India vs England 4th Test Day 3: ಭರ್ಜರಿ ಜಯದೊಂದಿಗೆ ಡಬ್ಲ್ಯೂಟಿಸಿ ಫೈನಲ್ ಪ್ರವೇಶಿಸಿದ ಭಾರತ

India vs England 4th Test Live Updates: ಒಂದು ಪಕ್ಷ ಭಾರತದ ಸ್ಪಿನ್ನರ್​ಗಳು ಮೂರನೇ ಟೆಸ್ಟ್​ನಲ್ಲಿ ತೋರಿದ ಪ್ರದರ್ಶನವನ್ನು ಪುನರಾವರ್ತಿಸಿದರೆ, ಈ ಟೆಸ್ಟ್ ಇಂದೇ ಕೊನೆಗೊಂಡರೂ ಆಶರ್ಯಪಡಬೇಕಿಲ್ಲ.

India vs England 4th Test Day 3: ಭರ್ಜರಿ ಜಯದೊಂದಿಗೆ ಡಬ್ಲ್ಯೂಟಿಸಿ ಫೈನಲ್ ಪ್ರವೇಶಿಸಿದ ಭಾರತ
ಟೆಸ್ಟ್ ಮತ್ತು ಸರಣಿ ಗೆದ್ದ ಸಂಭ್ರಮದಲ್ಲಿ ಟೀಮ್ ಇಂಡಿಯಾ
ಅರುಣ್​ ಕುಮಾರ್​ ಬೆಳ್ಳಿ

Updated on: Mar 06, 2021 | 4:29 PM

India vs England 4th Test Day 3 Live | ಅಹಮದಾಬಾದ್: ಭಾರತದ ಹೊಸ ಬೌಲಿಂಗ್ ಸೆನ್ಸೇಷನ್ ಅಕ್ಷರ್ ಪಟೇಲ್ ಮತ್ತು ಅನುಭವಿ ರವಿಚಂದ್ರನ್ ಅಶ್ವಿನ್ ಮತ್ತೊಮ್ಮೆ ತಲಾ 5 ವಿಕಟ್​ ಪಡೆಯುವ ಸಾಧನೆ ಮಾಡಿ ಭಾರತಕ್ಕೆ ಸರಣಿ ಗೆಲುವು ಕೊಡಿಸುವುದರೊಂದಿಗೆ ವಿಶ್ವ ಟೆಸ್ಟ್  ಚಾಂಪಿಯನ್​ಶಿಪ್ (WTC) ಫೈನಲ್​ನಲ್ಲಿ ಆಡುವ ಅರ್ಹತೆಯನ್ನೂ ದೊರಕಿಸಿದ್ದಾರೆ. ಇಂದು ಮೊಟೆರಾದ ನರೇಂದ್ರ ಮೋದಿ ಮೈದಾನದಲ್ಲಿ ಕೊನೆಗೊಂಡ ಪಂದ್ಯದಲ್ಲಿ ಭಾರತ ಪ್ರವಾಸಿಗರನ್ನುಇನ್ನೂ 2 ದಿನಗಳ ಆಟ ಬಾಕಿಯಿರುವಂತೆಯೇ ಇನ್ನಿಂಗ್ಸ್ ಮತ್ತು 25 ರನ್​​ಗಳಿಂದ ಬಗ್ಗು ಬಡಿದು ಸರಣಿಯನ್ನು 3-1 ಅಂತರದಿಂದ ಗೆದ್ದಿತು.   

ಭಾರತ ಮತ್ತೊಮ್ಮೆ ಬ್ಯಾಟ್ ಮಾಡುವಂತಾಗಲು 161 ರನ್ ಗಳಿಸಬೇಕಿದ್ದ ಇಂಗ್ಲೆಂಡ್ 135 ರನ್​ಗಳಿಗೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡಿತು. ಮಧ್ಯಮ ಕ್ರಮಾಂಕದ ಆಟಗಾರ ಡೇನಿಯಲ್ ಲಾರೆನ್ಸ್ ಮಾತ್ರ ಭಾರತದ ಸ್ಪಿನ್ನರ್​ಗಳನ್ನು ವಿಶ್ವಾಸದಿಂದ ಎದುರಿಸಿ ಅರ್ಧ ಶತಕ ಬಾರಿಸಿದರು.

ಅಕ್ಷರ್ 48 ರನ್ ನೀಡಿ 5 ವಿಕೆಟ್ ಪಡೆದರೆ, ಅಶ್ವಿನ್ 47 ರನ್​ಗಳಿಗೆ 5 ವಿಕೆಟ್ ಪಡೆದರು.

ಇದಕ್ಕೂ ಮೊದಲು, ಭಾರತ 365 ರನ್​ಗಳಿಗೆ ತನ್ನೆಲ್ಲ ವಿಕೆಟ್​ ಕಳೆದುಕೊಂಡು 160 ರನ್​ಗಳ ಮುನ್ನಡೆ ಸಾಧಿಸಿತು. ತಮ್ಮ ವೃತ್ತಿಬದುಕಿನ ಮೊದಲ ಶತಕ ದಾಖಲಿಸುವ ಅಂಚಿನ್ನಲ್ಲಿದ್ದ ವಾಷಿಂಗ್ಟನ್ ಸುಂದರ್ (ಅಜೇಯ 96) ಜೊತೆಗಾರರ ವಿವೇಚನೆರಹಿತ ಬ್ಯಾಟಿಂಗ್​ನಿಂದಾಗಿ ಅದನ್ನುಗಳಿಸದೆ ಹೋದರು.

ನುರಿತ ಬ್ಯಾಟ್ಸ್​ಮನ್​ನಂತೆ ಆಡುವ ಸುಂದರ್​ಗೆ ಇಂದು ವೃತ್ತಿಬದುಕಿನ ಮೊದಲ ಶತಕ ಬಾರಿಸುವ ಸುವರ್ಣಾವಕಾಶವಿತ್ತು. ಆದರೆ ಇಶಾಂತ್ ಶರ್ಮ ಮತ್ತು ಮೊಹಮ್ಮದ್ ಸಿರಾಜ್, ಬೆನ್ ಸ್ಟೋಕ್ಸ್ ಅವರ ಎಸೆತಗಳನ್ನು ಬ್ಲಾಕ್ ಮಾಡುವ ಬದಲು ತಾವು ಬ್ಯಾಟ್​ ಮಾಡಬಲ್ಲೆವು ಎನ್ನುವುದನ್ನು ಸಾಬೀತು ಮಾಡುವ ಪ್ರಯತ್ನ ಮಾಡಿದರು. ಅವರಿಂದ ಅಂಥ ಧೋರಣೆಯನ್ನು ನಿರೀಕ್ಷಿಸಿದ್ದ ಬೆನ್ ನೇರವಾದ ಎಸೆತಗಳನ್ನು ಬೌಲ್ ಮಾಡಿ ಇಶಾಂತ್​ರನ್ನು  ಎಲ್ ಬಿ ಡಬ್ಲ್ಯು ಮತ್ತು ಸಿರಾಜ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅವರ ಬ್ಯಾಟಿಂಗ್ ವೈಖರಿಯಿಂದ ಶತಕ ತಪ್ಪಿದ್ದಕ್ಕೆ ಹತಾಶರಾದ ಸುಂದರ್ ತೀವ್ರ ಸ್ವರೂಪದ ನಿರಾಶಾಭಾವದೊಂದಿಗೆ ಪೆವಿಯನ್​ನತ್ತ ಮರಳಿದರು.

 

Published On - 3:57 pm, Sat, 6 March 21

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us