ಡಿಕೆ ಶಿವಕುಮಾರ್​ಗೆ RCB ಛತ್ರಿ ಹಿಡಿದ ಅಭಿಮಾನಿಗಳು.. ಅದರಿಂದಲೇ RCBಗೆ ಒಲಿಯಿತಂತೆ ಅದೃಷ್ಟ!

ತುಮಕೂರು: ನವೆಂಬರ್ 03ರಂದು ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಪ್ರಚಾರ ನಡೆಸಿದ್ದರು. ಈ ವೇಳೆ ಡಿಕೆಶಿ ಬೆಂಬಲಿಗರು ಐಪಿಎಲ್​ ಪಂದ್ಯಾವಳಿಯ ಆರ್​ಸಿಬಿ ತಂಡದ ಲಾಂಚನವಿರುವ ಛತ್ರಿ ಹಿಡಿದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಡಿಕೆ ಶಿವಕುಮಾರ್​ಗೆ ಛತ್ರಿ ಹಿಡಿದ ಮೇಲೆ ಆರ್​ಸಿಬಿಗೆ ಒಲಿಯಿತು ಗೆಲುವಿನ ಲಕ್ಷ್ಮೀ..!?  ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ದೊಡ್ಡ ಆಲದ ಮರ ಬಳಿ ಪ್ರಚಾರ ನಡೆಸುವ ವೇಳೆ ದಿಢೀರಾಗಿ ತುಂತುರು ಮಳೆ ಬಂದ ಹಿನ್ನೆಲೆಯಲ್ಲಿ ಡಿಕೆಶಿ ಬೆಂಬಲಿಗರು ಸಮೀಪದಲ್ಲೇ ಇದ್ದ […]

ಡಿಕೆ ಶಿವಕುಮಾರ್​ಗೆ RCB ಛತ್ರಿ ಹಿಡಿದ ಅಭಿಮಾನಿಗಳು.. ಅದರಿಂದಲೇ RCBಗೆ ಒಲಿಯಿತಂತೆ ಅದೃಷ್ಟ!
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Oct 23, 2020 | 10:52 AM

ತುಮಕೂರು: ನವೆಂಬರ್ 03ರಂದು ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಪ್ರಚಾರ ನಡೆಸಿದ್ದರು. ಈ ವೇಳೆ ಡಿಕೆಶಿ ಬೆಂಬಲಿಗರು ಐಪಿಎಲ್​ ಪಂದ್ಯಾವಳಿಯ ಆರ್​ಸಿಬಿ ತಂಡದ ಲಾಂಚನವಿರುವ ಛತ್ರಿ ಹಿಡಿದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಡಿಕೆ ಶಿವಕುಮಾರ್​ಗೆ ಛತ್ರಿ ಹಿಡಿದ ಮೇಲೆ ಆರ್​ಸಿಬಿಗೆ ಒಲಿಯಿತು ಗೆಲುವಿನ ಲಕ್ಷ್ಮೀ..!? 
ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ದೊಡ್ಡ ಆಲದ ಮರ ಬಳಿ ಪ್ರಚಾರ ನಡೆಸುವ ವೇಳೆ ದಿಢೀರಾಗಿ ತುಂತುರು ಮಳೆ ಬಂದ ಹಿನ್ನೆಲೆಯಲ್ಲಿ ಡಿಕೆಶಿ ಬೆಂಬಲಿಗರು ಸಮೀಪದಲ್ಲೇ ಇದ್ದ ಅಂಗಡಿಯಿಂದ ಆರ್.ಸಿ.ಬಿ ಕೊಡೆಯನ್ನು ತಂದು ಡಿಕೆ ಶಿವಕುಮಾರ್​ಗೆ ಹಿಡಿದಿದ್ದರು.

ಸದ್ಯ ಈಗ ಈ ಫೋಟೋ ವೈರಲ್ ಆಗಿದೆ. ಆರ್​ಸಿಬಿ ಅಭಿಮಾನಿಗಳು, ಡಿಕೆ ಶಿವಕುಮಾರ್​ಗೆ ಛತ್ರಿ ಹಿಡಿದ ಮೇಲೆ ಆರ್​ಸಿಬಿಗೆ ಒಲಿಯಿತು ಗೆಲುವಿನ ಲಕ್ಷ್ಮೀ ಅಂತ ಟೈಟಲ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಮಾಡಿದ್ದಾರೆ.

 

Published On - 10:46 am, Fri, 23 October 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us