಿಕ್ಕಲು ಡ್ರೆಸ್ಸಿಂಗ್​ ರೂಮ್​ನಲ್ಲಿ ಎದುರಾಳಿ ತಂಡದವರು ಮಾಡಿರುವ ಸ್ಟ್ರಾಟೆಜಿಗಳಿಗೆ ಲೆಕ್ಕವೇ ಇಲ್ಲ. ಇದರ ಒಂದು ಉದಾಹರಣೆಯನ್ನ ಖುದ್ದು ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೇನ್ ಅವರೇ ಬಾಯ್ಬಿಟ್ಟಿದ್ದಾರೆ.

ನಿಮ್ಮ ಪ್ರಕಾರ ಅದ್ಭುತವಾದ ಬ್ಯಾಟಿಂಗ್ ಟೆಕ್ನಿಕ್ ಹೊಂದಿರೋ ಬ್ಯಾಟ್ಸ್​ಮನ್ ಯಾರು ಅನ್ನೋ ಪ್ರಶ್ನೆಗೆ ನಾಸಿರ್ ಹುಸೇನ್ ಮೊದಲಿಗೆ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಎಂದು ಹೇಳಿದ್ದಾರೆ. ಆದರೆ ನಾನು ಕಂಡ ಶ್ರೇಷ್ಠ ಟೆಕ್ನಿಕ್ ಹೊಂದಿರೋ ಏಕೈಕ ಸಾರ್ವಕಾಲಿಕ ಬ್ಯಾಟ್ಸ್​ಮನ್ ಅಂದ್ರೆ ಅದು ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಎಂದು ಸ್ವತಃ ಒಪ್ಪಿಕೊಂಡಿದ್ದಾರೆ.

ಒಟ್ಟಾರೆಯಾಗಿ ನಾನು ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಬಗ್ಗೆ ಹೇಳಬೇಕಾದರೆ ಖಂಡಿತವಾಗಿಯೂ ಸಚಿನ್ ಅದ್ಭುತವಾದ ಟೆಕ್ನಿಕ್ ಹೊಂದಿರುವವರು. ನಾನು ಇಂಗ್ಲೆಂಡ್ ತಂಡದ ಕ್ಯಾಪ್ಟನ್​ ಆಗಿದ್ದಾಗ, ಸಚಿನ್​ನ ಹೇಗೆ ಪೆವಿಲಿಯನ್​ಗೆ ವಾಪಸ್​ ಕಳಿಸೋದರ ಬಗ್ಗೆ ಡ್ರೆಸ್ಸಿಂಗ್ ರೂಮ್​ನಲ್ಲಿ ಅದೆಷ್ಟು ಮೀಟಿಂಗ್​ಗಳನ್ನ ಮಾಡಿದೀನೋ ನನಗೇ ನೆನಪಿಲ್ಲ ಎಂದು ನಾಸಿರ ಹುಸೇನ್​ ಹಂಚಿಕೊಂಡಿದ್ದಾರೆ.

ಇದಲ್ಲದೇ ವೆಸ್ಟ್ ಇಂಡೀಸ್ ತಂಡದ ಮಾಜಿ ಫಾಸ್ಟ್ ಬೌಲರ್ ಇಯಾನ್ ಬಿಷಪ್ ಕೂಡ ನನ್ನ ವೃತ್ತಿ ಜೀವನದಲ್ಲಿ ಎದುರಿಸಿರುವ ಅತ್ಯಂತ ಟಫ್​ ಬ್ಯಾಟ್ಸ್​ಮನ್ ಅಂದ್ರೆ ಅದು ಸಚಿನ್ ಎಂದಿದ್ದಾರೆ. ಒಟ್ನಲ್ಲಿ, ಪಂದ್ಯದಲ್ಲಿ ಭಾರತವನ್ನ ಸೋಲಿಸೋದಕ್ಕಿಂತ ಸಚಿನ್​ರನ್ನ ಹೇಗೆ ಮಣಿಸಬೇಕು ಅನ್ನೋದರ ಬಗ್ಗೆ ಎದುರಾಳಿ ಟೀಂಗಳು ತಲೆಕೆಡಿಸಿಕೊಳ್ಳುತ್ತಿದ್ದರು ಅನ್ನೋದು ಬಟಾಬಯಲಾಗಿದೆ.

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್